newsfirstkannada.com

ಜಮೀನು ಪಡೆದು ಉದ್ಯೋಗ ನೀಡಿದ ಕಂಪನಿ; ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ಮಗ

Share :

20-11-2023

    ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

    4 ವರ್ಷದಿಂದ ಸತಾಯಿಸಿದ ಪಾರ್ಲೆ ಆಗ್ರೋ ಕಂಪನಿ

    ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋದಾಗ ಮಗ ಆತ್ಮಹತ್ಯೆ

ಮೈಸೂರು: ಯುವಕನೋರ್ವ ಜಮೀ‌ನು ಪಡೆದು ಉದ್ಯೋಗ ನೀಡದ ಖಾಸಗಿ ಕಂಪನಿ ವಿರುದ್ಧ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ. ಅದೇ ಊರಿನ ನಿವಾಸಿ ಸಿದ್ದರಾಜು(28) ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ನಿಲ್ಲಿಸಿದ್ದಾರೆ

ಯುವಕ ಸಿದ್ದರಾಜು ಪಾರ್ಲೆ ಆಗ್ರೋ ಕಂಪನಿ ವಿರುದ್ಧ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಹಿನ್ನೆಲೆ ಕಂಪನಿ ಶಾಖೆ ಮುಖ್ಯಸ್ಥ ರಾಮಪ್ರಸಾದ್, ಎಚ್‌ಆರ್ ಮುಷೀದ್ ಉಲ್ಲಾಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಿದ್ದರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಐಎಡಿಬಿ ಕಚೇರಿಯು ಸಿದ್ದರಾಜು ತಂದೆ ಸಿದ್ದೇಗೌಡ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಾಗದಲ್ಲಿ ಪಾರ್ಲೆ ಆಗ್ರೋ ಕಂಪನಿ ನಿರ್ಮಾಣ ಮಾಡಿತ್ತು. ಮಾತ್ರವಲ್ಲದೆ, ಸಿದ್ದರಾಜುಗೆ ಕೆಲಸ ಕೊಡುವ ಭರವಸೆ ನೀಡಿತ್ತು.

ಇದನ್ನು ಓದಿ: ಲಾಂಗ್​, ಮಚ್ಚು ಹಿಡಿದು ರೀಲ್ಸ್​ ಮಾಡಿದ್ರೆ ಹುಷಾರ್​.. ಇಬ್ಬರನ್ನು ಅರೆಸ್ಟ್​ ಮಾಡಿದ ವೇಮಗಲ್ ಪೊಲೀಸರು

ಆದರೆ ನಾಲ್ಕು ವರ್ಷದಿಂದ ಸಿದ್ದರಾಜುಗೆ ಕೆಲಸ ನೀಡಲು ನಿರಾಕರಣೆ ಮಾಡಿದೆ. ಅತ್ತ ಕೆಲಸದ ವಿಚಾರವಾಗಿ ಕಂಪನಿ, ಕೆಐಎಡಿಬಿ ಕಚೇರಿ ಅಲೆದು ಸಿದ್ದರಾಜು ಹೈರಾಣಾಗಿದ್ದ. ಮನೆಯವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ.

ಡೆತ್​ನೋಟ್‌‌ನಲ್ಲಿ ರೈತರ ಮಕ್ಕಳ ಸಾವಿಗೆ ಕಾರಣವಾದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾನೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನು ಪಡೆದು ಉದ್ಯೋಗ ನೀಡಿದ ಕಂಪನಿ; ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ಮಗ

https://newsfirstlive.com/wp-content/uploads/2023/11/Siddaraju.jpg

    ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

    4 ವರ್ಷದಿಂದ ಸತಾಯಿಸಿದ ಪಾರ್ಲೆ ಆಗ್ರೋ ಕಂಪನಿ

    ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋದಾಗ ಮಗ ಆತ್ಮಹತ್ಯೆ

ಮೈಸೂರು: ಯುವಕನೋರ್ವ ಜಮೀ‌ನು ಪಡೆದು ಉದ್ಯೋಗ ನೀಡದ ಖಾಸಗಿ ಕಂಪನಿ ವಿರುದ್ಧ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ. ಅದೇ ಊರಿನ ನಿವಾಸಿ ಸಿದ್ದರಾಜು(28) ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ನಿಲ್ಲಿಸಿದ್ದಾರೆ

ಯುವಕ ಸಿದ್ದರಾಜು ಪಾರ್ಲೆ ಆಗ್ರೋ ಕಂಪನಿ ವಿರುದ್ಧ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಹಿನ್ನೆಲೆ ಕಂಪನಿ ಶಾಖೆ ಮುಖ್ಯಸ್ಥ ರಾಮಪ್ರಸಾದ್, ಎಚ್‌ಆರ್ ಮುಷೀದ್ ಉಲ್ಲಾಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಿದ್ದರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಐಎಡಿಬಿ ಕಚೇರಿಯು ಸಿದ್ದರಾಜು ತಂದೆ ಸಿದ್ದೇಗೌಡ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಾಗದಲ್ಲಿ ಪಾರ್ಲೆ ಆಗ್ರೋ ಕಂಪನಿ ನಿರ್ಮಾಣ ಮಾಡಿತ್ತು. ಮಾತ್ರವಲ್ಲದೆ, ಸಿದ್ದರಾಜುಗೆ ಕೆಲಸ ಕೊಡುವ ಭರವಸೆ ನೀಡಿತ್ತು.

ಇದನ್ನು ಓದಿ: ಲಾಂಗ್​, ಮಚ್ಚು ಹಿಡಿದು ರೀಲ್ಸ್​ ಮಾಡಿದ್ರೆ ಹುಷಾರ್​.. ಇಬ್ಬರನ್ನು ಅರೆಸ್ಟ್​ ಮಾಡಿದ ವೇಮಗಲ್ ಪೊಲೀಸರು

ಆದರೆ ನಾಲ್ಕು ವರ್ಷದಿಂದ ಸಿದ್ದರಾಜುಗೆ ಕೆಲಸ ನೀಡಲು ನಿರಾಕರಣೆ ಮಾಡಿದೆ. ಅತ್ತ ಕೆಲಸದ ವಿಚಾರವಾಗಿ ಕಂಪನಿ, ಕೆಐಎಡಿಬಿ ಕಚೇರಿ ಅಲೆದು ಸಿದ್ದರಾಜು ಹೈರಾಣಾಗಿದ್ದ. ಮನೆಯವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ.

ಡೆತ್​ನೋಟ್‌‌ನಲ್ಲಿ ರೈತರ ಮಕ್ಕಳ ಸಾವಿಗೆ ಕಾರಣವಾದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾನೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More