newsfirstkannada.com

ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯ ಸ್ಟಾಪ್.. 2ನೇ ದಿನದಲ್ಲಿ ಇನ್ನಿಂಗ್ಸ್​ ನಡೆಯೋದು ಡೌಟ್, ಕಾರಣ?

Share :

Published September 28, 2024 at 1:05pm

    ಬೆಳಗ್ಗೆ ಆರಂಭ ಆಗಬೇಕಿತ್ತ ಪಂದ್ಯ ಇದುವರೆಗೂ ಶುರು ಆಗಿಲ್ಲ

    ಕಾನ್ಪುರದ ಗ್ರೀನ್​ಪಾರ್ಕ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​​

    ವಿರಾಟ್ ಕೊಹ್ಲಿ, ರೋಹಿತ್ ಸೇರಿ ಯಾರು ಮೈದಾನಕ್ಕೆ ಇಳಿದಿಲ್ಲ

ಬಾಂಗ್ಲಾದೇಶ ಹಾಗೂ ಭಾರತ ನಡುವೆ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ಗೆ ಮಳೆ ಅಡ್ಡಿ ಮಾಡಿದೆ. ಹೀಗಾಗಿ 2ನೇ ದಿನದ ಇನ್ನಿಂಗ್ಸ್​ ಅನ್ನು ಇದುವರೆಗೂ ಪ್ರಾರಂಭ ಮಾಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

ಉತ್ತರ ಪ್ರದೇಶದ ಕಾನ್ಪುರದ ಗ್ರೀನ್​ಪಾರ್ಕ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ್ದ ಬಾಂಗ್ಲಾ 3 ವಿಕೆಟ್​ಗೆ​ 107 ರನ್​ಗಳನ್ನ ಗಳಿಸಿದೆ. ಮೊದಲ ದಿನವು ಮಳೆ ಬಂದಿದ್ದರಿಂದ ಕೇವಲ 35 ಓವರ್​ಗಳನ್ನು ಮಾತ್ರ ಆಡಿಸಲಾಗಿತ್ತು. ಇಂದು ಇನ್ನಿಂಗ್ಸ್​ ಆರಂಭಕ್ಕೂ ಮೊದಲೇ ವರುಣ ಎಂಟ್ರಿಕೊಟ್ಟಿದ್ದರಿಂದ ಇದವರೆಗೂ ಪ್ಲೇಯರ್ಸ್ ಮೈದಾನಕ್ಕೆ ಇಳಿದಿಲ್ಲ.

ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ ಬೌಲರ್ಸ್ ಎದುರಾಳಿಗಳ ವಿಕೆಟ್ ಅನ್ನು ಬೇಗನೆ ಪಡೆದರು. ಆಕಾಶ್ ದೀಪ್ ಬೌಲಿಂಗ್​ನಲ್ಲಿ ಜಾಕೀರ್ ಹಸನ್ ಡಕೌಟ್ ಆದರೆ, ಶಾದ್ಮಾನ್ ಇಸ್ಲಾಮ್ ಕೇವಲ 24 ರನ್​ಗೆ ಔಟ್ ಆದರು. ಚೆನ್ನೈನಲ್ಲಿ ನಡೆದ ಟೆಸ್ಟ್​ ಗೆಲುವಿಗೆ ಕಾರಣರಾಗಿದ್ದ ಆರ್​.ಅಶ್ವಿನ್ ಅವರು ನಜ್ಮುಲ್ ಹೊಸೈನ್ ಶಾಂತೋ ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಸದ್ಯ ಬಾಂಗ್ಲಾ 3 ವಿಕೆಟ್​ಗೆ​ 107 ರನ್​ ಗಳಿಸಿದೆ. ಮಳೆ ಬರುತ್ತಿರುವ ಕಾರಣ ಇನ್ನಿಂಗ್ಸ್​ ಅನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ತಿಳಿದು ಬಂದಿದೆ.

 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯ ಸ್ಟಾಪ್.. 2ನೇ ದಿನದಲ್ಲಿ ಇನ್ನಿಂಗ್ಸ್​ ನಡೆಯೋದು ಡೌಟ್, ಕಾರಣ?

https://newsfirstlive.com/wp-content/uploads/2024/09/KL_RAHUL_VIRAT.jpg

    ಬೆಳಗ್ಗೆ ಆರಂಭ ಆಗಬೇಕಿತ್ತ ಪಂದ್ಯ ಇದುವರೆಗೂ ಶುರು ಆಗಿಲ್ಲ

    ಕಾನ್ಪುರದ ಗ್ರೀನ್​ಪಾರ್ಕ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​​

    ವಿರಾಟ್ ಕೊಹ್ಲಿ, ರೋಹಿತ್ ಸೇರಿ ಯಾರು ಮೈದಾನಕ್ಕೆ ಇಳಿದಿಲ್ಲ

ಬಾಂಗ್ಲಾದೇಶ ಹಾಗೂ ಭಾರತ ನಡುವೆ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ಗೆ ಮಳೆ ಅಡ್ಡಿ ಮಾಡಿದೆ. ಹೀಗಾಗಿ 2ನೇ ದಿನದ ಇನ್ನಿಂಗ್ಸ್​ ಅನ್ನು ಇದುವರೆಗೂ ಪ್ರಾರಂಭ ಮಾಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

ಉತ್ತರ ಪ್ರದೇಶದ ಕಾನ್ಪುರದ ಗ್ರೀನ್​ಪಾರ್ಕ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ್ದ ಬಾಂಗ್ಲಾ 3 ವಿಕೆಟ್​ಗೆ​ 107 ರನ್​ಗಳನ್ನ ಗಳಿಸಿದೆ. ಮೊದಲ ದಿನವು ಮಳೆ ಬಂದಿದ್ದರಿಂದ ಕೇವಲ 35 ಓವರ್​ಗಳನ್ನು ಮಾತ್ರ ಆಡಿಸಲಾಗಿತ್ತು. ಇಂದು ಇನ್ನಿಂಗ್ಸ್​ ಆರಂಭಕ್ಕೂ ಮೊದಲೇ ವರುಣ ಎಂಟ್ರಿಕೊಟ್ಟಿದ್ದರಿಂದ ಇದವರೆಗೂ ಪ್ಲೇಯರ್ಸ್ ಮೈದಾನಕ್ಕೆ ಇಳಿದಿಲ್ಲ.

ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ ಬೌಲರ್ಸ್ ಎದುರಾಳಿಗಳ ವಿಕೆಟ್ ಅನ್ನು ಬೇಗನೆ ಪಡೆದರು. ಆಕಾಶ್ ದೀಪ್ ಬೌಲಿಂಗ್​ನಲ್ಲಿ ಜಾಕೀರ್ ಹಸನ್ ಡಕೌಟ್ ಆದರೆ, ಶಾದ್ಮಾನ್ ಇಸ್ಲಾಮ್ ಕೇವಲ 24 ರನ್​ಗೆ ಔಟ್ ಆದರು. ಚೆನ್ನೈನಲ್ಲಿ ನಡೆದ ಟೆಸ್ಟ್​ ಗೆಲುವಿಗೆ ಕಾರಣರಾಗಿದ್ದ ಆರ್​.ಅಶ್ವಿನ್ ಅವರು ನಜ್ಮುಲ್ ಹೊಸೈನ್ ಶಾಂತೋ ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಸದ್ಯ ಬಾಂಗ್ಲಾ 3 ವಿಕೆಟ್​ಗೆ​ 107 ರನ್​ ಗಳಿಸಿದೆ. ಮಳೆ ಬರುತ್ತಿರುವ ಕಾರಣ ಇನ್ನಿಂಗ್ಸ್​ ಅನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ತಿಳಿದು ಬಂದಿದೆ.

 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More