ಕಮರಿ ಹೋಯಿತು ಆಟಗಾರರ ಏಷ್ಯಾಕಪ್ ಆಡೋ ಕನಸು
ವಿಶ್ವಕಪ್ ತಂಡದಲ್ಲಿ ಸ್ಥಾನವಿಲ್ಲ ಅನ್ನೋದು ಈಗ ಕನ್ಫರ್ಮ್
ಭುವನೇಶ್ವರ್ ಕುಮಾರ್ ಕ್ರಿಕೆಟ್ ಕರಿಯರ್ ಮುಗಿಯಿತಾ..?
ಏಷ್ಯಾಕಪ್ ಮಹಾ ಸಮರಕ್ಕೆ ಟೀಮ್ ಅನೌನ್ಸ್ ಆಗೋದ್ರೊಂದಿಗೆ ಇಷ್ಟು ದಿನ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇದ್ರ ಜೊತೆಗೆ ಹಲವು ಆಟಗಾರರ ಕರಿಯರ್ಗೂ ಕೊನೆ ಮೊಳೆ ಬಿದ್ದಿದೆ. ಇನ್ನು, ಕೆಲವರ ಕರಿಯರ್ ಅಂತೂ ಅತಂತ್ರಕ್ಕೆ ಸಿಲುಕಿ ಬಿಟ್ಟಿದೆ.
ಏಷ್ಯಾಕಪ್ ಟೂರ್ನಿಗೆ ಯಾವಾಗ ಟೀಮ್ ಅನೌನ್ಸ್ ಆಗುತ್ತೆ.? ಅನ್ನೋ ಬಹುದಿನದ ಪ್ರಶ್ನೆಗೆ ಕೊನೆಗೂ ತೆರೆಬಿದ್ದಿದೆ. ಸುಮಾರು ಒಂದೂವರೆ ಗಂಟೆ ಹೈವೋಲ್ಟೆಜ್ ಮೀಟಿಂಗ್ ನಡೆಸಿದ ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ. ಚಾನ್ಸ್ ಗಿಟ್ಟಿಸಿಕೊಂಡವರೂ ಫುಲ್ ಜೋಷ್ನಲ್ಲಿದ್ರೆ, ಚಾನ್ಸ್ ಮಿಸ್ ಮಾಡಿಕೊಂಡ ಕಥೆ ಅಡಕತ್ತರಿಗೆ ಸಿಲುಕಿದೆ.
ಶಿಖರ್ ಧವನ್ ಕರಿಯರ್ಗೆ ಫುಲ್ ಸ್ಟಾಫ್.?
ರೇಸ್ನಲ್ಲಿ ಮುಂಚೂಣಿಯಲ್ಲಿರಲಿಲ್ಲ. ಹಾಗಿದ್ರೂ, ಧವನ್ ಸ್ಥಾನ ಸಿಗಬಹುದು ಅನ್ನೋ ಟಾಕ್ ಸಣ್ಣಮಟ್ಟಿಗೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಶಿಖರ್ ಧವನ್ ಕರಿಯರ್ಗೂ ಬಹುತೇಕ ಫುಲ್ಸ್ಟಾಫ್ ಬಿದ್ದಂತಾಗಿದೆ.
ಯುಜುವೇಂದ್ರ ಚಹಲ್ ಭವಿಷ್ಯ ಅತಂತ್ರ.!
ಏಷ್ಯಾಕಪ್ ತಂಡದ ಆಯ್ಕೆ ರೇಸ್ನಲ್ಲಿ ಕುಲ್ದೀಪ್ ಯಾದವ್, ಸ್ಪಿನ್ನರ್ ಯುಜುವೇಂದ್ರ ಚಹಲ್ರನ್ನ ಓವರ್ಟೇಕ್ ಮಾಡಿದ್ದಾರೆ. ಇದ್ರೊಂದಿಗೆ ಚಹಲ್ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ನಿಜ ಹೇಳಬೇಕು ಅಂದ್ರೆ, ವೈಟ್ಬಾಲ್ ಸ್ಪೆಷಲಿಸ್ಟ್ ಅನ್ನೋ ಟ್ಯಾಗ್ ಲೈನ್ ಇದ್ರೂ, ಫೀಲ್ಡಿಂಗ್, ಬ್ಯಾಟಿಂಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸ್ತಾ ಇರೋ ಚಹಲ್ ಕರಿಯರ್ ಅಡಕತ್ತರಿಗೆ ಸಿಲುಕಿದೆ.
ಅಶ್ವಿನ್ ಪಾಲಿಗೆ ಏಕದಿನ ಡೋರ್ ಕ್ಲೋಸ್.?
ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇದ್ರೊಂದಿಗೆ ವಿಶ್ವಕಪ್ ತಂಡದಲ್ಲೂ ಸ್ಥಾನ ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿದ್ದು, ಬಹುತೇಕ ಏಕದಿನ ಕರಿಯರ್ ಅಂತ್ಯ ಕಂಡಂತಾಗಿದೆ.
ಭುವನೇಶ್ವರ್ ಕುಮಾರ್ ಕರಿಯರ್ ಖತಂ.?
ಕಳೆದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಿಂದ ಮರೆಯಾಗಿರುವ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ಕಮ್ಬ್ಯಾಕ್ ಮಾಡಲು ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಭುವನೇಶ್ವರ್ ಕುಮಾರ್ರನ್ನ ಬಿಟ್ಟು ಮುಂದೆ ಸಾಗಿದಂತಿದೆ. ಇದೀಗ ಏಷ್ಯಾಕಪ್ನಿಂದ ಹೊರ ಬಿದ್ದಿರೋ ಭುವಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗೋದು ಡೌಟ್.
ಅಡಕತ್ತರಿಗೆ ಸಿಲುಕಿದ ಹಲವರ ಭವಿಷ್ಯ..!
ಹಲವರ ಕರಿಯರ್ಗೆ ಕೊನೆ ಮೊಳೆ ಬಿದ್ದಿದ್ರೆ, ಇನ್ನು ಕೆಲವರ ಕರಿಯರ್ ಅತಂತ್ರಕ್ಕೆ ಸಿಲುಕಿದೆ. ಇವ್ರ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಡೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತಾಗಿದೆ. ವಿಶ್ವಕಪ್ ಟೂರ್ನಿಯನ್ನಾಡೋ ಕನಸು ಕೂಡ ಕಮರಿದೆ.
ಅತಂತ್ರಕ್ಕೆ ಸಿಲುಕಿದ ಆಟಗಾರರು
ಅಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಯಂಗ್ ಬ್ಯಾಟ್ಸ್ಮನ್ಋತುರಾಜ್ ಗಾಯಕ್ವಾಡ್ ಹಾಗೂ ಕೆಲವೇ ಪಂದ್ಯಗಳಿಗೆ ಸೀಮಿತವಾದ ದೀಪಕ್ ಹೂಡ ಭವಿಷ್ಯ ಸದ್ಯ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು, ರವಿ ಬಿಷ್ನೋಯಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ 2ND STRING ಟೀಮ್ಗೆ ಮಾತ್ರ ಸೀಮಿತವಾದಂತೆ ಕಾಣ್ತಿದೆ. ಇನ್ನು ಆವೇಶ್ ಖಾನ್, ಆರ್ಷ್ದೀಪ್ ಸಿಂಗ್, ದೀಪಕ್ ಚಹರ್ ಭವಿಷ್ಯ ಕೂಡ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಅನೌನ್ಸ್ ಆಗೋದ್ರೊಂದಿಗೆ ಪ್ರಮುಖ ಆಟಗಾರರ ವಿಶ್ವಕಪ್ ಆಡೋ ಕನಸು ಕಮರಿದ್ರೆ, ಇನ್ನು ಹಲವರ ಪಾಲಿಗೆ ಭವಿಷ್ಯ ದೊಡ್ಡ ಕೊಶ್ಚನ್ ಮಾರ್ಕ್ ಆಗುಳಿದಿದೆ. ಇದಕ್ಕೆ ಉತ್ತರ ಮುಂಬರುವ ವಿಶ್ವಕಪ್ ಮುಗಿರೋವರೆಗೂ ಸಿಗೋದೂ ಅನುಮಾನವೇ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕಮರಿ ಹೋಯಿತು ಆಟಗಾರರ ಏಷ್ಯಾಕಪ್ ಆಡೋ ಕನಸು
ವಿಶ್ವಕಪ್ ತಂಡದಲ್ಲಿ ಸ್ಥಾನವಿಲ್ಲ ಅನ್ನೋದು ಈಗ ಕನ್ಫರ್ಮ್
ಭುವನೇಶ್ವರ್ ಕುಮಾರ್ ಕ್ರಿಕೆಟ್ ಕರಿಯರ್ ಮುಗಿಯಿತಾ..?
ಏಷ್ಯಾಕಪ್ ಮಹಾ ಸಮರಕ್ಕೆ ಟೀಮ್ ಅನೌನ್ಸ್ ಆಗೋದ್ರೊಂದಿಗೆ ಇಷ್ಟು ದಿನ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇದ್ರ ಜೊತೆಗೆ ಹಲವು ಆಟಗಾರರ ಕರಿಯರ್ಗೂ ಕೊನೆ ಮೊಳೆ ಬಿದ್ದಿದೆ. ಇನ್ನು, ಕೆಲವರ ಕರಿಯರ್ ಅಂತೂ ಅತಂತ್ರಕ್ಕೆ ಸಿಲುಕಿ ಬಿಟ್ಟಿದೆ.
ಏಷ್ಯಾಕಪ್ ಟೂರ್ನಿಗೆ ಯಾವಾಗ ಟೀಮ್ ಅನೌನ್ಸ್ ಆಗುತ್ತೆ.? ಅನ್ನೋ ಬಹುದಿನದ ಪ್ರಶ್ನೆಗೆ ಕೊನೆಗೂ ತೆರೆಬಿದ್ದಿದೆ. ಸುಮಾರು ಒಂದೂವರೆ ಗಂಟೆ ಹೈವೋಲ್ಟೆಜ್ ಮೀಟಿಂಗ್ ನಡೆಸಿದ ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ. ಚಾನ್ಸ್ ಗಿಟ್ಟಿಸಿಕೊಂಡವರೂ ಫುಲ್ ಜೋಷ್ನಲ್ಲಿದ್ರೆ, ಚಾನ್ಸ್ ಮಿಸ್ ಮಾಡಿಕೊಂಡ ಕಥೆ ಅಡಕತ್ತರಿಗೆ ಸಿಲುಕಿದೆ.
ಶಿಖರ್ ಧವನ್ ಕರಿಯರ್ಗೆ ಫುಲ್ ಸ್ಟಾಫ್.?
ರೇಸ್ನಲ್ಲಿ ಮುಂಚೂಣಿಯಲ್ಲಿರಲಿಲ್ಲ. ಹಾಗಿದ್ರೂ, ಧವನ್ ಸ್ಥಾನ ಸಿಗಬಹುದು ಅನ್ನೋ ಟಾಕ್ ಸಣ್ಣಮಟ್ಟಿಗೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಶಿಖರ್ ಧವನ್ ಕರಿಯರ್ಗೂ ಬಹುತೇಕ ಫುಲ್ಸ್ಟಾಫ್ ಬಿದ್ದಂತಾಗಿದೆ.
ಯುಜುವೇಂದ್ರ ಚಹಲ್ ಭವಿಷ್ಯ ಅತಂತ್ರ.!
ಏಷ್ಯಾಕಪ್ ತಂಡದ ಆಯ್ಕೆ ರೇಸ್ನಲ್ಲಿ ಕುಲ್ದೀಪ್ ಯಾದವ್, ಸ್ಪಿನ್ನರ್ ಯುಜುವೇಂದ್ರ ಚಹಲ್ರನ್ನ ಓವರ್ಟೇಕ್ ಮಾಡಿದ್ದಾರೆ. ಇದ್ರೊಂದಿಗೆ ಚಹಲ್ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ನಿಜ ಹೇಳಬೇಕು ಅಂದ್ರೆ, ವೈಟ್ಬಾಲ್ ಸ್ಪೆಷಲಿಸ್ಟ್ ಅನ್ನೋ ಟ್ಯಾಗ್ ಲೈನ್ ಇದ್ರೂ, ಫೀಲ್ಡಿಂಗ್, ಬ್ಯಾಟಿಂಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸ್ತಾ ಇರೋ ಚಹಲ್ ಕರಿಯರ್ ಅಡಕತ್ತರಿಗೆ ಸಿಲುಕಿದೆ.
ಅಶ್ವಿನ್ ಪಾಲಿಗೆ ಏಕದಿನ ಡೋರ್ ಕ್ಲೋಸ್.?
ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇದ್ರೊಂದಿಗೆ ವಿಶ್ವಕಪ್ ತಂಡದಲ್ಲೂ ಸ್ಥಾನ ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿದ್ದು, ಬಹುತೇಕ ಏಕದಿನ ಕರಿಯರ್ ಅಂತ್ಯ ಕಂಡಂತಾಗಿದೆ.
ಭುವನೇಶ್ವರ್ ಕುಮಾರ್ ಕರಿಯರ್ ಖತಂ.?
ಕಳೆದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಿಂದ ಮರೆಯಾಗಿರುವ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ಕಮ್ಬ್ಯಾಕ್ ಮಾಡಲು ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಭುವನೇಶ್ವರ್ ಕುಮಾರ್ರನ್ನ ಬಿಟ್ಟು ಮುಂದೆ ಸಾಗಿದಂತಿದೆ. ಇದೀಗ ಏಷ್ಯಾಕಪ್ನಿಂದ ಹೊರ ಬಿದ್ದಿರೋ ಭುವಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗೋದು ಡೌಟ್.
ಅಡಕತ್ತರಿಗೆ ಸಿಲುಕಿದ ಹಲವರ ಭವಿಷ್ಯ..!
ಹಲವರ ಕರಿಯರ್ಗೆ ಕೊನೆ ಮೊಳೆ ಬಿದ್ದಿದ್ರೆ, ಇನ್ನು ಕೆಲವರ ಕರಿಯರ್ ಅತಂತ್ರಕ್ಕೆ ಸಿಲುಕಿದೆ. ಇವ್ರ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಡೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತಾಗಿದೆ. ವಿಶ್ವಕಪ್ ಟೂರ್ನಿಯನ್ನಾಡೋ ಕನಸು ಕೂಡ ಕಮರಿದೆ.
ಅತಂತ್ರಕ್ಕೆ ಸಿಲುಕಿದ ಆಟಗಾರರು
ಅಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಯಂಗ್ ಬ್ಯಾಟ್ಸ್ಮನ್ಋತುರಾಜ್ ಗಾಯಕ್ವಾಡ್ ಹಾಗೂ ಕೆಲವೇ ಪಂದ್ಯಗಳಿಗೆ ಸೀಮಿತವಾದ ದೀಪಕ್ ಹೂಡ ಭವಿಷ್ಯ ಸದ್ಯ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು, ರವಿ ಬಿಷ್ನೋಯಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್ 2ND STRING ಟೀಮ್ಗೆ ಮಾತ್ರ ಸೀಮಿತವಾದಂತೆ ಕಾಣ್ತಿದೆ. ಇನ್ನು ಆವೇಶ್ ಖಾನ್, ಆರ್ಷ್ದೀಪ್ ಸಿಂಗ್, ದೀಪಕ್ ಚಹರ್ ಭವಿಷ್ಯ ಕೂಡ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಅನೌನ್ಸ್ ಆಗೋದ್ರೊಂದಿಗೆ ಪ್ರಮುಖ ಆಟಗಾರರ ವಿಶ್ವಕಪ್ ಆಡೋ ಕನಸು ಕಮರಿದ್ರೆ, ಇನ್ನು ಹಲವರ ಪಾಲಿಗೆ ಭವಿಷ್ಯ ದೊಡ್ಡ ಕೊಶ್ಚನ್ ಮಾರ್ಕ್ ಆಗುಳಿದಿದೆ. ಇದಕ್ಕೆ ಉತ್ತರ ಮುಂಬರುವ ವಿಶ್ವಕಪ್ ಮುಗಿರೋವರೆಗೂ ಸಿಗೋದೂ ಅನುಮಾನವೇ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ