ಇಂಜಿನಿಯರಿಂಗ್ ಸ್ಟೂಡೆಂಟ್ ಬೌಲರ್ ಆದ ಕಥೆ
ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್
ಆಕಾಶ್ ಮಾಧ್ವಲ್ ಲೈಫ್ ಸ್ಟೋರಿ ಸಖತ್ತಾಗಿದೆ
ಆತ ಫಾಸ್ಟ್ ಬೌಲರ್ ಅನ್ನೋದು ನಿಜ. ಆದರೆ ಅದಕ್ಕೂ ಮೊದಲು ಆತ ಇಂಜಿನಿಯರ್ ವಿದ್ಯಾರ್ಥಿ. ಮಾತ್ರವಲ್ಲದೆ, ಟೆನ್ನಿಸ್ ಬೌಲರ್ ಆಗಿದ್ದವನು ನಿನ್ನೆ ಐಪಿಎಲ್ನಲ್ಲಿ ಹೀರೋ ಆಗಿ ಮೆರೆದನು. ಅಂದಹಾಗೆಯೇ, ಆಕಾಶ್ ಮಾಧ್ವಲ್ ನಿಜ ಜೀವನದ ಬಗ್ಗೆ ಒಂದು ರೌಂಡ್ ಹಾಕಲೇ ಬೇಕು. ಯಾಕಂದ್ರೆ ಲಕ್ನೋದ 5 ವಿಕೆಟ್ ಕಿತ್ತು ತಂಡಕ್ಕೆ ಸುಲಭದ ಜಯ ಒದಗಿಸಲು ಈತನೂ ಕೂಡ ಸಾಕ್ಷಿ ಎಂಬುದನ್ನು ಯಾರು ಮರೆಯುವಂತಿಲ್ಲ. ಮಾತ್ರವಲ್ಲದೆ ತಂಡವನ್ನು ಪೈನಲ್ಗೆ ಕೊಂಡೊಯ್ಯಲು ಸಹಾಯವಾದ ಆಕಾಶ್ನನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ.
ಇಂಜಿನಿಯರಿಂಗ್ ಸ್ಟೂಡೆಂಟ್ ಬೌಲರ್ ಆದ ಕಥೆ
ಅದೃಷ್ಟವೋ? ಅವಕಾಶವೋ? ಆದರೆ ಆಕಾಶ್ ಮಾಧ್ವಲ್ ಮಾತ್ರ ನಿನ್ನೆ ಚಮತ್ಕಾರ ಮಾಡಿದ್ದು ಎಲ್ಲರ ಕಣ್ಣು ಕಟ್ಟಿತ್ತು. ಒಂದಲ್ಲ, ಎರಡರಲ್ಲ ಬರೋಬ್ಬರಿ 5 ವಿಕೆಟ್ ಕಿತ್ತು ಎಲ್ಲರ ಕಣ್ಣಿಗೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆಯೇ ಆಕಾಶ್ ನಿಜ ಜೀವನ ಬಗ್ಗೆ ತಿಳಿದುಕೊಳ್ಳಲೇ ಬೇಕು.
ये पल 🤩#OneFamily #MumbaiMeriJaan #MumbaiIndians #TATAIPL #IPL2023 pic.twitter.com/6GgtOtbycg
— Mumbai Indians (@mipaltan) May 25, 2023
ಆಕಾಶ್ ಇಂಜಿನಿಯರ್ ವಿದ್ಯಾರ್ಥಿ. ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್ಗೆ ಅದೊಂದು ದಿನ ಅವಕಾಶದ ಬಾಗಿಲು ತೆರೆದಿತ್ತು. ಕಾರಣ ಅವರ ಚೆಂಡು ಎಸೆತದ ಶೈಲಿಯಿಂದ ಹಾರ್ಡ್ ಬಾಲ್ ಮುಟ್ಟುವ ಅವಕಾಶ ಸಿಕ್ಕಿತ್ತು.
ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್
2019ರಲ್ಲಿ ಟೆನ್ನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುತ್ತಿದ್ದ ಆಕಾಶ್ ಅಲ್ಲಿಯವರೆಗೆ ಕೆಂಪು ಬಾಲ್ ಮುಟ್ಟಿರಲಿಲ್ಲ. ಆದರೆ ಅದೇ ವರ್ಷ ಉತ್ತರಾಖಂಡದ ಕೋಚ್ ವಾಸಿಮ್ ಜಾಫರ್ ಮತ್ತು ಮನೀಶ್ ಝಾ ಅವರ ಗಮನ ಸೆಳೆದರು. ಇವರಿಂದಾಗಿ ಅವಕಾಶ ಪಡೆದುಕೊಂಡ ಆಕಾಶ್ ಕೆಂಪು ಬಾಲ್ ಎಸೆಯಲು ಶುರು ಮಾಡಿದರು.
Paltan, use this post to give Akash a 𝐇𝐈𝐆𝐇-𝟓 ✋😉🏆#OneFamily #LSGvMI #MumbaiMeriJaan #MumbaiIndians #IPL2023 pic.twitter.com/GKnwYiJgiN
— Mumbai Indians (@mipaltan) May 24, 2023
ನಂತರ ಕೆಂಪು ಬಾಲ್ ಎಸೆಯಲು ಸತತ ಶ್ರಮ ವಹಿಸಿದರು. ಹೀಗೆ 2022ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಅಂದು ಗಾಯಗೊಂಡಿದ್ದ ಸೂರ್ಯ ಕುಮಾರ್ ಯಾದವ್ ಬದಲಿಯಾಗಿ ತಂಡದೊಳಕ್ಕೆ ಸೇರಿಕೊಂಡರು. ಅಷ್ಟು ಮಾತ್ರವಲ್ಲದೆ, ಅಂದು ಐಪಿಎಲ್ನಲ್ಲಿ ಮುಂಬೈ ಪರವಾಗಿ ಆಡುವ ಉತ್ತರಾಖಂಡ ರಾಜ್ಯದ ಮೊದಲ ಕ್ರಿಕೆಟಿಗ ಎಂದೆನಿಸಿಕೊಂಡರು.
3 ಓವರ್ + 5 ರನ್ + 5 ವಿಕೆಟ್
ಆಕಾಶ್ ಲಕ್ನೋದ 5 ವಿಕೆಟ್ ಕಬಳಿಸಿದ್ದು ಮಾತ್ರವಲ್ಲ, 3.3 ಓವರ್ಗೆ ಬರೀ 5 ರನ್ ಕೊಟ್ಟರು. ಇದೇ ವಿಚಾರಕ್ಕೆ ನಿನ್ನೆ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಕ್ರಿಸ್ ಜೋರ್ಡಾನ್ ಕೂಡ 2 ಓವರ್ನಲ್ಲಿ 7 ರನ್ ಕೊಟ್ಟು ಗುರುತಿಸಿಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಇಂಜಿನಿಯರಿಂಗ್ ಸ್ಟೂಡೆಂಟ್ ಬೌಲರ್ ಆದ ಕಥೆ
ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್
ಆಕಾಶ್ ಮಾಧ್ವಲ್ ಲೈಫ್ ಸ್ಟೋರಿ ಸಖತ್ತಾಗಿದೆ
ಆತ ಫಾಸ್ಟ್ ಬೌಲರ್ ಅನ್ನೋದು ನಿಜ. ಆದರೆ ಅದಕ್ಕೂ ಮೊದಲು ಆತ ಇಂಜಿನಿಯರ್ ವಿದ್ಯಾರ್ಥಿ. ಮಾತ್ರವಲ್ಲದೆ, ಟೆನ್ನಿಸ್ ಬೌಲರ್ ಆಗಿದ್ದವನು ನಿನ್ನೆ ಐಪಿಎಲ್ನಲ್ಲಿ ಹೀರೋ ಆಗಿ ಮೆರೆದನು. ಅಂದಹಾಗೆಯೇ, ಆಕಾಶ್ ಮಾಧ್ವಲ್ ನಿಜ ಜೀವನದ ಬಗ್ಗೆ ಒಂದು ರೌಂಡ್ ಹಾಕಲೇ ಬೇಕು. ಯಾಕಂದ್ರೆ ಲಕ್ನೋದ 5 ವಿಕೆಟ್ ಕಿತ್ತು ತಂಡಕ್ಕೆ ಸುಲಭದ ಜಯ ಒದಗಿಸಲು ಈತನೂ ಕೂಡ ಸಾಕ್ಷಿ ಎಂಬುದನ್ನು ಯಾರು ಮರೆಯುವಂತಿಲ್ಲ. ಮಾತ್ರವಲ್ಲದೆ ತಂಡವನ್ನು ಪೈನಲ್ಗೆ ಕೊಂಡೊಯ್ಯಲು ಸಹಾಯವಾದ ಆಕಾಶ್ನನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ.
ಇಂಜಿನಿಯರಿಂಗ್ ಸ್ಟೂಡೆಂಟ್ ಬೌಲರ್ ಆದ ಕಥೆ
ಅದೃಷ್ಟವೋ? ಅವಕಾಶವೋ? ಆದರೆ ಆಕಾಶ್ ಮಾಧ್ವಲ್ ಮಾತ್ರ ನಿನ್ನೆ ಚಮತ್ಕಾರ ಮಾಡಿದ್ದು ಎಲ್ಲರ ಕಣ್ಣು ಕಟ್ಟಿತ್ತು. ಒಂದಲ್ಲ, ಎರಡರಲ್ಲ ಬರೋಬ್ಬರಿ 5 ವಿಕೆಟ್ ಕಿತ್ತು ಎಲ್ಲರ ಕಣ್ಣಿಗೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆಯೇ ಆಕಾಶ್ ನಿಜ ಜೀವನ ಬಗ್ಗೆ ತಿಳಿದುಕೊಳ್ಳಲೇ ಬೇಕು.
ये पल 🤩#OneFamily #MumbaiMeriJaan #MumbaiIndians #TATAIPL #IPL2023 pic.twitter.com/6GgtOtbycg
— Mumbai Indians (@mipaltan) May 25, 2023
ಆಕಾಶ್ ಇಂಜಿನಿಯರ್ ವಿದ್ಯಾರ್ಥಿ. ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್ಗೆ ಅದೊಂದು ದಿನ ಅವಕಾಶದ ಬಾಗಿಲು ತೆರೆದಿತ್ತು. ಕಾರಣ ಅವರ ಚೆಂಡು ಎಸೆತದ ಶೈಲಿಯಿಂದ ಹಾರ್ಡ್ ಬಾಲ್ ಮುಟ್ಟುವ ಅವಕಾಶ ಸಿಕ್ಕಿತ್ತು.
ಟೆನ್ನಿಸ್ ಬಾಲ್ ಆಡುತ್ತಿದ್ದ ಆಕಾಶ್
2019ರಲ್ಲಿ ಟೆನ್ನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುತ್ತಿದ್ದ ಆಕಾಶ್ ಅಲ್ಲಿಯವರೆಗೆ ಕೆಂಪು ಬಾಲ್ ಮುಟ್ಟಿರಲಿಲ್ಲ. ಆದರೆ ಅದೇ ವರ್ಷ ಉತ್ತರಾಖಂಡದ ಕೋಚ್ ವಾಸಿಮ್ ಜಾಫರ್ ಮತ್ತು ಮನೀಶ್ ಝಾ ಅವರ ಗಮನ ಸೆಳೆದರು. ಇವರಿಂದಾಗಿ ಅವಕಾಶ ಪಡೆದುಕೊಂಡ ಆಕಾಶ್ ಕೆಂಪು ಬಾಲ್ ಎಸೆಯಲು ಶುರು ಮಾಡಿದರು.
Paltan, use this post to give Akash a 𝐇𝐈𝐆𝐇-𝟓 ✋😉🏆#OneFamily #LSGvMI #MumbaiMeriJaan #MumbaiIndians #IPL2023 pic.twitter.com/GKnwYiJgiN
— Mumbai Indians (@mipaltan) May 24, 2023
ನಂತರ ಕೆಂಪು ಬಾಲ್ ಎಸೆಯಲು ಸತತ ಶ್ರಮ ವಹಿಸಿದರು. ಹೀಗೆ 2022ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಅಂದು ಗಾಯಗೊಂಡಿದ್ದ ಸೂರ್ಯ ಕುಮಾರ್ ಯಾದವ್ ಬದಲಿಯಾಗಿ ತಂಡದೊಳಕ್ಕೆ ಸೇರಿಕೊಂಡರು. ಅಷ್ಟು ಮಾತ್ರವಲ್ಲದೆ, ಅಂದು ಐಪಿಎಲ್ನಲ್ಲಿ ಮುಂಬೈ ಪರವಾಗಿ ಆಡುವ ಉತ್ತರಾಖಂಡ ರಾಜ್ಯದ ಮೊದಲ ಕ್ರಿಕೆಟಿಗ ಎಂದೆನಿಸಿಕೊಂಡರು.
3 ಓವರ್ + 5 ರನ್ + 5 ವಿಕೆಟ್
ಆಕಾಶ್ ಲಕ್ನೋದ 5 ವಿಕೆಟ್ ಕಬಳಿಸಿದ್ದು ಮಾತ್ರವಲ್ಲ, 3.3 ಓವರ್ಗೆ ಬರೀ 5 ರನ್ ಕೊಟ್ಟರು. ಇದೇ ವಿಚಾರಕ್ಕೆ ನಿನ್ನೆ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಕ್ರಿಸ್ ಜೋರ್ಡಾನ್ ಕೂಡ 2 ಓವರ್ನಲ್ಲಿ 7 ರನ್ ಕೊಟ್ಟು ಗುರುತಿಸಿಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ