ಮಂಗಳೂರನ್ನೇ ಬೆಚ್ಚಿ ಬೀಳಿಸಿತ್ತು ಕುಕ್ಕರ್ ಬಾಂಬ್ ಬ್ಲಾಸ್ಟ್
NIA ಚಾರ್ಜ್ ಶೀಟ್ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರರು
ಮಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಶಾರೀಕ್ ಕುಕ್ಕರ್ನಲ್ಲಿ ಬಾಂಬ್ ಇಟ್ಟು ತೆರಳುವಾಗ ರಿಕ್ಷಾ ಸ್ಫೋಟಗೊಂಡಿತ್ತು. ಅದೃಷ್ಟವಶಾತ್ ರಿಕ್ಷಾ ಚಾಲಕ ಮತ್ತು ಶಂಕಿತ ಉಗ್ರ ಸಣ್ಣ ಪುಟ್ಟಗಾಯಗಳಿಂದ ಬದುಕಿ ಉಳಿದರು. ಇದೇ ಪ್ರಕರಣದ ಬೆನ್ನು ಹತ್ತಿದ್ದ ಎನ್ಐಎ ಅಂದಿನಿಂದ ಇಂದಿನವರಿನ ತನಿಖೆ ನಡೆಸುತ್ತಲೇ ಇದೆ. ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತೆ ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಆರೋಪಿಗಳು ಸಂಚು ರೂಪಸಿದ್ದರು ಎಂಬ ವಿಚಾರ ಬಯಲಾಗಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಅಗೆದಂತೆ ಮಾಹಿತಿಗಳು ಹೊರಬೀಳುತ್ತಿವೆ. ಅದರಂತೆಯೇ ಇದೀಗ NIA ಚಾರ್ಜ್ ಶೀಟ್ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಂಕಿತ ಉಗ್ರರಾದ ಮೊಹಮ್ಮದ್ ಶಾರೀಕ್ (25) ಮಾಜ್ ಮುನೀರ್ ಅಹಮದ್ (23). ಸೈಯದ್ ಯಾಸಿನ್ (22), ರಿಶಾನ್ ತಾಜುದ್ದೀನ್ ಶೇಖ್ (22). ಹುಜೇರ್ ಫರ್ಹಾನ್ ಬೇಗ್ (22) ಮಜಿನ್ ಅಬ್ದುಲ್ ರಹಮಾನ್ (22) ನದೀಮ್ನನ್ನು ವಿಚಾರಣೆ ನಡೆಸುವ ವೇಳೆ ಕೆಲವೊಂದು ಸಂಗತಿಗಳು ಬಾಯ್ಬಿಟ್ಟಿದ್ದಾರೆ. ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕುರಿತಂತೆ ತನಿಖೆ ನಡೆಸಿದ ಎನ್ಐಎ 2 ಪ್ರಕರಣಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನ್ಯಾಷನಲ್ ಇನ್ಸ್ವೆಸ್ಟಿಗೇಶನ್ ಏಜೆನ್ಸಿಗೆ ಕೆಲವೊಂದು ಸ್ಫೋಟಕ ಮಾಹಿತಿ ಸಿಕ್ಕಿವೆ. ಹಾಗಾಗಿ ಎನ್ಐಎ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಮಿಸ್ ಆಗಿತ್ತು ಪ್ಲಾನ್
ಕಳೆದ ವರ್ಷ ನವೆಂಬರ್ 9ರಂದು ಮಂಗಳೂರು ಕಂಕನಾಡಿ ಬಳಿಯ ಗರೋಡಿ ಎಂಬಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್ ಜೊತೆಗೆ ಪುರುಷೋತ್ತಮ ಎಂಬವರ ಆಟೋ ರಿಕ್ಷಾ ಏರಿದ್ದ. ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕದ್ರಿ ದೇವಾಲಯಕ್ಕೆ ಕಣ್ಣಿಟ್ಟಿದ್ದ ಶಾರೀಕ್
ಶಂಕಿತ ಉಗ್ರ ಶಾರೀಕ್ ಮಂಗಳೂರು ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕುಕ್ಕರ್ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಕಂಕನಾಡಿ ಬಳಿ ಅಚಾನಕ್ ಆಗಿ ಬ್ಲಾಸ್ಟ್ ಆಗಿದೆ.
ಶಾರೀಕ್ ಬಳಸಿದ್ದು ಒಡಿಸ್ಸಾದ ಸಿಮ್
ಉಗ್ರ ಶಾರೀಕ್ಗೆ 31 ವರ್ಷದ ಪ್ರಾಯದ ಒಡಿಸ್ಸಾ ಮೂಲದ ಪ್ರೀತಂಕಾರ್ ಸಿಮ್ ಪೂರೈಕೆ ಮಾಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ. ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್, ಪ್ರೀತಂಕಾರ್ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದರು. ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿರುವ ಸಂಗತಿ ಬಯಲಾಗಿದೆ. ಬಳಿಕ ಸಿಮ್ ಕಾರ್ಡ್ ಅನ್ನು ಐಎಸ್ಐ ಏಜೆಂಟ್ ಉಗ್ರ ಶಾರೀಕ್ಗೆ ನೀಡಿದ ವಿಚಾರ ತಿಳಿದುಬಂದಿದೆ.
ದಾಳಿ ಹೊಣೆ ಹೊತ್ತಿದ್ದ ಐಎಸ್ಕೆಪಿ
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ ಮತ್ತು ತಮಿಳುನಾಡಿದ ಕೊಯಮತ್ತೂರು ಬಳಿ ನಡೆದ ಸ್ಫೋಟವನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಾದ (ಐಎಸ್ಕೆಪಿ) ಈ ದಾಳಿಯನ್ನು ಒಪ್ಪಿಕೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಂಗಳೂರನ್ನೇ ಬೆಚ್ಚಿ ಬೀಳಿಸಿತ್ತು ಕುಕ್ಕರ್ ಬಾಂಬ್ ಬ್ಲಾಸ್ಟ್
NIA ಚಾರ್ಜ್ ಶೀಟ್ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರರು
ಮಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಶಾರೀಕ್ ಕುಕ್ಕರ್ನಲ್ಲಿ ಬಾಂಬ್ ಇಟ್ಟು ತೆರಳುವಾಗ ರಿಕ್ಷಾ ಸ್ಫೋಟಗೊಂಡಿತ್ತು. ಅದೃಷ್ಟವಶಾತ್ ರಿಕ್ಷಾ ಚಾಲಕ ಮತ್ತು ಶಂಕಿತ ಉಗ್ರ ಸಣ್ಣ ಪುಟ್ಟಗಾಯಗಳಿಂದ ಬದುಕಿ ಉಳಿದರು. ಇದೇ ಪ್ರಕರಣದ ಬೆನ್ನು ಹತ್ತಿದ್ದ ಎನ್ಐಎ ಅಂದಿನಿಂದ ಇಂದಿನವರಿನ ತನಿಖೆ ನಡೆಸುತ್ತಲೇ ಇದೆ. ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತೆ ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಆರೋಪಿಗಳು ಸಂಚು ರೂಪಸಿದ್ದರು ಎಂಬ ವಿಚಾರ ಬಯಲಾಗಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಅಗೆದಂತೆ ಮಾಹಿತಿಗಳು ಹೊರಬೀಳುತ್ತಿವೆ. ಅದರಂತೆಯೇ ಇದೀಗ NIA ಚಾರ್ಜ್ ಶೀಟ್ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಂಕಿತ ಉಗ್ರರಾದ ಮೊಹಮ್ಮದ್ ಶಾರೀಕ್ (25) ಮಾಜ್ ಮುನೀರ್ ಅಹಮದ್ (23). ಸೈಯದ್ ಯಾಸಿನ್ (22), ರಿಶಾನ್ ತಾಜುದ್ದೀನ್ ಶೇಖ್ (22). ಹುಜೇರ್ ಫರ್ಹಾನ್ ಬೇಗ್ (22) ಮಜಿನ್ ಅಬ್ದುಲ್ ರಹಮಾನ್ (22) ನದೀಮ್ನನ್ನು ವಿಚಾರಣೆ ನಡೆಸುವ ವೇಳೆ ಕೆಲವೊಂದು ಸಂಗತಿಗಳು ಬಾಯ್ಬಿಟ್ಟಿದ್ದಾರೆ. ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕುರಿತಂತೆ ತನಿಖೆ ನಡೆಸಿದ ಎನ್ಐಎ 2 ಪ್ರಕರಣಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನ್ಯಾಷನಲ್ ಇನ್ಸ್ವೆಸ್ಟಿಗೇಶನ್ ಏಜೆನ್ಸಿಗೆ ಕೆಲವೊಂದು ಸ್ಫೋಟಕ ಮಾಹಿತಿ ಸಿಕ್ಕಿವೆ. ಹಾಗಾಗಿ ಎನ್ಐಎ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಮಿಸ್ ಆಗಿತ್ತು ಪ್ಲಾನ್
ಕಳೆದ ವರ್ಷ ನವೆಂಬರ್ 9ರಂದು ಮಂಗಳೂರು ಕಂಕನಾಡಿ ಬಳಿಯ ಗರೋಡಿ ಎಂಬಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್ ಜೊತೆಗೆ ಪುರುಷೋತ್ತಮ ಎಂಬವರ ಆಟೋ ರಿಕ್ಷಾ ಏರಿದ್ದ. ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕದ್ರಿ ದೇವಾಲಯಕ್ಕೆ ಕಣ್ಣಿಟ್ಟಿದ್ದ ಶಾರೀಕ್
ಶಂಕಿತ ಉಗ್ರ ಶಾರೀಕ್ ಮಂಗಳೂರು ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕುಕ್ಕರ್ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಕಂಕನಾಡಿ ಬಳಿ ಅಚಾನಕ್ ಆಗಿ ಬ್ಲಾಸ್ಟ್ ಆಗಿದೆ.
ಶಾರೀಕ್ ಬಳಸಿದ್ದು ಒಡಿಸ್ಸಾದ ಸಿಮ್
ಉಗ್ರ ಶಾರೀಕ್ಗೆ 31 ವರ್ಷದ ಪ್ರಾಯದ ಒಡಿಸ್ಸಾ ಮೂಲದ ಪ್ರೀತಂಕಾರ್ ಸಿಮ್ ಪೂರೈಕೆ ಮಾಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ. ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್, ಪ್ರೀತಂಕಾರ್ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದರು. ವಿಚಾರಣೆ ವೇಳೆ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿರುವ ಸಂಗತಿ ಬಯಲಾಗಿದೆ. ಬಳಿಕ ಸಿಮ್ ಕಾರ್ಡ್ ಅನ್ನು ಐಎಸ್ಐ ಏಜೆಂಟ್ ಉಗ್ರ ಶಾರೀಕ್ಗೆ ನೀಡಿದ ವಿಚಾರ ತಿಳಿದುಬಂದಿದೆ.
ದಾಳಿ ಹೊಣೆ ಹೊತ್ತಿದ್ದ ಐಎಸ್ಕೆಪಿ
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ ಮತ್ತು ತಮಿಳುನಾಡಿದ ಕೊಯಮತ್ತೂರು ಬಳಿ ನಡೆದ ಸ್ಫೋಟವನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಾದ (ಐಎಸ್ಕೆಪಿ) ಈ ದಾಳಿಯನ್ನು ಒಪ್ಪಿಕೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ