newsfirstkannada.com

ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸಲು ಐಸಿಸ್ ಪ್ಲಾನ್; ತಮಿಳುನಾಡು, ತೆಲಂಗಾಣದಲ್ಲಿ NIA ಮೆಗಾ ಕೂಂಬಿಂಗ್..!

Share :

16-09-2023

    ಶಂಕಿತ ಇಸ್ಲಾಮಿಕ್ ಸ್ಟೇಟ್​ ಟ್ರೈನಿಂಗ್ ಸೆಂಟರ್​​ ಮೇಲೆ ದಾಳಿ..!

    30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ ಹಲವರ ವಿಚಾರಣೆ

    ಸೆ.6 ರಂದು ಚೆನ್ನೈನಲ್ಲಿ ಐಸಿಸ್​ ಉಗ್ರ ಸಯ್ಯೀದ್ ಬಂಧನ

ತಮಿಳುನಾಡಿನ ಕೊಯಮತ್ತೂರು, ಚೆನ್ನೈ ಹಾಗೂ ತೆಲಂಗಾಣ ಸೇರಿಂದತೆ ಒಟ್ಟು 30ಕ್ಕೂ ಹೆಚ್ಚು ಕಡೆ ಎನ್​ಐಎ (National Investigation Agency) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕಿತ ಇಸ್ಲಾಮಿಕ್ ಸ್ಟೇಟ್​ ಟ್ರೈನಿಂಗ್ ಸೆಂಟರ್​​ ಮೇಲೆ ಎನ್​ಐಎ ದಾಳಿ ಮಾಡಿದೆ.

ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸುವ ಕಾರಣ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಟ್ರೈನಿಕ್ ಸೆಂಟರ್​ಗಳನ್ನ ತೆರೆದಿದೆ ಎನ್ನಲಾಗಿದೆ. ಇದನ್ನು ಬೇಧಿಸಲು ಎನ್​ಐಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಕೊಯಮತ್ತೂರಿನ 21 ಸ್ಥಳಗಳಲ್ಲಿ, ಚೆನ್ನೈ ಮೂರು ಸ್ಥಳಗಳಲ್ಲಿ, ಹೈದರಾಬಾದ್​ನ ಐದು ಸ್ಥಳಗಳಲ್ಲಿ ಹಾಗೂ ಟೆಂಕಸಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಕೊಯಮತ್ತೂರಿನ Kovai Arabic ಕಾಲೇಜಿನ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಲ್ಲಿರುವ ಕೆಲವು ಶಂಕಿತ ವಿದ್ಯಾರ್ಥಿಗಳ ವಿಚಾರಣೆ ನಡೆಯುತ್ತಿದೆ. ಜೊತೆಗೆ ಡಿಎಂಕೆ ಪಕ್ಷದ ಪಾಲಿಕೆ ಸದಸ್ಯೆ ಒಬ್ಬರ ಪತ್ನಿಯನ್ನೂ ಎನ್​ಐಎ ಪ್ರಶ್ನೆ ಮಾಡಿದೆ ಎನ್ನಲಾಗಿದೆ. ಪಾಲಿಕೆ ಸದಸ್ಯೆಯ ಮನೆಗೆ ತೆರಳಿ ಕೆಲವು ಮಾಹಿತಿಗಳನ್ನು ಕಲೆ ಹಾಕಿ ವಾಪಸ್ ಆಗಿದೆ ಎಂದು ಸುದ್ದಿಯಾಗಿದೆ.

ಸೆಪ್ಟೆಂಬರ್ 6 ರಂದು ತಲೆಮರೆಸಿಕೊಂಡಿದ್ದ ಐಸಿಸ್​ನ ಘಟಕದ ಸದಸ್ಯ ಸಯ್ಯೀದ್ ನಬೀಲ್ ಅಹ್ಮದ್​​ನನ್ನು ಚೆನ್ನೈನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಸಯ್ಯೀದ್ ನಬೀಲ್ ನೀಡಿದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸಲು ಐಸಿಸ್ ಪ್ಲಾನ್; ತಮಿಳುನಾಡು, ತೆಲಂಗಾಣದಲ್ಲಿ NIA ಮೆಗಾ ಕೂಂಬಿಂಗ್..!

https://newsfirstlive.com/wp-content/uploads/2023/09/NIA.jpg

    ಶಂಕಿತ ಇಸ್ಲಾಮಿಕ್ ಸ್ಟೇಟ್​ ಟ್ರೈನಿಂಗ್ ಸೆಂಟರ್​​ ಮೇಲೆ ದಾಳಿ..!

    30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿ ಹಲವರ ವಿಚಾರಣೆ

    ಸೆ.6 ರಂದು ಚೆನ್ನೈನಲ್ಲಿ ಐಸಿಸ್​ ಉಗ್ರ ಸಯ್ಯೀದ್ ಬಂಧನ

ತಮಿಳುನಾಡಿನ ಕೊಯಮತ್ತೂರು, ಚೆನ್ನೈ ಹಾಗೂ ತೆಲಂಗಾಣ ಸೇರಿಂದತೆ ಒಟ್ಟು 30ಕ್ಕೂ ಹೆಚ್ಚು ಕಡೆ ಎನ್​ಐಎ (National Investigation Agency) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕಿತ ಇಸ್ಲಾಮಿಕ್ ಸ್ಟೇಟ್​ ಟ್ರೈನಿಂಗ್ ಸೆಂಟರ್​​ ಮೇಲೆ ಎನ್​ಐಎ ದಾಳಿ ಮಾಡಿದೆ.

ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸುವ ಕಾರಣ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಟ್ರೈನಿಕ್ ಸೆಂಟರ್​ಗಳನ್ನ ತೆರೆದಿದೆ ಎನ್ನಲಾಗಿದೆ. ಇದನ್ನು ಬೇಧಿಸಲು ಎನ್​ಐಎ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಕೊಯಮತ್ತೂರಿನ 21 ಸ್ಥಳಗಳಲ್ಲಿ, ಚೆನ್ನೈ ಮೂರು ಸ್ಥಳಗಳಲ್ಲಿ, ಹೈದರಾಬಾದ್​ನ ಐದು ಸ್ಥಳಗಳಲ್ಲಿ ಹಾಗೂ ಟೆಂಕಸಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಕೊಯಮತ್ತೂರಿನ Kovai Arabic ಕಾಲೇಜಿನ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅಲ್ಲಿರುವ ಕೆಲವು ಶಂಕಿತ ವಿದ್ಯಾರ್ಥಿಗಳ ವಿಚಾರಣೆ ನಡೆಯುತ್ತಿದೆ. ಜೊತೆಗೆ ಡಿಎಂಕೆ ಪಕ್ಷದ ಪಾಲಿಕೆ ಸದಸ್ಯೆ ಒಬ್ಬರ ಪತ್ನಿಯನ್ನೂ ಎನ್​ಐಎ ಪ್ರಶ್ನೆ ಮಾಡಿದೆ ಎನ್ನಲಾಗಿದೆ. ಪಾಲಿಕೆ ಸದಸ್ಯೆಯ ಮನೆಗೆ ತೆರಳಿ ಕೆಲವು ಮಾಹಿತಿಗಳನ್ನು ಕಲೆ ಹಾಕಿ ವಾಪಸ್ ಆಗಿದೆ ಎಂದು ಸುದ್ದಿಯಾಗಿದೆ.

ಸೆಪ್ಟೆಂಬರ್ 6 ರಂದು ತಲೆಮರೆಸಿಕೊಂಡಿದ್ದ ಐಸಿಸ್​ನ ಘಟಕದ ಸದಸ್ಯ ಸಯ್ಯೀದ್ ನಬೀಲ್ ಅಹ್ಮದ್​​ನನ್ನು ಚೆನ್ನೈನಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಸಯ್ಯೀದ್ ನಬೀಲ್ ನೀಡಿದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More