newsfirstkannada.com

ಟೊಮ್ಯಾಟೋ ಬೆಳೆ ಕಾಯುತ್ತಿದ್ದ ರೈತನ ಕತ್ತು ಹಿಸುಕಿ ಕೊಲೆ.. ಈ ವಾರದಲ್ಲಿ ನಡೆದ 2ನೇ ಘಟನೆ

Share :

19-07-2023

    ರಾತ್ರಿ ಟೊಮ್ಯಾಟೋ ಹೊಲ ಕಾಯುವ ರೈತರೇ ಎಚ್ಚರ.. ಎಚ್ಚರ..!

    ರಾತ್ರಿ ವೇಳೆ ಹತ್ಯೆ ಮಾಡಲು ಹೊಲಕ್ಕೆ ಬರ್ತಾರೆ ದುಷ್ಕರ್ಮಿಗಳು

    ಪೊಲೀಸರಿಗೆ ಸಿಗುತ್ತಿಲ್ಲ ಈ ರೈತ ಹತ್ಯೆ ಗ್ಯಾಂಗ್, ಏನಿದು ವಿಚಿತ್ರ?

ಹೈದರಾಬಾದ್: ಟೊಮ್ಯಾಟೋ ಹೊಲಕ್ಕೆ ರಾತ್ರಿ ವೇಳೆ ಕಾವಲು ಕಾಯುತ್ತ ಮಲಗಿದ್ದ ರೈತನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರ ಗ್ರಾಮದ ಬಳಿ ನಡೆದಿದೆ. ಈ ರೀತಿ ಕಾವಲು ಕಾಯುತ್ತಿದ್ದ ರೈತನನ್ನು ಹತ್ಯೆ ಮಾಡುತ್ತಿರುವುದು ಈ ವಾರದಲ್ಲಿ ಜಿಲ್ಲೆಯಲ್ಲಿ ನಡೆದ 2ನೇ ಘಟನೆ ಆಗಿದೆ.

ಪೆದ್ದ ತಿಪ್ಪಸಮುದ್ರ ಗ್ರಾಮದ ಮಧುಕರ ರೆಡ್ಡಿ ಸಾವನ್ನಪ್ಪಿರುವ ರೈತ. ಇವರು ರಾತ್ರಿ ಸಮಯದಲ್ಲಿ ಗ್ರಾಮದ ಸಮೀಪ ಇರುವ ತಮ್ಮ ಟೊಮ್ಯಾಟೋ ಹೊಲಕ್ಕೆ ಕಾವಲು ಕಾಯುತ್ತ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ದುಷ್ಕರ್ಮಿಗಳು ರೈತನ ಕತ್ತು ಹಿಸುಕಿ ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ DSP ಕೆಸಪ್ಪ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಕೇಸ್​ ದಾಖಲಿಸಲಾಗಿದ್ದು ತನಿಖೆ ಕೈಗೊಂಡು ಆರೋಪಿಗಳನ್ನು ಹಿಡಿಯಲು ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವಾರದಲ್ಲಿ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪ್ರದೇಶದ ಬಳಿ ರೈತ ರಾಜಶೇಖರ್​ ರೆಡ್ಡಿ (62)ಯನ್ನು ಕೊಲೆ ಮಾಡಲಾಗಿತ್ತು. ಮೃತನು ಟೊಮ್ಯಾಟೋ ಹೊಲಕ್ಕೆ ರಾತ್ರಿ ಸಮಯದಲ್ಲಿ ಕಾವಲು ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ರೈತನನ್ನು ಹತ್ಯೆ ಮಾಡಿ ಎಸ್ಕೇಪ್​ ಆಗಿದ್ದರು. ಇದು ಆದ ಬೆನ್ನಲ್ಲೆ ಇದೀಗ ಮತ್ತೊಂದು ರೈತನ ಹತ್ಯೆ ಆಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಬೆಳೆ ಕಾಯುತ್ತಿದ್ದ ರೈತನ ಕತ್ತು ಹಿಸುಕಿ ಕೊಲೆ.. ಈ ವಾರದಲ್ಲಿ ನಡೆದ 2ನೇ ಘಟನೆ

https://newsfirstlive.com/wp-content/uploads/2023/07/Andhra_Farmer_Tomatoes.jpg

    ರಾತ್ರಿ ಟೊಮ್ಯಾಟೋ ಹೊಲ ಕಾಯುವ ರೈತರೇ ಎಚ್ಚರ.. ಎಚ್ಚರ..!

    ರಾತ್ರಿ ವೇಳೆ ಹತ್ಯೆ ಮಾಡಲು ಹೊಲಕ್ಕೆ ಬರ್ತಾರೆ ದುಷ್ಕರ್ಮಿಗಳು

    ಪೊಲೀಸರಿಗೆ ಸಿಗುತ್ತಿಲ್ಲ ಈ ರೈತ ಹತ್ಯೆ ಗ್ಯಾಂಗ್, ಏನಿದು ವಿಚಿತ್ರ?

ಹೈದರಾಬಾದ್: ಟೊಮ್ಯಾಟೋ ಹೊಲಕ್ಕೆ ರಾತ್ರಿ ವೇಳೆ ಕಾವಲು ಕಾಯುತ್ತ ಮಲಗಿದ್ದ ರೈತನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರ ಗ್ರಾಮದ ಬಳಿ ನಡೆದಿದೆ. ಈ ರೀತಿ ಕಾವಲು ಕಾಯುತ್ತಿದ್ದ ರೈತನನ್ನು ಹತ್ಯೆ ಮಾಡುತ್ತಿರುವುದು ಈ ವಾರದಲ್ಲಿ ಜಿಲ್ಲೆಯಲ್ಲಿ ನಡೆದ 2ನೇ ಘಟನೆ ಆಗಿದೆ.

ಪೆದ್ದ ತಿಪ್ಪಸಮುದ್ರ ಗ್ರಾಮದ ಮಧುಕರ ರೆಡ್ಡಿ ಸಾವನ್ನಪ್ಪಿರುವ ರೈತ. ಇವರು ರಾತ್ರಿ ಸಮಯದಲ್ಲಿ ಗ್ರಾಮದ ಸಮೀಪ ಇರುವ ತಮ್ಮ ಟೊಮ್ಯಾಟೋ ಹೊಲಕ್ಕೆ ಕಾವಲು ಕಾಯುತ್ತ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ದುಷ್ಕರ್ಮಿಗಳು ರೈತನ ಕತ್ತು ಹಿಸುಕಿ ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ DSP ಕೆಸಪ್ಪ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಕೇಸ್​ ದಾಖಲಿಸಲಾಗಿದ್ದು ತನಿಖೆ ಕೈಗೊಂಡು ಆರೋಪಿಗಳನ್ನು ಹಿಡಿಯಲು ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವಾರದಲ್ಲಿ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪ್ರದೇಶದ ಬಳಿ ರೈತ ರಾಜಶೇಖರ್​ ರೆಡ್ಡಿ (62)ಯನ್ನು ಕೊಲೆ ಮಾಡಲಾಗಿತ್ತು. ಮೃತನು ಟೊಮ್ಯಾಟೋ ಹೊಲಕ್ಕೆ ರಾತ್ರಿ ಸಮಯದಲ್ಲಿ ಕಾವಲು ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ರೈತನನ್ನು ಹತ್ಯೆ ಮಾಡಿ ಎಸ್ಕೇಪ್​ ಆಗಿದ್ದರು. ಇದು ಆದ ಬೆನ್ನಲ್ಲೆ ಇದೀಗ ಮತ್ತೊಂದು ರೈತನ ಹತ್ಯೆ ಆಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More