ಚೇತನ್ ಎಂಬ ಯುವಕನ ಮೇಲೆ ಪ್ರಜ್ವಲ್, ಸ್ನೇಹಿತರಿಂದ ಹಲ್ಲೆ
ಜೊತೆಗಿದ್ದ ಸ್ನೇಹಿತನನ್ನು ಕರೆದಿದ್ದಕ್ಕೆ ಕೋಪಗೊಂಡ ನಟ ಪ್ರಜ್ವಲ್
ಹಲ್ಲೆಗೊಳಗಾದ ಯುವಕನಿಂದ RR ನಗರದ ಠಾಣೆಯಲ್ಲಿ ಕೇಸ್
ಬೆಂಗಳೂರು: ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಿ ಅಮೃತವರ್ಷಿಣಿ, ಅಣ್ಣ-ತಂಗಿ ಧಾರವಾಹಿ ಖ್ಯಾತಿಯ ಪ್ರಜ್ವಲ್ ಮೇಲೆ RR ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಚೇತನ್ ಹಲ್ಲೆಗೊಳಗಾದ ಯುವಕ. ಆರ್.ಆರ್ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಸ್ನೇಹಿತರ ಜೊತೆ ಕಿರುತೆರೆ ನಟ ಪ್ರಜ್ವಲ್ ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಪ್ರಜ್ವಲ್ ಜೊತೆಯಿದ್ದ ಮನು ಎಂಬುವರನ್ನು ಚೇತನ್ ಕರೆಯಲು ಮುಂದಾಗಿದ್ದಾನೆ. ಇದರಿಂದ ಕೋಪಿಸಿಕೊಂಡ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಈ ಬಗ್ಗೆ ಸ್ವತಃ ಚೇತನ್ ಅವರೇ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ಚೇತನ್ ಎಂಬ ಯುವಕನ ಮೇಲೆ ಪ್ರಜ್ವಲ್, ಸ್ನೇಹಿತರಿಂದ ಹಲ್ಲೆ
ಜೊತೆಗಿದ್ದ ಸ್ನೇಹಿತನನ್ನು ಕರೆದಿದ್ದಕ್ಕೆ ಕೋಪಗೊಂಡ ನಟ ಪ್ರಜ್ವಲ್
ಹಲ್ಲೆಗೊಳಗಾದ ಯುವಕನಿಂದ RR ನಗರದ ಠಾಣೆಯಲ್ಲಿ ಕೇಸ್
ಬೆಂಗಳೂರು: ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಿ ಅಮೃತವರ್ಷಿಣಿ, ಅಣ್ಣ-ತಂಗಿ ಧಾರವಾಹಿ ಖ್ಯಾತಿಯ ಪ್ರಜ್ವಲ್ ಮೇಲೆ RR ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಚೇತನ್ ಹಲ್ಲೆಗೊಳಗಾದ ಯುವಕ. ಆರ್.ಆರ್ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಸ್ನೇಹಿತರ ಜೊತೆ ಕಿರುತೆರೆ ನಟ ಪ್ರಜ್ವಲ್ ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಪ್ರಜ್ವಲ್ ಜೊತೆಯಿದ್ದ ಮನು ಎಂಬುವರನ್ನು ಚೇತನ್ ಕರೆಯಲು ಮುಂದಾಗಿದ್ದಾನೆ. ಇದರಿಂದ ಕೋಪಿಸಿಕೊಂಡ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಈ ಬಗ್ಗೆ ಸ್ವತಃ ಚೇತನ್ ಅವರೇ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ