newsfirstkannada.com

ಜಸ್ಟ್‌ ಒಂದೇ 1 ರೂಪಾಯಿಗೆ ಸರ್ಕಾರಿ ಕೆಲಸ ಕಳೆದುಕೊಂಡ ಆಸ್ಪತ್ರೆ ಸಿಬ್ಬಂದಿ; ಕಾರಣ ಬಿಜೆಪಿ ಶಾಸಕ! VIDEO

Share :

Published September 18, 2024 at 10:34pm

    ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಬಿಜೆಪಿ ಶಾಸಕ

    ಸ್ಥಳದಲ್ಲೇ ನೌಕರಿಯಿಂದ ತೆಗೆದು ಹಾಕಿದರು, ಅಸಲಿಗೆ ಆಗಿದ್ದೇನು?

    ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಘಟನೆಯ ವಿಡಿಯೋ ವೈರಲ್‌

ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ 1 ರೂಪಾಯಿ ಹೆಚ್ಚಿಗೆ ಪಡೆದ ಕಾರಣ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ದ ಗುತ್ತಿಗೆ ನೌಕರ ಕೆಲಸ ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದ ಜಗದೌರ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಅವರು ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಸರ್ಕಾರಿ ಸ್ವಾಮ್ಯದ ಆರೋಗ್ಯ ಸೌಲಭ್ಯದಲ್ಲಿ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಎಂಎಲ್​ಎ ದೂರುಗಳನ್ನು ಸ್ವೀಕರಿಸುತ್ತಿದ್ದರು. ಹೀಗಾಗಿ ಶಾಸಕರು ತಪಾಸಣೆ ಮಾಡುವಾಗ 1 ರೂಪಾಯಿ ನಿಗದಿ ಶುಲ್ಕದ ಬದಲಿಗೆ ರೋಗಿಗಳಿಂದ 2 ರೂಪಾಯಿಗಳನ್ನ ತೆಗೆದುಕೊಳ್ಳಲಾಗಿದೆ. ಹೀಗಾಗಿ ಆಸ್ಪತ್ರೆಯ ಎಲ್ಲರ ಮುಂದೆಯೇ ನೌಕರ ಫಾರ್ಮಾಸಿಸ್ಟ್‌ಗೆ ಬುದ್ಧಿ ಮಾತು ಹೇಳಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: KL ರಾಹುಲ್​ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?

ಹೆರಿಗೆ ಸಮಯದಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬಾರದೇ ಇರುವುದು, ರಾತ್ರಿ ಪಾಳಿಯಲ್ಲಿ ವೈದ್ಯರು ಗೈರು ಹಾಜರಿ ಆಗುವುದು, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡದೇ ಇರುವುದು. ಖಾಸಗಿ ಮೆಡಿಕಲ್​ಗಳಿಗೆ ಔಷಧಿ ಬರೆದು ಕಳುಹಿಸುವುದು ಸೇರಿ ಎಲ್ಲ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ವೈದ್ಯರು ಕಂಗಲಾಗಿದ್ದರು. ಇಂತಹವುಗಳು ಮತ್ತೆ ಮರುಕಳಿಸಬಾರದು ಎಂದು ಶಾಸಕರು ಹೇಳಿದ್ದಾರೆ.

ಔಷಧಿಕಾರರಿಂದ ಪ್ರಿಸ್ಕ್ರಿಪ್ಷನ್‌ಗಳಿಗೆ ಅಧಿಕೃತ 1 ರೂಪಾಯಿ ಬದಲಿಗೆ ರೋಗಿಗಳಿಗೆ ₹2 ವಿಧಿಸಲಾಗುತ್ತಿದೆ ಎಂಬುದನ್ನು ಶಾಕಸರು ಸೂಕ್ಷ್ಮವಾಗಿ ಪತ್ತೆ ಮಾಡಿದ್ದಾರೆ. ಈ ವೇಳೆ ರೋಗಿಗಳು ಮತ್ತು ಅವರ ಕುಟುಂಬಗಳೊಂದಿಗೆ ಚರ್ಚೆ ನಡೆಸಿದರು. ಸದ್ಯ ಇವರು ತಪಾಸಣೆ ಮಾಡಿರುವ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್‌ ಒಂದೇ 1 ರೂಪಾಯಿಗೆ ಸರ್ಕಾರಿ ಕೆಲಸ ಕಳೆದುಕೊಂಡ ಆಸ್ಪತ್ರೆ ಸಿಬ್ಬಂದಿ; ಕಾರಣ ಬಿಜೆಪಿ ಶಾಸಕ! VIDEO

https://newsfirstlive.com/wp-content/uploads/2024/09/UP_HOSPITAL.jpg

    ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಬಿಜೆಪಿ ಶಾಸಕ

    ಸ್ಥಳದಲ್ಲೇ ನೌಕರಿಯಿಂದ ತೆಗೆದು ಹಾಕಿದರು, ಅಸಲಿಗೆ ಆಗಿದ್ದೇನು?

    ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಘಟನೆಯ ವಿಡಿಯೋ ವೈರಲ್‌

ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ 1 ರೂಪಾಯಿ ಹೆಚ್ಚಿಗೆ ಪಡೆದ ಕಾರಣ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ದ ಗುತ್ತಿಗೆ ನೌಕರ ಕೆಲಸ ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದ ಜಗದೌರ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಅವರು ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಸರ್ಕಾರಿ ಸ್ವಾಮ್ಯದ ಆರೋಗ್ಯ ಸೌಲಭ್ಯದಲ್ಲಿ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಎಂಎಲ್​ಎ ದೂರುಗಳನ್ನು ಸ್ವೀಕರಿಸುತ್ತಿದ್ದರು. ಹೀಗಾಗಿ ಶಾಸಕರು ತಪಾಸಣೆ ಮಾಡುವಾಗ 1 ರೂಪಾಯಿ ನಿಗದಿ ಶುಲ್ಕದ ಬದಲಿಗೆ ರೋಗಿಗಳಿಂದ 2 ರೂಪಾಯಿಗಳನ್ನ ತೆಗೆದುಕೊಳ್ಳಲಾಗಿದೆ. ಹೀಗಾಗಿ ಆಸ್ಪತ್ರೆಯ ಎಲ್ಲರ ಮುಂದೆಯೇ ನೌಕರ ಫಾರ್ಮಾಸಿಸ್ಟ್‌ಗೆ ಬುದ್ಧಿ ಮಾತು ಹೇಳಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: KL ರಾಹುಲ್​ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?

ಹೆರಿಗೆ ಸಮಯದಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬಾರದೇ ಇರುವುದು, ರಾತ್ರಿ ಪಾಳಿಯಲ್ಲಿ ವೈದ್ಯರು ಗೈರು ಹಾಜರಿ ಆಗುವುದು, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡದೇ ಇರುವುದು. ಖಾಸಗಿ ಮೆಡಿಕಲ್​ಗಳಿಗೆ ಔಷಧಿ ಬರೆದು ಕಳುಹಿಸುವುದು ಸೇರಿ ಎಲ್ಲ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ವೈದ್ಯರು ಕಂಗಲಾಗಿದ್ದರು. ಇಂತಹವುಗಳು ಮತ್ತೆ ಮರುಕಳಿಸಬಾರದು ಎಂದು ಶಾಸಕರು ಹೇಳಿದ್ದಾರೆ.

ಔಷಧಿಕಾರರಿಂದ ಪ್ರಿಸ್ಕ್ರಿಪ್ಷನ್‌ಗಳಿಗೆ ಅಧಿಕೃತ 1 ರೂಪಾಯಿ ಬದಲಿಗೆ ರೋಗಿಗಳಿಗೆ ₹2 ವಿಧಿಸಲಾಗುತ್ತಿದೆ ಎಂಬುದನ್ನು ಶಾಕಸರು ಸೂಕ್ಷ್ಮವಾಗಿ ಪತ್ತೆ ಮಾಡಿದ್ದಾರೆ. ಈ ವೇಳೆ ರೋಗಿಗಳು ಮತ್ತು ಅವರ ಕುಟುಂಬಗಳೊಂದಿಗೆ ಚರ್ಚೆ ನಡೆಸಿದರು. ಸದ್ಯ ಇವರು ತಪಾಸಣೆ ಮಾಡಿರುವ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More