WTC ಫೈನಲ್ ಸೋಲಿನ ಬಳಿಕ ಬಿಸಿಸಿಐ ಪ್ಲಾನ್ ಚೇಂಜ್
ಸಚಿನ್ ಪುತ್ರ ಅರ್ಜುನ್ ಬಂದಿದ್ದಾರಾ ಬೆಂಗಳೂರಿಗೆ..?
ವಿವಿಎಸ್ ಲಕ್ಷ್ಮಣ್ಗೆ ಮುಂದೆ ಬಿಗ್ ಟಾಸ್ಕ್..!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ 20 ಯುವ ಆಲ್ರೌಂಡರ್ಗಳಿಗೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಗೆ ಬರುವಂತೆ ಕರೆ ನೀಡಿದೆ. ಮೂರು ವಾರಗಳ ಶಿಬಿರಕ್ಕೆ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಅರ್ಜನ್ ತೆಂಡೂಲ್ಕರ್ ಸೇರಿದಂತೆ ಕೆಲ ಯುವ ಆಟಗಾರರಿಗೆ ಬುಲಾವ್ ನೀಡಿದೆ.
ಇದನ್ನು ಓದಿ: ವೆಸ್ಟ್ ಇಂಡೀಸ್ ವಿರುದ್ಧ ಸೀರೀಸ್.. ಟೀಂ ಇಂಡಿಯಾಗೆ ಬಿಗ್ ಶಾಕ್.. ಮತ್ತೆ ಕೈಕೊಟ್ಟ ಸ್ಟಾರ್ ಪ್ಲೇಯರ್!
ಮುಂದಿನ ಕ್ರಿಕೆಟ್ ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ರಿಪ್ಲೇಸ್ಮೆಂಟ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರರನ್ನ ಗುರುತಿಸಿ ಈಗ ಬಿಸಿಸಿಐ ಆಹ್ವಾನ ನೀಡಿದೆ. ಅರ್ಜುನ್ ತೆಂಡುಲ್ಕರ್, ಹರ್ಷಿತ್ ರಾಣಾ ಒಳಗೊಂಡ ಆಟಗಾರರಿಗೆ ಬೆಂಗಳೂರಿಗೆ ಬರುವಂತೆ ಹೇಳಲಾಗಿದೆ. ಭಾರತದ ತಂಡದ ಮಾಜಿ ಆಟಗಾರ ಹಾಗೂ NCA ಆಧ್ಯಕ್ಷ ವಿವಿಎಸ್ ಲಕ್ಷ್ಮಣ್, ಅಂಡರ್-23 ಏಷ್ಯಾಕಪ್ ದೃಷ್ಟಿಯಲ್ಲಿಟ್ಟುಕೊಂಡು 20 ದಿನ ಅಂದರೆ ಮೂರು ವಾರಗಳ ಕ್ಯಾಂಪ್ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಈ ಕ್ಯಾಂಪ್ನಲ್ಲಿ ಕೆಲ ಆಲ್ರೌಂಡರ್ಗಳಿಗೂ ಕರೆ ನೀಡಲಾಗಿದ್ದು ಅರ್ಜುನ್ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಜೂನ್ 7 ರಿಂದ 11ವರೆಗೆ ನಡೆದಿತ್ತು. ಈ ಮೆಗಾ ಟೂರ್ನಿಯಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿದೆ. ಸೋಲು ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನ ಶುರುವಾಗಿದೆ. ಯುವಕರ ನೇತೃತ್ವದಲ್ಲಿ ಹೊಸ ಟೆಸ್ಟ್ ತಂಡ ಕಟ್ಟಲು ಬಿಸಿಸಿಐ ಪ್ಲಾನ್ ಮಾಡ್ತಿದೆ. ಅದರ ಮುಂದುವರಿದ ಭಾಗವಾಗಿ 20 ಯುವ ಆಟಗಾರರನ್ನು ಕರೆಸಿಕೊಂಡಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
WTC ಫೈನಲ್ ಸೋಲಿನ ಬಳಿಕ ಬಿಸಿಸಿಐ ಪ್ಲಾನ್ ಚೇಂಜ್
ಸಚಿನ್ ಪುತ್ರ ಅರ್ಜುನ್ ಬಂದಿದ್ದಾರಾ ಬೆಂಗಳೂರಿಗೆ..?
ವಿವಿಎಸ್ ಲಕ್ಷ್ಮಣ್ಗೆ ಮುಂದೆ ಬಿಗ್ ಟಾಸ್ಕ್..!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ 20 ಯುವ ಆಲ್ರೌಂಡರ್ಗಳಿಗೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಗೆ ಬರುವಂತೆ ಕರೆ ನೀಡಿದೆ. ಮೂರು ವಾರಗಳ ಶಿಬಿರಕ್ಕೆ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಅರ್ಜನ್ ತೆಂಡೂಲ್ಕರ್ ಸೇರಿದಂತೆ ಕೆಲ ಯುವ ಆಟಗಾರರಿಗೆ ಬುಲಾವ್ ನೀಡಿದೆ.
ಇದನ್ನು ಓದಿ: ವೆಸ್ಟ್ ಇಂಡೀಸ್ ವಿರುದ್ಧ ಸೀರೀಸ್.. ಟೀಂ ಇಂಡಿಯಾಗೆ ಬಿಗ್ ಶಾಕ್.. ಮತ್ತೆ ಕೈಕೊಟ್ಟ ಸ್ಟಾರ್ ಪ್ಲೇಯರ್!
ಮುಂದಿನ ಕ್ರಿಕೆಟ್ ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ರಿಪ್ಲೇಸ್ಮೆಂಟ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರರನ್ನ ಗುರುತಿಸಿ ಈಗ ಬಿಸಿಸಿಐ ಆಹ್ವಾನ ನೀಡಿದೆ. ಅರ್ಜುನ್ ತೆಂಡುಲ್ಕರ್, ಹರ್ಷಿತ್ ರಾಣಾ ಒಳಗೊಂಡ ಆಟಗಾರರಿಗೆ ಬೆಂಗಳೂರಿಗೆ ಬರುವಂತೆ ಹೇಳಲಾಗಿದೆ. ಭಾರತದ ತಂಡದ ಮಾಜಿ ಆಟಗಾರ ಹಾಗೂ NCA ಆಧ್ಯಕ್ಷ ವಿವಿಎಸ್ ಲಕ್ಷ್ಮಣ್, ಅಂಡರ್-23 ಏಷ್ಯಾಕಪ್ ದೃಷ್ಟಿಯಲ್ಲಿಟ್ಟುಕೊಂಡು 20 ದಿನ ಅಂದರೆ ಮೂರು ವಾರಗಳ ಕ್ಯಾಂಪ್ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಈ ಕ್ಯಾಂಪ್ನಲ್ಲಿ ಕೆಲ ಆಲ್ರೌಂಡರ್ಗಳಿಗೂ ಕರೆ ನೀಡಲಾಗಿದ್ದು ಅರ್ಜುನ್ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಜೂನ್ 7 ರಿಂದ 11ವರೆಗೆ ನಡೆದಿತ್ತು. ಈ ಮೆಗಾ ಟೂರ್ನಿಯಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿದೆ. ಸೋಲು ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನ ಶುರುವಾಗಿದೆ. ಯುವಕರ ನೇತೃತ್ವದಲ್ಲಿ ಹೊಸ ಟೆಸ್ಟ್ ತಂಡ ಕಟ್ಟಲು ಬಿಸಿಸಿಐ ಪ್ಲಾನ್ ಮಾಡ್ತಿದೆ. ಅದರ ಮುಂದುವರಿದ ಭಾಗವಾಗಿ 20 ಯುವ ಆಟಗಾರರನ್ನು ಕರೆಸಿಕೊಂಡಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ