ಭಾರತ-ಲಂಕಾ ಮಧ್ಯೆ ಏಷ್ಯಾಕಪ್ ಸೂಪರ್-4 ಪಂದ್ಯ
ವೆಲ್ಲಲಗೆ ಸ್ಪಿನ್ ಮೋಡಿಗೆ ಇಂಡಿಯನ್ ಬ್ಯಾಟರ್ಸ್ ತಬ್ಬಿಬ್ಬು..!
ಸಾಲಿಡ್ ಆರಂಭದ ಹೊರತಾಗಿಯೂ ಕುಸಿದ ಭಾರತ
ಇಂಡೋ-ಪಾಕ್ ಸಪ್ಪೆ ಸಪ್ಪೆ ಆಗಿತ್ತು. ಆದರೆ ಭಾರತ-ಶ್ರೀಲಂಕಾ ಪಂದ್ಯ ಹಾಗೆ ಆಗಲಿಲ್ಲ. ಲೋ ಸ್ಕೋರ್ ಗೇಮ್ ನೋಡುಗರಿಗೆ ಕಂಪ್ಲೀಟ್ ಮನರಂಜನೆ ನೀಡ್ತು. ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಯಾಡಿತು.
ಸಾಲಿಡ್ ಆರಂಭದ ಹೊರತಾಗಿಯೂ ಕುಸಿದ ಭಾರತ
ಕೊಲಂಬೋದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸಾಲಿಡ್ ಓಪನಿಂಗ್ ಒದಗಿಸಿದ್ರು. ಸಿಂಹಳೀಯರ ಮೈಚಳಿ ಬಿಡಿಸಿದ ಜೋಡಿ ಮೊದಲ ವಿಕೆಟ್ಗೆ ಬಿರುಸಿನ 80 ರನ್ಗಳ ಜೊತೆಯಾಟವಾಡ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಫೋಟಕ ಹಾಫ್ಸೆಂಚುರಿ ಬಾರಿಸಿ ಪೆವಿಲಿಯನ್ ಸೇರಿಕೊಂಡ್ರೆ ಶುಭ್ಮನ್ ಗಿಲ್ ಆಟ 19 ರನ್ಗೆ ಸ್ಟಾಪ್ ಆಯ್ತು. ಕೊಲಂಬೋ ಕಿಂಗ್ ವಿರಾಟ್ ಕೊಹ್ಲಿ ಜಸ್ಟ್ 3 ರನ್ ಔಟಾಗಿ ನಿರಾಸೆ ಮೂಡಿಸಿದರು.
4ನೇ ವಿಕೆಟ್ಗೆ ರಾಹುಲ್-ಇಶಾನ್ ಕಿಶನ್ ಆಸರೆ
11 ರನ್ ಅಂತರದಲ್ಲಿ ಭಾರತದ ಟಾಪ್-ತ್ರಿ ಬ್ಯಾಟ್ಸ್ಮನ್ಗಳು ಔಟಾದ್ರು. 4ನೇ ವಿಕೆಟ್ಗೆ ಕೆ.ಎಲ್ ರಾಹುಲ್ ಹಾಗೂ ಇಶಾನ್ ಜೋಡಿ ಅರ್ಧಶತದ ಜೊತೆಯಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಲಂಕಾಗೆ ಕಂಟವಾಗಿದ್ದ ಈ ಜೋಡಿಯನ್ನ ಸ್ಪಿನ್ನರ್ ವೆಲ್ಲಲಗೆ ಬೇರ್ಪಡಿಸಿದರು. ರಾಹುಲ್ ಆಟ 39ಕ್ಕೆ ಅಂತ್ಯವಾದ್ರೆ ವೆಲ್ ಸೆಟಲ್ಡ್ ಕಿಶನ್ ಅಸಲಂಕ ಸ್ಪಿನ್ ಬಲೆಗೆ ಬಿದ್ದರು.
59 ರನ್ ಅಂತರದಲ್ಲಿ 6 ವಿಕೆಟ್ ಪತನ
ರಾಹುಲ್ ಹಾಗೂ ಕಿಶನ್ ಜೋಡಿ ನಿರ್ಗಮನದ ಬಳಿಕ ಭಾರತ ತಂಡ ಹಠಾತ್ ಕುಸಿತ ಕಂಡಿತು. 59 ರನ್ ಅಂತರದಲ್ಲಿ ಕೊನೆ 6 ವಿಕೆಟ್ಗಳನ್ನು ಕಳೆದುಕೊಳ್ತು. ಫೈನಲಿ ಅಸಲಂಕಾ ಹಾಗೂ ವೆಲ್ಲಲಗೆ ಸ್ಪಿನ್ ದಾಳಿಗೆ ಬೆದರಿದ ಭಾರತ 213 ರನ್ಗೆ ಆಲೌಟಾಯ್ತು. ಅಲ್ಪಗುರಿಯನ್ನ ಸುಲಭವಾಗಿ ಚೇಸ್ ಮಾಡುವ ಲಂಕಾ ಪ್ಲಾನ್ಅನ್ನ ಇಂಡಿಯನ್ ಸ್ಪಿನ್ನರ್ಸ್ ತಲೆಕೆಳಗಾಗಿಸಿದ್ರು. ಆರಂಭಿಕರನ್ನ ಬೂಮ್ರಾ-ಸಿರಾಜ್ ಖೆಡ್ಡಾಗೆ ಕೆಡವಿದ್ರೆ , ಕುಲ್ದೀಪ್ ಯಾದವ್ ಮಿಡಲ್ ಆರ್ಡರ್ ಗೆ ಪೆಟ್ಟು ನೀಡಿದರು.
ಭಾರತಕ್ಕೆ ದುಸ್ವಪ್ನರಾದ ದುನಿತ್ ವೆಲ್ಲಲಗೆ
99 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಲಂಕಾ ಕಥೆ ಮುಗೀತು ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ 20 ವರ್ಷ ವೆಲ್ಲಲಗೆ 7ನೇ ವಿಕೆಟ್ಗೆ ಡಿಸಿಲ್ವಾ ಜೊತೆಗೂಡಿ 63 ರನ್ ಕಲೆಹಾಕಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಬೌಲಿಂಗ್ನಲ್ಲಿ 5 ವಿಕೆಟ್ ಕಬಳಿಸಿದ್ದ ವೆಲ್ಲಲಗೆ ಬ್ಯಾಟಿಂಗ್ನಲ್ಲಿ ಅಜೇಯ 42 ರನ್ ಗಳಿಸಿ ಭಾರತಕ್ಕೆ ದುಸ್ವಪ್ನರಾಗಿ ಕಾಡಿದರು. ವೆಲ್ಲಲಗೆ ದಿಟ್ಟ ಹೋರಾಟದ ಹೊರತಾಗಿಯೂ 172 ರನ್ಗೆ ಆಲೌಟಾಯ್ತು. 41 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಬಹುತೇಕ ಫೈನಲ್ ಟಿಕೆಟ್ ಖಾತ್ರಿಪಡಿಸಿಕೊಳ್ತು. 4 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್ ವಿಕ್ಟರಿ ಹೀರೋ ಆಗಿ ಮೆರೆದಾಡಿದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಭಾರತ-ಲಂಕಾ ಮಧ್ಯೆ ಏಷ್ಯಾಕಪ್ ಸೂಪರ್-4 ಪಂದ್ಯ
ವೆಲ್ಲಲಗೆ ಸ್ಪಿನ್ ಮೋಡಿಗೆ ಇಂಡಿಯನ್ ಬ್ಯಾಟರ್ಸ್ ತಬ್ಬಿಬ್ಬು..!
ಸಾಲಿಡ್ ಆರಂಭದ ಹೊರತಾಗಿಯೂ ಕುಸಿದ ಭಾರತ
ಇಂಡೋ-ಪಾಕ್ ಸಪ್ಪೆ ಸಪ್ಪೆ ಆಗಿತ್ತು. ಆದರೆ ಭಾರತ-ಶ್ರೀಲಂಕಾ ಪಂದ್ಯ ಹಾಗೆ ಆಗಲಿಲ್ಲ. ಲೋ ಸ್ಕೋರ್ ಗೇಮ್ ನೋಡುಗರಿಗೆ ಕಂಪ್ಲೀಟ್ ಮನರಂಜನೆ ನೀಡ್ತು. ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಯಾಡಿತು.
ಸಾಲಿಡ್ ಆರಂಭದ ಹೊರತಾಗಿಯೂ ಕುಸಿದ ಭಾರತ
ಕೊಲಂಬೋದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸಾಲಿಡ್ ಓಪನಿಂಗ್ ಒದಗಿಸಿದ್ರು. ಸಿಂಹಳೀಯರ ಮೈಚಳಿ ಬಿಡಿಸಿದ ಜೋಡಿ ಮೊದಲ ವಿಕೆಟ್ಗೆ ಬಿರುಸಿನ 80 ರನ್ಗಳ ಜೊತೆಯಾಟವಾಡ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಫೋಟಕ ಹಾಫ್ಸೆಂಚುರಿ ಬಾರಿಸಿ ಪೆವಿಲಿಯನ್ ಸೇರಿಕೊಂಡ್ರೆ ಶುಭ್ಮನ್ ಗಿಲ್ ಆಟ 19 ರನ್ಗೆ ಸ್ಟಾಪ್ ಆಯ್ತು. ಕೊಲಂಬೋ ಕಿಂಗ್ ವಿರಾಟ್ ಕೊಹ್ಲಿ ಜಸ್ಟ್ 3 ರನ್ ಔಟಾಗಿ ನಿರಾಸೆ ಮೂಡಿಸಿದರು.
4ನೇ ವಿಕೆಟ್ಗೆ ರಾಹುಲ್-ಇಶಾನ್ ಕಿಶನ್ ಆಸರೆ
11 ರನ್ ಅಂತರದಲ್ಲಿ ಭಾರತದ ಟಾಪ್-ತ್ರಿ ಬ್ಯಾಟ್ಸ್ಮನ್ಗಳು ಔಟಾದ್ರು. 4ನೇ ವಿಕೆಟ್ಗೆ ಕೆ.ಎಲ್ ರಾಹುಲ್ ಹಾಗೂ ಇಶಾನ್ ಜೋಡಿ ಅರ್ಧಶತದ ಜೊತೆಯಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಲಂಕಾಗೆ ಕಂಟವಾಗಿದ್ದ ಈ ಜೋಡಿಯನ್ನ ಸ್ಪಿನ್ನರ್ ವೆಲ್ಲಲಗೆ ಬೇರ್ಪಡಿಸಿದರು. ರಾಹುಲ್ ಆಟ 39ಕ್ಕೆ ಅಂತ್ಯವಾದ್ರೆ ವೆಲ್ ಸೆಟಲ್ಡ್ ಕಿಶನ್ ಅಸಲಂಕ ಸ್ಪಿನ್ ಬಲೆಗೆ ಬಿದ್ದರು.
59 ರನ್ ಅಂತರದಲ್ಲಿ 6 ವಿಕೆಟ್ ಪತನ
ರಾಹುಲ್ ಹಾಗೂ ಕಿಶನ್ ಜೋಡಿ ನಿರ್ಗಮನದ ಬಳಿಕ ಭಾರತ ತಂಡ ಹಠಾತ್ ಕುಸಿತ ಕಂಡಿತು. 59 ರನ್ ಅಂತರದಲ್ಲಿ ಕೊನೆ 6 ವಿಕೆಟ್ಗಳನ್ನು ಕಳೆದುಕೊಳ್ತು. ಫೈನಲಿ ಅಸಲಂಕಾ ಹಾಗೂ ವೆಲ್ಲಲಗೆ ಸ್ಪಿನ್ ದಾಳಿಗೆ ಬೆದರಿದ ಭಾರತ 213 ರನ್ಗೆ ಆಲೌಟಾಯ್ತು. ಅಲ್ಪಗುರಿಯನ್ನ ಸುಲಭವಾಗಿ ಚೇಸ್ ಮಾಡುವ ಲಂಕಾ ಪ್ಲಾನ್ಅನ್ನ ಇಂಡಿಯನ್ ಸ್ಪಿನ್ನರ್ಸ್ ತಲೆಕೆಳಗಾಗಿಸಿದ್ರು. ಆರಂಭಿಕರನ್ನ ಬೂಮ್ರಾ-ಸಿರಾಜ್ ಖೆಡ್ಡಾಗೆ ಕೆಡವಿದ್ರೆ , ಕುಲ್ದೀಪ್ ಯಾದವ್ ಮಿಡಲ್ ಆರ್ಡರ್ ಗೆ ಪೆಟ್ಟು ನೀಡಿದರು.
ಭಾರತಕ್ಕೆ ದುಸ್ವಪ್ನರಾದ ದುನಿತ್ ವೆಲ್ಲಲಗೆ
99 ರನ್ಗೆ 6 ವಿಕೆಟ್ ಕಳೆದುಕೊಂಡಾಗ ಲಂಕಾ ಕಥೆ ಮುಗೀತು ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ 20 ವರ್ಷ ವೆಲ್ಲಲಗೆ 7ನೇ ವಿಕೆಟ್ಗೆ ಡಿಸಿಲ್ವಾ ಜೊತೆಗೂಡಿ 63 ರನ್ ಕಲೆಹಾಕಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಬೌಲಿಂಗ್ನಲ್ಲಿ 5 ವಿಕೆಟ್ ಕಬಳಿಸಿದ್ದ ವೆಲ್ಲಲಗೆ ಬ್ಯಾಟಿಂಗ್ನಲ್ಲಿ ಅಜೇಯ 42 ರನ್ ಗಳಿಸಿ ಭಾರತಕ್ಕೆ ದುಸ್ವಪ್ನರಾಗಿ ಕಾಡಿದರು. ವೆಲ್ಲಲಗೆ ದಿಟ್ಟ ಹೋರಾಟದ ಹೊರತಾಗಿಯೂ 172 ರನ್ಗೆ ಆಲೌಟಾಯ್ತು. 41 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಬಹುತೇಕ ಫೈನಲ್ ಟಿಕೆಟ್ ಖಾತ್ರಿಪಡಿಸಿಕೊಳ್ತು. 4 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್ ವಿಕ್ಟರಿ ಹೀರೋ ಆಗಿ ಮೆರೆದಾಡಿದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್