newsfirstkannada.com

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹುಷಾರ್​.. ಚಾಕು ತೋರಿಸಿ ಎರಡೇ ಗಂಟೆಯಲ್ಲಿ 2 ಕಡೆ ಚಿನ್ನಾಭರಣ ದರೋಡೆ

Share :

14-08-2023

    ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದ ದರೋಡೆಕೋರರು.!

    ಹೈವೇಯಲ್ಲಿ ಎರಡು ಗಂಟೆಯಲ್ಲಿ ಎರಡು ಕಡೆ ದರೋಡೆ

    ದಂಪತಿಯ ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಈ ಹೆದ್ದಾರಿಯಲ್ಲಿ 2 ಗಂಟೆಯ ಅವಧಿಯಲ್ಲಿ ಎರಡು ಕಡೆ ದರೋಡೆ ನಡೆದಿರುವ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.

ಉಡುಪಿ ಮೂಲದ ಶಿವಪ್ರಸಾದ್-ಸುಮಾ ಎನ್ನುವ ದಂಪತಿ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಹೋಟೆಲ್​ಗಳಲ್ಲಿ ರೂಮ್​ ಸಿಗದ ಕಾರಣ ರಾತ್ರಿ 1 ಗಂಟೆ ವೇಳೆ ಮಂಡ್ಯದ ನಗುವನಹಳ್ಳಿ ಬಳಿಯ ಎಕ್ಸ್​ಪ್ರೆಸ್​ವೇ‌ನಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದ ದರೋಡೆಕೋರರು ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನದ ಸರ ದೋಚಿ ಎಸ್ಕೇಪ್ ಆಗಿದ್ದಾರೆ.

ಈ ಮೇಲಿನ ಘಟನೆ ನಡೆದು 2 ಗಂಟೆ ಅವಧಿಯಲ್ಲಿ ಮತ್ತೊಂದು ದರೋಡೆ ಹೈವೇಯಲ್ಲಿ ನಡೆದಿದೆ. ಕೋಲಾರ ಮೂಲದ ಡಾ.ರಕ್ಷಿತ್ ರೆಡ್ಡಿ- ಡಾ.ಮಾನಸ ದಂಪತಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಗೌರಿಪುರದ ಬಳಿ ಕಾರಿನ ಟೈರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ಟೈರ್​ ಅನ್ನು ಬದಲಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಕಿರಾತಕರು ಚಾಕು ತೋರಿಸಿ 40 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಈ ಸಂಬಂಧ ಘಟನಾ ಸ್ಥಳಕ್ಕೆ ಮಂಡ್ಯ ಎಸ್​ಪಿ ಎನ್.ಯತೀಶ್ ಭೇಟಿ ನೀಡಿ ಚಿನ್ನಾಭರಣ‌ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹುಷಾರ್​.. ಚಾಕು ತೋರಿಸಿ ಎರಡೇ ಗಂಟೆಯಲ್ಲಿ 2 ಕಡೆ ಚಿನ್ನಾಭರಣ ದರೋಡೆ

https://newsfirstlive.com/wp-content/uploads/2023/08/BNG_MYS_ROAD_DARODE.jpg

    ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದ ದರೋಡೆಕೋರರು.!

    ಹೈವೇಯಲ್ಲಿ ಎರಡು ಗಂಟೆಯಲ್ಲಿ ಎರಡು ಕಡೆ ದರೋಡೆ

    ದಂಪತಿಯ ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಈ ಹೆದ್ದಾರಿಯಲ್ಲಿ 2 ಗಂಟೆಯ ಅವಧಿಯಲ್ಲಿ ಎರಡು ಕಡೆ ದರೋಡೆ ನಡೆದಿರುವ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.

ಉಡುಪಿ ಮೂಲದ ಶಿವಪ್ರಸಾದ್-ಸುಮಾ ಎನ್ನುವ ದಂಪತಿ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಹೋಟೆಲ್​ಗಳಲ್ಲಿ ರೂಮ್​ ಸಿಗದ ಕಾರಣ ರಾತ್ರಿ 1 ಗಂಟೆ ವೇಳೆ ಮಂಡ್ಯದ ನಗುವನಹಳ್ಳಿ ಬಳಿಯ ಎಕ್ಸ್​ಪ್ರೆಸ್​ವೇ‌ನಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದ ದರೋಡೆಕೋರರು ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನದ ಸರ ದೋಚಿ ಎಸ್ಕೇಪ್ ಆಗಿದ್ದಾರೆ.

ಈ ಮೇಲಿನ ಘಟನೆ ನಡೆದು 2 ಗಂಟೆ ಅವಧಿಯಲ್ಲಿ ಮತ್ತೊಂದು ದರೋಡೆ ಹೈವೇಯಲ್ಲಿ ನಡೆದಿದೆ. ಕೋಲಾರ ಮೂಲದ ಡಾ.ರಕ್ಷಿತ್ ರೆಡ್ಡಿ- ಡಾ.ಮಾನಸ ದಂಪತಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಗೌರಿಪುರದ ಬಳಿ ಕಾರಿನ ಟೈರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ಟೈರ್​ ಅನ್ನು ಬದಲಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಕಿರಾತಕರು ಚಾಕು ತೋರಿಸಿ 40 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಈ ಸಂಬಂಧ ಘಟನಾ ಸ್ಥಳಕ್ಕೆ ಮಂಡ್ಯ ಎಸ್​ಪಿ ಎನ್.ಯತೀಶ್ ಭೇಟಿ ನೀಡಿ ಚಿನ್ನಾಭರಣ‌ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More