newsfirstkannada.com

ಅನಿಲ್ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್​ ಬಿಸಿ; ಮಾಜಿ ಕ್ರಿಕೆಟರ್​ ಸರಳತೆಗೆ ಮೆಚ್ಚುಗೆಯ ಮಹಾಪೂರ

Share :

11-09-2023

    ಬಂದ್​ ಹಿನ್ನೆಲೆ ಖಾಸಗಿ ವಾಹನಗಳ ಓಡಾಟ ಸ್ತಬ್ಧ, ಕೆಲವ್ರಿಗೆ ಸಂಕಷ್ಟ

    ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ

    ಭಾರತದ ಕ್ರಿಕೆಟ್​ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ

ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು ಸಾಕಷ್ಟು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರು ಯೆಲ್ಲೋ ಬೋರ್ಡ್​ ಇರುವ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಬಂದ್ ಬಿಸಿ, ಸ್ಪಿನ್ ಮಾಂತ್ರಿಕ ಮಾಜಿ ಕ್ರಿಕೆಟರ್ ಹಾಗೂ ಕನ್ನಡಿಗ ಅನಿಲ್​ ಕುಂಬ್ಳೆ ಅವರಿಗೂ ತಟ್ಟಿದೆ.

ಭಾರತದ ಕ್ರಿಕೆಟ್​ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆಯವರು ಇಂದು ವಿಮಾನದ ಮೂಲಕ ಬೆಂಗಳೂರಿನ ಏರ್​ಪೋರ್ಟ್​ಗೆ ಆಗಮಿಸಿದ್ದಾರೆ. ಈ ವೇಳೆ ಏರ್​ಪೋರ್ಟ್​ನಿಂದ ತಮ್ಮ ನಿವಾಸಕ್ಕೆ ಹೋಗಬೇಕೆಂದು ಕ್ಯಾಬ್​ಗಳನ್ನ ಹುಡುಕಾಡಿದ್ದಾರೆ. ಆದ್ರೆ ಯಾವುದೇ ಕ್ಯಾಬ್ ಸಿಕ್ಕಿಲ್ಲ. ಹೀಗಾಗಿ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ​

ಇದನ್ನು ಓದಿ: Asia Cup: ರೋಹಿತ್​​​-ಗಿಲ್ ​​​​ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್​ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್​; ಯಾಕೆ?

ಸದ್ಯ ಈ ಬಗ್ಗೆ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಫೋಟೋ ಶೇರ್ ಮಾಡಿರುವ ಅನಿಲ್ ಕುಂಬ್ಳೆಯವರು, ಇಂದು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್​ ಮೂಲಕ ಮನೆಗೆ ವಾಪಸ್ ಆಗುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಬಿಎಂಟಿಸಿ ಕಂಡಕ್ಟರ್‌ಗೆ ಸೆಲ್ಫಿ ಕೊಟ್ಟಿದ್ದು, ಅನಿಲ್ ಕುಂಬ್ಳೆ ಅವರ ಸರಳತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅನಿಲ್ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್​ ಬಿಸಿ; ಮಾಜಿ ಕ್ರಿಕೆಟರ್​ ಸರಳತೆಗೆ ಮೆಚ್ಚುಗೆಯ ಮಹಾಪೂರ

https://newsfirstlive.com/wp-content/uploads/2023/09/ANIL_KUMBLE-1.jpg

    ಬಂದ್​ ಹಿನ್ನೆಲೆ ಖಾಸಗಿ ವಾಹನಗಳ ಓಡಾಟ ಸ್ತಬ್ಧ, ಕೆಲವ್ರಿಗೆ ಸಂಕಷ್ಟ

    ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ

    ಭಾರತದ ಕ್ರಿಕೆಟ್​ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ

ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು ಸಾಕಷ್ಟು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರು ಯೆಲ್ಲೋ ಬೋರ್ಡ್​ ಇರುವ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಬಂದ್ ಬಿಸಿ, ಸ್ಪಿನ್ ಮಾಂತ್ರಿಕ ಮಾಜಿ ಕ್ರಿಕೆಟರ್ ಹಾಗೂ ಕನ್ನಡಿಗ ಅನಿಲ್​ ಕುಂಬ್ಳೆ ಅವರಿಗೂ ತಟ್ಟಿದೆ.

ಭಾರತದ ಕ್ರಿಕೆಟ್​ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆಯವರು ಇಂದು ವಿಮಾನದ ಮೂಲಕ ಬೆಂಗಳೂರಿನ ಏರ್​ಪೋರ್ಟ್​ಗೆ ಆಗಮಿಸಿದ್ದಾರೆ. ಈ ವೇಳೆ ಏರ್​ಪೋರ್ಟ್​ನಿಂದ ತಮ್ಮ ನಿವಾಸಕ್ಕೆ ಹೋಗಬೇಕೆಂದು ಕ್ಯಾಬ್​ಗಳನ್ನ ಹುಡುಕಾಡಿದ್ದಾರೆ. ಆದ್ರೆ ಯಾವುದೇ ಕ್ಯಾಬ್ ಸಿಕ್ಕಿಲ್ಲ. ಹೀಗಾಗಿ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ​

ಇದನ್ನು ಓದಿ: Asia Cup: ರೋಹಿತ್​​​-ಗಿಲ್ ​​​​ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್​ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್​; ಯಾಕೆ?

ಸದ್ಯ ಈ ಬಗ್ಗೆ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಫೋಟೋ ಶೇರ್ ಮಾಡಿರುವ ಅನಿಲ್ ಕುಂಬ್ಳೆಯವರು, ಇಂದು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್​ ಮೂಲಕ ಮನೆಗೆ ವಾಪಸ್ ಆಗುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಬಿಎಂಟಿಸಿ ಕಂಡಕ್ಟರ್‌ಗೆ ಸೆಲ್ಫಿ ಕೊಟ್ಟಿದ್ದು, ಅನಿಲ್ ಕುಂಬ್ಳೆ ಅವರ ಸರಳತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More