5 ಕೋಟಿ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಾಶ್ರೀ ಹೆಸರು
ಚೈತ್ರಾ ಕುಂದಾಪುರ ಬಿಚ್ಚಿಟ್ಟಿದ್ದರು ಅಭಿನವ ಹಾಲಾಶ್ರೀ ಹೆಸರು
ಹೊರ ರಾಜ್ಯದಲ್ಲಿ ಅರೆಸ್ಟ್ ಆದ ಬಹುಕೋಟಿ ವಂಚನೆಯ A3 ಆರೋಪಿ
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ A3 ಆರೋಪಿಯಾಗಿದ್ದ ಅಭಿನವ ಹಾಲಾಶ್ರೀ ಬಂಧನವಾಗಿದೆ. ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅರೆಸ್ಟ್ ಬೆನ್ನಲ್ಲೇ ಅಭಿನವ ಹಾಲಾಶ್ರೀ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಸಿಸಿಬಿ ಪೊಲೀಸರು ಅಭಿನವ ಹಾಲಾಶ್ರೀಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೀಗ ಒಡಿಶಾದಲ್ಲಿ A3 ಆರೋಪಿಯ ಬಂಧನವಾಗಿದೆ ಎಂಬ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
ಬಿಜೆಪಿ ಟಿಕೆಟ್ ವಿಚಾರವಾಗಿ 5 ಕೋಟಿ ವಂಚನೆ ಮಾಡಿರುವ ಬಗ್ಗೆ ಉದ್ಯೋಗಿ ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಗೋವಿಂದ ಬಾಬು ಪೂಜಾರಿ ನೀಡಿದ್ದ ದೂರಿನಲ್ಲಿ A1 ಆರೋಪಿ ಚೈತ್ರಾ, A2 ಆರೋಪಿ ಗಗನ್ ಕಡೂರ್ ಮಾತ್ರವಲ್ಲದೆ, A3 ಆರೋಪಿಯಾಗಿ ಅಭಿನವ ಹಾಲಾಶ್ರೀಗಳ ಹೆಸರು ಕೂಡ ಉಲ್ಲೇಖವಾಗಿತ್ತು. ಅದರಂತೆಯೇ A3 ಆರೋಪಿಗಾಗಿ ಹುಡುಕಾಡುತ್ತಿದ್ದ ಪೊಲೀಸರು ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಾಶ್ರೀ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
5 ಕೋಟಿ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಾಶ್ರೀ ಹೆಸರು
ಚೈತ್ರಾ ಕುಂದಾಪುರ ಬಿಚ್ಚಿಟ್ಟಿದ್ದರು ಅಭಿನವ ಹಾಲಾಶ್ರೀ ಹೆಸರು
ಹೊರ ರಾಜ್ಯದಲ್ಲಿ ಅರೆಸ್ಟ್ ಆದ ಬಹುಕೋಟಿ ವಂಚನೆಯ A3 ಆರೋಪಿ
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ A3 ಆರೋಪಿಯಾಗಿದ್ದ ಅಭಿನವ ಹಾಲಾಶ್ರೀ ಬಂಧನವಾಗಿದೆ. ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅರೆಸ್ಟ್ ಬೆನ್ನಲ್ಲೇ ಅಭಿನವ ಹಾಲಾಶ್ರೀ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಸಿಸಿಬಿ ಪೊಲೀಸರು ಅಭಿನವ ಹಾಲಾಶ್ರೀಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೀಗ ಒಡಿಶಾದಲ್ಲಿ A3 ಆರೋಪಿಯ ಬಂಧನವಾಗಿದೆ ಎಂಬ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
ಬಿಜೆಪಿ ಟಿಕೆಟ್ ವಿಚಾರವಾಗಿ 5 ಕೋಟಿ ವಂಚನೆ ಮಾಡಿರುವ ಬಗ್ಗೆ ಉದ್ಯೋಗಿ ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಗೋವಿಂದ ಬಾಬು ಪೂಜಾರಿ ನೀಡಿದ್ದ ದೂರಿನಲ್ಲಿ A1 ಆರೋಪಿ ಚೈತ್ರಾ, A2 ಆರೋಪಿ ಗಗನ್ ಕಡೂರ್ ಮಾತ್ರವಲ್ಲದೆ, A3 ಆರೋಪಿಯಾಗಿ ಅಭಿನವ ಹಾಲಾಶ್ರೀಗಳ ಹೆಸರು ಕೂಡ ಉಲ್ಲೇಖವಾಗಿತ್ತು. ಅದರಂತೆಯೇ A3 ಆರೋಪಿಗಾಗಿ ಹುಡುಕಾಡುತ್ತಿದ್ದ ಪೊಲೀಸರು ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಾಶ್ರೀ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ