newsfirstkannada.com

ಏಷ್ಯಾಕಪ್​ ತಂಡದ ಆಯ್ಕೆಗೆ BCCI ರಿಸ್ಕ್​ ತೆಗೆದುಕೊಳ್ತಾ? KL ರಾಹುಲ್ ಮತ್ತೆ ಇಂಜುರಿಗೆ ತುತ್ತಾದ್ರೆ ಕಥೆ ಏನು?

Share :

22-08-2023

    ಈ ಏಷ್ಯಾಕಪ್​ ಬಳಿಕ ಆರಂಭವಾಗೋ ವಿಶ್ವಕಪ್ ಹಣಾಹಣಿ

    ಮುಂದಿನ ಏಷ್ಯಾಕಪ್​ನಲ್ಲಿ ರಾಹುಲ್​​​ ಕಣಕ್ಕಿಳಿಯೋದು ಪಕ್ಕಾ

    ಕೆ.ಎಲ್‌ ರಾಹುಲ್​ ಫಿಟ್​ನೆಸ್‌ ರಿಪೋರ್ಟ್‌ನಲ್ಲಿ ಹೇಳಿರೋದೇನು?

ಏಷ್ಯಾಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಆಯ್ಕೆ ಮಾಡುವಲ್ಲೂ ಸೆಲೆಕ್ಷನ್​ ಕಮಿಟಿ ಎಡವಿತಾ, ಆಯ್ಕೆಯ ವಿಚಾರದಲ್ಲಾದ ತುರಾತುರಿಯನ್ನ ಗಮನಿಸಿದ್ರೆ, ನಿಮಗೂ ಈ ಡೌಟ್​ ಬರುತ್ತೆ. ಆತಂಕ ಕೂಡ ಹುಟ್ಟದೇ ಇರಲ್ಲ. ಅಷ್ಟಕ್ಕೂ ಎಡವಟ್ಟಾಗಿದ್ದು ಎಲ್ಲಿ?

ಏಷ್ಯಾಕಪ್​ ಮಹಾಸಮರಕ್ಕೆ ಟೀಮ್​ ಇಂಡಿಯಾ ಅನೌನ್ಸ್​ ಮಾಡಿದ್ದಾಗಿದೆ. ಕಳೆದ 2 ವಾರದಿಂದ ಟೀಮ್​ ಇಂಡಿಯಾ ಸುತ್ತವೇ ಚರ್ಚೆ ನಡೆದಿತ್ತು. ಆದ್ರೆ, ಅವಸರಕ್ಕೆ ಬೀಳದ ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ ಕಾದು ನೋಡೋ ತಂತ್ರ ಅನುಸರಿಸಿತ್ತು. ಇಷ್ಟೆಲ್ಲ ತಾಳ್ಮೆಯಿಂದ ಕಾದು ನೋಡಿ, ಅಳೆದೂ ತೂಗಿ ಲೆಕ್ಕಾಚಾರ ಹಾಕಿದ್ರೂ ಆಯ್ಕೆ ವಿಚಾರದಲ್ಲಿ ಮತ್ತದೇ ಯಡವಟ್ಟಾಗಿದೆ.

ಕ್ಯಾಪ್ಟನ್​ ರೋಹಿತ್ ಶರ್ಮಾ, ಕೋಚ್ ದ್ರಾವಿಡ್ ಮತ್ತು ಅಜಿತ್ ಅಗರ್ಕರ್​

ತಂಡದ ಆಯ್ಕೆಯಲ್ಲಿ ಮತ್ತೆ ಎಡವಿತಾ ಸೆಲೆಕ್ಷನ್​ ಕಮಿಟಿ.?

ಏಷ್ಯಾಕಪ್​​ ಟೂರ್ನಿಗೆ ಟೀಮ್​ ಇಂಡಿಯಾ ಅನೌನ್ಸ್​ ಆದಾಗಿನಿಂದ ಚರ್ಚೆಯಲ್ಲಿರೋ ವಿಚಾರವಿದು. ಟೀಮ್​ ಅನೌನ್ಸ್​ ಇಷ್ಟು ದಿನ ಕಾದಿದ್ದೇ, ಕೆ.ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​ ಫಿಟ್​​ನೆಸ್​ ಕಾರಣಕ್ಕಾಗಿ. ಆದ್ರೆ, ಸೆಲೆಕ್ಷನ್​ ವಿಚಾರದಲ್ಲಿ ಮಾಡಿರೋದು ಮಾತ್ರ ಯಡವಟ್ಟು. ಮುಂದೆ ಮಹತ್ವದ ವಿಶ್ವಕಪ್​ ಟೂರ್ನಿ ಇರುವ ಈ ಸಂದರ್ಭದಲ್ಲಿ ಸೆಲೆಕ್ಷನ್​ ಕಮಿಟಿ, ಟೀಮ್​ ಮ್ಯಾನೇಜ್​ಮೆಂಟ್​ ತೆಗೆದುಕೊಂಡಿರೋ ಈ ರಿಸ್ಕೀ ನಿರ್ಧಾರ ಸದ್ಯ ಆತಂಕವನ್ನ ಹುಟ್ಟಿಸಿದೆ.

ಕೆ.ಎಲ್​ ರಾಹುಲ್​ ಫುಲ್​ ಫಿಟ್​​ ಆಗಿಲ್ಲ..!

ಸೆಲೆಕ್ಷನ್​​ ಕಮಿಟಿಯ ಚೇರ್​ಮನ್​ ಅಜಿತ್​ ಅಗರ್ಕರ್​ ಹೇಳಿರೊ ಮಾತಿದು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್​, ರಾಹುಲ್​ ಇಂಜುರಿ ಬಗ್ಗೆ ತುಟಿ ಬಿಚ್ಚಿದ್ರು. ರಾಹುಲ್​ ಫಿಟ್​​ನೆಸ್​​ ಬಗ್ಗೆ ಮಾತನಾಡಿದ ಚೀಫ್​ ಸೆಲೆಕ್ಟರ್​​, ಇನ್ನೂ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋ ಮಾಹಿತಿ ಬಿಚ್ಚಿಟ್ರು. ಐಪಿಎಲ್​ ವೇಳೆಯಾದ ಗಾಯದಿಂದ ರಾಹುಲ್​ ಚೇತರಿಸಿಕೊಂಡಿದ್ದಾರೆ. ಹೊಸದಾಗಿ ಚಿಕ್ಕ ಇಂಜುರಿಯಾಗಿದೆ. ಹೀಗಾಗಿ ಬ್ಯಾಕ್​ ಅಪ್​ ವಿಕೆಟ್​ ಕೀಪರ್​​ ಅಗಿ ಸಂಜು ಮಣೆ ಹಾಕಿರೋದಾಗಿ ತಿಳಿಸಿದ್ರು.

ತುರಾತುರಿಯಲ್ಲಿ ರಾಹುಲ್​ ಆಯ್ಕೆ ಬೇಕಿತ್ತಾ.?

ಅಜಿತ್​ ಅಗರ್ಕರ್​ ನೀಡಿದ ಉತ್ತರದ ಬಳಿಕ ಚರ್ಚೆಯಲ್ಲಿರೋ ವಿಚಾರವಿದು. ರಾಹುಲ್​ ಟೀಮ್​ ಇಂಡಿಯಾದ ಮೋಸ್ಟ್​ ಇಂಪಾರ್ಟೆಂಟ್​ ಪ್ಲೇಯರ್​​. ಇಷ್ಟು ದಿನ ರಾಹುಲ್​ ಫಿಟ್​ನೆಸ್​ ರಿಪೋರ್ಟ್​ಗಾಗಿ ಮ್ಯಾನೇಜ್​ಮೆಂಟ್​ ಕಾದಿದ್ದು. ಈಗ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋ ರಿಪೋರ್ಟ್​ ಬಂದಿದೆ. ಹಾಗಿದ್ದ ಮೇಲೆ ಸೆಲೆಕ್ಟ್​ ಮಾಡೋ ಅಗತ್ಯವಿತ್ತಾ ಅನ್ನೋದು ಪ್ರಶ್ನೆ.

ಮತ್ತೆ ಇಂಜುರಿಗೆ ತುತ್ತಾದ್ರೆ ಕಥೆ ಏನು.?

ಸೆಲೆಕ್ಷನ್​ ಕಮಿಟಿ, ಮ್ಯಾನೇಜ್​ಮೆಂಟ್​ಗೆ ಸದ್ಯಕ್ಕಿರೋ ಉತ್ಸಾಹವನ್ನ ನೋಡಿದ್ರೆ, ಏಷ್ಯಾಕಪ್​ ಟೂರ್ನಿಯಲ್ಲಿ ರಾಹುಲ್​​​ನ ಕಣಕ್ಕಿಳಿಸೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಏನ್​ಸಿಎ ರಿಪೋರ್ಟ್​​ ನೋಡಿದ್ರೆ, ರಾಹುಲ್​ ಫಿಟ್​​ ಆಗಿಲ್ಲ ಅಂತಿದೆ. ಮ್ಯಾಚ್​ ಫಿಟ್​​ನೆಸ್​ ಬಗ್ಗೆ ಅನುಮಾನವಿದೆ. ಇಂಜುರಿಯಿಂದ ಚೇತರಿಕೆ ಕಾಣ್ತಿದ್ದ ವೇಳೆ ಮತ್ತೊಂದು ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್​ ಪರಿಸ್ಥಿತಿ ಹೀಗಿರೋವಾಗ ಏಷ್ಯಾಕಪ್​ ಟೂರ್ನಿಗೆ ಸೆಲೆಕ್ಟ್​ ಮಾಡೋ ಅಗತ್ಯವಿತ್ತಾ.?

ವಿಶ್ವಕಪ್​ಗೂ ಮುನ್ನ ರಿಸ್ಕ್​​ ತೆಗೆದುಕೊಂಡಿದ್ದು ಸರೀನಾ.?

ಏಷ್ಯಾಕಪ್​ ಬಳಿಕ ಅಕ್ಟೋಬರ್​ 5ರಿಂದ ಆರಂಭವಾಗೋ ವಿಶ್ವಕಪ್​ ಟೂರ್ನಿ ಟೀಮ್​ ಇಂಡಿಯಾ ಪಾಲಿನ ಪ್ರತಿಷ್ಟೆಯ ಕದನ. ವಿಶ್ವಕಪ್​ ಟೂರ್ನಿಯಲ್ಲಿ ತಂಡಕ್ಕೆ ರಿಷಭ್​ ಪಂತ್​ ಅಲಭ್ಯತೆಯಲ್ಲಿ, ರಾಹುಲ್​ ಅಗತ್ಯತೆ ಟೀಮ್​ ಇಂಡಿಯಾಗೆ ಅತಿಯಾಗಿದೆ. ಆದ್ರೆ, ಇನ್ನೂ ಫಿಟ್ ಆಗದ​​ ರಾಹುಲ್​ನ ಏಷ್ಯಾಕಪ್​ನಲ್ಲಿ ಆಡಿಸಿ, ದುರಾದೃಷ್ಟವಶಾತ್​ ಇಂಜುರಿ ಉಲ್ಬಣಗೊಂಡ್ರೆ, ವಿಶ್ವಕಪ್​ನಲ್ಲಿ ಬೆಲೆ ತೆರಬೇಕಾಗುತ್ತದೆ.

KL ರಾಹುಲ್​ ಮತ್ತು ಶ್ರೇಯಸ್ ಅಯ್ಯರ್

ಹಿಂದೆ ಮಾಡಿದ ತಪ್ಪಿನಿಂದ ಕಲಿತಿಲ್ವಾ ಪಾಠ.?

ಈ ಹಿಂದಿನ ಟಿ20 ವಿಶ್ವಕಪ್​ ಮುನ್ನ ಕೂಡ ಟೀಮ್​ ಮ್ಯಾನೇಜ್​ಮೆಂಟ್​ ಇಂಥದ್ದೇ ತಪ್ಪನ್ನ ಮಾಡಿತ್ತು. 100% ಫಿಟ್​ ಆಗದ ಜಸ್​ಪ್ರಿತ್​ ಬೂಮ್ರಾರನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿಸಿತ್ತು. ಇಂಜುರಿ ಹೆಚ್ಚಾದ ಪರಿಣಾಮ ಅಂದು ತಂಡದಿಂದ ಹೊರಬಿದ್ದ ಬೂಮ್ರಾ ಕಮ್​ಬ್ಯಾಕ್​ ಮಾಡಿರೋದು ಈಗ ಐರ್ಲೆಂಡ್​ ವಿರುದ್ಧ ಈ 11 ತಿಂಗಳ ಅಂತರದಲ್ಲಿ ಬೂಮ್ರಾ ಅಲಭ್ಯತೆ ಟೀಮ್​ ಇಂಡಿಯಾವನ್ನ ಬಿಡದೇ ಕಾಡಿದೆ. ಹಾಗಿದ್ರೂ, ಟೀಮ್ ಮ್ಯಾನೇಜ್​ಮೆಂಟ್​ ಪಾಠ ಕಲಿತಂತಿಲ್ಲ.

ಕಂಪ್ಲೀಟ್​ ಫಿಟ್​ ಆಗದಿದ್ರೂ, 17 ಮಂದಿ ಆಟಗಾರರ ತಂಡದಲ್ಲಿ ರಾಹುಲ್​ಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ಆದ್ರೆ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡೋಕು ಮುನ್ನ ಕ್ಯಾಪ್ಟನ್​ -ಕೋಚ್​ ಯೋಚಿಸಬೇಕಿದೆ. ಸ್ವಲ್ಪ ಯಾಮಾರಿದ್ರೂ, ವಿಶ್ವಕಪ್​ನಲ್ಲಿ ತಂಡಕ್ಕೆ ಹಿನ್ನಡೆಯಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್​ ತಂಡದ ಆಯ್ಕೆಗೆ BCCI ರಿಸ್ಕ್​ ತೆಗೆದುಕೊಳ್ತಾ? KL ರಾಹುಲ್ ಮತ್ತೆ ಇಂಜುರಿಗೆ ತುತ್ತಾದ್ರೆ ಕಥೆ ಏನು?

https://newsfirstlive.com/wp-content/uploads/2023/08/KL_RAHUL-1.jpg

    ಈ ಏಷ್ಯಾಕಪ್​ ಬಳಿಕ ಆರಂಭವಾಗೋ ವಿಶ್ವಕಪ್ ಹಣಾಹಣಿ

    ಮುಂದಿನ ಏಷ್ಯಾಕಪ್​ನಲ್ಲಿ ರಾಹುಲ್​​​ ಕಣಕ್ಕಿಳಿಯೋದು ಪಕ್ಕಾ

    ಕೆ.ಎಲ್‌ ರಾಹುಲ್​ ಫಿಟ್​ನೆಸ್‌ ರಿಪೋರ್ಟ್‌ನಲ್ಲಿ ಹೇಳಿರೋದೇನು?

ಏಷ್ಯಾಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಆಯ್ಕೆ ಮಾಡುವಲ್ಲೂ ಸೆಲೆಕ್ಷನ್​ ಕಮಿಟಿ ಎಡವಿತಾ, ಆಯ್ಕೆಯ ವಿಚಾರದಲ್ಲಾದ ತುರಾತುರಿಯನ್ನ ಗಮನಿಸಿದ್ರೆ, ನಿಮಗೂ ಈ ಡೌಟ್​ ಬರುತ್ತೆ. ಆತಂಕ ಕೂಡ ಹುಟ್ಟದೇ ಇರಲ್ಲ. ಅಷ್ಟಕ್ಕೂ ಎಡವಟ್ಟಾಗಿದ್ದು ಎಲ್ಲಿ?

ಏಷ್ಯಾಕಪ್​ ಮಹಾಸಮರಕ್ಕೆ ಟೀಮ್​ ಇಂಡಿಯಾ ಅನೌನ್ಸ್​ ಮಾಡಿದ್ದಾಗಿದೆ. ಕಳೆದ 2 ವಾರದಿಂದ ಟೀಮ್​ ಇಂಡಿಯಾ ಸುತ್ತವೇ ಚರ್ಚೆ ನಡೆದಿತ್ತು. ಆದ್ರೆ, ಅವಸರಕ್ಕೆ ಬೀಳದ ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ ಕಾದು ನೋಡೋ ತಂತ್ರ ಅನುಸರಿಸಿತ್ತು. ಇಷ್ಟೆಲ್ಲ ತಾಳ್ಮೆಯಿಂದ ಕಾದು ನೋಡಿ, ಅಳೆದೂ ತೂಗಿ ಲೆಕ್ಕಾಚಾರ ಹಾಕಿದ್ರೂ ಆಯ್ಕೆ ವಿಚಾರದಲ್ಲಿ ಮತ್ತದೇ ಯಡವಟ್ಟಾಗಿದೆ.

ಕ್ಯಾಪ್ಟನ್​ ರೋಹಿತ್ ಶರ್ಮಾ, ಕೋಚ್ ದ್ರಾವಿಡ್ ಮತ್ತು ಅಜಿತ್ ಅಗರ್ಕರ್​

ತಂಡದ ಆಯ್ಕೆಯಲ್ಲಿ ಮತ್ತೆ ಎಡವಿತಾ ಸೆಲೆಕ್ಷನ್​ ಕಮಿಟಿ.?

ಏಷ್ಯಾಕಪ್​​ ಟೂರ್ನಿಗೆ ಟೀಮ್​ ಇಂಡಿಯಾ ಅನೌನ್ಸ್​ ಆದಾಗಿನಿಂದ ಚರ್ಚೆಯಲ್ಲಿರೋ ವಿಚಾರವಿದು. ಟೀಮ್​ ಅನೌನ್ಸ್​ ಇಷ್ಟು ದಿನ ಕಾದಿದ್ದೇ, ಕೆ.ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​ ಫಿಟ್​​ನೆಸ್​ ಕಾರಣಕ್ಕಾಗಿ. ಆದ್ರೆ, ಸೆಲೆಕ್ಷನ್​ ವಿಚಾರದಲ್ಲಿ ಮಾಡಿರೋದು ಮಾತ್ರ ಯಡವಟ್ಟು. ಮುಂದೆ ಮಹತ್ವದ ವಿಶ್ವಕಪ್​ ಟೂರ್ನಿ ಇರುವ ಈ ಸಂದರ್ಭದಲ್ಲಿ ಸೆಲೆಕ್ಷನ್​ ಕಮಿಟಿ, ಟೀಮ್​ ಮ್ಯಾನೇಜ್​ಮೆಂಟ್​ ತೆಗೆದುಕೊಂಡಿರೋ ಈ ರಿಸ್ಕೀ ನಿರ್ಧಾರ ಸದ್ಯ ಆತಂಕವನ್ನ ಹುಟ್ಟಿಸಿದೆ.

ಕೆ.ಎಲ್​ ರಾಹುಲ್​ ಫುಲ್​ ಫಿಟ್​​ ಆಗಿಲ್ಲ..!

ಸೆಲೆಕ್ಷನ್​​ ಕಮಿಟಿಯ ಚೇರ್​ಮನ್​ ಅಜಿತ್​ ಅಗರ್ಕರ್​ ಹೇಳಿರೊ ಮಾತಿದು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್​, ರಾಹುಲ್​ ಇಂಜುರಿ ಬಗ್ಗೆ ತುಟಿ ಬಿಚ್ಚಿದ್ರು. ರಾಹುಲ್​ ಫಿಟ್​​ನೆಸ್​​ ಬಗ್ಗೆ ಮಾತನಾಡಿದ ಚೀಫ್​ ಸೆಲೆಕ್ಟರ್​​, ಇನ್ನೂ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋ ಮಾಹಿತಿ ಬಿಚ್ಚಿಟ್ರು. ಐಪಿಎಲ್​ ವೇಳೆಯಾದ ಗಾಯದಿಂದ ರಾಹುಲ್​ ಚೇತರಿಸಿಕೊಂಡಿದ್ದಾರೆ. ಹೊಸದಾಗಿ ಚಿಕ್ಕ ಇಂಜುರಿಯಾಗಿದೆ. ಹೀಗಾಗಿ ಬ್ಯಾಕ್​ ಅಪ್​ ವಿಕೆಟ್​ ಕೀಪರ್​​ ಅಗಿ ಸಂಜು ಮಣೆ ಹಾಕಿರೋದಾಗಿ ತಿಳಿಸಿದ್ರು.

ತುರಾತುರಿಯಲ್ಲಿ ರಾಹುಲ್​ ಆಯ್ಕೆ ಬೇಕಿತ್ತಾ.?

ಅಜಿತ್​ ಅಗರ್ಕರ್​ ನೀಡಿದ ಉತ್ತರದ ಬಳಿಕ ಚರ್ಚೆಯಲ್ಲಿರೋ ವಿಚಾರವಿದು. ರಾಹುಲ್​ ಟೀಮ್​ ಇಂಡಿಯಾದ ಮೋಸ್ಟ್​ ಇಂಪಾರ್ಟೆಂಟ್​ ಪ್ಲೇಯರ್​​. ಇಷ್ಟು ದಿನ ರಾಹುಲ್​ ಫಿಟ್​ನೆಸ್​ ರಿಪೋರ್ಟ್​ಗಾಗಿ ಮ್ಯಾನೇಜ್​ಮೆಂಟ್​ ಕಾದಿದ್ದು. ಈಗ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋ ರಿಪೋರ್ಟ್​ ಬಂದಿದೆ. ಹಾಗಿದ್ದ ಮೇಲೆ ಸೆಲೆಕ್ಟ್​ ಮಾಡೋ ಅಗತ್ಯವಿತ್ತಾ ಅನ್ನೋದು ಪ್ರಶ್ನೆ.

ಮತ್ತೆ ಇಂಜುರಿಗೆ ತುತ್ತಾದ್ರೆ ಕಥೆ ಏನು.?

ಸೆಲೆಕ್ಷನ್​ ಕಮಿಟಿ, ಮ್ಯಾನೇಜ್​ಮೆಂಟ್​ಗೆ ಸದ್ಯಕ್ಕಿರೋ ಉತ್ಸಾಹವನ್ನ ನೋಡಿದ್ರೆ, ಏಷ್ಯಾಕಪ್​ ಟೂರ್ನಿಯಲ್ಲಿ ರಾಹುಲ್​​​ನ ಕಣಕ್ಕಿಳಿಸೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಏನ್​ಸಿಎ ರಿಪೋರ್ಟ್​​ ನೋಡಿದ್ರೆ, ರಾಹುಲ್​ ಫಿಟ್​​ ಆಗಿಲ್ಲ ಅಂತಿದೆ. ಮ್ಯಾಚ್​ ಫಿಟ್​​ನೆಸ್​ ಬಗ್ಗೆ ಅನುಮಾನವಿದೆ. ಇಂಜುರಿಯಿಂದ ಚೇತರಿಕೆ ಕಾಣ್ತಿದ್ದ ವೇಳೆ ಮತ್ತೊಂದು ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್​ ಪರಿಸ್ಥಿತಿ ಹೀಗಿರೋವಾಗ ಏಷ್ಯಾಕಪ್​ ಟೂರ್ನಿಗೆ ಸೆಲೆಕ್ಟ್​ ಮಾಡೋ ಅಗತ್ಯವಿತ್ತಾ.?

ವಿಶ್ವಕಪ್​ಗೂ ಮುನ್ನ ರಿಸ್ಕ್​​ ತೆಗೆದುಕೊಂಡಿದ್ದು ಸರೀನಾ.?

ಏಷ್ಯಾಕಪ್​ ಬಳಿಕ ಅಕ್ಟೋಬರ್​ 5ರಿಂದ ಆರಂಭವಾಗೋ ವಿಶ್ವಕಪ್​ ಟೂರ್ನಿ ಟೀಮ್​ ಇಂಡಿಯಾ ಪಾಲಿನ ಪ್ರತಿಷ್ಟೆಯ ಕದನ. ವಿಶ್ವಕಪ್​ ಟೂರ್ನಿಯಲ್ಲಿ ತಂಡಕ್ಕೆ ರಿಷಭ್​ ಪಂತ್​ ಅಲಭ್ಯತೆಯಲ್ಲಿ, ರಾಹುಲ್​ ಅಗತ್ಯತೆ ಟೀಮ್​ ಇಂಡಿಯಾಗೆ ಅತಿಯಾಗಿದೆ. ಆದ್ರೆ, ಇನ್ನೂ ಫಿಟ್ ಆಗದ​​ ರಾಹುಲ್​ನ ಏಷ್ಯಾಕಪ್​ನಲ್ಲಿ ಆಡಿಸಿ, ದುರಾದೃಷ್ಟವಶಾತ್​ ಇಂಜುರಿ ಉಲ್ಬಣಗೊಂಡ್ರೆ, ವಿಶ್ವಕಪ್​ನಲ್ಲಿ ಬೆಲೆ ತೆರಬೇಕಾಗುತ್ತದೆ.

KL ರಾಹುಲ್​ ಮತ್ತು ಶ್ರೇಯಸ್ ಅಯ್ಯರ್

ಹಿಂದೆ ಮಾಡಿದ ತಪ್ಪಿನಿಂದ ಕಲಿತಿಲ್ವಾ ಪಾಠ.?

ಈ ಹಿಂದಿನ ಟಿ20 ವಿಶ್ವಕಪ್​ ಮುನ್ನ ಕೂಡ ಟೀಮ್​ ಮ್ಯಾನೇಜ್​ಮೆಂಟ್​ ಇಂಥದ್ದೇ ತಪ್ಪನ್ನ ಮಾಡಿತ್ತು. 100% ಫಿಟ್​ ಆಗದ ಜಸ್​ಪ್ರಿತ್​ ಬೂಮ್ರಾರನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿಸಿತ್ತು. ಇಂಜುರಿ ಹೆಚ್ಚಾದ ಪರಿಣಾಮ ಅಂದು ತಂಡದಿಂದ ಹೊರಬಿದ್ದ ಬೂಮ್ರಾ ಕಮ್​ಬ್ಯಾಕ್​ ಮಾಡಿರೋದು ಈಗ ಐರ್ಲೆಂಡ್​ ವಿರುದ್ಧ ಈ 11 ತಿಂಗಳ ಅಂತರದಲ್ಲಿ ಬೂಮ್ರಾ ಅಲಭ್ಯತೆ ಟೀಮ್​ ಇಂಡಿಯಾವನ್ನ ಬಿಡದೇ ಕಾಡಿದೆ. ಹಾಗಿದ್ರೂ, ಟೀಮ್ ಮ್ಯಾನೇಜ್​ಮೆಂಟ್​ ಪಾಠ ಕಲಿತಂತಿಲ್ಲ.

ಕಂಪ್ಲೀಟ್​ ಫಿಟ್​ ಆಗದಿದ್ರೂ, 17 ಮಂದಿ ಆಟಗಾರರ ತಂಡದಲ್ಲಿ ರಾಹುಲ್​ಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ಆದ್ರೆ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡೋಕು ಮುನ್ನ ಕ್ಯಾಪ್ಟನ್​ -ಕೋಚ್​ ಯೋಚಿಸಬೇಕಿದೆ. ಸ್ವಲ್ಪ ಯಾಮಾರಿದ್ರೂ, ವಿಶ್ವಕಪ್​ನಲ್ಲಿ ತಂಡಕ್ಕೆ ಹಿನ್ನಡೆಯಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More