newsfirstkannada.com

ಅತ್ಯಾಚಾರ ಕೇಸ್ ಮುಚ್ಚಿ ಹಾಕಲು 10,000 ಲಂಚ ಕೇಳಿ ಅರೆಸ್ಟ್ ಆದ ಸಬ್​ ಇನ್​ಸ್ಪೆಕ್ಟರ್..!

Share :

06-11-2023

    ರಾಹುಲ್ ತ್ರಿಪಾಠಿ ಬಂಧಿತ ಸಬ್​ ಇನ್​ಸ್ಪೆಕ್ಟರ್

    ಅಧಿಕಾರಿ ರಾಹುಲ್ ತ್ರಿಪಾಠಿ ಸಿಕ್ಕಿಬಿದ್ದಿದ್ದು ಹೇಗೆ..?

    ಬಂಧಿಸಿ ಕರ್ಕೊಂಡು ಹೋಗ್ತಿರುವ ವಿಡಿಯೋ ವೈರಲ್

ಉತ್ತರ ಪ್ರದೇಶದ ಲಕ್ನೋದಲ್ಲಿ ಲಂಚ ಪಡೆಯುತ್ತಿದ್ದ ಸಬ್​ ಇನ್ಸ್‌ಪೆಕ್ಟರ್ ರಾಹುಲ್ ತ್ರಿಪಾಠಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ತಂಡ ಬಂಧಿಸಿದೆ. ಲಂಚದ ಬೇಡಿಕೆಯ ಮೇರೆಗೆ ಇನ್​ ಸ್ಪೆಕ್ಟರ್ ವಿರುದ್ಧ ಬುದ್ಧೇಶ್ವರದ ಹೋಟೆಲ್ ಮಾಲೀಕ ವಿನೋದ್ ಕುಮಾರ್ ಎಂಬುವವರು ದೂರು ನೀಡಿದ್ದರು.

ಖಚಿತ ಮಾಹಿತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳದ ಇನ್​ ಸ್ಪೆಕ್ಟರ್ ನೂರುಲ್ ಹುದಾ ಖಾನ್ ನೇತೃತ್ವದಲ್ಲಿ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಬ್ ಇನ್ಸ್​ಪೆಕ್ಟರ್​​ ಅತ್ಯಾಚಾರ ಪ್ರಕರಣದಲ್ಲಿ 10,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಅಧಿಕಾರಿಗಳ ಕೈಗೆ ಸಬ್ ಇನ್​ಸ್ಪೆಕ್ಟರ್ ಸಿಕ್ಕಿ ಬೀಳುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆತನನ್ನು ಬಿಗಿಯಾಗಿ ಹಿಡಿದುಕೊಂಡು ಹರೌನಿ ಪೋಸ್ಟ್​ನಿಂದ ಪಿಜಿಐ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. 2019ರ ಬ್ಯಾಚ್​ನ ರಾಹುಲ್ ತ್ರಿಪಾಠಿಯನ್ನು ಮೋಹನ್ ಲಾಲ್ ಗಂಜ್ ಠಾಣೆಗೆ ನಿಯೋಜಿಸಲಾಗಿತ್ತು. ಕೆಲವು ತಿಂಗಳು ಹಿಂದಷ್ಟೇ ಬಂಟ್ರಾದ ಹರೌಣಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಆಗಸ್ಟ್ 28 ರಂದು ಯುವತಿಯೊಬ್ಬಳು ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣದ ತನಿಖೆಯನ್ನು ರಾಹುಲ್ ತ್ರಿಪಾಠಿ ನಡೆಸುತ್ತಿದ್ದರು. ತನಿಖೆ ಶುರುಮಾಡಿ ಆರೋಪಿಗಳ ಮೇಲೆ ಅತ್ಯಾಚಾರದ ಸೆಕ್ಷನ್‌ಗಳನ್ನು ಹೆಚ್ಚಿಸಿದ್ದರು. ಕೊನೆಗೆ ಆರೋಪಿ ವಿಶಾಲ್ ರಾವತ್ ಹಾಗೂ ಮತ್ತೊಬ್ಬನನ್ನು ಜೈಲಿಗೆ ಕಳುಹಿಸಿದ್ದರು. ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಹೋಟೆಲ್​​ನ ಮಾಲೀಕ ವಿನೋದ್ ಕುಮಾರ್​​ನನ್ನೂ ವಿಚಾರಣೆಗೆ ಕರೆ ತಂದಿದ್ದರು. ಈ ವೇಳೆ ಆತನ ಬಳಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೆ 10 ಸಾವಿರ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ ರಾಹುಲ್ ತ್ರಿಪಾಠಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ಯಾಚಾರ ಕೇಸ್ ಮುಚ್ಚಿ ಹಾಕಲು 10,000 ಲಂಚ ಕೇಳಿ ಅರೆಸ್ಟ್ ಆದ ಸಬ್​ ಇನ್​ಸ್ಪೆಕ್ಟರ್..!

https://newsfirstlive.com/wp-content/uploads/2023/11/SI.jpg

    ರಾಹುಲ್ ತ್ರಿಪಾಠಿ ಬಂಧಿತ ಸಬ್​ ಇನ್​ಸ್ಪೆಕ್ಟರ್

    ಅಧಿಕಾರಿ ರಾಹುಲ್ ತ್ರಿಪಾಠಿ ಸಿಕ್ಕಿಬಿದ್ದಿದ್ದು ಹೇಗೆ..?

    ಬಂಧಿಸಿ ಕರ್ಕೊಂಡು ಹೋಗ್ತಿರುವ ವಿಡಿಯೋ ವೈರಲ್

ಉತ್ತರ ಪ್ರದೇಶದ ಲಕ್ನೋದಲ್ಲಿ ಲಂಚ ಪಡೆಯುತ್ತಿದ್ದ ಸಬ್​ ಇನ್ಸ್‌ಪೆಕ್ಟರ್ ರಾಹುಲ್ ತ್ರಿಪಾಠಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ತಂಡ ಬಂಧಿಸಿದೆ. ಲಂಚದ ಬೇಡಿಕೆಯ ಮೇರೆಗೆ ಇನ್​ ಸ್ಪೆಕ್ಟರ್ ವಿರುದ್ಧ ಬುದ್ಧೇಶ್ವರದ ಹೋಟೆಲ್ ಮಾಲೀಕ ವಿನೋದ್ ಕುಮಾರ್ ಎಂಬುವವರು ದೂರು ನೀಡಿದ್ದರು.

ಖಚಿತ ಮಾಹಿತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳದ ಇನ್​ ಸ್ಪೆಕ್ಟರ್ ನೂರುಲ್ ಹುದಾ ಖಾನ್ ನೇತೃತ್ವದಲ್ಲಿ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಬ್ ಇನ್ಸ್​ಪೆಕ್ಟರ್​​ ಅತ್ಯಾಚಾರ ಪ್ರಕರಣದಲ್ಲಿ 10,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಅಧಿಕಾರಿಗಳ ಕೈಗೆ ಸಬ್ ಇನ್​ಸ್ಪೆಕ್ಟರ್ ಸಿಕ್ಕಿ ಬೀಳುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆತನನ್ನು ಬಿಗಿಯಾಗಿ ಹಿಡಿದುಕೊಂಡು ಹರೌನಿ ಪೋಸ್ಟ್​ನಿಂದ ಪಿಜಿಐ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. 2019ರ ಬ್ಯಾಚ್​ನ ರಾಹುಲ್ ತ್ರಿಪಾಠಿಯನ್ನು ಮೋಹನ್ ಲಾಲ್ ಗಂಜ್ ಠಾಣೆಗೆ ನಿಯೋಜಿಸಲಾಗಿತ್ತು. ಕೆಲವು ತಿಂಗಳು ಹಿಂದಷ್ಟೇ ಬಂಟ್ರಾದ ಹರೌಣಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಆಗಸ್ಟ್ 28 ರಂದು ಯುವತಿಯೊಬ್ಬಳು ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣದ ತನಿಖೆಯನ್ನು ರಾಹುಲ್ ತ್ರಿಪಾಠಿ ನಡೆಸುತ್ತಿದ್ದರು. ತನಿಖೆ ಶುರುಮಾಡಿ ಆರೋಪಿಗಳ ಮೇಲೆ ಅತ್ಯಾಚಾರದ ಸೆಕ್ಷನ್‌ಗಳನ್ನು ಹೆಚ್ಚಿಸಿದ್ದರು. ಕೊನೆಗೆ ಆರೋಪಿ ವಿಶಾಲ್ ರಾವತ್ ಹಾಗೂ ಮತ್ತೊಬ್ಬನನ್ನು ಜೈಲಿಗೆ ಕಳುಹಿಸಿದ್ದರು. ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಹೋಟೆಲ್​​ನ ಮಾಲೀಕ ವಿನೋದ್ ಕುಮಾರ್​​ನನ್ನೂ ವಿಚಾರಣೆಗೆ ಕರೆ ತಂದಿದ್ದರು. ಈ ವೇಳೆ ಆತನ ಬಳಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೆ 10 ಸಾವಿರ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ ರಾಹುಲ್ ತ್ರಿಪಾಠಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More