/newsfirstlive-kannada/media/post_attachments/wp-content/uploads/2024/09/Darshan-Bellary-Jail-10.jpg)
ಬಳ್ಳಾರಿ: ಐಟಿ ಅಧಿಕಾರಿಗಳ ವಿಚಾರಣೆ ಜಾಮೀನಿಗೆ ತೊಡಕಾಗಹುದು ಎಂದು ಜೈಲಿನಲ್ಲಿರುವ ದರ್ಶನ್ ಟೆನ್ಷನ್​ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಅಂದರೆ ಸೆಪ್ಟೆಂಬರ್ 30 ರಂದು ಕೋರ್ಟ್​​ನಿಂದ ಜಾಮೀನು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ದರ್ಶನ್ ಇದ್ದರು. ಆದರೆ ಘಟನೆ ವೇಳೆ 84 ಲಕ್ಷ ರೂಪಾಯಿಗಳ ವಹಿವಾಟಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ದರ್ಶನ್ ಅವರನ್ನು ಎರಡು ದಿನ ವಿಚಾರಣೆ ಮಾಡಿದ್ದಾರೆ. ಇದೇ ಜಾಮೀನಿಗೆ ತೊಡಕಾಗಬಹುದು ಎಂದು ದರ್ಶನ್ ಟೆನ್ಷನ್​ಗೆ ಒಳಗಾಗಿದ್ದಾರೆ. ವಿಚಾರಣೆಯ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ನಡೆದಿರುವ ಮೇಲೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಬೆಲ್ಗೆ ತಡೆ ತರುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/09/DARSHAN_AMMA_1.jpg)
ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಕೇಸ್​ನಿಂದ ಜಾರಿಕೊಳ್ಳುವ ತಂತ್ರ ಇದೀಗ ದರ್ಶನ್​ಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಐಟಿ ಹಾಗೂ ಪವಿತ್ರಾ ಗೌಡ ನಿಲುವು ನೋಡಿಕೊಂಡು ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗಬಹುದು. ಹೀಗಾಗಿ ದರ್ಶನ್ ಪರ ವಕೀಲರು ಮತ್ತೊಂದು ಬಾರಿ ನಟನಿಂದ ಪೂರ್ಣ ಮಾಹಿತಿ ಪಡೆಯಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us