ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಭಕ್ತ
ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಸಿಕ್ತು ಪತ್ರ
ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ಬರೆದ ರಕ್ಷಿತ್
ಚಿಕ್ಕಮಗಳೂರು: ವ್ಯಕ್ತಿಯೋರ್ವ ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ. ರಕ್ಷಿತ್ ಎಂಬಾತ ದೇವರಿಗೆ ಪತ್ರ ಬರೆದಿದ್ದಾನೆ.
‘ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು’ ಎಂದು ರಕ್ಷಿತ್ ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.
ರಕ್ಷಿತ್ ‘ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ. ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ’ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಹುಂಡಿ ಹಣ ಎಣಿಕೆ ಅಧಿಕಾರಿಗಳು ಭಕ್ತನ ಈ ವಿಚಿತ್ರ ಬೇಡಿಕೆಗೆ ಪತ್ರ ಕಂಡು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಭಕ್ತ
ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಸಿಕ್ತು ಪತ್ರ
ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ಬರೆದ ರಕ್ಷಿತ್
ಚಿಕ್ಕಮಗಳೂರು: ವ್ಯಕ್ತಿಯೋರ್ವ ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ. ರಕ್ಷಿತ್ ಎಂಬಾತ ದೇವರಿಗೆ ಪತ್ರ ಬರೆದಿದ್ದಾನೆ.
‘ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು’ ಎಂದು ರಕ್ಷಿತ್ ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.
ರಕ್ಷಿತ್ ‘ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ. ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ’ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಹುಂಡಿ ಹಣ ಎಣಿಕೆ ಅಧಿಕಾರಿಗಳು ಭಕ್ತನ ಈ ವಿಚಿತ್ರ ಬೇಡಿಕೆಗೆ ಪತ್ರ ಕಂಡು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ