ನಗರದಲ್ಲಿ ಯೆಲ್ಲೋ ಬೋರ್ಡ್ ವಾಹನಗಳ ಚಾಲಕರ ವಿರುದ್ಧ ಗರಂ
ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ
ಆಟೋ ಮೇಲೆ ಕಲ್ಲು ಎಸೆತ, ಈಗ ಕ್ಯಾಬ್ ಮೇಲೆ ಮೊಟ್ಟೆ ಎಸೆತ
ಬೆಂಗಳೂರು: ಇಂದು ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬಂದ್ ಘೋಷಣೆ ಮಾಡಿದ್ದರೂ ಕೆಲ ಯೆಲ್ಲೋ ಬೋರ್ಡ್ ವಾಹನಗಳು ಓಡಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಫುಲ್ ಗರಂ ಆಗಿದ್ದಾರೆ. ವಾಹನಗಳ ಮೇಲೆ ಕಲ್ಲು ಎಸೆಯುವುದು, ಟೈರ್ನ ಗಾಳಿ ಬಿಡುವುದು, ಸನ್ಮಾನ ಮಾಡಿ ಬೈಯುವುದು ನಡೆಯುತ್ತಿದೆ. ಸದ್ಯ ಇಲ್ಲೊಂದು ಕಾರಿನ ಮೇಲೆ ಮೊಟ್ಟೆಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿ ತೆರಳುತ್ತಿದ್ದ ಕ್ಯಾಬ್ ಮೇಲೆ ಪ್ರತಿಭಟನಾಕಾರರು ಮೊಟ್ಟೆಯನ್ನು ಎಸೆದಿದ್ದಾರೆ. ಇದರಿಂದ ಕಾರಿನೊಳಗೆ ಸೀಟ್, ಸ್ಟೇರಿಂಗ್ ಎಲ್ಲ ಗಲಿಜು ಆಗಿದ್ದು ಚಾಲಕ ಬೇಸರಗೊಂಡಿದ್ದಾನೆ. ಇನ್ನು ಬಂದ್ ಘೋಷಣೆ ಮಾಡಿದ್ದರೂ ಯೆಲ್ಲೋ ಬೋರ್ಡ್ ವಾಹನಗಳು ರಸ್ತೆಗೆ ಇಳಿಯುತ್ತಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಗರದಲ್ಲಿ ಯೆಲ್ಲೋ ಬೋರ್ಡ್ ವಾಹನಗಳ ಚಾಲಕರ ವಿರುದ್ಧ ಗರಂ
ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ
ಆಟೋ ಮೇಲೆ ಕಲ್ಲು ಎಸೆತ, ಈಗ ಕ್ಯಾಬ್ ಮೇಲೆ ಮೊಟ್ಟೆ ಎಸೆತ
ಬೆಂಗಳೂರು: ಇಂದು ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬಂದ್ ಘೋಷಣೆ ಮಾಡಿದ್ದರೂ ಕೆಲ ಯೆಲ್ಲೋ ಬೋರ್ಡ್ ವಾಹನಗಳು ಓಡಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಫುಲ್ ಗರಂ ಆಗಿದ್ದಾರೆ. ವಾಹನಗಳ ಮೇಲೆ ಕಲ್ಲು ಎಸೆಯುವುದು, ಟೈರ್ನ ಗಾಳಿ ಬಿಡುವುದು, ಸನ್ಮಾನ ಮಾಡಿ ಬೈಯುವುದು ನಡೆಯುತ್ತಿದೆ. ಸದ್ಯ ಇಲ್ಲೊಂದು ಕಾರಿನ ಮೇಲೆ ಮೊಟ್ಟೆಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿ ತೆರಳುತ್ತಿದ್ದ ಕ್ಯಾಬ್ ಮೇಲೆ ಪ್ರತಿಭಟನಾಕಾರರು ಮೊಟ್ಟೆಯನ್ನು ಎಸೆದಿದ್ದಾರೆ. ಇದರಿಂದ ಕಾರಿನೊಳಗೆ ಸೀಟ್, ಸ್ಟೇರಿಂಗ್ ಎಲ್ಲ ಗಲಿಜು ಆಗಿದ್ದು ಚಾಲಕ ಬೇಸರಗೊಂಡಿದ್ದಾನೆ. ಇನ್ನು ಬಂದ್ ಘೋಷಣೆ ಮಾಡಿದ್ದರೂ ಯೆಲ್ಲೋ ಬೋರ್ಡ್ ವಾಹನಗಳು ರಸ್ತೆಗೆ ಇಳಿಯುತ್ತಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ