newsfirstkannada.com

ಬಜೆಟ್​​ ಮಂಡನೆ ವೇಳೆ ಸುಳ್ಳು ಹೇಳಿ ವಿಧಾನಸಭೆ ಪ್ರವೇಶಿಸಿದ ಅನಾಮಧೇಯ ವ್ಯಕ್ತಿ! ಯಾರು ಆತ?

Share :

07-07-2023

    2023-24ನೇ ಸಾಲಿನ ಬಜೆಟ್​ ಮಂಡಿಸಿದ ಸಿಎಂ ಸಿದ್ದರಾಮಯ್ಯ

    ಬಜೆಟ್​ ಮಂಡನೆ ವೇಳೆ ವಿಧಾನಸಭೆಯೊಳಕ್ಕೆ ಎಂಟ್ರಿ ಕೊಟ್ಟ ಅನಾಮಧೇಯ

    ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ವಶದಲ್ಲಿ ಅನಾಮಧೇಯ ವ್ಯಕ್ತಿ.. ಯಾರು ಆತ?

ಇಂದು 2023-24ನೇ ಸಾಲಿನ ಬಜೆಟ್​ ಅನ್ನು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ್ದಾರೆ. 3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಇದಾಗಿದ್ದು, ಬಜೆಟ್​​ ಮಂಡನೆ ವೇಳೆ ಖಾಸಗಿ ವ್ಯಕ್ತಿಯೋರ್ವ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಸಂಗತಿಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಆದರೀಗ ಇದೇ ವಿಚಾರವಾಗಿ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್​ಗೆ ದೂರು ನೀಡಿದ್ದಾರೆ.

ಖಾಸಗಿ ವ್ಯಕ್ತಿಯ ಪ್ರವೇಶ

ಜೆಡಿಎಸ್ ಶಾಸಕ ಶರುಣುಗೌಡ ಕಂದಕೂರು ವಿಧಾನಸಭೆಯ ಸದನದಲ್ಲಿ ಖಾಸಗಿ ವ್ಯಕ್ತಿ ಪ್ರವೇಶ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬಜೆಟ್ ಮಂಡನೆ ಸಮಯದಲ್ಲಿ ಯಾರೋ ಖಾಸಗಿ ವ್ಯಕ್ತಿ ಬಂದು ಕುಳಿತ್ತಿದ್ದರು. ನಾನು ಪಕ್ಕದಲ್ಲಿದ್ದ ಜಿ ಟಿ ದೇವೇಗೌಡ ಅವರ ಬಳಿ ಕೇಳಿದೆ. ಅವರು ಯಾರೋ ಗೊತ್ತಿಲ್ಲ ಅಂದ್ರು ಎಂದು ಹೇಳಿದ್ದಾರೆ.

ಶಾಸಕ ಶರುಣುಗೌಡ ಕಂದಕೂರು
ಶಾಸಕ ಶರುಣುಗೌಡ ಕಂದಕೂರು

ಮೊಳಕಾಲ್ಮೂರು ಎಂಎಲ್‌ಎ ಅಂದ್ರು

ಬಳಿಕ ನಾನು ಮೊಳಕಾಲ್ಮೂರು ಎಂಎಲ್‌ಎ ಅಂತ ಆ ಖಾಸಗಿ ವ್ಯಕ್ತಿ ಹೇಳಿದ್ದರು. ಅವರು ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ರು. ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಜಾಗದಲ್ಲಿ ಆತ ಕುಳಿತಿದ್ದ ಎಂದು ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ. ಮಾತ್ರವಲ್ಲದೆ ಸ್ಪೀಕರ್​ಗೆ ಭದ್ರತಾ ಲೋಪದ ಕುರಿತಾಗಿ ದೂರು ನೀಡಿದ್ದಾರೆ.

ಪೊಲೀಸರ ವಶದಲ್ಲಿದ್ದಾರೆ ಅನಾಮಧೇಯ ವ್ಯಕ್ತಿ

ಸದ್ಯ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಅನಾಮಧೇಯ ವ್ಯಕ್ತಿ ಪೊಲೀಸರ ವಶದಲ್ಲಿದ್ದು ಎಫ್​ಐಆರ್​ ಕೂಡ ದಾಖಲಾಗಿದೆ. ಅನಾಮಧೇಯ ವ್ಯಕ್ತಿಯ ವಿಚಾರಣೆ ಕೂಡ ನಡೆಯುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ.

ಮೊಳಕಾಲ್ಮೂರಿನ ತಿಪ್ಪೇರುದ್ರ
ಮೊಳಕಾಲ್ಮೂರಿನ ತಿಪ್ಪೇರುದ್ರ

ಯಾರು ಗೊತ್ತಾ ಈ ವ್ಯಕ್ತಿ?

ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ ಚಿತ್ರದುರ್ಗದ ಮೊಳಕಾಲ್ಮೂರಿನ ತಿಪ್ಪೇರುದ್ರ ಎಂಬ ವ್ಯಕ್ತಿಯಿಂದ ವಿಧಾಸಸಭೆಗೆ ಪ್ರವೇಶ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಪ್ಪತ್ತು ವರ್ಷದ ತಿಪ್ಪೇರುದ್ರ ಎಂಬ ವ್ಯಕ್ತಿ ವಿಧಾನಸಭೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಯಾವ ದಾಖಲೆ ನೀಡಿ ಒಳಪ್ರವೇಶಿಸಿದ್ರು?

ತಿಪ್ಪೇರುದ್ರ ಅವರ ಮತ್ತೊಂದು ಹೆಸರು ಕರಿಯಪ್ಪ ಎಂದಾಗಿದ್ದು, ಯಾವ ಎಮ್ ಎಲ್ ಎ ಹೆಸರು ಬಳಸಿ ಒಳ ಹೋಗಿದ್ದರು? ಆಸನದಲ್ಲಿ ಕುಳಿತುಕೊಂಡಿದ್ದು ಹೇಗೆ..? ಯಾವ ದಾಖಲೆಗಳು ಆತನ ಬಳಿಯಿದ್ದವು ಎಂಬ ಕುರಿತಾಗಿ ವಿಚಾರಣೆ ನಡೆಯುತ್ತಿದೆ.

ಸಿಸಿಬಿ ಜಂಟಿ ಆಯುಕ್ತ ಶರಣಪ್ಪರಿಂದ ವಿಚಾರಣೆ

ಪೊಲೀಸ್ ಕಮಿಷನರ್  ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ. ಖುದ್ದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಬಜೆಟ್​​ ಮಂಡನೆ ವೇಳೆ ಸುಳ್ಳು ಹೇಳಿ ವಿಧಾನಸಭೆ ಪ್ರವೇಶಿಸಿದ ಅನಾಮಧೇಯ ವ್ಯಕ್ತಿ! ಯಾರು ಆತ?

https://newsfirstlive.com/wp-content/uploads/2023/07/Vidhana-Souda.jpg

    2023-24ನೇ ಸಾಲಿನ ಬಜೆಟ್​ ಮಂಡಿಸಿದ ಸಿಎಂ ಸಿದ್ದರಾಮಯ್ಯ

    ಬಜೆಟ್​ ಮಂಡನೆ ವೇಳೆ ವಿಧಾನಸಭೆಯೊಳಕ್ಕೆ ಎಂಟ್ರಿ ಕೊಟ್ಟ ಅನಾಮಧೇಯ

    ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ವಶದಲ್ಲಿ ಅನಾಮಧೇಯ ವ್ಯಕ್ತಿ.. ಯಾರು ಆತ?

ಇಂದು 2023-24ನೇ ಸಾಲಿನ ಬಜೆಟ್​ ಅನ್ನು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ್ದಾರೆ. 3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಇದಾಗಿದ್ದು, ಬಜೆಟ್​​ ಮಂಡನೆ ವೇಳೆ ಖಾಸಗಿ ವ್ಯಕ್ತಿಯೋರ್ವ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಸಂಗತಿಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಆದರೀಗ ಇದೇ ವಿಚಾರವಾಗಿ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್​ಗೆ ದೂರು ನೀಡಿದ್ದಾರೆ.

ಖಾಸಗಿ ವ್ಯಕ್ತಿಯ ಪ್ರವೇಶ

ಜೆಡಿಎಸ್ ಶಾಸಕ ಶರುಣುಗೌಡ ಕಂದಕೂರು ವಿಧಾನಸಭೆಯ ಸದನದಲ್ಲಿ ಖಾಸಗಿ ವ್ಯಕ್ತಿ ಪ್ರವೇಶ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬಜೆಟ್ ಮಂಡನೆ ಸಮಯದಲ್ಲಿ ಯಾರೋ ಖಾಸಗಿ ವ್ಯಕ್ತಿ ಬಂದು ಕುಳಿತ್ತಿದ್ದರು. ನಾನು ಪಕ್ಕದಲ್ಲಿದ್ದ ಜಿ ಟಿ ದೇವೇಗೌಡ ಅವರ ಬಳಿ ಕೇಳಿದೆ. ಅವರು ಯಾರೋ ಗೊತ್ತಿಲ್ಲ ಅಂದ್ರು ಎಂದು ಹೇಳಿದ್ದಾರೆ.

ಶಾಸಕ ಶರುಣುಗೌಡ ಕಂದಕೂರು
ಶಾಸಕ ಶರುಣುಗೌಡ ಕಂದಕೂರು

ಮೊಳಕಾಲ್ಮೂರು ಎಂಎಲ್‌ಎ ಅಂದ್ರು

ಬಳಿಕ ನಾನು ಮೊಳಕಾಲ್ಮೂರು ಎಂಎಲ್‌ಎ ಅಂತ ಆ ಖಾಸಗಿ ವ್ಯಕ್ತಿ ಹೇಳಿದ್ದರು. ಅವರು ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ರು. ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಜಾಗದಲ್ಲಿ ಆತ ಕುಳಿತಿದ್ದ ಎಂದು ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ. ಮಾತ್ರವಲ್ಲದೆ ಸ್ಪೀಕರ್​ಗೆ ಭದ್ರತಾ ಲೋಪದ ಕುರಿತಾಗಿ ದೂರು ನೀಡಿದ್ದಾರೆ.

ಪೊಲೀಸರ ವಶದಲ್ಲಿದ್ದಾರೆ ಅನಾಮಧೇಯ ವ್ಯಕ್ತಿ

ಸದ್ಯ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಅನಾಮಧೇಯ ವ್ಯಕ್ತಿ ಪೊಲೀಸರ ವಶದಲ್ಲಿದ್ದು ಎಫ್​ಐಆರ್​ ಕೂಡ ದಾಖಲಾಗಿದೆ. ಅನಾಮಧೇಯ ವ್ಯಕ್ತಿಯ ವಿಚಾರಣೆ ಕೂಡ ನಡೆಯುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ.

ಮೊಳಕಾಲ್ಮೂರಿನ ತಿಪ್ಪೇರುದ್ರ
ಮೊಳಕಾಲ್ಮೂರಿನ ತಿಪ್ಪೇರುದ್ರ

ಯಾರು ಗೊತ್ತಾ ಈ ವ್ಯಕ್ತಿ?

ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ ಚಿತ್ರದುರ್ಗದ ಮೊಳಕಾಲ್ಮೂರಿನ ತಿಪ್ಪೇರುದ್ರ ಎಂಬ ವ್ಯಕ್ತಿಯಿಂದ ವಿಧಾಸಸಭೆಗೆ ಪ್ರವೇಶ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಪ್ಪತ್ತು ವರ್ಷದ ತಿಪ್ಪೇರುದ್ರ ಎಂಬ ವ್ಯಕ್ತಿ ವಿಧಾನಸಭೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಯಾವ ದಾಖಲೆ ನೀಡಿ ಒಳಪ್ರವೇಶಿಸಿದ್ರು?

ತಿಪ್ಪೇರುದ್ರ ಅವರ ಮತ್ತೊಂದು ಹೆಸರು ಕರಿಯಪ್ಪ ಎಂದಾಗಿದ್ದು, ಯಾವ ಎಮ್ ಎಲ್ ಎ ಹೆಸರು ಬಳಸಿ ಒಳ ಹೋಗಿದ್ದರು? ಆಸನದಲ್ಲಿ ಕುಳಿತುಕೊಂಡಿದ್ದು ಹೇಗೆ..? ಯಾವ ದಾಖಲೆಗಳು ಆತನ ಬಳಿಯಿದ್ದವು ಎಂಬ ಕುರಿತಾಗಿ ವಿಚಾರಣೆ ನಡೆಯುತ್ತಿದೆ.

ಸಿಸಿಬಿ ಜಂಟಿ ಆಯುಕ್ತ ಶರಣಪ್ಪರಿಂದ ವಿಚಾರಣೆ

ಪೊಲೀಸ್ ಕಮಿಷನರ್  ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ. ಖುದ್ದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More