ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಭಾರೀ ಹಗರಣದ ಕೇಸ್
ಸಿಐಡಿ ಅಧಿಕಾರಿಗಳ ಮನವಿ ಮೇರೆಗೆ ನ್ಯಾಯಾಂಗ ಬಂಧನ
200 ಕಿ.ಮೀ ದೂರದ ಜೈಲಿಗೆ ಶಿಫ್ಟ್ ಮಾಡಿದ್ದೇ ಕುತೂಹಲ
ಹೈದರಾಬಾದ್: ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡುರನ್ನು ವಿಜಯವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕೋರ್ಟ್ನಲ್ಲಿ ಸಿಐಡಿ ಅಧಿಕಾರಿಗಳು ಮತ್ತು ಚಂದ್ರಬಾಬು ನಾಯ್ಡು ಪರ ವಕೀಲರು ಬರೋಬ್ಬರಿ 6 ಗಂಟೆಗಳ ಕಾಲ ವಾದ-ವಿವಾದ ಮಾಡಿದರು. ಇದನ್ನೆಲ್ಲ ಆಲಿಸಿದ ಬಳಿಕ ಕೋರ್ಟ್ ಎರಡು ವಾರಗಳವರೆಗೆ ನಾಯ್ಡುರನ್ನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡುರನ್ನು ವಿಜಯವಾಡದಿಂದ 200 ಕಿಲೋ ಮೀಟರ್ ದೂರ ಇರುವ ರಾಜಮಂಡ್ರಿ ಜೈಲಿಗೆ ಹಾಕಲಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಆದೇಶ ವಿರುದ್ಧ ಇಂದು ಹೈಕೋರ್ಟ್ಗೆ ಚಂದ್ರಬಾಬು ನಾಯ್ಡು ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
Big news coming in: Former CM and TDP chief Chandrababu Naidu sent to 14-day judicial custody.
He was arrested after charges of corruption in the Skill Development Scheme pic.twitter.com/0lYVdbBt09— Padmaja joshi (@PadmajaJoshi) September 10, 2023
ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ 2014 ರಿಂದ 2019ರವರೆಗೆ ಒಟ್ಟು 371 ಕೋಟಿ ರೂಪಾಯಿಗಳನ್ನು ಶೆಲ್ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಯ್ಡುರನ್ನು ಎ1 ಆರೋಪಿ ಎಂದು ಪರಿಗಣಿಸಿ ಸೆ.09 ರಂದು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಭಾರೀ ಹಗರಣದ ಕೇಸ್
ಸಿಐಡಿ ಅಧಿಕಾರಿಗಳ ಮನವಿ ಮೇರೆಗೆ ನ್ಯಾಯಾಂಗ ಬಂಧನ
200 ಕಿ.ಮೀ ದೂರದ ಜೈಲಿಗೆ ಶಿಫ್ಟ್ ಮಾಡಿದ್ದೇ ಕುತೂಹಲ
ಹೈದರಾಬಾದ್: ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡುರನ್ನು ವಿಜಯವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕೋರ್ಟ್ನಲ್ಲಿ ಸಿಐಡಿ ಅಧಿಕಾರಿಗಳು ಮತ್ತು ಚಂದ್ರಬಾಬು ನಾಯ್ಡು ಪರ ವಕೀಲರು ಬರೋಬ್ಬರಿ 6 ಗಂಟೆಗಳ ಕಾಲ ವಾದ-ವಿವಾದ ಮಾಡಿದರು. ಇದನ್ನೆಲ್ಲ ಆಲಿಸಿದ ಬಳಿಕ ಕೋರ್ಟ್ ಎರಡು ವಾರಗಳವರೆಗೆ ನಾಯ್ಡುರನ್ನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡುರನ್ನು ವಿಜಯವಾಡದಿಂದ 200 ಕಿಲೋ ಮೀಟರ್ ದೂರ ಇರುವ ರಾಜಮಂಡ್ರಿ ಜೈಲಿಗೆ ಹಾಕಲಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಆದೇಶ ವಿರುದ್ಧ ಇಂದು ಹೈಕೋರ್ಟ್ಗೆ ಚಂದ್ರಬಾಬು ನಾಯ್ಡು ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
Big news coming in: Former CM and TDP chief Chandrababu Naidu sent to 14-day judicial custody.
He was arrested after charges of corruption in the Skill Development Scheme pic.twitter.com/0lYVdbBt09— Padmaja joshi (@PadmajaJoshi) September 10, 2023
ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ 2014 ರಿಂದ 2019ರವರೆಗೆ ಒಟ್ಟು 371 ಕೋಟಿ ರೂಪಾಯಿಗಳನ್ನು ಶೆಲ್ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಯ್ಡುರನ್ನು ಎ1 ಆರೋಪಿ ಎಂದು ಪರಿಗಣಿಸಿ ಸೆ.09 ರಂದು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ