newsfirstkannada.com

ಪ್ರಯೋಗ ಮಾಡಲು ಹೋಗಿ ಸೋತ ಭಾರತ; ರೋಹಿತ್ ಪಡೆಗೆ ಬಾಂಗ್ಲಾ ವಿರುದ್ಧ ಭಾರೀ ಮುಖಭಂಗ..!

Share :

16-09-2023

    ಶುಬ್​​ಮನ್ ಗಿಲ್ ಆಮೋಘ ಶತಕ, ಆದರೆ ಗೆಲುವು ಸಿಗಲಿಲ್ಲ

    ಶಕೀಬ್ ಅವರ ಅಮೋಘ ಶತಕದಿಂದ ಬಾಂಗ್ಲಾ ತಂಡಕ್ಕೆ ಆಸರೆ

    ಮತ್ತೆ ವಿಫಲ ಬ್ಯಾಟಿಂಗ್​ ಮಾಡಿದ ಸೂರ್ಯ ಕುಮಾರ್, ತಿಲಕ್

ಕೊಲೊಂಬೋದ ಆರ್.ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಸೋಲೋಪ್ಪಿಕೊಂಡಿದೆ. ಓಪನರ್​ ಶುಭ್​ಮನ್​ ಗಿಲ್ ಶತಕ ಬಾರಿಸಿದರೂ ಗೆಲ್ಲಲು ಆಗಲಿಲ್ಲ.

2023ರ ಏಷ್ಯಾಕಪ್​ನ ಸೂಪರ್- 4 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡು ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಟೀಮ್ ಬಾಂಗ್ಲಾದೇಶವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ಸ್ ಆಗಿ ಕ್ರೀಸ್ ಆಗಮಿಸಿದ ಹಸನ್ ಮತ್ತು ಲಿಟ್ಟನ್ ದಾಸ್​ಗೆ ಭಾರತದ ಬೌಲರ್ಸ್​ ಬಹು ಬೇಗ ಪೆವಿಲಿಯನ್ ದಾರಿ ತೋರಿಸಿದರು. ನಾಯಕ ಶಕೀಬ್ ಅವರ ಚತುರತನದ ಆಟದಿಂದ 80 ರನ್​ ಸಿಡಿಸಿ ಶಾರ್ದೂಲ್​ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ತೌಹಿದ್ ಹರಿದೋಯಿ 54 ಹಾಗೂ ನಸುಮ್ ಅಹಮದ್ 44 ರನ್ ಬಾರಿಸಿ ತಂಡಕ್ಕೆ ಕಾಣಿಕೆ ನೀಡಿದರು. ಇದರಿಂದ ಬಾಂಗ್ಲಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 265 ರನ್​ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿತು.

ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತಿ ಗಿಲ್

ಈ ಗುರಿ ಬೆನ್ನಟ್ಟಿದ ಭಾರತ ತಂಡ ಪ್ರಾರಂಭದಲ್ಲಿ ಅಷ್ಟೇನೂ ಉತ್ತಮವಾಗಿ ಆಡಲಿಲ್ಲ. ಓಪನರ್ಸ್​ ಆಗಿ ಬ್ಯಾಟಿಂಗ್ ಮಾಡಲು ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಸೊನ್ನೆ ಸುತ್ತಿ ಪೆವಿಲಿಯನ್​ಗೆ ಮರಳಿದರು. ಇನ್ನೊಂದು ಕಡೆ ಗಟ್ಟಿಯಾಗಿ ನಿಂತು ಆಟ ಮುಂದುವರೆಸಿದ ಶುಭ್​ಮನ್ ಗಿಲ್ 133 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್​ ಸಮೇತ ಅದ್ಭುತವಾದ ಸಿಂಚುರಿಸಿ ಸಿಡಿಸಿದರು. ಸೂರ್ಯಕುಮಾರ್ 26, ಅಕ್ಷರ್ ಪಟೇಲ್ 44 ಇವರನ್ನು ಬಿಟ್ಟರೇ ಉಳಿದ ಭಾರತದ ಆಟಗಾರರು 20 ರ ಗಡಿ ದಾಟಲು ಹೆಣಗಾಡಿದರು. ಇದರಿಂದ ಭಾರತ 49.5 ಓವರ್​ಗೆ 10 ವಿಕೆಟ್​ಗಳನ್ನು ಕಳೆದುಕೊಂಡು 259 ರನ್​ ಮಾತ್ರ ಗಳಿಸಲು ಶಕ್ತವಾಯಿತು. ಗುರಿ ಮುಟ್ಟಲು ಇನ್ನು 6 ರನ್ ಇರುವಾಗಲೇ ಭಾರತ ಸೋಲು ಕಂಡಿತು.

ಈಗಾಗಲೇ ಭಾರತ ಏಷ್ಯಾಕಪ್​ನಲ್ಲಿ ಫೈನಲ್​ಗೆ ಪ್ರವೇಶಿಸಿದ್ದರಿಂದ ಇದೊಂದು ಔಪಚಾರಿಕ ಪಂದ್ಯವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಂಡ್ಯ, ಬೂಮ್ರಾ, ಕುಲ್​ದೀಪ್ ಯಾದವ್​, ಸಿರಾಜ್​ಗೆ ವಿಶ್ರಾಂತಿ ನೀಡಿ ಉಳಿದ ಯುವ ಆಟಗಾರರನ್ನು ಆಡಿಸಿ ಬಿಸಿಸಿಐ ಪ್ರಯೋಗ ಮಾಡಿತು. ಆದರೆ ಯಶಸ್ಸು ಕಾಣುವಲ್ಲಿ ಕೊಂಚದರಲ್ಲಿ ತಪ್ಪಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ರಯೋಗ ಮಾಡಲು ಹೋಗಿ ಸೋತ ಭಾರತ; ರೋಹಿತ್ ಪಡೆಗೆ ಬಾಂಗ್ಲಾ ವಿರುದ್ಧ ಭಾರೀ ಮುಖಭಂಗ..!

https://newsfirstlive.com/wp-content/uploads/2023/09/SHUBHMAN_GILL.jpg

    ಶುಬ್​​ಮನ್ ಗಿಲ್ ಆಮೋಘ ಶತಕ, ಆದರೆ ಗೆಲುವು ಸಿಗಲಿಲ್ಲ

    ಶಕೀಬ್ ಅವರ ಅಮೋಘ ಶತಕದಿಂದ ಬಾಂಗ್ಲಾ ತಂಡಕ್ಕೆ ಆಸರೆ

    ಮತ್ತೆ ವಿಫಲ ಬ್ಯಾಟಿಂಗ್​ ಮಾಡಿದ ಸೂರ್ಯ ಕುಮಾರ್, ತಿಲಕ್

ಕೊಲೊಂಬೋದ ಆರ್.ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಸೋಲೋಪ್ಪಿಕೊಂಡಿದೆ. ಓಪನರ್​ ಶುಭ್​ಮನ್​ ಗಿಲ್ ಶತಕ ಬಾರಿಸಿದರೂ ಗೆಲ್ಲಲು ಆಗಲಿಲ್ಲ.

2023ರ ಏಷ್ಯಾಕಪ್​ನ ಸೂಪರ್- 4 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡು ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಟೀಮ್ ಬಾಂಗ್ಲಾದೇಶವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ಸ್ ಆಗಿ ಕ್ರೀಸ್ ಆಗಮಿಸಿದ ಹಸನ್ ಮತ್ತು ಲಿಟ್ಟನ್ ದಾಸ್​ಗೆ ಭಾರತದ ಬೌಲರ್ಸ್​ ಬಹು ಬೇಗ ಪೆವಿಲಿಯನ್ ದಾರಿ ತೋರಿಸಿದರು. ನಾಯಕ ಶಕೀಬ್ ಅವರ ಚತುರತನದ ಆಟದಿಂದ 80 ರನ್​ ಸಿಡಿಸಿ ಶಾರ್ದೂಲ್​ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ತೌಹಿದ್ ಹರಿದೋಯಿ 54 ಹಾಗೂ ನಸುಮ್ ಅಹಮದ್ 44 ರನ್ ಬಾರಿಸಿ ತಂಡಕ್ಕೆ ಕಾಣಿಕೆ ನೀಡಿದರು. ಇದರಿಂದ ಬಾಂಗ್ಲಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 265 ರನ್​ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿತು.

ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತಿ ಗಿಲ್

ಈ ಗುರಿ ಬೆನ್ನಟ್ಟಿದ ಭಾರತ ತಂಡ ಪ್ರಾರಂಭದಲ್ಲಿ ಅಷ್ಟೇನೂ ಉತ್ತಮವಾಗಿ ಆಡಲಿಲ್ಲ. ಓಪನರ್ಸ್​ ಆಗಿ ಬ್ಯಾಟಿಂಗ್ ಮಾಡಲು ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಸೊನ್ನೆ ಸುತ್ತಿ ಪೆವಿಲಿಯನ್​ಗೆ ಮರಳಿದರು. ಇನ್ನೊಂದು ಕಡೆ ಗಟ್ಟಿಯಾಗಿ ನಿಂತು ಆಟ ಮುಂದುವರೆಸಿದ ಶುಭ್​ಮನ್ ಗಿಲ್ 133 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್​ ಸಮೇತ ಅದ್ಭುತವಾದ ಸಿಂಚುರಿಸಿ ಸಿಡಿಸಿದರು. ಸೂರ್ಯಕುಮಾರ್ 26, ಅಕ್ಷರ್ ಪಟೇಲ್ 44 ಇವರನ್ನು ಬಿಟ್ಟರೇ ಉಳಿದ ಭಾರತದ ಆಟಗಾರರು 20 ರ ಗಡಿ ದಾಟಲು ಹೆಣಗಾಡಿದರು. ಇದರಿಂದ ಭಾರತ 49.5 ಓವರ್​ಗೆ 10 ವಿಕೆಟ್​ಗಳನ್ನು ಕಳೆದುಕೊಂಡು 259 ರನ್​ ಮಾತ್ರ ಗಳಿಸಲು ಶಕ್ತವಾಯಿತು. ಗುರಿ ಮುಟ್ಟಲು ಇನ್ನು 6 ರನ್ ಇರುವಾಗಲೇ ಭಾರತ ಸೋಲು ಕಂಡಿತು.

ಈಗಾಗಲೇ ಭಾರತ ಏಷ್ಯಾಕಪ್​ನಲ್ಲಿ ಫೈನಲ್​ಗೆ ಪ್ರವೇಶಿಸಿದ್ದರಿಂದ ಇದೊಂದು ಔಪಚಾರಿಕ ಪಂದ್ಯವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಂಡ್ಯ, ಬೂಮ್ರಾ, ಕುಲ್​ದೀಪ್ ಯಾದವ್​, ಸಿರಾಜ್​ಗೆ ವಿಶ್ರಾಂತಿ ನೀಡಿ ಉಳಿದ ಯುವ ಆಟಗಾರರನ್ನು ಆಡಿಸಿ ಬಿಸಿಸಿಐ ಪ್ರಯೋಗ ಮಾಡಿತು. ಆದರೆ ಯಶಸ್ಸು ಕಾಣುವಲ್ಲಿ ಕೊಂಚದರಲ್ಲಿ ತಪ್ಪಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More