newsfirstkannada.com

ಲಂಕಾ ಪಡೆ ವಿರುದ್ಧ ಭಾರತೀಯ ಬೌಲರ್ಸ್​ ಮ್ಯಾಜಿಕ್.. ಏಷ್ಯಾಕಪ್​ ಕನಸು ಜೀವಂತ..!

Share :

13-09-2023

    ಟೀಂ ಇಂಡಿಯಾಗೆ ಮತ್ತೊಂದು ಭರ್ಜರಿ ಗೆಲುವು

    213 ರನ್​ಗಳನ್ನು ಡಿಫೆಂಡ್ ಮಾಡಿಕೊಂಡ ಭಾರತ

    ಕುಲ್ದೀಪ್ ಮತ್ತೆ ಕಮಾಲ್, ಜಡ್ಡು, ಬುಮ್ರಾಗೂ ವಿಕೆಟ್

ಏಷ್ಯಾಕಪ್​ ಪಂದ್ಯದಲ್ಲಿ ನಿನ್ನೆ ಭಾರತ ತಂಡವು ಸಿಂಹಳಿಯರನ್ನು ಬೇಟೆಯಾಡಿದೆ. ಬರೋಬ್ಬರಿ 41 ರನ್​ಗಳ ಅಂತರದಿಂದ ರೋಹಿತ್ ಪಡೆ ಗೆದ್ದುಬೀಗಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ರೋಹಿತ್ ಪಡೆಗೆ ಲಂಕಾ ಬೌಲರ್ಸ್​ ಬಿಗ್ ಶಾಕ್ ನೀಡಿದರು.

49.1 ಓವರ್​ನಲ್ಲಿ 10 ವಿಕೆಟ್ ತೆಗೆದು ಕೇವಲ 213 ರನ್​​ಗಳಿಗೆ ಭಾರತ ತಂಡವನ್ನು ಕಟ್ಟಿ ಹಾಕಿದ್ದರು. ಕೇವಲ 213 ರನ್​ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಸವಾಲು ಟೀಂ ಇಂಡಿಯಾ ಬೌಲರ್ಸ್​​ಗಳದ್ದಾಗಿತ್ತು. ದಿಟ್ಟ ಪ್ರದರ್ಶನ ನೀಡಿದ ಭಾರತೀಯ ಬೌಲರ್ಸ್​​, 41.3 ಓವರ್​ನಲ್ಲಿ ಲಂಕಾ ಆಟಗಾರರ ಮಗ್ಗಲು ಮುರಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ 41 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು.

ಟೀಂ ಇಂಡಿಯಾ ಪರ ಪಾಕ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಯಾದವ್ ನಿನ್ನೆಯೂ ಕೂಡ ಮಿಂಚಿದರು. 4 ವಿಕೆಟ್​ಗಳನ್ನು ಕಿತ್ತು ಕಮಾಲ್ ಮಾಡಿದ್ದ ಕುಲ್ದೀಪ್​​ಗೆ ಬೂಮ್ರಾ, ಜಡೇಜಾ ಸಾಥ್ ನೀಡಿದರು. ಇವರಿಬ್ಬರು ತಲಾ ಎರಡು ವಿಕೆಟ್ ಪಡೆದು ಭಾರತದ ಗೆಲುವಿಗೆ ಸಹಕಾರಿಯಾದರು. ಜೊತೆಗೆ ಸಿರಾಜ್, ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಲಂಕಾ ಪಡೆ ವಿರುದ್ಧ ಭಾರತೀಯ ಬೌಲರ್ಸ್​ ಮ್ಯಾಜಿಕ್.. ಏಷ್ಯಾಕಪ್​ ಕನಸು ಜೀವಂತ..!

https://newsfirstlive.com/wp-content/uploads/2023/09/ROHIT-1-1.jpg

    ಟೀಂ ಇಂಡಿಯಾಗೆ ಮತ್ತೊಂದು ಭರ್ಜರಿ ಗೆಲುವು

    213 ರನ್​ಗಳನ್ನು ಡಿಫೆಂಡ್ ಮಾಡಿಕೊಂಡ ಭಾರತ

    ಕುಲ್ದೀಪ್ ಮತ್ತೆ ಕಮಾಲ್, ಜಡ್ಡು, ಬುಮ್ರಾಗೂ ವಿಕೆಟ್

ಏಷ್ಯಾಕಪ್​ ಪಂದ್ಯದಲ್ಲಿ ನಿನ್ನೆ ಭಾರತ ತಂಡವು ಸಿಂಹಳಿಯರನ್ನು ಬೇಟೆಯಾಡಿದೆ. ಬರೋಬ್ಬರಿ 41 ರನ್​ಗಳ ಅಂತರದಿಂದ ರೋಹಿತ್ ಪಡೆ ಗೆದ್ದುಬೀಗಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ರೋಹಿತ್ ಪಡೆಗೆ ಲಂಕಾ ಬೌಲರ್ಸ್​ ಬಿಗ್ ಶಾಕ್ ನೀಡಿದರು.

49.1 ಓವರ್​ನಲ್ಲಿ 10 ವಿಕೆಟ್ ತೆಗೆದು ಕೇವಲ 213 ರನ್​​ಗಳಿಗೆ ಭಾರತ ತಂಡವನ್ನು ಕಟ್ಟಿ ಹಾಕಿದ್ದರು. ಕೇವಲ 213 ರನ್​ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಸವಾಲು ಟೀಂ ಇಂಡಿಯಾ ಬೌಲರ್ಸ್​​ಗಳದ್ದಾಗಿತ್ತು. ದಿಟ್ಟ ಪ್ರದರ್ಶನ ನೀಡಿದ ಭಾರತೀಯ ಬೌಲರ್ಸ್​​, 41.3 ಓವರ್​ನಲ್ಲಿ ಲಂಕಾ ಆಟಗಾರರ ಮಗ್ಗಲು ಮುರಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ 41 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು.

ಟೀಂ ಇಂಡಿಯಾ ಪರ ಪಾಕ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಯಾದವ್ ನಿನ್ನೆಯೂ ಕೂಡ ಮಿಂಚಿದರು. 4 ವಿಕೆಟ್​ಗಳನ್ನು ಕಿತ್ತು ಕಮಾಲ್ ಮಾಡಿದ್ದ ಕುಲ್ದೀಪ್​​ಗೆ ಬೂಮ್ರಾ, ಜಡೇಜಾ ಸಾಥ್ ನೀಡಿದರು. ಇವರಿಬ್ಬರು ತಲಾ ಎರಡು ವಿಕೆಟ್ ಪಡೆದು ಭಾರತದ ಗೆಲುವಿಗೆ ಸಹಕಾರಿಯಾದರು. ಜೊತೆಗೆ ಸಿರಾಜ್, ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More