ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಅಂಕೋಲ ಬೆಳಂಬಾರ ಬೋಟ್ ಮುಳುಗಿದ್ದೇಕೆ?
ದುರ್ಘಟನೆಯಿಂದ 1.50 ಕೋಟಿ ರೂಪಾಯಿ ನಷ್ಟ!
ಕಾರವಾರ: ಅಂಕೋಲ ಬೆಳಂಬಾರ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿದೆ. ಪರಿಣಾಮ ಬೋಟ್ನಲ್ಲಿದ್ದ 12 ಮೀನುಗಾರರು ಪ್ರಾಣ ಸಂಕಟಕ್ಕೆ ಸಿಲುಕಿದ್ದರು.
ಜೋರಾದ ಗಾಳಿ ಮತ್ತು ದೊಡ್ಡ ತೆರೆಗೆ ಸಿಲುಕಿ ಪರ್ಶಿಯನ್ ಬೋಟ್ಗೆ ಹಾನಿಯಾಗಿತ್ತು. ಬೋಟ್ನ ತಳಭಾಗದ ಫೈಬರ್ ಕಿತ್ತು ಬಂದ ಪರಿಣಾಮ ನೀರು ಒಳನುಗ್ಗಿತ್ತು. ಇದನ್ನು ಗಮನಿಸಿದ ಇನ್ನೊಂದು ಬೋಟ್ನ ಮೀನುಗಾರರು, ಮುಳುಗುತ್ತಿದ್ದ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಚಂದ್ರಾವತಿ ಸುಭಾಷ್ ಖಾರ್ವಿ, ಎಂಬುವವರಿಗೆ ಬೋಟ್ ಸೇರಿತ್ತು. ಈ ದುರ್ಘಟನೆಯಿಂದ ಅಂದಾಜು 1.50 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಅಂಕೋಲ ಬೆಳಂಬಾರ ಬೋಟ್ ಮುಳುಗಿದ್ದೇಕೆ?
ದುರ್ಘಟನೆಯಿಂದ 1.50 ಕೋಟಿ ರೂಪಾಯಿ ನಷ್ಟ!
ಕಾರವಾರ: ಅಂಕೋಲ ಬೆಳಂಬಾರ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿದೆ. ಪರಿಣಾಮ ಬೋಟ್ನಲ್ಲಿದ್ದ 12 ಮೀನುಗಾರರು ಪ್ರಾಣ ಸಂಕಟಕ್ಕೆ ಸಿಲುಕಿದ್ದರು.
ಜೋರಾದ ಗಾಳಿ ಮತ್ತು ದೊಡ್ಡ ತೆರೆಗೆ ಸಿಲುಕಿ ಪರ್ಶಿಯನ್ ಬೋಟ್ಗೆ ಹಾನಿಯಾಗಿತ್ತು. ಬೋಟ್ನ ತಳಭಾಗದ ಫೈಬರ್ ಕಿತ್ತು ಬಂದ ಪರಿಣಾಮ ನೀರು ಒಳನುಗ್ಗಿತ್ತು. ಇದನ್ನು ಗಮನಿಸಿದ ಇನ್ನೊಂದು ಬೋಟ್ನ ಮೀನುಗಾರರು, ಮುಳುಗುತ್ತಿದ್ದ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಚಂದ್ರಾವತಿ ಸುಭಾಷ್ ಖಾರ್ವಿ, ಎಂಬುವವರಿಗೆ ಬೋಟ್ ಸೇರಿತ್ತು. ಈ ದುರ್ಘಟನೆಯಿಂದ ಅಂದಾಜು 1.50 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ