ವಿಶ್ರಾಂತಿ ಮಾಡೋಕೆ ಅಂತ ಮಾರ್ಕೆಟ್ ಟೆರೆಸ್ನತ್ತ ಹೋಗಿದ್ರು
ಹಣ್ಣು ಕತ್ತರಿಸೋ ಚಾಕುವಿನಿಂದ ಕುಳ್ಳನ ಕತ್ತಿಗೆ ಚುಚ್ಚಿ, ಎಸ್ಕೇಪ್
ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್
ಬೆಂಗಳೂರಿನ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ನಡೆದ ಮರ್ಡರ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣದ ವಿಚಾರವಾಗಿ ಗೆಳೆಯರ ಮಧ್ಯೆ ಜಗಳ ನಡೆದು ಕೊಲೆಯಾಗಿತ್ತು ಅಂತ ಹೇಳಲಾಗಿತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಜೊತೆಗಿದ್ದ ಗೆಳೆಯನನ್ನೆ ಕೊಂದಿದ್ದೇಕೆ? ಕೊಲೆಯ ಅಸಲಿ ಕಾರಣ ಏನು?.
ಕಲಾಸಿಪಾಳ್ಯ.. ಯಾವಾಗ್ಲೂ ಜನರಿಂದ ಗಿಜಿಗುಡುವ ಪ್ರದೇಶ.. ಇಂಥದೊಂದು ಬ್ಯುಸಿ ಜಾಗದಲ್ಲಿ ಕಳೆದ 11ನೇ ತಾರೀಖು ಬೆಂಗಳೂರನ್ನೇ ಬೆಚ್ಚಿ ಬೀಳಿಸೋ ಭೀಕರ ಕೊಲೆಯೊಂದು ನಡೆದು ಹೋಗಿತ್ತು. ಆರಂಭದಲ್ಲಿ ಈ ಕೊಲೆಗೆ ಹಣದ ಮ್ಯಾಟರ್ ಕಾರಣ ಎನ್ನಲಾಗಿತ್ತು. ಆದ್ರೆ ಇದರ ಜಾಲ ಹಿಡಿದು ಹೊದ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿ ಬಿಚ್ಚಿಟ್ಟ ಕಥೆ ಕೇಳಿ ಪೊಲೀಸರೆ ಶಾಕ್ ಆಗಿದ್ದಾರೆ. ಅಸಲಿಗೆ ಇದು ಎಣ್ಣೆ ಮತ್ತು ಹೆಣ್ಣಿನ ಖತರ್ನಾಕ್ ಕ್ರೈಮ್ ಕಹಾನಿ.
ಹೆಣ್ಣು, ಎಣ್ಣೇ ಮ್ಯಾಟರ್.. ಕಲಾಸಿಪಾಳ್ಯ ತರಕಾರಿ ಮಂಡಿಯಲ್ಲಿ ಮರ್ಡರ್!
ಆರೋಪಿಗಳಲ್ಲಿನ ಒಬ್ಬನ ಹೆಸರು ವಿಜಯಕುಮಾರ್. ಇನ್ನೊಬ್ಬನ ಹೆಸರು ಸುಧಾರಣ್. ಇಬ್ಬರು ಪಕ್ಕದ ತಮಿಳುನಾಡಿನವರು. ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ವಿಜಯ್ಕುಮಾರ್ಗೆ ಕುಡಿತದ ಚಟ ಇತ್ತು.. ಮದುವೆಯಾಗಿದ್ರೂ ಜವಾಬ್ದಾರಿ ಇರಲಿಲ್ಲ. ಹೀಗಾಗಿ 2015ರಲ್ಲೇ ವಿಜಯ್ಕುಮಾರ್ನನ್ನ ರಿಹ್ಯಾಬಿಲಿಯೇಷನ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದ್ರೆ ಅಲ್ಲಿಂದ ಹೊರ ಬಂದ ವಿಜಯ್ಕುಮಾರ್ಗೆ ಶಾಕ್ ಆಗಿತ್ತು. ಯಾಕಂದ್ರೆ ವಿಜಯ್ಕುಮಾರ್ ಹೆಂಡತಿ ಇನ್ನೊಬ್ಬನ ಜೊತೆ ಮದುವೆಯಾಗಿದ್ದಳು.
ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಈ ವಿಜಯ್ಕುಮಾರ್ ಸ್ನೇಹಿತ ಸುಧಾರಣ್ ವಿಜಯ್ ಪತ್ನಿಗೆ ಬೇರೊಬ್ಬರ ಜೊತೆ ಮತ್ತೊಂದು ಮದ್ವೆ ಮಾಡಿಸಿದ್ದ. ಈ ವಿಚಾರ ಗೊತ್ತಾಗ್ತಿದಂತೆ ವಿಜಯ್ಕುಮಾರ್ ಕೋಪ ನೆತ್ತಿಗೇರಿ ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದಾನೆ.
ಕೊಲೆಗೆ ಸಂಚು ಮೊದಲೇ ಪ್ಲಾನ್ ಮಾಡಿದ್ನಾ?
ಗೆಳೆಯನ ಸಂಸಾರದಲ್ಲಿ ಮೂಗು ತೂರಿಸಿದ್ದ ಸುಧಾರಣ್ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದ್ರೆ ವಿಜಯ್ಕುಮಾರ್ ಜೊತೆಗಿದ್ದವನನ್ನೆ ಕೊಲೆ ಮಾಡೋ ನಿರ್ಧಾರ ಕೈಗೊಂಡಿದ್ದು ದುರಂತವೇ ಸರಿ. ಕುಡಿತದ ಕಾರಣಕ್ಕೆ ವರ್ಷಗಳ ಕಾಲ ರಿಹ್ಯಾಬಿಲಿಯೇಷನ್ ಸೆಂಟರ್ನಲ್ಲಿದ್ದ ವಿಜಯ್ ಇದೀಗ ಕೋಪದ ಕೈಗೆ ಬುದ್ದಿ ಕೊಟ್ಟು ಜೈಲು ಸೇರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಶ್ರಾಂತಿ ಮಾಡೋಕೆ ಅಂತ ಮಾರ್ಕೆಟ್ ಟೆರೆಸ್ನತ್ತ ಹೋಗಿದ್ರು
ಹಣ್ಣು ಕತ್ತರಿಸೋ ಚಾಕುವಿನಿಂದ ಕುಳ್ಳನ ಕತ್ತಿಗೆ ಚುಚ್ಚಿ, ಎಸ್ಕೇಪ್
ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್
ಬೆಂಗಳೂರಿನ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ನಡೆದ ಮರ್ಡರ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣದ ವಿಚಾರವಾಗಿ ಗೆಳೆಯರ ಮಧ್ಯೆ ಜಗಳ ನಡೆದು ಕೊಲೆಯಾಗಿತ್ತು ಅಂತ ಹೇಳಲಾಗಿತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಜೊತೆಗಿದ್ದ ಗೆಳೆಯನನ್ನೆ ಕೊಂದಿದ್ದೇಕೆ? ಕೊಲೆಯ ಅಸಲಿ ಕಾರಣ ಏನು?.
ಕಲಾಸಿಪಾಳ್ಯ.. ಯಾವಾಗ್ಲೂ ಜನರಿಂದ ಗಿಜಿಗುಡುವ ಪ್ರದೇಶ.. ಇಂಥದೊಂದು ಬ್ಯುಸಿ ಜಾಗದಲ್ಲಿ ಕಳೆದ 11ನೇ ತಾರೀಖು ಬೆಂಗಳೂರನ್ನೇ ಬೆಚ್ಚಿ ಬೀಳಿಸೋ ಭೀಕರ ಕೊಲೆಯೊಂದು ನಡೆದು ಹೋಗಿತ್ತು. ಆರಂಭದಲ್ಲಿ ಈ ಕೊಲೆಗೆ ಹಣದ ಮ್ಯಾಟರ್ ಕಾರಣ ಎನ್ನಲಾಗಿತ್ತು. ಆದ್ರೆ ಇದರ ಜಾಲ ಹಿಡಿದು ಹೊದ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿ ಬಿಚ್ಚಿಟ್ಟ ಕಥೆ ಕೇಳಿ ಪೊಲೀಸರೆ ಶಾಕ್ ಆಗಿದ್ದಾರೆ. ಅಸಲಿಗೆ ಇದು ಎಣ್ಣೆ ಮತ್ತು ಹೆಣ್ಣಿನ ಖತರ್ನಾಕ್ ಕ್ರೈಮ್ ಕಹಾನಿ.
ಹೆಣ್ಣು, ಎಣ್ಣೇ ಮ್ಯಾಟರ್.. ಕಲಾಸಿಪಾಳ್ಯ ತರಕಾರಿ ಮಂಡಿಯಲ್ಲಿ ಮರ್ಡರ್!
ಆರೋಪಿಗಳಲ್ಲಿನ ಒಬ್ಬನ ಹೆಸರು ವಿಜಯಕುಮಾರ್. ಇನ್ನೊಬ್ಬನ ಹೆಸರು ಸುಧಾರಣ್. ಇಬ್ಬರು ಪಕ್ಕದ ತಮಿಳುನಾಡಿನವರು. ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ವಿಜಯ್ಕುಮಾರ್ಗೆ ಕುಡಿತದ ಚಟ ಇತ್ತು.. ಮದುವೆಯಾಗಿದ್ರೂ ಜವಾಬ್ದಾರಿ ಇರಲಿಲ್ಲ. ಹೀಗಾಗಿ 2015ರಲ್ಲೇ ವಿಜಯ್ಕುಮಾರ್ನನ್ನ ರಿಹ್ಯಾಬಿಲಿಯೇಷನ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದ್ರೆ ಅಲ್ಲಿಂದ ಹೊರ ಬಂದ ವಿಜಯ್ಕುಮಾರ್ಗೆ ಶಾಕ್ ಆಗಿತ್ತು. ಯಾಕಂದ್ರೆ ವಿಜಯ್ಕುಮಾರ್ ಹೆಂಡತಿ ಇನ್ನೊಬ್ಬನ ಜೊತೆ ಮದುವೆಯಾಗಿದ್ದಳು.
ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಈ ವಿಜಯ್ಕುಮಾರ್ ಸ್ನೇಹಿತ ಸುಧಾರಣ್ ವಿಜಯ್ ಪತ್ನಿಗೆ ಬೇರೊಬ್ಬರ ಜೊತೆ ಮತ್ತೊಂದು ಮದ್ವೆ ಮಾಡಿಸಿದ್ದ. ಈ ವಿಚಾರ ಗೊತ್ತಾಗ್ತಿದಂತೆ ವಿಜಯ್ಕುಮಾರ್ ಕೋಪ ನೆತ್ತಿಗೇರಿ ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದಾನೆ.
ಕೊಲೆಗೆ ಸಂಚು ಮೊದಲೇ ಪ್ಲಾನ್ ಮಾಡಿದ್ನಾ?
ಗೆಳೆಯನ ಸಂಸಾರದಲ್ಲಿ ಮೂಗು ತೂರಿಸಿದ್ದ ಸುಧಾರಣ್ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದ್ರೆ ವಿಜಯ್ಕುಮಾರ್ ಜೊತೆಗಿದ್ದವನನ್ನೆ ಕೊಲೆ ಮಾಡೋ ನಿರ್ಧಾರ ಕೈಗೊಂಡಿದ್ದು ದುರಂತವೇ ಸರಿ. ಕುಡಿತದ ಕಾರಣಕ್ಕೆ ವರ್ಷಗಳ ಕಾಲ ರಿಹ್ಯಾಬಿಲಿಯೇಷನ್ ಸೆಂಟರ್ನಲ್ಲಿದ್ದ ವಿಜಯ್ ಇದೀಗ ಕೋಪದ ಕೈಗೆ ಬುದ್ದಿ ಕೊಟ್ಟು ಜೈಲು ಸೇರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ