ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಸ್ನೇಹ
ಸ್ನೇಹವು ಪ್ರೀತಿಯಾಗಿ ಅಕ್ರಮ ಸಂಬಂಧವಾಗಿ ಬದಲಾವಣೆ
ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದಲೇ ಮಹಿಳೆಗೆ ಇರಿದ
ಬೆಂಗಳೂರು: ಮಹಿಳೆಯ ಕತ್ತುಕುಯ್ದು ಬಳಿಕ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ಪಟ್ಟಣದ ಬಹದ್ದೂರಪುರದಲ್ಲಿ ನಡೆದಿದೆ.
ಬಹದ್ದೂರಪುರದ ನಿವಾಸಿ ಚೈತ್ರಾಳ ಕತ್ತು ಕುಯ್ದ ಆರೋಪಿ ಮಿಥುನ್ ತಾನೂ ಕತ್ತು ಕುಯ್ದುಕೊಂಡಿದ್ದು ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೊಸೂರು ಮೂಲದ ಮಿಥುನ್ ಹಾಗೂ ಚೈತ್ರ ಕಳೆದ 2 ವರ್ಷದಿಂದ ಆನೇಕಲ್ ನಗರದ ಟ್ರೆಂಡ್ಸ್ ಬಟ್ಟೆ ಮಳಿಗೆಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಆಕೆಗೆ ಮದುವೆಯಾಗಿ 2 ಮಕ್ಕಳಿರುವುದು ಗೊತ್ತಿದ್ದರೂ ಸ್ನೇಹ ಬೆಳಸಿದ್ದನು. ಸ್ನೇಹ ಬಳಿಕ ಅಕ್ರಮ ಸಂಬಂಧವಾಗಿ ಬದಲಾಗಿತ್ತು ಎನ್ನಲಾಗಿದೆ. ಈ ವಿಷ್ಯ ಆಕೆಯ ಮನೆಯವರಿಗೆ ತಿಳಿದು ರಾಜೀ ಪಂಚಾಯತಿ ಕೂಡ ಮಾಡಲಾಗಿತ್ತು. ಈ ಬಗ್ಗೆ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಇಷ್ಟೆಲ್ಲ ನಡೆದ್ರೂ ಯುವಕನು ಆಕೆಯ ಹಿಂದೆ ಬಿದ್ದು ಎರಡು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ. . ಹೊಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಪಿ ನೇರವಾಗಿ ಆಕೆಯ ಮನೆಗೆ ತೆರಳಿದ್ದ. ಈ ವೇಳೆ ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ಅಕ್ಕ ಪಕ್ಕದ ಮನೆಯವರು ನೋಡಿ ಇಬ್ಬರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಚೈತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಸ್ನೇಹ
ಸ್ನೇಹವು ಪ್ರೀತಿಯಾಗಿ ಅಕ್ರಮ ಸಂಬಂಧವಾಗಿ ಬದಲಾವಣೆ
ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದಲೇ ಮಹಿಳೆಗೆ ಇರಿದ
ಬೆಂಗಳೂರು: ಮಹಿಳೆಯ ಕತ್ತುಕುಯ್ದು ಬಳಿಕ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ಪಟ್ಟಣದ ಬಹದ್ದೂರಪುರದಲ್ಲಿ ನಡೆದಿದೆ.
ಬಹದ್ದೂರಪುರದ ನಿವಾಸಿ ಚೈತ್ರಾಳ ಕತ್ತು ಕುಯ್ದ ಆರೋಪಿ ಮಿಥುನ್ ತಾನೂ ಕತ್ತು ಕುಯ್ದುಕೊಂಡಿದ್ದು ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೊಸೂರು ಮೂಲದ ಮಿಥುನ್ ಹಾಗೂ ಚೈತ್ರ ಕಳೆದ 2 ವರ್ಷದಿಂದ ಆನೇಕಲ್ ನಗರದ ಟ್ರೆಂಡ್ಸ್ ಬಟ್ಟೆ ಮಳಿಗೆಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಆಕೆಗೆ ಮದುವೆಯಾಗಿ 2 ಮಕ್ಕಳಿರುವುದು ಗೊತ್ತಿದ್ದರೂ ಸ್ನೇಹ ಬೆಳಸಿದ್ದನು. ಸ್ನೇಹ ಬಳಿಕ ಅಕ್ರಮ ಸಂಬಂಧವಾಗಿ ಬದಲಾಗಿತ್ತು ಎನ್ನಲಾಗಿದೆ. ಈ ವಿಷ್ಯ ಆಕೆಯ ಮನೆಯವರಿಗೆ ತಿಳಿದು ರಾಜೀ ಪಂಚಾಯತಿ ಕೂಡ ಮಾಡಲಾಗಿತ್ತು. ಈ ಬಗ್ಗೆ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಇಷ್ಟೆಲ್ಲ ನಡೆದ್ರೂ ಯುವಕನು ಆಕೆಯ ಹಿಂದೆ ಬಿದ್ದು ಎರಡು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ. . ಹೊಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಪಿ ನೇರವಾಗಿ ಆಕೆಯ ಮನೆಗೆ ತೆರಳಿದ್ದ. ಈ ವೇಳೆ ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ಅಕ್ಕ ಪಕ್ಕದ ಮನೆಯವರು ನೋಡಿ ಇಬ್ಬರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಚೈತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ