newsfirstkannada.com

Asia cup: ಕ್ರಿಕೆಟ್​ ಶಿಶು ನೇಪಾಳ ವಿರುದ್ಧ ಭಾರತದ ದುರ್ಬಲ ಬೌಲಿಂಗ್​.. ಕಳಪೆ ಫೀಲ್ಡಿಂಗ್

Share :

05-09-2023

    ನೇಪಾಳ ವಿರುದ್ಧ 10 ವಿಕೆಟ್​ ಜಯ ಸಾಧಿಸಿದ ಟೀಮ್​ ಇಂಡಿಯಾ

    ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​ಗೆ ತಲಾ ತಲಾ 3 ವಿಕೆಟ್​ ​

    ತಂಡಕ್ಕೆ ಹೊರೆಯಾದ ಕಳಪೆ ಫೀಲ್ಡಿಂಗ್, ಬ್ಯಾಟಿಂಗ್​ಗೆ ಮಳೆ ಕಾಟ

ಏಷ್ಯಾಕಪ್​ ಟೂರ್ನಿಯಲ್ಲಿ ಕೊನೆಗೂ ಟೀಮ್​ ಇಂಡಿಯಾದ ಅಕೌಂಟ್​​ ಓಪನ್​ ಆಗಿದೆ. ಅಧಿಕೃತವಾಗಿ ಸೂಪರ್-​ 4 ಹಂತಕ್ಕೂ ಎಂಟ್ರಿ ಕೊಟ್ಟಿದೆ. ಆದ್ರೂ ಟೆನ್ಶನ್​ ತಪ್ಪಿಲ್ಲ. ನೇಪಾಳ ಎದುರು ಟೀಮ್​ ಇಂಡಿಯಾ ಆಡಿದ ರೀತಿ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದ್ದಂತೂ ಸುಳ್ಳಲ್ಲ. ಇಂಡೋ -ನೇಪಾಳ​ ಫೈಟ್ ಹೇಗಿತ್ತು.?

ಏಷ್ಯಾಕಪ್​ ಟೂರ್ನಿಗೆ 2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದಿದೆ. ಆದ್ರೂ ಸಮಾಧಾನ ಇಲ್ಲ. ಕ್ರಿಕೆಟ್​ ಶಿಶು ನೇಪಾಳದ ಎದುರು ಬಲಿಷ್ಠ ಟೀಮ್​ ಇಂಡಿಯಾದ ಆಟ ಅಷ್ಟು ಕಳಪೆಯಾಗಿತ್ತು. ಬ್ಯಾಟಿಂಗ್​ನಲ್ಲಿ ಅಬ್ಬರವಿದ್ರೂ ಬೌಲಿಂಗ್​ ಹಾಗೂ ಫೀಲ್ಡಿಂಗ್​ ತೀರಾ ಹೀನಾಯವಾಗಿತ್ತು.

ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ

ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ನೇಪಾಳ ತಂಡ ಡಿಸೆಂಟ್​ ಆರಂಭ ಪಡೆದುಕೊಳ್ತು. ಆರಂಭದಲ್ಲೇ ಸಿಕ್ಕ ಜೀವದಾನಗಳನ್ನ ಬಳಸಿಕೊಂಡ ಭುರ್ಟೆಲ್​ ಹಾಗೂ ಆಶಿಸ್​​ ಶೇಕ್​ ಜೋಡಿ ಉತ್ತಮ ಆಟವಾಡಿತು. ಮೊದಲ ವಿಕೆಟ್​​ಗೆ 65 ರನ್​ಗಳು ಹರಿದು ಬಂದ್ವು.

ಬ್ರೇಕ್​ ಥ್ರೂ ನೀಡುವಲ್ಲಿ ಶಾರ್ದೂಲ್​ ಠಾಕೂರ್​ ಯಶಸ್ವಿ

10ನೇ ಓವರ್​​ನಲ್ಲಿ ಬ್ರೇಕ್​ ಥ್ರೂ ನೀಡುವಲ್ಲಿ ಶಾರ್ದೂಲ್​ ಠಾಕೂರ್​ ಯಶಸ್ವಿಯಾದ್ರು. 38 ರನ್​ಗಳಿಗೆ ಕುಶಾಲ್​ ಭುರ್ಟೆಲ್​ ಪೆವಿಲಿಯನ್​ ಸೇರಿದ್ರು. ಆ ಬಳಿಕ ದಾಳಿಗಿಳಿದ ರವೀಂದ್ರ ಜಡೇಜಾ ನೇಪಾಳಕ್ಕೆ ಶಾಕ್​ ನೀಡಿದ್ರು. 3 ವಿಕೆಟ್​ ಕಬಳಿಸಿ ಜಡೇಜಾ ಮಿಂಚಿದ್ರು.

ಸಾಲಿಡ್​ ಆಟವಾಡಿದ ಆಸಿಫ್​ ಶೇಕ್​ 58 ರನ್​ಗಳಿಸಿ ನಿರ್ಗಮಿಸಿದ್ರೆ, ಗುಲ್ಸಾನ್​ ಝಾ, ದೀಪೆಂದ್ರ ಸಿಂಗ್​ ಅಲ್ಪ ಮೊತ್ತಕ್ಕೆ ಆಟ ಮುಗಿಸಿದ್ರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೊಮ್ಪಾಲ್​ ಕಲ್ಮಿ 48 ರನ್​ಗಳಿಸಿ ನಿರ್ಗಮಿಸಿದ್ರು. ಅಂತಿಮವಾಗಿ ನೇಪಾಳ 230 ರನ್​ಗಳಿಗೆ ಆಲೌಟ್​ ಆಯ್ತು. ಜಡೇಜಾ, ಸಿರಾಜ್​ ತಲಾ 3 ವಿಕೆಟ್​ ಕಬಳಿಸಿದ್ರೆ, ಠಾಕೂರ್​​, ಹಾರ್ದಿಕ್​, ಶಮಿ 1 ವಿಕೆಟ್​​​ ಕಬಳಿಸಿ ಮಿಂಚಿದ್ರು.

231 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಆರಂಭದಲ್ಲೇ ವರುಣ ಅಡ್ಡಿ ಪಡಿಸಿದ. 2.1 ಓವರ್​​ ಆಗ್ತಿದ್ದಂತೆ ಮಳೆ ಸುರಿಯಿತು. ಬಿಡದೇ ಮಳೆ ಸುರಿದ ಕಾರಣದಿಂದ ಪಂದ್ಯದ ಓವರ್​ಗಳನ್ನ ಕಡಿತ ಗೊಳಿಸಲಾಯ್ತು. ಡಕ್ವರ್ತ್​​ ಲೂಯಿಸ್​​ ನಿಯಮದಡಿ 23 ಓವರ್​ಗೆ 145 ರನ್​ಗಳ ಟಾರ್ಗೆಟ್​ ನೀಡಲಾಯ್ತು.

ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್

ಫುಲ್​ ಶಾಟ್​​ಗಳನ್ನ ಬಾರಿಸಿದ ರೋಹಿತ್

ಮಳೆಯ ಬಳಿಕ ಪಲ್ಲೆಕೆಲೆ ಮೈದಾನದಲ್ಲಿ ರನ್​ ಮಳೆ ಸುರಿಯಿತು. ರೋಹಿತ್​ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ನೇಪಾಳ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಮೈದಾನದ ಉದ್ದಗಲಕ್ಕೂ ಬೌಲ್​ ದರ್ಶನ ಮಾಡಿಸಿದ ರೋಹಿತ್​ ಹಾಫ್​ ಸೆಂಚುರಿ ಸಿಡಿಸಿದ್ರು. ಫುಲ್​ ಶಾಟ್​​ಗಳನ್ನ ಬಾರಿಸಿದ ರೋಹಿತ್, ಸಿಕ್ಸರ್​ ಸಿಡಿಸಿ​ ಘರ್ಜಿಸಿದ್ರೆ, ಶುಭ್​ಮನ್​ ಗಿಲ್​ ತಾಳ್ಮೆಯ ಆಟವಾಡಿದ್ರು. 52 ಎಸೆತಗಳಲ್ಲಿ ಹಾಫ್​ ಸೆಂಚುರಿ ಪೂರೈಸಿದ್ರು.

ಅಂತಿಮವಾಗಿ ರೋಹಿತ್​, ಶುಭ್​ಮನ್​ರ ಮುರಿಯದ 147 ರನ್​ಗಳ ಜೊತೆಯಾಟದ ನೆರವಿನಿಂದ ಟೀಮ್​ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್​ 74 ರನ್​ ಸಿಡಿಸಿದ್ರೆ, ಗಿಲ್​ 67 ರನ್​ಗಳಿಸಿ ಅಜೇಯರಾಗುಳಿದ್ರು. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಸೂಪರ್​- 4 ಹಂತಕ್ಕೆ ಎಂಟ್ರಿ ಕೊಟ್ಟಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia cup: ಕ್ರಿಕೆಟ್​ ಶಿಶು ನೇಪಾಳ ವಿರುದ್ಧ ಭಾರತದ ದುರ್ಬಲ ಬೌಲಿಂಗ್​.. ಕಳಪೆ ಫೀಲ್ಡಿಂಗ್

https://newsfirstlive.com/wp-content/uploads/2023/09/ROHIT_SHARMA_1.jpg

    ನೇಪಾಳ ವಿರುದ್ಧ 10 ವಿಕೆಟ್​ ಜಯ ಸಾಧಿಸಿದ ಟೀಮ್​ ಇಂಡಿಯಾ

    ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​ಗೆ ತಲಾ ತಲಾ 3 ವಿಕೆಟ್​ ​

    ತಂಡಕ್ಕೆ ಹೊರೆಯಾದ ಕಳಪೆ ಫೀಲ್ಡಿಂಗ್, ಬ್ಯಾಟಿಂಗ್​ಗೆ ಮಳೆ ಕಾಟ

ಏಷ್ಯಾಕಪ್​ ಟೂರ್ನಿಯಲ್ಲಿ ಕೊನೆಗೂ ಟೀಮ್​ ಇಂಡಿಯಾದ ಅಕೌಂಟ್​​ ಓಪನ್​ ಆಗಿದೆ. ಅಧಿಕೃತವಾಗಿ ಸೂಪರ್-​ 4 ಹಂತಕ್ಕೂ ಎಂಟ್ರಿ ಕೊಟ್ಟಿದೆ. ಆದ್ರೂ ಟೆನ್ಶನ್​ ತಪ್ಪಿಲ್ಲ. ನೇಪಾಳ ಎದುರು ಟೀಮ್​ ಇಂಡಿಯಾ ಆಡಿದ ರೀತಿ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದ್ದಂತೂ ಸುಳ್ಳಲ್ಲ. ಇಂಡೋ -ನೇಪಾಳ​ ಫೈಟ್ ಹೇಗಿತ್ತು.?

ಏಷ್ಯಾಕಪ್​ ಟೂರ್ನಿಗೆ 2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದಿದೆ. ಆದ್ರೂ ಸಮಾಧಾನ ಇಲ್ಲ. ಕ್ರಿಕೆಟ್​ ಶಿಶು ನೇಪಾಳದ ಎದುರು ಬಲಿಷ್ಠ ಟೀಮ್​ ಇಂಡಿಯಾದ ಆಟ ಅಷ್ಟು ಕಳಪೆಯಾಗಿತ್ತು. ಬ್ಯಾಟಿಂಗ್​ನಲ್ಲಿ ಅಬ್ಬರವಿದ್ರೂ ಬೌಲಿಂಗ್​ ಹಾಗೂ ಫೀಲ್ಡಿಂಗ್​ ತೀರಾ ಹೀನಾಯವಾಗಿತ್ತು.

ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ

ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ನೇಪಾಳ ತಂಡ ಡಿಸೆಂಟ್​ ಆರಂಭ ಪಡೆದುಕೊಳ್ತು. ಆರಂಭದಲ್ಲೇ ಸಿಕ್ಕ ಜೀವದಾನಗಳನ್ನ ಬಳಸಿಕೊಂಡ ಭುರ್ಟೆಲ್​ ಹಾಗೂ ಆಶಿಸ್​​ ಶೇಕ್​ ಜೋಡಿ ಉತ್ತಮ ಆಟವಾಡಿತು. ಮೊದಲ ವಿಕೆಟ್​​ಗೆ 65 ರನ್​ಗಳು ಹರಿದು ಬಂದ್ವು.

ಬ್ರೇಕ್​ ಥ್ರೂ ನೀಡುವಲ್ಲಿ ಶಾರ್ದೂಲ್​ ಠಾಕೂರ್​ ಯಶಸ್ವಿ

10ನೇ ಓವರ್​​ನಲ್ಲಿ ಬ್ರೇಕ್​ ಥ್ರೂ ನೀಡುವಲ್ಲಿ ಶಾರ್ದೂಲ್​ ಠಾಕೂರ್​ ಯಶಸ್ವಿಯಾದ್ರು. 38 ರನ್​ಗಳಿಗೆ ಕುಶಾಲ್​ ಭುರ್ಟೆಲ್​ ಪೆವಿಲಿಯನ್​ ಸೇರಿದ್ರು. ಆ ಬಳಿಕ ದಾಳಿಗಿಳಿದ ರವೀಂದ್ರ ಜಡೇಜಾ ನೇಪಾಳಕ್ಕೆ ಶಾಕ್​ ನೀಡಿದ್ರು. 3 ವಿಕೆಟ್​ ಕಬಳಿಸಿ ಜಡೇಜಾ ಮಿಂಚಿದ್ರು.

ಸಾಲಿಡ್​ ಆಟವಾಡಿದ ಆಸಿಫ್​ ಶೇಕ್​ 58 ರನ್​ಗಳಿಸಿ ನಿರ್ಗಮಿಸಿದ್ರೆ, ಗುಲ್ಸಾನ್​ ಝಾ, ದೀಪೆಂದ್ರ ಸಿಂಗ್​ ಅಲ್ಪ ಮೊತ್ತಕ್ಕೆ ಆಟ ಮುಗಿಸಿದ್ರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೊಮ್ಪಾಲ್​ ಕಲ್ಮಿ 48 ರನ್​ಗಳಿಸಿ ನಿರ್ಗಮಿಸಿದ್ರು. ಅಂತಿಮವಾಗಿ ನೇಪಾಳ 230 ರನ್​ಗಳಿಗೆ ಆಲೌಟ್​ ಆಯ್ತು. ಜಡೇಜಾ, ಸಿರಾಜ್​ ತಲಾ 3 ವಿಕೆಟ್​ ಕಬಳಿಸಿದ್ರೆ, ಠಾಕೂರ್​​, ಹಾರ್ದಿಕ್​, ಶಮಿ 1 ವಿಕೆಟ್​​​ ಕಬಳಿಸಿ ಮಿಂಚಿದ್ರು.

231 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಆರಂಭದಲ್ಲೇ ವರುಣ ಅಡ್ಡಿ ಪಡಿಸಿದ. 2.1 ಓವರ್​​ ಆಗ್ತಿದ್ದಂತೆ ಮಳೆ ಸುರಿಯಿತು. ಬಿಡದೇ ಮಳೆ ಸುರಿದ ಕಾರಣದಿಂದ ಪಂದ್ಯದ ಓವರ್​ಗಳನ್ನ ಕಡಿತ ಗೊಳಿಸಲಾಯ್ತು. ಡಕ್ವರ್ತ್​​ ಲೂಯಿಸ್​​ ನಿಯಮದಡಿ 23 ಓವರ್​ಗೆ 145 ರನ್​ಗಳ ಟಾರ್ಗೆಟ್​ ನೀಡಲಾಯ್ತು.

ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್

ಫುಲ್​ ಶಾಟ್​​ಗಳನ್ನ ಬಾರಿಸಿದ ರೋಹಿತ್

ಮಳೆಯ ಬಳಿಕ ಪಲ್ಲೆಕೆಲೆ ಮೈದಾನದಲ್ಲಿ ರನ್​ ಮಳೆ ಸುರಿಯಿತು. ರೋಹಿತ್​ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ನೇಪಾಳ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಮೈದಾನದ ಉದ್ದಗಲಕ್ಕೂ ಬೌಲ್​ ದರ್ಶನ ಮಾಡಿಸಿದ ರೋಹಿತ್​ ಹಾಫ್​ ಸೆಂಚುರಿ ಸಿಡಿಸಿದ್ರು. ಫುಲ್​ ಶಾಟ್​​ಗಳನ್ನ ಬಾರಿಸಿದ ರೋಹಿತ್, ಸಿಕ್ಸರ್​ ಸಿಡಿಸಿ​ ಘರ್ಜಿಸಿದ್ರೆ, ಶುಭ್​ಮನ್​ ಗಿಲ್​ ತಾಳ್ಮೆಯ ಆಟವಾಡಿದ್ರು. 52 ಎಸೆತಗಳಲ್ಲಿ ಹಾಫ್​ ಸೆಂಚುರಿ ಪೂರೈಸಿದ್ರು.

ಅಂತಿಮವಾಗಿ ರೋಹಿತ್​, ಶುಭ್​ಮನ್​ರ ಮುರಿಯದ 147 ರನ್​ಗಳ ಜೊತೆಯಾಟದ ನೆರವಿನಿಂದ ಟೀಮ್​ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್​ 74 ರನ್​ ಸಿಡಿಸಿದ್ರೆ, ಗಿಲ್​ 67 ರನ್​ಗಳಿಸಿ ಅಜೇಯರಾಗುಳಿದ್ರು. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಸೂಪರ್​- 4 ಹಂತಕ್ಕೆ ಎಂಟ್ರಿ ಕೊಟ್ಟಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More