newsfirstkannada.com

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!

Share :

Published September 27, 2024 at 6:30am

    ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ 34 ಲಕ್ಷ ಜನ

    ಭಾರತದಲ್ಲಿ ಜನರ ಮಾರಣಹೋಮ ಸೃಷ್ಟಿಸುವಲ್ಲಿ ಇದು 2ನೇ ಸ್ಥಾನದಲ್ಲಿದೆ

    ಅಸ್ತಮಾದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಇವೆ ಹಲವು ಲಸಿಕೆಗಳು

ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯಗಳು ಅನೇಕ ಅಸ್ವಸ್ಥತೆಗೆ ಹಾಗೂ ಸಾವಿಗೆ ಕಾರಣವಾಗುತ್ತವೆ. ಈ ಒಂದು ಸಮಸ್ಯೆ ಭಾರತದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ COPD, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕುಗಳು ಇವೆಲ್ಲವೂ ಜನರ ಜೀವ ತೆಗೆಯುವ ಮಟ್ಟಕ್ಕೆ ಹೋಗುತ್ತವೆ. ಅದರಲ್ಲೂ ಭಾರತದಲ್ಲಿ ಅತಿಹೆಚ್ಚು ಜನರು ಈ ಸಮಸ್ಯೆಗಳಿಂದ ಬಳಲುತ್ತಾರೆ.
ಹೇಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಭಾರತದಲ್ಲಿ ಹೆಚ್ಚು ಮರಣಗಳಿಗೆ ಕಾರಣವಾಗಿದೆಯೋ. ಸಿಒಪಿಡಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Myopia; ಕೋವಿಡ್ ಲಾಕ್​ ಡೌನ್​ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?

2022ರ ಒಂದು ಅಧ್ಯಯನ ವರದಿ ಪ್ರಕಾರ ಭಾರತ ದೇಶದಲ್ಲಿ ಒಟ್ಟು 3.40 ಲಕ್ಷ ಜನರು ಈ ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ವಿಶ್ವದಲ್ಲಿ ನರಳುತ್ತಿರುವವ ಅಸ್ತಮಾದ ಸಂಖ್ಯೆಯಲ್ಲಿ ಶೇಕಡಾ 13.09 ಭಾಗದಷ್ಟು ಜನ ಭಾರತದಲ್ಲಿಯೇ ಇದ್ದಾರೆ. ಇವುಗಳಿಂದ ಪಾರಾಗಲು ಲಸಿಕೆಗಳಿವೆ. ಅವುಗಳನ್ನು ಸಕಾಲದಲ್ಲಿ ಪಡೆಯುವಂತೆ ಆರೋಗ್ಯ ವಿಭಾಗವು ಆಗಾಗ ಎಚ್ಚರಿಸುತ್ತಲೇ ಇರುತ್ತದೆ.

ಇದನ್ನೂ ಓದಿ: ಜ್ವರ, ಮಧುಮೇಹ, BPಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯ.. ಶಾಕಿಂಗ್ ಮಾಹಿತಿ ಬಹಿರಂಗ!

ಭಾರತದಲ್ಲಿ ಅತಿಹೆಚ್ಚು ಜನರು ಇರೋದು ಮಧ್ಯಮ ವರ್ಗದವರು. ಆರ್ಥಿಕವಾಗಿ ತೀರ ಸಬಲರಲ್ಲದವರು. ಅವರು ಸರಿಯಾದ ಸಮಯಕ್ಕೆ ಲಸಿಕೆಗಳನ್ನು ಪಡೆಯುವುದರಿಂದ ಇಂತಹ ಭೀಕರ ಕಾಯಿಲೆಗಳಿಂದ ದೂರವಾಗಬಹುದು ಎಂದು ಹೇಳಿದ್ದಾರೆ. ಫರಿದಾಬಾದ್​​ನ ಅಮೃತಾ ಆಸ್ಪತ್ರೆಯ ಡಾ ಅರ್ಜುನ್ ಖನ್ನಾ ಅವರು ಹೇಳುವ ಪ್ರಕಾರ, ಆಸ್ಪತ್ರೆಯಲ್ಲಿ ಅತಿಹೆಚ್ಚು ದಾಖಲಾಗುವವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವವರು. ಅಂತವರಿಗೆ ನಾವು ಕಡಿಮೆ ದರದ ಹಾಗೂ ತುಂಬಾ ಪರಿಣಾಮಕಾರಿಯಾದ ಲಸಿಕೆಗಳ ಬಗ್ಗೆ ಹೇಳುತ್ತೇವೆ. ಈ ರೀತಿಯ ಲಸಿಕೆಗಳನ್ನು ಕೊಡುವುದರಿಂದ ನಾವು ಲಕ್ಷಾಂತರ ಜೀವಗಳನ್ನು ಕಾಪಾಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶುದ್ಧ ತುಪ್ಪ, ಅಶುದ್ಧ ತುಪ್ಪ ಕಂಡು ಹಿಡಿಯುವುದು ಹೇಗೆ? ಇಲ್ಲಿವೆ ಸರಳವಾದ ಉಪಾಯಗಳು

ಲಸಿಕೆಗಳನ್ನು ಪಡೆಯುವ ಮೂಲಕ ಇಂತಹ ಸೋಂಕುಗಳ ವಿರುದ್ಧ ನಿರೋಧಕ ಶಕ್ತಿಯು ದೇಹದಲ್ಲಿ ಸೃಷ್ಟಿಯಾಗುತ್ತದೆ. ಅಸ್ತಮಾ ಸಿಒಪಿಡಿಯಂತಹ ರೋಗಗಳಿಂದ ಅದು ರಕ್ಷಣೆ ನೀಡುತ್ತದೆ. ಹೀಗಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದವರು ಸ್ವಯಂ ತಾವೇ ಬಂದು ಲಸಿಕೆ ಪಡೆಯುವ ಮೂಲಕ ಈ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು ಎಂದು ಡಾ. ಅರ್ಜುನ್ ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!

https://newsfirstlive.com/wp-content/uploads/2024/09/LUNG-RELATED-VACCINES.jpg

    ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ 34 ಲಕ್ಷ ಜನ

    ಭಾರತದಲ್ಲಿ ಜನರ ಮಾರಣಹೋಮ ಸೃಷ್ಟಿಸುವಲ್ಲಿ ಇದು 2ನೇ ಸ್ಥಾನದಲ್ಲಿದೆ

    ಅಸ್ತಮಾದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಇವೆ ಹಲವು ಲಸಿಕೆಗಳು

ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯಗಳು ಅನೇಕ ಅಸ್ವಸ್ಥತೆಗೆ ಹಾಗೂ ಸಾವಿಗೆ ಕಾರಣವಾಗುತ್ತವೆ. ಈ ಒಂದು ಸಮಸ್ಯೆ ಭಾರತದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ COPD, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕುಗಳು ಇವೆಲ್ಲವೂ ಜನರ ಜೀವ ತೆಗೆಯುವ ಮಟ್ಟಕ್ಕೆ ಹೋಗುತ್ತವೆ. ಅದರಲ್ಲೂ ಭಾರತದಲ್ಲಿ ಅತಿಹೆಚ್ಚು ಜನರು ಈ ಸಮಸ್ಯೆಗಳಿಂದ ಬಳಲುತ್ತಾರೆ.
ಹೇಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಭಾರತದಲ್ಲಿ ಹೆಚ್ಚು ಮರಣಗಳಿಗೆ ಕಾರಣವಾಗಿದೆಯೋ. ಸಿಒಪಿಡಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Myopia; ಕೋವಿಡ್ ಲಾಕ್​ ಡೌನ್​ ಬಳಿಕ ಮಕ್ಕಳಲ್ಲಿ ಸೃಷ್ಟಿಯಾಗಿದೆ ಹೊಸ ಸಮಸ್ಯೆ, ಏನದು?

2022ರ ಒಂದು ಅಧ್ಯಯನ ವರದಿ ಪ್ರಕಾರ ಭಾರತ ದೇಶದಲ್ಲಿ ಒಟ್ಟು 3.40 ಲಕ್ಷ ಜನರು ಈ ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ವಿಶ್ವದಲ್ಲಿ ನರಳುತ್ತಿರುವವ ಅಸ್ತಮಾದ ಸಂಖ್ಯೆಯಲ್ಲಿ ಶೇಕಡಾ 13.09 ಭಾಗದಷ್ಟು ಜನ ಭಾರತದಲ್ಲಿಯೇ ಇದ್ದಾರೆ. ಇವುಗಳಿಂದ ಪಾರಾಗಲು ಲಸಿಕೆಗಳಿವೆ. ಅವುಗಳನ್ನು ಸಕಾಲದಲ್ಲಿ ಪಡೆಯುವಂತೆ ಆರೋಗ್ಯ ವಿಭಾಗವು ಆಗಾಗ ಎಚ್ಚರಿಸುತ್ತಲೇ ಇರುತ್ತದೆ.

ಇದನ್ನೂ ಓದಿ: ಜ್ವರ, ಮಧುಮೇಹ, BPಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯ.. ಶಾಕಿಂಗ್ ಮಾಹಿತಿ ಬಹಿರಂಗ!

ಭಾರತದಲ್ಲಿ ಅತಿಹೆಚ್ಚು ಜನರು ಇರೋದು ಮಧ್ಯಮ ವರ್ಗದವರು. ಆರ್ಥಿಕವಾಗಿ ತೀರ ಸಬಲರಲ್ಲದವರು. ಅವರು ಸರಿಯಾದ ಸಮಯಕ್ಕೆ ಲಸಿಕೆಗಳನ್ನು ಪಡೆಯುವುದರಿಂದ ಇಂತಹ ಭೀಕರ ಕಾಯಿಲೆಗಳಿಂದ ದೂರವಾಗಬಹುದು ಎಂದು ಹೇಳಿದ್ದಾರೆ. ಫರಿದಾಬಾದ್​​ನ ಅಮೃತಾ ಆಸ್ಪತ್ರೆಯ ಡಾ ಅರ್ಜುನ್ ಖನ್ನಾ ಅವರು ಹೇಳುವ ಪ್ರಕಾರ, ಆಸ್ಪತ್ರೆಯಲ್ಲಿ ಅತಿಹೆಚ್ಚು ದಾಖಲಾಗುವವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವವರು. ಅಂತವರಿಗೆ ನಾವು ಕಡಿಮೆ ದರದ ಹಾಗೂ ತುಂಬಾ ಪರಿಣಾಮಕಾರಿಯಾದ ಲಸಿಕೆಗಳ ಬಗ್ಗೆ ಹೇಳುತ್ತೇವೆ. ಈ ರೀತಿಯ ಲಸಿಕೆಗಳನ್ನು ಕೊಡುವುದರಿಂದ ನಾವು ಲಕ್ಷಾಂತರ ಜೀವಗಳನ್ನು ಕಾಪಾಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶುದ್ಧ ತುಪ್ಪ, ಅಶುದ್ಧ ತುಪ್ಪ ಕಂಡು ಹಿಡಿಯುವುದು ಹೇಗೆ? ಇಲ್ಲಿವೆ ಸರಳವಾದ ಉಪಾಯಗಳು

ಲಸಿಕೆಗಳನ್ನು ಪಡೆಯುವ ಮೂಲಕ ಇಂತಹ ಸೋಂಕುಗಳ ವಿರುದ್ಧ ನಿರೋಧಕ ಶಕ್ತಿಯು ದೇಹದಲ್ಲಿ ಸೃಷ್ಟಿಯಾಗುತ್ತದೆ. ಅಸ್ತಮಾ ಸಿಒಪಿಡಿಯಂತಹ ರೋಗಗಳಿಂದ ಅದು ರಕ್ಷಣೆ ನೀಡುತ್ತದೆ. ಹೀಗಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದವರು ಸ್ವಯಂ ತಾವೇ ಬಂದು ಲಸಿಕೆ ಪಡೆಯುವ ಮೂಲಕ ಈ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು ಎಂದು ಡಾ. ಅರ್ಜುನ್ ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More