newsfirstkannada.com

‘ಇನ್ಮುಂದೆ ಏಟಿಗೆ ಏಟು, ಗುದ್ದಿಗೆ ಗುದ್ದು, ಹೆದರೋ ಮಾತೇ ಇಲ್ಲ‘- ಜಗನ್​ಗೆ ಬಾಲಯ್ಯ ವಾರ್ನಿಂಗ್​​

Share :

14-09-2023

    ಕೇಸ್​​ವೊಂದರಲ್ಲಿ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅರೆಸ್ಟ್​​

    ಮುಖ್ಯಮಂತ್ರಿ ಸಿಎಂ ಜಗನ್​​ಗೆ ವಾರ್ನಿಂಗ್​ ಕೊಟ್ಟ ನಟ ಬಾಲಯ್ಯ

    ಏಟಿಗೆ ಏಟು, ಗುದ್ದಿಗೆ ಗುದ್ದು, ಹೆದರೋ ಮಾತೇ ಇಲ್ಲ ಎಂದ NTR ಪುತ್ರ

ಅಮರಾವತಿ: ವರ್ಷಾಂತ್ಯಕ್ಕೆ ಆಂಧ್ರ ಪ್ರದೇಶದಲ್ಲಿ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಸಿಎಂ ಜಗನ್​​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​, ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಾಯಕತ್ವದ ತೆಲುಗು ದೇಶಂ ಪಕ್ಷ, ಪವನ್​ ಕಲ್ಯಾಣ್​​ ಜನಸೇನಾ ಪಾರ್ಟಿಯೂ ಭಾರೀ ತಯಾರಿ ಮಾಡಿಕೊಂಡಿವೆ. ಈ ಹೊತ್ತಲೇ ಕೇಸ್​​ವೊಂದರಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಜಗನ್​ ಮೋಹನ್​​ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಸರ್ಕಾರ ಅರೆಸ್ಟ್​ ಮಾಡಿದ್ದು, ಇಡೀ ಆಂಧ್ರದಲ್ಲೇ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿವೆ. ಅದರಲ್ಲೂ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪವನ್‌ ಕಲ್ಯಾಣ್‌ ಟಿಡಿಪಿ, ಜನಸೇನಾ ಮೈತ್ರಿ ಬಗ್ಗೆ ಘೋಷಿಸಿದ್ದಾರೆ. ಹೀಗಿರುವಾಗಲೇ ಟಿಡಿಪಿ ಶಾಸಕ, ನಟ ಬಾಲಯ್ಯ ಸಿಎಂ ಜಗನ್ ಅವರಿ​​ಗೆ ವಾರ್ನಿಂಗ್​ ಕೊಟ್ಟಿದ್ದಾರೆ.

ಜೈಲಿನಲ್ಲಿರೋ ಚಂದ್ರಬಾಬು ನಾಯ್ಡು ಭೇಟಿ ಬಳಿಕ ಮಾತಾಡಿದ ಬಾಲಯ್ಯ, ನಾವು ಎಂದೂ ಕೈಕಟ್ಟಿ ಕೂತಿಲ್ಲ. ಇವರ ದುರಾಡಳಿತ ಸಹಿಸಲು ಸಾಧ್ಯವಿಲ್ಲ. ಯಾರಿಗೂ ಹೆದರೋ ಮಾತೇ ಇಲ್ಲ. ಏಟಿಗೆ ಏಟು, ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿದ್ದೇವೆ ಎಂದರು.

ಈ ಮುನ್ನ ಮಾತಾಡಿದ್ದ ಪವನ್​ ಕಲ್ಯಾಣ್​​, ನಾನು ಇಲ್ಲಿಯವರೆಗೂ ಟಿಡಿಪಿ ಜತೆ ಮೈತ್ರಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೆ. ಈಗ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಮಹತ್ವದ ತೀರ್ಮಾನಕ್ಕೆ ಬಂದಿದ್ದೇನೆ. ಜನಸೇನೆ ಮತ್ತು ಟಿಡಿಪಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ ಎಂದಿದ್ದರು.

ಏನಿದು ಕೇಸ್..​​?

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು 2021ರಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ಸದ್ಯ ಚಂದ್ರಬಾಬು ನಾಯ್ಡು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇನ್ಮುಂದೆ ಏಟಿಗೆ ಏಟು, ಗುದ್ದಿಗೆ ಗುದ್ದು, ಹೆದರೋ ಮಾತೇ ಇಲ್ಲ‘- ಜಗನ್​ಗೆ ಬಾಲಯ್ಯ ವಾರ್ನಿಂಗ್​​

https://newsfirstlive.com/wp-content/uploads/2023/09/Balayya.jpg

    ಕೇಸ್​​ವೊಂದರಲ್ಲಿ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅರೆಸ್ಟ್​​

    ಮುಖ್ಯಮಂತ್ರಿ ಸಿಎಂ ಜಗನ್​​ಗೆ ವಾರ್ನಿಂಗ್​ ಕೊಟ್ಟ ನಟ ಬಾಲಯ್ಯ

    ಏಟಿಗೆ ಏಟು, ಗುದ್ದಿಗೆ ಗುದ್ದು, ಹೆದರೋ ಮಾತೇ ಇಲ್ಲ ಎಂದ NTR ಪುತ್ರ

ಅಮರಾವತಿ: ವರ್ಷಾಂತ್ಯಕ್ಕೆ ಆಂಧ್ರ ಪ್ರದೇಶದಲ್ಲಿ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಸಿಎಂ ಜಗನ್​​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​, ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಾಯಕತ್ವದ ತೆಲುಗು ದೇಶಂ ಪಕ್ಷ, ಪವನ್​ ಕಲ್ಯಾಣ್​​ ಜನಸೇನಾ ಪಾರ್ಟಿಯೂ ಭಾರೀ ತಯಾರಿ ಮಾಡಿಕೊಂಡಿವೆ. ಈ ಹೊತ್ತಲೇ ಕೇಸ್​​ವೊಂದರಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಜಗನ್​ ಮೋಹನ್​​ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಸರ್ಕಾರ ಅರೆಸ್ಟ್​ ಮಾಡಿದ್ದು, ಇಡೀ ಆಂಧ್ರದಲ್ಲೇ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿವೆ. ಅದರಲ್ಲೂ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಪವನ್‌ ಕಲ್ಯಾಣ್‌ ಟಿಡಿಪಿ, ಜನಸೇನಾ ಮೈತ್ರಿ ಬಗ್ಗೆ ಘೋಷಿಸಿದ್ದಾರೆ. ಹೀಗಿರುವಾಗಲೇ ಟಿಡಿಪಿ ಶಾಸಕ, ನಟ ಬಾಲಯ್ಯ ಸಿಎಂ ಜಗನ್ ಅವರಿ​​ಗೆ ವಾರ್ನಿಂಗ್​ ಕೊಟ್ಟಿದ್ದಾರೆ.

ಜೈಲಿನಲ್ಲಿರೋ ಚಂದ್ರಬಾಬು ನಾಯ್ಡು ಭೇಟಿ ಬಳಿಕ ಮಾತಾಡಿದ ಬಾಲಯ್ಯ, ನಾವು ಎಂದೂ ಕೈಕಟ್ಟಿ ಕೂತಿಲ್ಲ. ಇವರ ದುರಾಡಳಿತ ಸಹಿಸಲು ಸಾಧ್ಯವಿಲ್ಲ. ಯಾರಿಗೂ ಹೆದರೋ ಮಾತೇ ಇಲ್ಲ. ಏಟಿಗೆ ಏಟು, ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿದ್ದೇವೆ ಎಂದರು.

ಈ ಮುನ್ನ ಮಾತಾಡಿದ್ದ ಪವನ್​ ಕಲ್ಯಾಣ್​​, ನಾನು ಇಲ್ಲಿಯವರೆಗೂ ಟಿಡಿಪಿ ಜತೆ ಮೈತ್ರಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೆ. ಈಗ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ ಮಹತ್ವದ ತೀರ್ಮಾನಕ್ಕೆ ಬಂದಿದ್ದೇನೆ. ಜನಸೇನೆ ಮತ್ತು ಟಿಡಿಪಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ ಎಂದಿದ್ದರು.

ಏನಿದು ಕೇಸ್..​​?

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು 2021ರಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಕೌಶಲ್ಯ ಅಭಿವೃದ್ದಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ಸದ್ಯ ಚಂದ್ರಬಾಬು ನಾಯ್ಡು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More