newsfirstkannada.com

ಮುರುಘಾ ಶ್ರೀ ರಿಲೀಸ್​​ಗೆ ಭಾರೀ ವಿರೋಧ.. ಈ ಬಗ್ಗೆ ಸಂತ್ರಸ್ತೆ ಪರ ವಕೀಲರು ಹೇಳಿದ್ದೇನು..?

Share :

16-11-2023

    ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇಸ್​​

    ಮುರುಘಾ ಶ್ರೀಗಳ ರಿಲೀಸ್​ಗೆ ಹಲವರಿಂದ ಭಾರೀ ವಿರೋಧ..!

    ಈ ಬಗ್ಗೆ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್​​ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇರೆಗೆ ಅರೆಸ್ಟ್​ ಆಗಿದ್ದ ಮುರುಘಾ ಶ್ರೀಗಳು ಷರತ್ತುಬದ್ಧ ಜಾಮೀನು ಮೇಲೆ ರಿಲೀಸ್​​​ ಆಗಿದ್ದಾರೆ. ಈ ಕುರಿತು ನ್ಯೂಸ್​ಫಸ್ಟ್​​ ಜತೆ ಮಾತಾಡಿದ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್​​, ಕೆಲವು ಷರತ್ತುಗಳ ಮೇಲೆ ಆರೋಪಿಯನ್ನು ರಿಲೀಸ್​ ಮಾಡಲಾಗಿದೆ. ಈ ಆದೇಶದ ವಿರುದ್ಧ ನಾವು ಸುಪ್ರೀಂಕೋರ್ಟ್​ಗೆ ಹೋಗುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದರು.

ನಾವು ಧ್ವನಿ ಇಲ್ಲದ ಹೆಣ್ಣುಮಕ್ಕಳ ಪರ. ಮಕ್ಕಳ ವಿದ್ಯಾಭ್ಯಾಸವೂ ಪ್ರಕರಣದಷ್ಟೇ ಮುಖ್ಯ. ಮೊದಲ ಕೇಸ್​​​ನಲ್ಲಿ ಕಂಡೀಷನ್​ ಮೇಲೆ ಬೇಲ್​ ಗ್ರ್ಯಾಂಟ್​ ಆಗಿದೆ. 2ನೇ ಕೇಸ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿಲ್ಲ. ಯಾವುದೇ ಕಂಡೀಷನ್​ ಇಲ್ಲ. ಇವರನ್ನು ರಿಲೀಸ್​ ಮಾಡಿದ್ದು ಒಳ್ಳೆಯದಲ್ಲ. ಆರೋಪಿ ಅಧಿಕಾರ, ಹಣಕಾಸು ವಿಚಾರದಲ್ಲೂ ಬಹಳ ಬಲಾಢ್ಯ. ಹಾಗಾಗಿ ಎಲ್ಲಾ ರೀತಿಯ ಆತಂಕ ಇದ್ದೇ ಇರುತ್ತೆ ಎಂದರು.

ಕೇಸ್​ ದಾಖಲಾದ ಮೇಲೂ ಪೊಲೀಸ್ರು ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕಿದ್ದರು. ಅಂದು ಇಡೀ ರಾಜ್ಯ ಯಾಕೆ ಆರೋಪಿ ಬಂಧನ ಆಗಿಲ್ಲ ಎಂದು ಪ್ರಶ್ನಿಸಿತ್ತು. ಒತ್ತಡದ ಬಳಿಕ ಆರೋಪಿಯನ್ನು ಅರೆಸ್ಟ್​ ಮಾಡಲಾಗಿತ್ತು ಎಂದಿದ್ದಾರೆ ವಕೀಲ ಶ್ರೀನಿವಾಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಘಾ ಶ್ರೀ ರಿಲೀಸ್​​ಗೆ ಭಾರೀ ವಿರೋಧ.. ಈ ಬಗ್ಗೆ ಸಂತ್ರಸ್ತೆ ಪರ ವಕೀಲರು ಹೇಳಿದ್ದೇನು..?

https://newsfirstlive.com/wp-content/uploads/2023/11/Murugha-Shree_Advocate-Srinivas.jpg

    ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇಸ್​​

    ಮುರುಘಾ ಶ್ರೀಗಳ ರಿಲೀಸ್​ಗೆ ಹಲವರಿಂದ ಭಾರೀ ವಿರೋಧ..!

    ಈ ಬಗ್ಗೆ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್​​ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇರೆಗೆ ಅರೆಸ್ಟ್​ ಆಗಿದ್ದ ಮುರುಘಾ ಶ್ರೀಗಳು ಷರತ್ತುಬದ್ಧ ಜಾಮೀನು ಮೇಲೆ ರಿಲೀಸ್​​​ ಆಗಿದ್ದಾರೆ. ಈ ಕುರಿತು ನ್ಯೂಸ್​ಫಸ್ಟ್​​ ಜತೆ ಮಾತಾಡಿದ ಸಂತ್ರಸ್ತೆ ಪರ ವಕೀಲ ಶ್ರೀನಿವಾಸ್​​, ಕೆಲವು ಷರತ್ತುಗಳ ಮೇಲೆ ಆರೋಪಿಯನ್ನು ರಿಲೀಸ್​ ಮಾಡಲಾಗಿದೆ. ಈ ಆದೇಶದ ವಿರುದ್ಧ ನಾವು ಸುಪ್ರೀಂಕೋರ್ಟ್​ಗೆ ಹೋಗುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದರು.

ನಾವು ಧ್ವನಿ ಇಲ್ಲದ ಹೆಣ್ಣುಮಕ್ಕಳ ಪರ. ಮಕ್ಕಳ ವಿದ್ಯಾಭ್ಯಾಸವೂ ಪ್ರಕರಣದಷ್ಟೇ ಮುಖ್ಯ. ಮೊದಲ ಕೇಸ್​​​ನಲ್ಲಿ ಕಂಡೀಷನ್​ ಮೇಲೆ ಬೇಲ್​ ಗ್ರ್ಯಾಂಟ್​ ಆಗಿದೆ. 2ನೇ ಕೇಸ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿಲ್ಲ. ಯಾವುದೇ ಕಂಡೀಷನ್​ ಇಲ್ಲ. ಇವರನ್ನು ರಿಲೀಸ್​ ಮಾಡಿದ್ದು ಒಳ್ಳೆಯದಲ್ಲ. ಆರೋಪಿ ಅಧಿಕಾರ, ಹಣಕಾಸು ವಿಚಾರದಲ್ಲೂ ಬಹಳ ಬಲಾಢ್ಯ. ಹಾಗಾಗಿ ಎಲ್ಲಾ ರೀತಿಯ ಆತಂಕ ಇದ್ದೇ ಇರುತ್ತೆ ಎಂದರು.

ಕೇಸ್​ ದಾಖಲಾದ ಮೇಲೂ ಪೊಲೀಸ್ರು ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕಿದ್ದರು. ಅಂದು ಇಡೀ ರಾಜ್ಯ ಯಾಕೆ ಆರೋಪಿ ಬಂಧನ ಆಗಿಲ್ಲ ಎಂದು ಪ್ರಶ್ನಿಸಿತ್ತು. ಒತ್ತಡದ ಬಳಿಕ ಆರೋಪಿಯನ್ನು ಅರೆಸ್ಟ್​ ಮಾಡಲಾಗಿತ್ತು ಎಂದಿದ್ದಾರೆ ವಕೀಲ ಶ್ರೀನಿವಾಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More