ಸೂಪರ್-4 ನಲ್ಲಿ ಭಾರತಕ್ಕೆ ಪಾಕ್ ಮೊದಲ ಎದುರಾಳಿ
ಟೀಂ ಇಂಡಿಯಾ ಹಿಂದೆ ಮಾಡಿದ ತಪ್ಪೇನು? ತಿದ್ದಿಕೊಳ್ಳಬೇಕಿರೋದೇನು..?
ನಾಲ್ಕು ತಪ್ಪುಗಳಿಗೆ ಪರಿಹಾರ ಸಿಕ್ರೆ ಮಾತ್ರ ಗೆಲುವು ನಮ್ದು..!
ಏಷ್ಯಾಕಪ್ನಲ್ಲಿ ಇಂಡೋ-ಪಾಕ್ ಮೆಗಾ ಬ್ಯಾಟಲ್ಗೆ ಕ್ಷಣಗಣನೆ ಶುರುವಾಗಿದೆ. ಸೂಪರ್ ಸಂಡೇ ವಾರ್ನಲ್ಲಿ ಕ್ರಿಕೆಟ್ ಕಾ ದುಷ್ಮನ್ಸ್ ಮತ್ತೆ ಅಂಗಳದಲ್ಲಿ ಎದುರಾಗಲಿವೆ. ಮಳೆಯಿಂದ ರದ್ದಾದ ಪಂದ್ಯದಲ್ಲಿ ಭಾರತದ ಟಾಪ್ ಆರ್ಡರ್ ಮಾನ ಹರಾಜಾಗಿತ್ತು. ಇಂತಹ ಮಿಸ್ಟೇಕ್ಸ್ ಮತ್ತೆ ರಿಪೀಟ್ ಆಗ್ಬಾರ್ದು ಅಂದ್ರೆ ಈ ಚೇಂಜಸ್ ಮಾಡಿಕೊಳ್ಳಬೇಕಿದೆ.
ಇಂಡೋ ವರ್ಸಸ್ ಪಾಕ್..! ಈ ಬದ್ಧವೈರಿಗಳ ಕಾಳಗಕ್ಕೆ ಮತ್ತೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 10 ರಂದು ಉಭಯ ತಂಡಗಳು ಏಷ್ಯಾಕಪ್ ಸೂಪರ್-4 ನಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಹೈವೋಲ್ಟೇಜ್ ಪಂದ್ಯದ ಮಜಾ ಸವಿಯಲು ಇಡೀ ವಿಶ್ವವೇ ಕಾದು ಕುಳಿತಿದೆ.
4 ತಪ್ಪಿಗೆ ಪರಿಹಾರ ಸಿಕ್ರೆ ಮಾತ್ರ ಗೆಲುವು ನಮ್ದು..!
ಮಳೆಯಿಂದಾಗಿ ಏಷ್ಯಾಕಪ್ನಲ್ಲಿ ಇಂಡೋ-ಪಾಕ್ ಮೊದಲ ಪಂದ್ಯ ರದ್ದಾಗಿತ್ತು. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ವೀಕ್ನೆಸ್ಗಳು ಬಟಾಬಯಲಾಗಿತ್ತು. ಆ ಮಿಸ್ಟೆಕ್ಸ್ ಸರಿಪಡಿಸಿಕೊಳ್ಳಲು ಮತ್ತೊಮ್ಮೆ ಬೆಸ್ಟ್ ಚಾನ್ಸ್ ಸಿಕ್ಕಿದೆ. ಸಂಡೇ ವಾರ್ನಲ್ಲಿ ಪಾಕ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲೇಬೇಕಿದೆ. ಹಾಗಾಗಬೇಕಾದ್ರೆ ರೋಹಿತ್ ಶರ್ಮಾ & ಗ್ಯಾಂಗ್ ಈ ಮಿಸ್ಟೆಕ್ಸ್ಗೆ ಸೆಲ್ಯೂಷನ್ ಕಂಡುಕೊಳ್ಳಬೇಕು.
ಟಾಪ್ ಆಟ ಆಡಬೇಕಿದೆ ಟಾಪ್ ಆರ್ಡರ್ ಬ್ಯಾಟರ್ಸ್..!
ಸಂಡೇ ಮಹಾಸಂಗ್ರಾಮದಲ್ಲಿ ಭಾರತ, ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಬೇಕಾದ್ರೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಟಾಪ್ ಆಟವಾಡಬೇಕಿದೆ. ಮೊದಲ ಮುಖಾಮುಖಿಯಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ದಯನೀಯ ವೈಫಲ್ಯ ಕಂಡಿದ್ರು. 66 ರನ್ ಅಂತರದಲ್ಲಿ ಅಗ್ರ ನಾಲ್ವರು ಬ್ಯಾಟ್ಸ್ಮನ್ ಪೆವಿಲಿಯನ್ ಸೇರಿ ತಂಡವನ್ನ ನಡುನೀರಲ್ಲಿ ಕೈಬಿಟ್ಟಿದ್ರು.
ಸಂಡೇ ಬ್ಯಾಟಲ್ನಲ್ಲಿ ಹಿಂದಾದ ಈ ಫೇಲ್ಯೂರ್ ಮರುಕಳಿಸಬಾರದು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕೆರಳಿ ನಿಲ್ಲಬೇಕಿದೆ. ಆಗಲಷ್ಟೇ ಪಾಕ್ ಹೆಡೆಮುರಿ ಕಟ್ಟುವ ಭಾರತದ ಕನಸು ನನಸಾಗಲಿದೆ. ಇಲ್ಲವಾದ್ರೆ, ಪಾಕ್ ತೋಡೋ ಖೆಡ್ಡಾಗೆ ರೋಹಿತ್ ಪಡೆ ಬೀಳಬೇಕಾಗುತ್ತೆ.
ಮೈಚಳಿ ಬಿಟ್ಟು ಆಡಬೇಕಿದೆ ಓಪನರ್ಸ್
ಬಿಗ್ ಗೇಮ್ಗಳಲ್ಲಿ ತಂಡಕ್ಕೆ ಓಪನರ್ಸ್ ಬಿಗ್ ಸ್ಟ್ರೆಂಥ್. ಈ ಮಾತನ್ನ ಇಂಡಿಯನ್ ಓಪನರ್ಸ್ ಮರೆತಿದ್ದಾರೆ. ಪಾಕ್ ವಿರುದ್ಧ ರೋಹಿತ್ ಹಾಗೂ ಗಿಲ್ ರನ್ ಗಳಿಸಲು ಇನ್ನಿಲ್ಲದಂತೆ ತಿಣುಕಾಡಿದ್ರು.ಇಬ್ಬರೂ ಭಯದಿಂದಲೇ ಆಡ್ತಿದ್ದಂತೆ ಭಾಸವಾಗ್ತಿತ್ತು. ಅಟ್ಯಾಕ್ ಮಾಡಲು ಮುಂದಾಗಲಿಲ್ಲ. ಸೂಪರ್ 4 ಪಂದ್ಯದಲ್ಲಾದ್ರೂ ಮೈ ಚಳಿಬಿಟ್ಟು ಆಡಬೇಕಿದೆ. ಪಾಕ್ನಂತ ಡೆಡ್ಲಿ ಪೇಸರ್ಗಳನ್ನ ಎದುರಿಸಬೇಕಾದ್ರೆ, ಅಗ್ರೆಸ್ಸಿವ್ ಅಪ್ರೋಚ್ ಅತ್ಯಗತ್ಯ. ಈ ಸತ್ಯವನ್ನ ರೋಹಿತ್-ಗಿಲ್ ಅರಿತುಕೊಳ್ಳಬೇಕಿದೆ.
ಎಡಗೈ ವೇಗಿಗಳನ್ನ ದಿಟ್ಟವಾಗಿ ಎದುರಿಸಬೇಕು
ಲೆಫ್ಟ್ ಆರ್ಮ್ ಬೌಲರ್ಸ್ ಭಾರತಕ್ಕೆ ಬಿಗ್ ಥ್ರೆಟ್. ಪಾಕ್ ಎದುರಿನ ಪಂದ್ಯದಲ್ಲಿ ಅದು ಮತ್ತೊಮ್ಮೆ ಪ್ರೂವ್ ಆಗಿತ್ತು. ಶಾಹೀನ್ ಶಾ ಅಫ್ರಿದಿ ಘಾತಕ ದಾಳಿ ನಡೆಸಿ 4 ವಿಕೆಟ್ ಕಬಳಿಸಿದ್ರು. ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ, ಹಾರ್ದಿಕ್ ಹಾಗೂ ಜಡೇಜಾರಂತ ಸ್ಟಾರ್ ಪ್ಲೇಯರ್ಸ್ ಶಾಹೀನ್ ಅಫ್ರಿದಿಯ ಬಲೆಗೆ ಬಿದ್ದಿದ್ರು. ಭಾರತ ಸೂಪರ್-4 ನಲ್ಲಿ ಶುಭಾರಂಭ ಮಾಡಬೇಕಾದ್ರೆ, ಮೊದಲು ಲೆಫ್ಟ್ ಆರ್ಮ್ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಬೇಕು.
ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಂದ ಬೇಕಿದೆ ಸಾಥ್
ಲೋವರ್ ಆರ್ಡರ್ ಬ್ಯಾಟಿಂಗ್ ಕೂಡ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಇಶಾನ್ ಕಿಶನ್-ಹಾರ್ದಿಕ್ ಪಾಂಡ್ಯ ಬೊಂಬಾಟ್ ಪ್ರದರ್ಶನದ ಹೊರತಾಗಿಯೂ ಕೆಳಕ್ರಮಾಂಕ ಫೇಲ್ಯೂರ್ ಕಂಡಿತ್ತು. ಕೊನೆ 3 ವಿಕೆಟ್ಗಳನ್ನ 24 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಈ ಮಿಸ್ಟೇಕ್ಸ್ಗೆ ನೆಕ್ಸ್ಟ್ ಮ್ಯಾಚ್ನಲ್ಲಿ ಫುಲ್ ಸ್ಟಾಪ್ ಬೀಳಬೇಕಿದೆ.
ಒಟ್ಟಿನಲ್ಲಿ, ಬ್ಯಾಟ್ಸ್ಮನ್ಗಳು ತಪ್ಪು ಸರಿಪಡಿಸಿಕೊಂಡರಷ್ಟೇ ಸಂಡೇ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಗೆಲ್ಲಲಿದೆ. ಇಲ್ಲದಿದ್ರೆ, ಅದೇ ರಾಗ ಅದೇ ಹಾಡು ಎನ್ನುವಂತೆ ಹಳೇ ಕಥೆ ರಿಪೀಟ್ ಆಗಲಿದೆ. ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸೂಪರ್-4 ನಲ್ಲಿ ಭಾರತಕ್ಕೆ ಪಾಕ್ ಮೊದಲ ಎದುರಾಳಿ
ಟೀಂ ಇಂಡಿಯಾ ಹಿಂದೆ ಮಾಡಿದ ತಪ್ಪೇನು? ತಿದ್ದಿಕೊಳ್ಳಬೇಕಿರೋದೇನು..?
ನಾಲ್ಕು ತಪ್ಪುಗಳಿಗೆ ಪರಿಹಾರ ಸಿಕ್ರೆ ಮಾತ್ರ ಗೆಲುವು ನಮ್ದು..!
ಏಷ್ಯಾಕಪ್ನಲ್ಲಿ ಇಂಡೋ-ಪಾಕ್ ಮೆಗಾ ಬ್ಯಾಟಲ್ಗೆ ಕ್ಷಣಗಣನೆ ಶುರುವಾಗಿದೆ. ಸೂಪರ್ ಸಂಡೇ ವಾರ್ನಲ್ಲಿ ಕ್ರಿಕೆಟ್ ಕಾ ದುಷ್ಮನ್ಸ್ ಮತ್ತೆ ಅಂಗಳದಲ್ಲಿ ಎದುರಾಗಲಿವೆ. ಮಳೆಯಿಂದ ರದ್ದಾದ ಪಂದ್ಯದಲ್ಲಿ ಭಾರತದ ಟಾಪ್ ಆರ್ಡರ್ ಮಾನ ಹರಾಜಾಗಿತ್ತು. ಇಂತಹ ಮಿಸ್ಟೇಕ್ಸ್ ಮತ್ತೆ ರಿಪೀಟ್ ಆಗ್ಬಾರ್ದು ಅಂದ್ರೆ ಈ ಚೇಂಜಸ್ ಮಾಡಿಕೊಳ್ಳಬೇಕಿದೆ.
ಇಂಡೋ ವರ್ಸಸ್ ಪಾಕ್..! ಈ ಬದ್ಧವೈರಿಗಳ ಕಾಳಗಕ್ಕೆ ಮತ್ತೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 10 ರಂದು ಉಭಯ ತಂಡಗಳು ಏಷ್ಯಾಕಪ್ ಸೂಪರ್-4 ನಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಹೈವೋಲ್ಟೇಜ್ ಪಂದ್ಯದ ಮಜಾ ಸವಿಯಲು ಇಡೀ ವಿಶ್ವವೇ ಕಾದು ಕುಳಿತಿದೆ.
4 ತಪ್ಪಿಗೆ ಪರಿಹಾರ ಸಿಕ್ರೆ ಮಾತ್ರ ಗೆಲುವು ನಮ್ದು..!
ಮಳೆಯಿಂದಾಗಿ ಏಷ್ಯಾಕಪ್ನಲ್ಲಿ ಇಂಡೋ-ಪಾಕ್ ಮೊದಲ ಪಂದ್ಯ ರದ್ದಾಗಿತ್ತು. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ವೀಕ್ನೆಸ್ಗಳು ಬಟಾಬಯಲಾಗಿತ್ತು. ಆ ಮಿಸ್ಟೆಕ್ಸ್ ಸರಿಪಡಿಸಿಕೊಳ್ಳಲು ಮತ್ತೊಮ್ಮೆ ಬೆಸ್ಟ್ ಚಾನ್ಸ್ ಸಿಕ್ಕಿದೆ. ಸಂಡೇ ವಾರ್ನಲ್ಲಿ ಪಾಕ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲೇಬೇಕಿದೆ. ಹಾಗಾಗಬೇಕಾದ್ರೆ ರೋಹಿತ್ ಶರ್ಮಾ & ಗ್ಯಾಂಗ್ ಈ ಮಿಸ್ಟೆಕ್ಸ್ಗೆ ಸೆಲ್ಯೂಷನ್ ಕಂಡುಕೊಳ್ಳಬೇಕು.
ಟಾಪ್ ಆಟ ಆಡಬೇಕಿದೆ ಟಾಪ್ ಆರ್ಡರ್ ಬ್ಯಾಟರ್ಸ್..!
ಸಂಡೇ ಮಹಾಸಂಗ್ರಾಮದಲ್ಲಿ ಭಾರತ, ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಬೇಕಾದ್ರೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಟಾಪ್ ಆಟವಾಡಬೇಕಿದೆ. ಮೊದಲ ಮುಖಾಮುಖಿಯಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ದಯನೀಯ ವೈಫಲ್ಯ ಕಂಡಿದ್ರು. 66 ರನ್ ಅಂತರದಲ್ಲಿ ಅಗ್ರ ನಾಲ್ವರು ಬ್ಯಾಟ್ಸ್ಮನ್ ಪೆವಿಲಿಯನ್ ಸೇರಿ ತಂಡವನ್ನ ನಡುನೀರಲ್ಲಿ ಕೈಬಿಟ್ಟಿದ್ರು.
ಸಂಡೇ ಬ್ಯಾಟಲ್ನಲ್ಲಿ ಹಿಂದಾದ ಈ ಫೇಲ್ಯೂರ್ ಮರುಕಳಿಸಬಾರದು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕೆರಳಿ ನಿಲ್ಲಬೇಕಿದೆ. ಆಗಲಷ್ಟೇ ಪಾಕ್ ಹೆಡೆಮುರಿ ಕಟ್ಟುವ ಭಾರತದ ಕನಸು ನನಸಾಗಲಿದೆ. ಇಲ್ಲವಾದ್ರೆ, ಪಾಕ್ ತೋಡೋ ಖೆಡ್ಡಾಗೆ ರೋಹಿತ್ ಪಡೆ ಬೀಳಬೇಕಾಗುತ್ತೆ.
ಮೈಚಳಿ ಬಿಟ್ಟು ಆಡಬೇಕಿದೆ ಓಪನರ್ಸ್
ಬಿಗ್ ಗೇಮ್ಗಳಲ್ಲಿ ತಂಡಕ್ಕೆ ಓಪನರ್ಸ್ ಬಿಗ್ ಸ್ಟ್ರೆಂಥ್. ಈ ಮಾತನ್ನ ಇಂಡಿಯನ್ ಓಪನರ್ಸ್ ಮರೆತಿದ್ದಾರೆ. ಪಾಕ್ ವಿರುದ್ಧ ರೋಹಿತ್ ಹಾಗೂ ಗಿಲ್ ರನ್ ಗಳಿಸಲು ಇನ್ನಿಲ್ಲದಂತೆ ತಿಣುಕಾಡಿದ್ರು.ಇಬ್ಬರೂ ಭಯದಿಂದಲೇ ಆಡ್ತಿದ್ದಂತೆ ಭಾಸವಾಗ್ತಿತ್ತು. ಅಟ್ಯಾಕ್ ಮಾಡಲು ಮುಂದಾಗಲಿಲ್ಲ. ಸೂಪರ್ 4 ಪಂದ್ಯದಲ್ಲಾದ್ರೂ ಮೈ ಚಳಿಬಿಟ್ಟು ಆಡಬೇಕಿದೆ. ಪಾಕ್ನಂತ ಡೆಡ್ಲಿ ಪೇಸರ್ಗಳನ್ನ ಎದುರಿಸಬೇಕಾದ್ರೆ, ಅಗ್ರೆಸ್ಸಿವ್ ಅಪ್ರೋಚ್ ಅತ್ಯಗತ್ಯ. ಈ ಸತ್ಯವನ್ನ ರೋಹಿತ್-ಗಿಲ್ ಅರಿತುಕೊಳ್ಳಬೇಕಿದೆ.
ಎಡಗೈ ವೇಗಿಗಳನ್ನ ದಿಟ್ಟವಾಗಿ ಎದುರಿಸಬೇಕು
ಲೆಫ್ಟ್ ಆರ್ಮ್ ಬೌಲರ್ಸ್ ಭಾರತಕ್ಕೆ ಬಿಗ್ ಥ್ರೆಟ್. ಪಾಕ್ ಎದುರಿನ ಪಂದ್ಯದಲ್ಲಿ ಅದು ಮತ್ತೊಮ್ಮೆ ಪ್ರೂವ್ ಆಗಿತ್ತು. ಶಾಹೀನ್ ಶಾ ಅಫ್ರಿದಿ ಘಾತಕ ದಾಳಿ ನಡೆಸಿ 4 ವಿಕೆಟ್ ಕಬಳಿಸಿದ್ರು. ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ, ಹಾರ್ದಿಕ್ ಹಾಗೂ ಜಡೇಜಾರಂತ ಸ್ಟಾರ್ ಪ್ಲೇಯರ್ಸ್ ಶಾಹೀನ್ ಅಫ್ರಿದಿಯ ಬಲೆಗೆ ಬಿದ್ದಿದ್ರು. ಭಾರತ ಸೂಪರ್-4 ನಲ್ಲಿ ಶುಭಾರಂಭ ಮಾಡಬೇಕಾದ್ರೆ, ಮೊದಲು ಲೆಫ್ಟ್ ಆರ್ಮ್ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಬೇಕು.
ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಂದ ಬೇಕಿದೆ ಸಾಥ್
ಲೋವರ್ ಆರ್ಡರ್ ಬ್ಯಾಟಿಂಗ್ ಕೂಡ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಇಶಾನ್ ಕಿಶನ್-ಹಾರ್ದಿಕ್ ಪಾಂಡ್ಯ ಬೊಂಬಾಟ್ ಪ್ರದರ್ಶನದ ಹೊರತಾಗಿಯೂ ಕೆಳಕ್ರಮಾಂಕ ಫೇಲ್ಯೂರ್ ಕಂಡಿತ್ತು. ಕೊನೆ 3 ವಿಕೆಟ್ಗಳನ್ನ 24 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಈ ಮಿಸ್ಟೇಕ್ಸ್ಗೆ ನೆಕ್ಸ್ಟ್ ಮ್ಯಾಚ್ನಲ್ಲಿ ಫುಲ್ ಸ್ಟಾಪ್ ಬೀಳಬೇಕಿದೆ.
ಒಟ್ಟಿನಲ್ಲಿ, ಬ್ಯಾಟ್ಸ್ಮನ್ಗಳು ತಪ್ಪು ಸರಿಪಡಿಸಿಕೊಂಡರಷ್ಟೇ ಸಂಡೇ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಗೆಲ್ಲಲಿದೆ. ಇಲ್ಲದಿದ್ರೆ, ಅದೇ ರಾಗ ಅದೇ ಹಾಡು ಎನ್ನುವಂತೆ ಹಳೇ ಕಥೆ ರಿಪೀಟ್ ಆಗಲಿದೆ. ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ