newsfirstkannada.com

ಅಣ್ತಮ್ಮ ನಾವ್‌ ಬಂದ್ರೂ ರೆಸ್ಪೆಕ್ಟ್‌ ಕೊಡಲ್ವಾ.. ಬೆಂಗಳೂರಲ್ಲಿ ಪುಡಿ ರೌಡಿಗಳಿಂದ ಡೆಡ್ಲಿ ಅಟ್ಯಾಕ್‌!

Share :

02-09-2023

    ಏನೋ ನಾವು ಎಂಟ್ರಿ ಕೊಟ್ರೂ ಎದ್ದೇಳದೇ ಹಾಗೇ ಕೂತಿದ್ಯಾ..

    ಟೀ ಕುಡಿಯಲು ಅಂಗಡಿಗೆ ಹೋದಾಗ ಪುಡಿ ರೌಡಿಗಳ ಕಿರಿಕ್

    ಮಚ್ಚು, ಲಾಂಗ್‌ನಿಂದ ಅಟ್ಯಾಕ್ ಮಾಡಿದ ಕಾವೇರಿ ಶಿವು ಗ್ಯಾಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದೆ. ಮಡಿವಾಳದ ವೆಂಕಟಾಪುರದಲ್ಲಿ ಪುಂಡರು ಲಾಂಗು, ಮಚ್ಚು ಹಿಡಿದು ಯುವಕನನ್ನ ಅಟ್ಟಾಡಿಸಿರೋ ಘಟನೆ ಬೆಳಕಿಗೆ ಬಂದಿದೆ. ಟೀ ಅಂಗಡಿಯಲ್ಲಿ ಕೂತಿದ್ದ ಯುವಕ ನಮ್ಮನ್ನು ನೋಡಿದ್ರೂ ರೆಸ್ಪೆಕ್ಟ್‌ ಕೊಡಲಿಲ್ಲ ಅನ್ನೋ ಸಿಲ್ಲಿ ಕಾರಣಕ್ಕೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್‌ ಮಾಡಲಾಗಿದೆ.

ಇದನ್ನೂ ಓದಿ: Sudeep: ಕಿಚ್ಚನ ಬರ್ತ್‌ ಡೇಯಲ್ಲೂ ದಚ್ಚು.. ರಾರಾಜಿಸಿದ ಕುಚಿಕು ಗೆಳೆಯರು; ಸುದೀಪ್ ಸಂಭ್ರಮದ ಟಾಪ್ 10 ಫೋಟೋ ಇಲ್ಲಿವೆ

ಮಡಿವಾಳದ ವೆಂಕಟಾಪುರದಲ್ಲಿ ರಮೇಶ್ ಎಂಬ ಯುವಕ ಟೀ ಕುಡಿಯಲು ಅಂಗಡಿಗೆ ತೆರಳಿದ್ದಾನೆ. ಈ ವೇಳೆ ಟೀ ಅಂಗಡಿಗೆ ಕಾವೇರಿ ಶಿವು ಮತ್ತವರ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸುಮ್ಮನೆ ಇದ್ದ ಯುವಕನ ನೋಡಿ ಏನೋ ನಾವ್ ಬಂದ್ರೂ ರೆಸ್ಪೆಕ್ಟ್ ಕೊಡಲ್ವಾ. ಮೇಲೆ ಎದ್ದೇಳದೇ ಹಾಗೇ ಕೂತಿದ್ಯಾ ಅಂತಾ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.

ಕಿರಿಕ್ ತೆಗೆದ ಕಾವೇರಿ ಶಿವು ಮತ್ತವರ ಗ್ಯಾಂಗ್ ಬಳಿ ಮಚ್ಚು, ಲಾಂಗ್‌ಗಳು ಇತ್ತು. ಇದನ್ನು ನೋಡಿದ ಯುವಕ ರಮೇಶ್‌ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ರಮೇಶ್‌ನನ್ನು ಅಟ್ಟಾಡಿಸಿದ ಶಿವು ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೌಡಿಸಂ ಪ್ರದರ್ಶಿಸಿದೆ. ರಮೇಶ್ ಎಂಬ ಯುವಕನ ಮೇಲೆ ಈ ಪುಂಡರ ಗುಂಪಿನಿಂದ ಮಾರಣಾಂತಿಕ ಹಲ್ಲೆಗಳಾಗಿವೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಣ್ತಮ್ಮ ನಾವ್‌ ಬಂದ್ರೂ ರೆಸ್ಪೆಕ್ಟ್‌ ಕೊಡಲ್ವಾ.. ಬೆಂಗಳೂರಲ್ಲಿ ಪುಡಿ ರೌಡಿಗಳಿಂದ ಡೆಡ್ಲಿ ಅಟ್ಯಾಕ್‌!

https://newsfirstlive.com/wp-content/uploads/2023/09/Bangalore-Rowdy.jpg

    ಏನೋ ನಾವು ಎಂಟ್ರಿ ಕೊಟ್ರೂ ಎದ್ದೇಳದೇ ಹಾಗೇ ಕೂತಿದ್ಯಾ..

    ಟೀ ಕುಡಿಯಲು ಅಂಗಡಿಗೆ ಹೋದಾಗ ಪುಡಿ ರೌಡಿಗಳ ಕಿರಿಕ್

    ಮಚ್ಚು, ಲಾಂಗ್‌ನಿಂದ ಅಟ್ಯಾಕ್ ಮಾಡಿದ ಕಾವೇರಿ ಶಿವು ಗ್ಯಾಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದೆ. ಮಡಿವಾಳದ ವೆಂಕಟಾಪುರದಲ್ಲಿ ಪುಂಡರು ಲಾಂಗು, ಮಚ್ಚು ಹಿಡಿದು ಯುವಕನನ್ನ ಅಟ್ಟಾಡಿಸಿರೋ ಘಟನೆ ಬೆಳಕಿಗೆ ಬಂದಿದೆ. ಟೀ ಅಂಗಡಿಯಲ್ಲಿ ಕೂತಿದ್ದ ಯುವಕ ನಮ್ಮನ್ನು ನೋಡಿದ್ರೂ ರೆಸ್ಪೆಕ್ಟ್‌ ಕೊಡಲಿಲ್ಲ ಅನ್ನೋ ಸಿಲ್ಲಿ ಕಾರಣಕ್ಕೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್‌ ಮಾಡಲಾಗಿದೆ.

ಇದನ್ನೂ ಓದಿ: Sudeep: ಕಿಚ್ಚನ ಬರ್ತ್‌ ಡೇಯಲ್ಲೂ ದಚ್ಚು.. ರಾರಾಜಿಸಿದ ಕುಚಿಕು ಗೆಳೆಯರು; ಸುದೀಪ್ ಸಂಭ್ರಮದ ಟಾಪ್ 10 ಫೋಟೋ ಇಲ್ಲಿವೆ

ಮಡಿವಾಳದ ವೆಂಕಟಾಪುರದಲ್ಲಿ ರಮೇಶ್ ಎಂಬ ಯುವಕ ಟೀ ಕುಡಿಯಲು ಅಂಗಡಿಗೆ ತೆರಳಿದ್ದಾನೆ. ಈ ವೇಳೆ ಟೀ ಅಂಗಡಿಗೆ ಕಾವೇರಿ ಶಿವು ಮತ್ತವರ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸುಮ್ಮನೆ ಇದ್ದ ಯುವಕನ ನೋಡಿ ಏನೋ ನಾವ್ ಬಂದ್ರೂ ರೆಸ್ಪೆಕ್ಟ್ ಕೊಡಲ್ವಾ. ಮೇಲೆ ಎದ್ದೇಳದೇ ಹಾಗೇ ಕೂತಿದ್ಯಾ ಅಂತಾ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.

ಕಿರಿಕ್ ತೆಗೆದ ಕಾವೇರಿ ಶಿವು ಮತ್ತವರ ಗ್ಯಾಂಗ್ ಬಳಿ ಮಚ್ಚು, ಲಾಂಗ್‌ಗಳು ಇತ್ತು. ಇದನ್ನು ನೋಡಿದ ಯುವಕ ರಮೇಶ್‌ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ರಮೇಶ್‌ನನ್ನು ಅಟ್ಟಾಡಿಸಿದ ಶಿವು ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೌಡಿಸಂ ಪ್ರದರ್ಶಿಸಿದೆ. ರಮೇಶ್ ಎಂಬ ಯುವಕನ ಮೇಲೆ ಈ ಪುಂಡರ ಗುಂಪಿನಿಂದ ಮಾರಣಾಂತಿಕ ಹಲ್ಲೆಗಳಾಗಿವೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More