ಬಿಸಿಸಿಐ ಚೀಫ್ ಸೆಲೆಕ್ಟರ್ ಹಗ್ಗಜಗ್ಗಾಟಕ್ಕೆ ಬಿತ್ತು ತೆರೆ..!
ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ ಅಗರ್ಕರ್ ಟೀಂ
ಅಗರ್ಕರ್ಗೆ ವಿಶ್ರಮಿಸಲು ಸಮಯವಿಲ್ಲ, ಮುಳ್ಳಿನ ಹಾದಿ
ಯಾರಾಗ್ತಾರೆ ನೂತನ ಆಯ್ಕೆ ಸಮಿತಿ ಮುಖ್ಯಸ್ಥ ? ನಾಲ್ಕು ತಿಂಗಳಿಂದ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಕೊನೆಗೂ ಅದಕ್ಕೆ ಆನ್ಸರ್ ಸಿಕ್ಕಿದೆ. ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಚೀಫ್ ಸೆಲೆಕ್ಟರ್ ಹುದ್ದೆ ಅಲಂಕರಿಸಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರವಿ ಶಾಸ್ತ್ರಿ, ಸೆಹ್ವಾಗ್ ಹಾಗೂ ದಿಲೀಪ್ ವೆಂಗಸರ್ಕರ್ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗ್ತಿತ್ತು. ಆದರೆ ಇವರನ್ನೆಲ್ಲಾ ಮಾಜಿ ಕ್ರಿಕೆಟಗ ಅಜಿತ್ ಅಗರ್ಕರ್ ನೂತನ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಅಜಿತ್ ಅಗರ್ಕರ್ ನೂತನ ಆಯ್ಕೆ ಸಮಿತಿ ಮುಖ್ಯಸ್ಥ..!
ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ರೇಸ್ನಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ ನಿಜ. ಆದರೆ ಇವರ ಹಾದಿ ಹೂವಿನಿಂದ ಕೂಡಿಲ್ಲ. ಸಾಲು ಸಾಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಕಠಿಣ ಸವಾಲುಗಳಿವೆ.
ಏಷ್ಯಾಕಪ್- ಏಕದಿನ ವಿಶ್ವಕಪ್ ಟೀಮ್ ಸಲೆಕ್ಷನ್
ಅಜಿತ್ ಅಗರ್ಕರ್ ಮುಂದಿರೋ ಸಾಲು ಸಾಲು ಸವಾಲುಗಳಿವೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ತಂಡವನ್ನ ಇನ್ನೂ ಆಯ್ಕೆ ಮಾಡಿಲ್ಲ. ಜೊತೆಗೆ ಅದಕ್ಕೂ ಮುನ್ನ ನಡೆಯುವ ಏಷ್ಯಾಕಪ್ಗು ತಂಡವನ್ನ ಆಯ್ಕೆ ಮಾಡಬೇಕಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ.
ಕೊಹ್ಲಿ- ರೋಹಿತ್ & ಸೀನಿಯರ್ಸ್ ಭವಿಷ್ಯ ನಿರ್ಧಾರ
ತಂಡದಲ್ಲಿ 30 ಪ್ಲಸ್ ವಯಸ್ಸಿನ ಅನೇಕ ಆಟಗಾರರಿದ್ದಾರೆ. ವಿಶ್ವಕಪ್ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯ ಏನು ? ಜೊತೆಗೆ ಇನ್ನು ಕೆಲ ಆಟಗಾರರ ಫ್ಯೂಚರ್ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ.
ವಿಶ್ವಕಪ್ ನಂತರ ಟೆಸ್ಟ್ -ಏಕದಿನ ತಂಡದ ಕ್ಯಾಪ್ಟನ್ ಆಯ್ಕೆ..?
ಒನ್ಡೇ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ಬೈ ಹೇಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕೊಟ್ಟರೆ ಏಕದಿನ ಮತ್ತು ಟೆಸ್ಟ್ ಮಾದರಿಗೆ ನೂತನ ನಾಯಕನನ್ನ ನೇಮಿಸುವ ಚಾಲೆಂಜ್ ಎದುರಾಗಲಿದೆ.
ವರ್ಕ್ಲೋಡ್ ಮ್ಯಾನೇಜ್ಮೆಂಟ್ಗೆ ಪ್ಲಾನ್ ಏನು.?
ಸದ್ಯ ಟೀಮ್ ಇಂಡಿಯಾದಲ್ಲಿ ಇಂಜುರಿ ಅನ್ನೋದು ದೊಡ್ಡ ಪೆಡಂಭೂತದಂತೆ ಬೆಳೆದು ನಿಂತಿದೆ. ಸ್ಟಾರ್ ಆಟಗಾರರೆಲ್ಲಾ ಇಂಜುರಿಗೆ ತುತ್ತಾಗಿದ್ದಾರೆ. ಇದಕ್ಕೆ ಅತಿಯಾದ ವರ್ಕ್ಲೋಡ್ ಕಾರಣ..ಇದನ್ನ ನೂತನ ಚೀಫ್ ಸೆಲೆಕ್ಟರ್ ಹೇಗೆ ನಿಯಂತ್ರಣ ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಯಂಗ್ ಇಂಡಿಯಾ ಕಟ್ಟುವ ಬಿಗ್ ಚಾಲೆಂಜ್.!
ಈಗಾಗಲೇ ಟಿ20 ತಂಡದಲ್ಲಿ ಯಂಗ್ಸ್ಟರ್ಸ್ ಹೆಚ್ಚು ಮಣೆ ಹಾಕಲಾಗಿದೆ. ಉಳಿದ ಎರಡು ಮಾದರಿಯಾದ ಏಕದಿನ ಮತ್ತು ಟೆಸ್ಟ್ನಲ್ಲೂ ಯಂಗ್ ಇಂಡಿಯಾವನ್ನ ಕಟ್ಟಬೇಕಿದೆ. ಹಿರಿಯರನ್ನ ಬದಿಗೆ ಸರಿಸಿ, ಯುವಕರಿಗೆ ಅವಕಾಶ ನೀಡೋದು ಸುಲಭದ ಮಾತಲ್ಲ. ಹೀಗಾಗಿ ಕಠಿಣ ಸವಾಲಿದೆ.
ಯಂಗ್ಸ್ಟರ್ಸ್ ಆಯ್ಕೆಗೆ ಮಾನದಂಡ ಏನು ?
ಇತ್ತೀಚೆಗೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗ್ತಿದೆ. ಡೊಮೆಸ್ಟಿಕ್ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನುವ ಕೂಗು ಕೇಳಿ ಬರ್ತಿದೆ. ನೂತನ ಚೀಫ್ ಸೆಲೆಕ್ಟರ್ ಆಯ್ಕೆ ಮಾನದಂಡಕ್ಕಿರೋ ಗೊಂದಲವನ್ನ ಬಗೆಹರಿಸಬೇಕಿದೆ.
ಹಿರಿಯ ಮತ್ತು ಕಿರಿಯರನ್ನ ಸಮಾಧಾನ ಮಾಡಬೇಕು
ಈಗಾಗಲೇ ಟೀಮ್ ಇಂಡಿಯಾದಲ್ಲಿ ಟ್ರಾನ್ಸಿಶನ್ ಶುರುವಾಗಿದೆ. ಹಿರಿಯರಿಗೆ ಕೊಕ್ ನೀಡಿ ಯುವಕರಿಗೆ ಮಣೆ ಹಾಕಲು ಬಿಸಿಸಿಐ ಚಿಂತಿಸ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದಲ್ಲಿ ಸೀನಿಯರ್ ಪ್ಲೇಯರ್ಸ್ ಸಿಡಿದು ನಿಲ್ಲುವ ಸಾಧ್ಯತೆ ಇರುತ್ತೆ. ಇವರನ್ನ ಸಮಾಧಾನ ಮಾಡಬೇಕಾದ ಜವಾಬ್ದಾರಿ ಅಜಿತ್ ಅಗರ್ಕರ್ ಅವರ ಹೆಗಲಿದೆ. ಇಷ್ಟೆ ಅಲ್ಲದೇ ಇನ್ನು ಕೆಲ ಚಾಲೆಂಜಸ್ಗಳಿವೆ. ಅವುಗಳೆನ್ನೆಲ್ಲಾ ನೂತನ ಚೀಫ್ ಸೆಲೆಕ್ಟರ್ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಯಕ್ಷಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಬಿಸಿಸಿಐ ಚೀಫ್ ಸೆಲೆಕ್ಟರ್ ಹಗ್ಗಜಗ್ಗಾಟಕ್ಕೆ ಬಿತ್ತು ತೆರೆ..!
ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ ಅಗರ್ಕರ್ ಟೀಂ
ಅಗರ್ಕರ್ಗೆ ವಿಶ್ರಮಿಸಲು ಸಮಯವಿಲ್ಲ, ಮುಳ್ಳಿನ ಹಾದಿ
ಯಾರಾಗ್ತಾರೆ ನೂತನ ಆಯ್ಕೆ ಸಮಿತಿ ಮುಖ್ಯಸ್ಥ ? ನಾಲ್ಕು ತಿಂಗಳಿಂದ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಕೊನೆಗೂ ಅದಕ್ಕೆ ಆನ್ಸರ್ ಸಿಕ್ಕಿದೆ. ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಚೀಫ್ ಸೆಲೆಕ್ಟರ್ ಹುದ್ದೆ ಅಲಂಕರಿಸಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರವಿ ಶಾಸ್ತ್ರಿ, ಸೆಹ್ವಾಗ್ ಹಾಗೂ ದಿಲೀಪ್ ವೆಂಗಸರ್ಕರ್ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗ್ತಿತ್ತು. ಆದರೆ ಇವರನ್ನೆಲ್ಲಾ ಮಾಜಿ ಕ್ರಿಕೆಟಗ ಅಜಿತ್ ಅಗರ್ಕರ್ ನೂತನ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಅಜಿತ್ ಅಗರ್ಕರ್ ನೂತನ ಆಯ್ಕೆ ಸಮಿತಿ ಮುಖ್ಯಸ್ಥ..!
ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ರೇಸ್ನಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ ನಿಜ. ಆದರೆ ಇವರ ಹಾದಿ ಹೂವಿನಿಂದ ಕೂಡಿಲ್ಲ. ಸಾಲು ಸಾಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಕಠಿಣ ಸವಾಲುಗಳಿವೆ.
ಏಷ್ಯಾಕಪ್- ಏಕದಿನ ವಿಶ್ವಕಪ್ ಟೀಮ್ ಸಲೆಕ್ಷನ್
ಅಜಿತ್ ಅಗರ್ಕರ್ ಮುಂದಿರೋ ಸಾಲು ಸಾಲು ಸವಾಲುಗಳಿವೆ. ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ತಂಡವನ್ನ ಇನ್ನೂ ಆಯ್ಕೆ ಮಾಡಿಲ್ಲ. ಜೊತೆಗೆ ಅದಕ್ಕೂ ಮುನ್ನ ನಡೆಯುವ ಏಷ್ಯಾಕಪ್ಗು ತಂಡವನ್ನ ಆಯ್ಕೆ ಮಾಡಬೇಕಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಬೇಕಿದೆ.
ಕೊಹ್ಲಿ- ರೋಹಿತ್ & ಸೀನಿಯರ್ಸ್ ಭವಿಷ್ಯ ನಿರ್ಧಾರ
ತಂಡದಲ್ಲಿ 30 ಪ್ಲಸ್ ವಯಸ್ಸಿನ ಅನೇಕ ಆಟಗಾರರಿದ್ದಾರೆ. ವಿಶ್ವಕಪ್ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯ ಏನು ? ಜೊತೆಗೆ ಇನ್ನು ಕೆಲ ಆಟಗಾರರ ಫ್ಯೂಚರ್ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ.
ವಿಶ್ವಕಪ್ ನಂತರ ಟೆಸ್ಟ್ -ಏಕದಿನ ತಂಡದ ಕ್ಯಾಪ್ಟನ್ ಆಯ್ಕೆ..?
ಒನ್ಡೇ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ಬೈ ಹೇಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕೊಟ್ಟರೆ ಏಕದಿನ ಮತ್ತು ಟೆಸ್ಟ್ ಮಾದರಿಗೆ ನೂತನ ನಾಯಕನನ್ನ ನೇಮಿಸುವ ಚಾಲೆಂಜ್ ಎದುರಾಗಲಿದೆ.
ವರ್ಕ್ಲೋಡ್ ಮ್ಯಾನೇಜ್ಮೆಂಟ್ಗೆ ಪ್ಲಾನ್ ಏನು.?
ಸದ್ಯ ಟೀಮ್ ಇಂಡಿಯಾದಲ್ಲಿ ಇಂಜುರಿ ಅನ್ನೋದು ದೊಡ್ಡ ಪೆಡಂಭೂತದಂತೆ ಬೆಳೆದು ನಿಂತಿದೆ. ಸ್ಟಾರ್ ಆಟಗಾರರೆಲ್ಲಾ ಇಂಜುರಿಗೆ ತುತ್ತಾಗಿದ್ದಾರೆ. ಇದಕ್ಕೆ ಅತಿಯಾದ ವರ್ಕ್ಲೋಡ್ ಕಾರಣ..ಇದನ್ನ ನೂತನ ಚೀಫ್ ಸೆಲೆಕ್ಟರ್ ಹೇಗೆ ನಿಯಂತ್ರಣ ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಯಂಗ್ ಇಂಡಿಯಾ ಕಟ್ಟುವ ಬಿಗ್ ಚಾಲೆಂಜ್.!
ಈಗಾಗಲೇ ಟಿ20 ತಂಡದಲ್ಲಿ ಯಂಗ್ಸ್ಟರ್ಸ್ ಹೆಚ್ಚು ಮಣೆ ಹಾಕಲಾಗಿದೆ. ಉಳಿದ ಎರಡು ಮಾದರಿಯಾದ ಏಕದಿನ ಮತ್ತು ಟೆಸ್ಟ್ನಲ್ಲೂ ಯಂಗ್ ಇಂಡಿಯಾವನ್ನ ಕಟ್ಟಬೇಕಿದೆ. ಹಿರಿಯರನ್ನ ಬದಿಗೆ ಸರಿಸಿ, ಯುವಕರಿಗೆ ಅವಕಾಶ ನೀಡೋದು ಸುಲಭದ ಮಾತಲ್ಲ. ಹೀಗಾಗಿ ಕಠಿಣ ಸವಾಲಿದೆ.
ಯಂಗ್ಸ್ಟರ್ಸ್ ಆಯ್ಕೆಗೆ ಮಾನದಂಡ ಏನು ?
ಇತ್ತೀಚೆಗೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗ್ತಿದೆ. ಡೊಮೆಸ್ಟಿಕ್ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನುವ ಕೂಗು ಕೇಳಿ ಬರ್ತಿದೆ. ನೂತನ ಚೀಫ್ ಸೆಲೆಕ್ಟರ್ ಆಯ್ಕೆ ಮಾನದಂಡಕ್ಕಿರೋ ಗೊಂದಲವನ್ನ ಬಗೆಹರಿಸಬೇಕಿದೆ.
ಹಿರಿಯ ಮತ್ತು ಕಿರಿಯರನ್ನ ಸಮಾಧಾನ ಮಾಡಬೇಕು
ಈಗಾಗಲೇ ಟೀಮ್ ಇಂಡಿಯಾದಲ್ಲಿ ಟ್ರಾನ್ಸಿಶನ್ ಶುರುವಾಗಿದೆ. ಹಿರಿಯರಿಗೆ ಕೊಕ್ ನೀಡಿ ಯುವಕರಿಗೆ ಮಣೆ ಹಾಕಲು ಬಿಸಿಸಿಐ ಚಿಂತಿಸ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದಲ್ಲಿ ಸೀನಿಯರ್ ಪ್ಲೇಯರ್ಸ್ ಸಿಡಿದು ನಿಲ್ಲುವ ಸಾಧ್ಯತೆ ಇರುತ್ತೆ. ಇವರನ್ನ ಸಮಾಧಾನ ಮಾಡಬೇಕಾದ ಜವಾಬ್ದಾರಿ ಅಜಿತ್ ಅಗರ್ಕರ್ ಅವರ ಹೆಗಲಿದೆ. ಇಷ್ಟೆ ಅಲ್ಲದೇ ಇನ್ನು ಕೆಲ ಚಾಲೆಂಜಸ್ಗಳಿವೆ. ಅವುಗಳೆನ್ನೆಲ್ಲಾ ನೂತನ ಚೀಫ್ ಸೆಲೆಕ್ಟರ್ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಯಕ್ಷಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ