ತಾಯಿ ಆನೆ ಜೊತೆ ಹೋಗುತ್ತಿರುವ ಮರಿಯಾನೆ
ರಸ್ತೆಯಲ್ಲಿ ತೆರಳ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆ
ಮರಿ ಆನೆ ಹುಡುಕಿ ಚಿಕಿತ್ಸೆ ಕೊಡುತ್ತಾ ಅರಣ್ಯ ಇಲಾಖೆ?
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿದ್ದು ಈ ವೇಳೆ ಆನೆ ಮರಿಯ ಎಡಗಾಲಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿದೆ.
ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿರುತ್ತವೆ. ಈ ಹಿಂಡಿನಲ್ಲಿ ತಾಯಿ ಆನೆ ಜೊತೆ ಮರಿ ಆನೆಯೊಂದು ಕಾಣಿಸಿದೆ. ಆದರೆ ಅದರ ಎಡಗಾಲಿಗೆ ಗಂಭೀರವಾದ ಗಾಯವಾಗಿದ್ದು ಕುಂಟುತ್ತ ನಡೆಯಲು ಕಷ್ಟ ಪಡುತ್ತಿದೆ.
ಚಾಮರಾಜನಗರ ಬಂಡಿಪುರದಲ್ಲಿ ಮರಿಯಾನೆ ಎಡಗಾಲಿಗೆ ಗಾಯಮಾಡಿಕೊಂಡಿದೆ. ಬಂಡಿಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಕುಂಟುತ್ತಾ ಸಾಗಿದೆ. #Elephantcalf #Bandipura #NewsFirstKannada pic.twitter.com/KG2Z8L9Bj7
— NewsFirst Kannada (@NewsFirstKan) August 20, 2023
ದೃಶ್ಯವನ್ನು ರಸ್ತೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಗಾಯಗೊಂಡ ಮರಿಯಾನೆ ನಡೆಯಲು ಕಷ್ಟ ಪಡುತ್ತಿದೆ. ಹೀಗಾಗಿ ಅದಕ್ಕೆ ಚಿಕಿತ್ಸೆಯ ಅಗತ್ಯವಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿ ಚಿಕಿತ್ಸೆ ನೀಡಲು ಮುಂದಾಗಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಾಯಿ ಆನೆ ಜೊತೆ ಹೋಗುತ್ತಿರುವ ಮರಿಯಾನೆ
ರಸ್ತೆಯಲ್ಲಿ ತೆರಳ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆ
ಮರಿ ಆನೆ ಹುಡುಕಿ ಚಿಕಿತ್ಸೆ ಕೊಡುತ್ತಾ ಅರಣ್ಯ ಇಲಾಖೆ?
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿದ್ದು ಈ ವೇಳೆ ಆನೆ ಮರಿಯ ಎಡಗಾಲಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿದೆ.
ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿರುತ್ತವೆ. ಈ ಹಿಂಡಿನಲ್ಲಿ ತಾಯಿ ಆನೆ ಜೊತೆ ಮರಿ ಆನೆಯೊಂದು ಕಾಣಿಸಿದೆ. ಆದರೆ ಅದರ ಎಡಗಾಲಿಗೆ ಗಂಭೀರವಾದ ಗಾಯವಾಗಿದ್ದು ಕುಂಟುತ್ತ ನಡೆಯಲು ಕಷ್ಟ ಪಡುತ್ತಿದೆ.
ಚಾಮರಾಜನಗರ ಬಂಡಿಪುರದಲ್ಲಿ ಮರಿಯಾನೆ ಎಡಗಾಲಿಗೆ ಗಾಯಮಾಡಿಕೊಂಡಿದೆ. ಬಂಡಿಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಕುಂಟುತ್ತಾ ಸಾಗಿದೆ. #Elephantcalf #Bandipura #NewsFirstKannada pic.twitter.com/KG2Z8L9Bj7
— NewsFirst Kannada (@NewsFirstKan) August 20, 2023
ದೃಶ್ಯವನ್ನು ರಸ್ತೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಗಾಯಗೊಂಡ ಮರಿಯಾನೆ ನಡೆಯಲು ಕಷ್ಟ ಪಡುತ್ತಿದೆ. ಹೀಗಾಗಿ ಅದಕ್ಕೆ ಚಿಕಿತ್ಸೆಯ ಅಗತ್ಯವಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿ ಚಿಕಿತ್ಸೆ ನೀಡಲು ಮುಂದಾಗಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ