newsfirstkannada.com

Ambulance Accident: ಕಂಟ್ರೋಲ್ ತಪ್ಪಿದ ಆ್ಯಂಬುಲೆನ್ಸ್.. ಅದೃಷ್ಟ ಚೆನ್ನಾಗಿತ್ತು, ಜಸ್ಟ್ ಮಿಸ್..!

Share :

03-07-2023

    ಪ್ರಾಣ ಸಂಕಟಕ್ಕೆ ಸಿಲುಕಿದ್ದ ಡ್ರೈವರ್, ಸಹಾಯಕ

    ಸ್ಥಳೀಯರು, ಪೊಲೀಸರಿಂದ ರಕ್ಷಣೆ

    ಆ್ಯಂಬುಲೆನ್ಸ್​ನಲ್ಲಿ ರೋಗಿಗಳು ಇದ್ದರಾ..?

ಡ್ರೈವರ್ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್​ ತಡೆಗೋಡೆಯ ಅಂಚಿಗೆ ಸಿಲುಕಿ ನೇತಾಡಿದ ಘಟನೆ ರಾಜಸ್ಥಾನದ ಕರನ್​ಪುರದಲ್ಲಿ ನಡೆದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಪೊಲೀಸರು ಡ್ರೈವರ್ ಹಾಗೂ ಸಹಾಯಕನನ್ನು ರಕ್ಷಣೆ ಮಾಡಿದ್ದಾರೆ.

ಕಣಿವೆಯಲ್ಲಿ ಇಳಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್​, ಬಂಡೆಯಂತಿದ್ದ ತಡೆಗೋಡೆಗೆ ಹೋಗಿ ಗುದ್ದಿದೆ. ಪ್ರಪಾತದ ಅಂಚಿಗೆ ಹೋಗಿ ನಿಂತಿದ್ದ ಆ್ಯಂಬುಲೆನ್ಸ್​, ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಧರೆಗೆ ಉರುಳಿ ಬೀಳುತ್ತಿತ್ತು.

ಅದೃಷ್ಟವಶಾತ್ ಆ್ಯಂಬುಲೆನ್ಸ್​ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ದುರ್ಘಟನೆಯಿಂದ ಡ್ರೈವರ್ ಹಾಗೂ ಸಹಾಯಕ ಸಂಕಷ್ಟಕ್ಕೆ ಸಿಲುಕಿದ್ದರು. ಕೂಡಲೇ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ambulance Accident: ಕಂಟ್ರೋಲ್ ತಪ್ಪಿದ ಆ್ಯಂಬುಲೆನ್ಸ್.. ಅದೃಷ್ಟ ಚೆನ್ನಾಗಿತ್ತು, ಜಸ್ಟ್ ಮಿಸ್..!

https://newsfirstlive.com/wp-content/uploads/2023/07/AMBULANCE.jpg

    ಪ್ರಾಣ ಸಂಕಟಕ್ಕೆ ಸಿಲುಕಿದ್ದ ಡ್ರೈವರ್, ಸಹಾಯಕ

    ಸ್ಥಳೀಯರು, ಪೊಲೀಸರಿಂದ ರಕ್ಷಣೆ

    ಆ್ಯಂಬುಲೆನ್ಸ್​ನಲ್ಲಿ ರೋಗಿಗಳು ಇದ್ದರಾ..?

ಡ್ರೈವರ್ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್​ ತಡೆಗೋಡೆಯ ಅಂಚಿಗೆ ಸಿಲುಕಿ ನೇತಾಡಿದ ಘಟನೆ ರಾಜಸ್ಥಾನದ ಕರನ್​ಪುರದಲ್ಲಿ ನಡೆದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಪೊಲೀಸರು ಡ್ರೈವರ್ ಹಾಗೂ ಸಹಾಯಕನನ್ನು ರಕ್ಷಣೆ ಮಾಡಿದ್ದಾರೆ.

ಕಣಿವೆಯಲ್ಲಿ ಇಳಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್​, ಬಂಡೆಯಂತಿದ್ದ ತಡೆಗೋಡೆಗೆ ಹೋಗಿ ಗುದ್ದಿದೆ. ಪ್ರಪಾತದ ಅಂಚಿಗೆ ಹೋಗಿ ನಿಂತಿದ್ದ ಆ್ಯಂಬುಲೆನ್ಸ್​, ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಧರೆಗೆ ಉರುಳಿ ಬೀಳುತ್ತಿತ್ತು.

ಅದೃಷ್ಟವಶಾತ್ ಆ್ಯಂಬುಲೆನ್ಸ್​ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ದುರ್ಘಟನೆಯಿಂದ ಡ್ರೈವರ್ ಹಾಗೂ ಸಹಾಯಕ ಸಂಕಷ್ಟಕ್ಕೆ ಸಿಲುಕಿದ್ದರು. ಕೂಡಲೇ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More