ವಿಶ್ವಕಪ್ ಟ್ರೋಫಿ ಗೆಲುವಿನ ಕನವರಿಕೆಯಲ್ಲಿ ರೋಹಿತ್.!
ಹಿಟ್ಮ್ಯಾನ್ಗೆ ಟ್ರೋಫಿಗೆ ಮುತ್ತಿಕ್ಕುವ ಹಂಬಲ
ಮಾನಸಿಕವಾಗಿ ಸಿದ್ಧರಾಗ್ತಿದ್ದಾರಂತೆ ಮುಂಬೈಕರ್
ಪ್ರತಿಷ್ಠೆಯ ಏಷ್ಯಾಕಪ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಪಾಕ್ ವಿರುದ್ಧದ ಹೈವೋಲ್ಟೆಜ್ ಕದನದೊಂದಿಗೆ ಟೀಮ್ ಇಂಡಿಯಾದ ಅಭಿಯಾನ ಶನಿವಾರದಿಂದ ಆರಂಭವಾಗಲಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಟಾರ್ಗೆಟ್ ಏಷ್ಯಾಕಪ್ ಅಲ್ಲವೇ ಅಲ್ಲ. ಹಿಟ್ಮ್ಯಾನ್ ಶರ್ಮಾ ದೊಡ್ಡ ಕನಸನ್ನ ನನಸು ಮಾಡಿಕೊಳ್ಳಲು ಪಣ ತೊಟ್ಟಿದ್ದಾರೆ.
ಭಾರತ – ಪಾಕಿಸ್ತಾನ ನಡುವೆ ಶನಿವಾರ ನಡೆಯಲಿರೋ ಹೈವೋಲ್ಟೆಜ್ ಕದನದತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಬದ್ಧವೈರಿಗಳ ಕದನದಲ್ಲಿ ಗೆದ್ದು ಬೀಗಲಿ ಅನ್ನೋದ್ರ ಜೊತೆಗೆ ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಜಯಿಸಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಟಾರ್ಗೆಟ್ ಬೇರೆನೆ ಇದೆ.
ಏಷ್ಯಾಕಪ್ ಅಲ್ಲ.. ರೋಹಿತ್ ಟಾರ್ಗೆಟ್ ಬೇರೆನೇ..
‘Marna tho marna dinosaurs ko marna’ ಅನ್ನೋ ಮಾತಿದೆ. ಸದ್ಯ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮನಸ್ಥಿತಿಯೂ ಹಾಗೇ ಇದೆ. ಏಷ್ಯಾಕಪ್ ಟೂರ್ನಿಯಲ್ಲಿ ಇನ್ನು 3 ದಿನದಲ್ಲಿ ಟೀಮ್ ಇಂಡಿಯಾ ಅಭಿಯಾನ ಆರಂಭವಾಗಲಿದೆ. ಪಾಕಿಸ್ತಾನ ವಿರುದ್ಧ ಹೈ ಪ್ರೆಶರ್ ಗೇಮ್ ಆಡಬೇಕಿದೆ. ಆದ್ರೆ, ರೋಹಿತ್ ಶರ್ಮಾ ಮಾತ್ರ ವಿಶ್ವಕಪ್ ಟೂರ್ನಿಯ ಕನವರಿಕೆಯಲ್ಲಿದ್ದಾರೆ.
ಟ್ರೋಫಿಗೆ ಮುತ್ತಿಕ್ಕುವ ಹಂಬಲದಲ್ಲಿ ಹಿಟ್ಮ್ಯಾನ್.!
ಟೀಮ್ ಇಂಡಿಯಾ ಈ ಹಿಂದೆ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ತಂಡದಿಂದ ಡ್ರಾಪ್ ಆಗಿದ್ರು. ಇದೀಗ 12 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಪ್ರತಿಷ್ಠೆಯ ಟೂರ್ನಿ ನಡೀತಾ ಇದ್ದು, ಈಗ ರೋಹಿತ್ ಶರ್ಮಾನೇ ಕ್ಯಾಪ್ಟನ್ ಆಗಿದ್ದಾರೆ. ಈ ಬಾರಿ ತವರಿನಂಗಳಲ್ಲಿ ಟ್ರೋಫಿಗೆ ಮುತ್ತಿಕ್ಕಬೇಕು ಅನ್ನೋದು ಹಿಟ್ಮ್ಯಾನ್ ಹಂಬಲ.!
2019ರ ವಿಶ್ವಕಪ್ ಮಂತ್ರ ಪಠಿಸಿದ ರೋಹಿತ್.!
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಿಲ್ಲ.. ಆದ್ರೆ, ರೋಹಿತ್ ಶರ್ಮಾ ರೌದ್ರಾವತಾರ ವಿಶ್ವದ ಗಮನ ಸೆಳೆದಿತ್ತು. ಆಂಗ್ಲರ ನಾಡಲ್ಲಿ ಘರ್ಜಿಸಿದ್ದ ಹಿಟ್ಮ್ಯಾನ್, ಬರೋಬ್ಬರಿ 5 ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ರು. ಹಿಟ್ಮ್ಯಾನ್ ಬ್ಯಾಟಿಂಗ್ ಅಬ್ಬರದ ಮುಂದೆ ಬೌಲರ್ಗಳು, ಕಂಗಾಲ್ ಆದ್ರೆ, ಎದುರಾಳಿಗಳು ಥಂಡಾ ಆಗಿದ್ರು.
ಕಳೆದ ವಿಶ್ವಕಪ್ನಲ್ಲಿ ಆರ್ಭಟಿಸಿದ ರೋಹಿತ್, ಈ ಬಾರಿ ತವರಿನಂಗಳದಲ್ಲಿ ಮಿಂಚೋ ಇರಾದೆಯಲ್ಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸ್ತಿರುವ ಕ್ಯಾಪ್ಟನ್, ಮೆಂಟಲಿ ಫುಲ್ ಫಿಟ್ ಆಗೋ ಲೆಕ್ಕಾಚಾರದಲ್ಲಿದ್ದಾರಂತೆ. ಈ ಹಿಂದೆ 2019ರ ವಿಶ್ವಕಪ್ಗೂ ಮುನ್ನ ಹೇಗಿದ್ರೂ, ಹಾಗೆ ಇರೋಕೆ ಪ್ರಯತ್ನ ಪಡ್ತಿದ್ದಾರಂತೆ.
2019ರ ವಿಶ್ವಕಪ್ಗೂ ಮುನ್ನ ಇದ್ದಂತೆ ಇರಲು ಯತ್ನ
‘ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಇದ್ದರೂ ಹೊರಗಿನ ಅಂಶಗಳು ನನ್ನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇನೆ. ನಾನು 2019ರ ವಿಶ್ವಕಪ್ಗೂ ಮುನ್ನ ಹೇಗಿದ್ದೆನೋ ಹಾಗಿರಲು ಬಯಸುತ್ತಿದ್ದೇನೆ. ಆಗ ನಾನು ಉತ್ತಮ ಮೈಂಡ್ಸೆಟ್ ಹೊಂದಿದ್ದೆ. ಆಗ ಏನೆಲ್ಲಾ ಸರಿ ಮಾಡಿದ್ದೆನೋ ಅವುಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ಆದೇ ರೀತಿಯಲ್ಲಿ ಇರಲು ಪ್ರಯತ್ನ ಪಡ್ತಿದ್ದೇನೆ’
ರೋಹಿತ್ ಶರ್ಮಾ, ನಾಯಕ
ಕೇವಲ ಮಾತಿನಲ್ಲಿ ಮಾತ್ರವಲ್ಲ, ಹೇಳಿದಂತೆ ಇರೋದಕ್ಕೂ ರೋಹಿತ್ ಪ್ರಯತ್ನ ಪಡ್ತಿದ್ದಾರೆ. 2019ರ ವಿಶ್ವಕಪ್ಗೂ ಮುನ್ನ ತಿರುಪತಿ ತಿಮ್ಮಪ್ಪನ ಆಶಿರ್ವಾದ ಪಡೆದು ಬಂದಿದ್ದ ಹಿಟ್ಮ್ಯಾನ್, ಈಗಲೂ ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರಾಕ್ಟೀಸ್ ಕ್ಯಾಂಪ್ ಕೂಲ್ & ಕಾಮ್ ನಡೆಯಿಂದ ಗಮನ ಸೆಳೆದಿದ್ದಾರೆ.
ವಿಶ್ವಕಪ್ ರೋಹಿತ್ ಪಾಲಿಗೆ ಅಗ್ನಿಪರೀಕ್ಷೆಯ ಕಣ.!
ಐಪಿಎಲ್ನಲ್ಲಿ ಯಶಸ್ವಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಫ್ಲಾಪ್ ಆಗಿದ್ದಾರೆ. ನಾಯಕನಾದ ಬಳಿಕ ಏಷ್ಯಾಕಪ್, ಟಿ20 ವಿಶ್ವಕಪ್ ಸೇರಿದಂತೆ ಮಹತ್ವದ ಟೂರ್ನಿಗಳಲ್ಲಿ ತಂಡ ಮುಗ್ಗರಿಸಿದೆ. ಹೀಗಾಗಿ ರೋಹಿತ್ ಮೇಲೆ ಹೆಚ್ಚಿನ ಒತ್ತಡ ಇದ್ದು, ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವಕಪ್ ಟ್ರೋಫಿ ಗೆಲುವಿನ ಕನವರಿಕೆಯಲ್ಲಿ ರೋಹಿತ್.!
ಹಿಟ್ಮ್ಯಾನ್ಗೆ ಟ್ರೋಫಿಗೆ ಮುತ್ತಿಕ್ಕುವ ಹಂಬಲ
ಮಾನಸಿಕವಾಗಿ ಸಿದ್ಧರಾಗ್ತಿದ್ದಾರಂತೆ ಮುಂಬೈಕರ್
ಪ್ರತಿಷ್ಠೆಯ ಏಷ್ಯಾಕಪ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಪಾಕ್ ವಿರುದ್ಧದ ಹೈವೋಲ್ಟೆಜ್ ಕದನದೊಂದಿಗೆ ಟೀಮ್ ಇಂಡಿಯಾದ ಅಭಿಯಾನ ಶನಿವಾರದಿಂದ ಆರಂಭವಾಗಲಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಟಾರ್ಗೆಟ್ ಏಷ್ಯಾಕಪ್ ಅಲ್ಲವೇ ಅಲ್ಲ. ಹಿಟ್ಮ್ಯಾನ್ ಶರ್ಮಾ ದೊಡ್ಡ ಕನಸನ್ನ ನನಸು ಮಾಡಿಕೊಳ್ಳಲು ಪಣ ತೊಟ್ಟಿದ್ದಾರೆ.
ಭಾರತ – ಪಾಕಿಸ್ತಾನ ನಡುವೆ ಶನಿವಾರ ನಡೆಯಲಿರೋ ಹೈವೋಲ್ಟೆಜ್ ಕದನದತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಬದ್ಧವೈರಿಗಳ ಕದನದಲ್ಲಿ ಗೆದ್ದು ಬೀಗಲಿ ಅನ್ನೋದ್ರ ಜೊತೆಗೆ ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಜಯಿಸಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಟಾರ್ಗೆಟ್ ಬೇರೆನೆ ಇದೆ.
ಏಷ್ಯಾಕಪ್ ಅಲ್ಲ.. ರೋಹಿತ್ ಟಾರ್ಗೆಟ್ ಬೇರೆನೇ..
‘Marna tho marna dinosaurs ko marna’ ಅನ್ನೋ ಮಾತಿದೆ. ಸದ್ಯ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮನಸ್ಥಿತಿಯೂ ಹಾಗೇ ಇದೆ. ಏಷ್ಯಾಕಪ್ ಟೂರ್ನಿಯಲ್ಲಿ ಇನ್ನು 3 ದಿನದಲ್ಲಿ ಟೀಮ್ ಇಂಡಿಯಾ ಅಭಿಯಾನ ಆರಂಭವಾಗಲಿದೆ. ಪಾಕಿಸ್ತಾನ ವಿರುದ್ಧ ಹೈ ಪ್ರೆಶರ್ ಗೇಮ್ ಆಡಬೇಕಿದೆ. ಆದ್ರೆ, ರೋಹಿತ್ ಶರ್ಮಾ ಮಾತ್ರ ವಿಶ್ವಕಪ್ ಟೂರ್ನಿಯ ಕನವರಿಕೆಯಲ್ಲಿದ್ದಾರೆ.
ಟ್ರೋಫಿಗೆ ಮುತ್ತಿಕ್ಕುವ ಹಂಬಲದಲ್ಲಿ ಹಿಟ್ಮ್ಯಾನ್.!
ಟೀಮ್ ಇಂಡಿಯಾ ಈ ಹಿಂದೆ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ತಂಡದಿಂದ ಡ್ರಾಪ್ ಆಗಿದ್ರು. ಇದೀಗ 12 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಪ್ರತಿಷ್ಠೆಯ ಟೂರ್ನಿ ನಡೀತಾ ಇದ್ದು, ಈಗ ರೋಹಿತ್ ಶರ್ಮಾನೇ ಕ್ಯಾಪ್ಟನ್ ಆಗಿದ್ದಾರೆ. ಈ ಬಾರಿ ತವರಿನಂಗಳಲ್ಲಿ ಟ್ರೋಫಿಗೆ ಮುತ್ತಿಕ್ಕಬೇಕು ಅನ್ನೋದು ಹಿಟ್ಮ್ಯಾನ್ ಹಂಬಲ.!
2019ರ ವಿಶ್ವಕಪ್ ಮಂತ್ರ ಪಠಿಸಿದ ರೋಹಿತ್.!
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಿಲ್ಲ.. ಆದ್ರೆ, ರೋಹಿತ್ ಶರ್ಮಾ ರೌದ್ರಾವತಾರ ವಿಶ್ವದ ಗಮನ ಸೆಳೆದಿತ್ತು. ಆಂಗ್ಲರ ನಾಡಲ್ಲಿ ಘರ್ಜಿಸಿದ್ದ ಹಿಟ್ಮ್ಯಾನ್, ಬರೋಬ್ಬರಿ 5 ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ರು. ಹಿಟ್ಮ್ಯಾನ್ ಬ್ಯಾಟಿಂಗ್ ಅಬ್ಬರದ ಮುಂದೆ ಬೌಲರ್ಗಳು, ಕಂಗಾಲ್ ಆದ್ರೆ, ಎದುರಾಳಿಗಳು ಥಂಡಾ ಆಗಿದ್ರು.
ಕಳೆದ ವಿಶ್ವಕಪ್ನಲ್ಲಿ ಆರ್ಭಟಿಸಿದ ರೋಹಿತ್, ಈ ಬಾರಿ ತವರಿನಂಗಳದಲ್ಲಿ ಮಿಂಚೋ ಇರಾದೆಯಲ್ಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸ್ತಿರುವ ಕ್ಯಾಪ್ಟನ್, ಮೆಂಟಲಿ ಫುಲ್ ಫಿಟ್ ಆಗೋ ಲೆಕ್ಕಾಚಾರದಲ್ಲಿದ್ದಾರಂತೆ. ಈ ಹಿಂದೆ 2019ರ ವಿಶ್ವಕಪ್ಗೂ ಮುನ್ನ ಹೇಗಿದ್ರೂ, ಹಾಗೆ ಇರೋಕೆ ಪ್ರಯತ್ನ ಪಡ್ತಿದ್ದಾರಂತೆ.
2019ರ ವಿಶ್ವಕಪ್ಗೂ ಮುನ್ನ ಇದ್ದಂತೆ ಇರಲು ಯತ್ನ
‘ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಇದ್ದರೂ ಹೊರಗಿನ ಅಂಶಗಳು ನನ್ನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇನೆ. ನಾನು 2019ರ ವಿಶ್ವಕಪ್ಗೂ ಮುನ್ನ ಹೇಗಿದ್ದೆನೋ ಹಾಗಿರಲು ಬಯಸುತ್ತಿದ್ದೇನೆ. ಆಗ ನಾನು ಉತ್ತಮ ಮೈಂಡ್ಸೆಟ್ ಹೊಂದಿದ್ದೆ. ಆಗ ಏನೆಲ್ಲಾ ಸರಿ ಮಾಡಿದ್ದೆನೋ ಅವುಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ಆದೇ ರೀತಿಯಲ್ಲಿ ಇರಲು ಪ್ರಯತ್ನ ಪಡ್ತಿದ್ದೇನೆ’
ರೋಹಿತ್ ಶರ್ಮಾ, ನಾಯಕ
ಕೇವಲ ಮಾತಿನಲ್ಲಿ ಮಾತ್ರವಲ್ಲ, ಹೇಳಿದಂತೆ ಇರೋದಕ್ಕೂ ರೋಹಿತ್ ಪ್ರಯತ್ನ ಪಡ್ತಿದ್ದಾರೆ. 2019ರ ವಿಶ್ವಕಪ್ಗೂ ಮುನ್ನ ತಿರುಪತಿ ತಿಮ್ಮಪ್ಪನ ಆಶಿರ್ವಾದ ಪಡೆದು ಬಂದಿದ್ದ ಹಿಟ್ಮ್ಯಾನ್, ಈಗಲೂ ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರಾಕ್ಟೀಸ್ ಕ್ಯಾಂಪ್ ಕೂಲ್ & ಕಾಮ್ ನಡೆಯಿಂದ ಗಮನ ಸೆಳೆದಿದ್ದಾರೆ.
ವಿಶ್ವಕಪ್ ರೋಹಿತ್ ಪಾಲಿಗೆ ಅಗ್ನಿಪರೀಕ್ಷೆಯ ಕಣ.!
ಐಪಿಎಲ್ನಲ್ಲಿ ಯಶಸ್ವಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಫ್ಲಾಪ್ ಆಗಿದ್ದಾರೆ. ನಾಯಕನಾದ ಬಳಿಕ ಏಷ್ಯಾಕಪ್, ಟಿ20 ವಿಶ್ವಕಪ್ ಸೇರಿದಂತೆ ಮಹತ್ವದ ಟೂರ್ನಿಗಳಲ್ಲಿ ತಂಡ ಮುಗ್ಗರಿಸಿದೆ. ಹೀಗಾಗಿ ರೋಹಿತ್ ಮೇಲೆ ಹೆಚ್ಚಿನ ಒತ್ತಡ ಇದ್ದು, ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ