newsfirstkannada.com

ಏಷ್ಯಾಕಪ್​​ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ರಾಹುಲ್​, ಶ್ರೇಯಸ್​​ ಕಮ್​ಬ್ಯಾಕ್​​; ಮತ್ಯಾರಿಗೆ ಸ್ಥಾನ?

Share :

21-08-2023

    ಸದ್ಯದಲ್ಲೇ ನಡೆಯಲಿರೋ 2023 ಏಷ್ಯಾಕಪ್​ ಟೂರ್ನಿ

    2023 ಏಷ್ಯಾಕಪ್​ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..!

    ಕೆ.ಎಲ್​​​​ ರಾಹುಲ್​​, ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​​

ಸದ್ಯ ನಡೆಯುತ್ತಿರೋ ಐರ್ಲೆಂಡ್​​​ ವಿರುದ್ಧದ ಟಿ20 ಸೀರೀಸ್​​ ಬೆನ್ನಲ್ಲೇ 2023ರ ಏಕದಿನ ಏಷ್ಯಾಕಪ್​ ಟೂರ್ನಿ ನಡೆಯಲಿದೆ. ಆಗಸ್ಟ್​​ 30ನೇ ತಾರೀಕಿನಿಂದ ನಡೆಯಲಿರೋ ಏಷ್ಯಾಕಪ್​​ ಟೂರ್ನಿಗೆ ಕೊನೆಗೂ ಬಲಿಷ್ಠ ಟೀಂ ಇಂಡಿಯಾ ಅನೌನ್ಸ್​ ಮಾಡಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯ ನಂತರ ಸೆಲೆಕ್ಷನ್​ ಕಮಿಟೀ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಿದೆ.

ಈ ಬಾರಿಯೂ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಹೀಗಾಗಿ ಹಾರ್ದಿಕ್​ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಬಿಸಿಸಿಐ ಅಳೆದು ತೂಗಿ ಬಲಿಷ್ಠ ತಂಡವನ್ನೇ ಅನೌನ್ಸ್​ ಮಾಡಿದೆ.

ಏಷ್ಯಾಕಪ್​​​ ತಂಡದಲ್ಲಿ ಶುಭ್ಮನ್​​ ಗಿಲ್​​ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಬಹಳ ದಿನಗಳ ಬಳಿಕ ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​​ ಮಾಡಿದ್ದಾರೆ. ಯುವ ಆಟಗಾರ ತಿಲಕ್​ ವರ್ಮಾಗೂ ಚಾನ್ಸ್​ ನೀಡಲಾಗಿದೆ.

ಜತೆಗೆ ವಿರಾಟ್​​ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದ್ದಾರೆ. ಕುಲದೀಪ್ ಯಾದವ್ ಸ್ಪಿನ್ನರ್‌ ಆಗಿ, ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​ಗೆ ಮಣೆ ಹಾಕಲಾಗಿದೆ. ಸಂಜು ಸ್ಯಾಮ್ಸನ್ ಸ್ಟ್ಯಾಂಡ್‌ ಬೈ ಆಟಗಾರರಾಗಿ ಆಯ್ಕೆ ಆಗಿದ್ದಾರೆ.

ಏಷ್ಯಾಕಪ್‌ಗಾಗಿ ಭಾರತ ತಂಡ ಹೀಗಿದೆ..!

ರೋಹಿತ್ ಶರ್ಮಾ (ಕ್ಯಾಪ್ಟನ್​​), ಶುಭ್ಮನ್​​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವೈಸ್​​ ಕ್ಯಾಪ್ಟನ್​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಷ್ಯಾಕಪ್​​ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ರಾಹುಲ್​, ಶ್ರೇಯಸ್​​ ಕಮ್​ಬ್ಯಾಕ್​​; ಮತ್ಯಾರಿಗೆ ಸ್ಥಾನ?

https://newsfirstlive.com/wp-content/uploads/2023/08/Team-India-4.jpg

    ಸದ್ಯದಲ್ಲೇ ನಡೆಯಲಿರೋ 2023 ಏಷ್ಯಾಕಪ್​ ಟೂರ್ನಿ

    2023 ಏಷ್ಯಾಕಪ್​ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..!

    ಕೆ.ಎಲ್​​​​ ರಾಹುಲ್​​, ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​​

ಸದ್ಯ ನಡೆಯುತ್ತಿರೋ ಐರ್ಲೆಂಡ್​​​ ವಿರುದ್ಧದ ಟಿ20 ಸೀರೀಸ್​​ ಬೆನ್ನಲ್ಲೇ 2023ರ ಏಕದಿನ ಏಷ್ಯಾಕಪ್​ ಟೂರ್ನಿ ನಡೆಯಲಿದೆ. ಆಗಸ್ಟ್​​ 30ನೇ ತಾರೀಕಿನಿಂದ ನಡೆಯಲಿರೋ ಏಷ್ಯಾಕಪ್​​ ಟೂರ್ನಿಗೆ ಕೊನೆಗೂ ಬಲಿಷ್ಠ ಟೀಂ ಇಂಡಿಯಾ ಅನೌನ್ಸ್​ ಮಾಡಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯ ನಂತರ ಸೆಲೆಕ್ಷನ್​ ಕಮಿಟೀ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಿದೆ.

ಈ ಬಾರಿಯೂ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಹೀಗಾಗಿ ಹಾರ್ದಿಕ್​ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಬಿಸಿಸಿಐ ಅಳೆದು ತೂಗಿ ಬಲಿಷ್ಠ ತಂಡವನ್ನೇ ಅನೌನ್ಸ್​ ಮಾಡಿದೆ.

ಏಷ್ಯಾಕಪ್​​​ ತಂಡದಲ್ಲಿ ಶುಭ್ಮನ್​​ ಗಿಲ್​​ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಬಹಳ ದಿನಗಳ ಬಳಿಕ ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​​ ಮಾಡಿದ್ದಾರೆ. ಯುವ ಆಟಗಾರ ತಿಲಕ್​ ವರ್ಮಾಗೂ ಚಾನ್ಸ್​ ನೀಡಲಾಗಿದೆ.

ಜತೆಗೆ ವಿರಾಟ್​​ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದ್ದಾರೆ. ಕುಲದೀಪ್ ಯಾದವ್ ಸ್ಪಿನ್ನರ್‌ ಆಗಿ, ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​ಗೆ ಮಣೆ ಹಾಕಲಾಗಿದೆ. ಸಂಜು ಸ್ಯಾಮ್ಸನ್ ಸ್ಟ್ಯಾಂಡ್‌ ಬೈ ಆಟಗಾರರಾಗಿ ಆಯ್ಕೆ ಆಗಿದ್ದಾರೆ.

ಏಷ್ಯಾಕಪ್‌ಗಾಗಿ ಭಾರತ ತಂಡ ಹೀಗಿದೆ..!

ರೋಹಿತ್ ಶರ್ಮಾ (ಕ್ಯಾಪ್ಟನ್​​), ಶುಭ್ಮನ್​​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವೈಸ್​​ ಕ್ಯಾಪ್ಟನ್​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More