newsfirstkannada.com

ಕೈದಿಗಳ ಬಿಡುಗಡೆಗಾಗಿ ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿ ಗ್ಯಾಂಗ್; ಅರೆ ಬೆತ್ತಲೆಯಲ್ಲಿ ಇಡೀ ರಾತ್ರಿ ಕೂರಿಸಿ ಚಿತ್ರಹಿಂಸೆ

Share :

03-08-2023

    ಜಾಮೀನಿಗಾಗಿ ವಕೀಲರನ್ನೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್

    ವಕೀಲರನ್ನು ಅರೆಬೆತ್ತಲೆ ಮಾಡಿದ್ದ ರೌಡಿಶೀಟರ್​ಗಳು

    ರಾತ್ರಿಯಿಂದ ಬೆಳಗಿನವರೆಗೆ ಕಿರುಕುಳ ಕೊಟ್ಟ ಆರೋಪ​

ಬೆಂಗಳೂರು: ಜೈಲಿನಲ್ಲಿರೋ 8 ಕೈದಿಗಳಿಗೆ ಜಾಮೀನು ಕೊಡಿಸಬೇಕು. ಇದರ ಜೊತೆಗೆ 5 ಲಕ್ಷ ಹಣ ಕೊಡಬೇಕೆಂದು ರೌಡಿ ಗ್ಯಾಂಗ್​​, ವಕೀಲರನ್ನೇ ಕಿಡ್ನಾಪ್​ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಚೆನ್ನಮ್ಮನಕೆರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿ ಶೀಟರ್ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್, ಭರತ್​ ಸೇರಿ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇದರಲ್ಲಿ ಆರೋಪಿಗಳಾದ ರಾಜೇಶ್, ಹರ್ಷಿತ್​ನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ರೌಡಿಶೀಟರ್​ ಹರ್ಷಿತ್​ ಆ್ಯಂಡ್​ ಗ್ಯಾಂಗ್​ನಿಂದ ವಕೀಲನನ್ನು ಕಿಡ್ನಾಪ್​ ಮಾಡಿ ಕಾರಿನ ಒಳಗೆ ಹಾಕಿಕೊಂಡಿದ್ದಾರೆ. ಬಳಿಕ ಲಾಯರ್​ನ ಬಟ್ಟೆಗಳನ್ನು ಬಿಚ್ಚಿಸಿ ಅರೆ ಬೆತ್ತಲೆಯಲ್ಲಿ ಇಡೀ ರಾತ್ರಿ ಕೂರಿಸಿದ್ದಾರೆ. ಈ ವೇಳೆ ಜೈಲಿನಲ್ಲಿರುವ 8 ಜನರಿಗೆ ಬೇಲ್ ಕೊಡಿಸಬೇಕು. ಹಾಗೇ 5 ಲಕ್ಷ ಹಣ ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಕಾರಿನಲ್ಲಿದ್ದ ಜಾಕ್​ ರಾಡ್​ ಮತ್ತು ಸ್ಪಾನರ್​ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ರೌಡಿಗಳು ವಕೀಲನ ಮೇಲೆ ಬೆಳಗಿನ ಜಾವದವರೆಗೆ ಹಲ್ಲೆ ನಡೆಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಈ ವಿಷ್ಯವನ್ನು ಪೊಲೀಸರಿಗೆ ಹೇಳಿದರೆ, ನಾವು ಹೇಳಿದಷ್ಟು ಹಣ ಕೊಡದಿದ್ದರೇ ನಮ್ಮ ಹುಡುಗರನ್ನು ಬಿಟ್ಟು ನಿನ್ನ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸದ್ಯ ದೂರಿನನ್ವಯ ಕೋಳಿ ರಾಜೇಶ್ ಮತ್ತು ಹರ್ಷಿತ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈದಿಗಳ ಬಿಡುಗಡೆಗಾಗಿ ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿ ಗ್ಯಾಂಗ್; ಅರೆ ಬೆತ್ತಲೆಯಲ್ಲಿ ಇಡೀ ರಾತ್ರಿ ಕೂರಿಸಿ ಚಿತ್ರಹಿಂಸೆ

https://newsfirstlive.com/wp-content/uploads/2023/08/BIG_KIDNAP.jpg

    ಜಾಮೀನಿಗಾಗಿ ವಕೀಲರನ್ನೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್

    ವಕೀಲರನ್ನು ಅರೆಬೆತ್ತಲೆ ಮಾಡಿದ್ದ ರೌಡಿಶೀಟರ್​ಗಳು

    ರಾತ್ರಿಯಿಂದ ಬೆಳಗಿನವರೆಗೆ ಕಿರುಕುಳ ಕೊಟ್ಟ ಆರೋಪ​

ಬೆಂಗಳೂರು: ಜೈಲಿನಲ್ಲಿರೋ 8 ಕೈದಿಗಳಿಗೆ ಜಾಮೀನು ಕೊಡಿಸಬೇಕು. ಇದರ ಜೊತೆಗೆ 5 ಲಕ್ಷ ಹಣ ಕೊಡಬೇಕೆಂದು ರೌಡಿ ಗ್ಯಾಂಗ್​​, ವಕೀಲರನ್ನೇ ಕಿಡ್ನಾಪ್​ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಚೆನ್ನಮ್ಮನಕೆರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿ ಶೀಟರ್ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್, ಭರತ್​ ಸೇರಿ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇದರಲ್ಲಿ ಆರೋಪಿಗಳಾದ ರಾಜೇಶ್, ಹರ್ಷಿತ್​ನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ರೌಡಿಶೀಟರ್​ ಹರ್ಷಿತ್​ ಆ್ಯಂಡ್​ ಗ್ಯಾಂಗ್​ನಿಂದ ವಕೀಲನನ್ನು ಕಿಡ್ನಾಪ್​ ಮಾಡಿ ಕಾರಿನ ಒಳಗೆ ಹಾಕಿಕೊಂಡಿದ್ದಾರೆ. ಬಳಿಕ ಲಾಯರ್​ನ ಬಟ್ಟೆಗಳನ್ನು ಬಿಚ್ಚಿಸಿ ಅರೆ ಬೆತ್ತಲೆಯಲ್ಲಿ ಇಡೀ ರಾತ್ರಿ ಕೂರಿಸಿದ್ದಾರೆ. ಈ ವೇಳೆ ಜೈಲಿನಲ್ಲಿರುವ 8 ಜನರಿಗೆ ಬೇಲ್ ಕೊಡಿಸಬೇಕು. ಹಾಗೇ 5 ಲಕ್ಷ ಹಣ ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಕಾರಿನಲ್ಲಿದ್ದ ಜಾಕ್​ ರಾಡ್​ ಮತ್ತು ಸ್ಪಾನರ್​ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ರೌಡಿಗಳು ವಕೀಲನ ಮೇಲೆ ಬೆಳಗಿನ ಜಾವದವರೆಗೆ ಹಲ್ಲೆ ನಡೆಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಈ ವಿಷ್ಯವನ್ನು ಪೊಲೀಸರಿಗೆ ಹೇಳಿದರೆ, ನಾವು ಹೇಳಿದಷ್ಟು ಹಣ ಕೊಡದಿದ್ದರೇ ನಮ್ಮ ಹುಡುಗರನ್ನು ಬಿಟ್ಟು ನಿನ್ನ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸದ್ಯ ದೂರಿನನ್ವಯ ಕೋಳಿ ರಾಜೇಶ್ ಮತ್ತು ಹರ್ಷಿತ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More