ಲೋಕಾಯುಕ್ತರನ್ನು ನೋಡ್ತಿದ್ದಂತೆ ಕಾಲ್ಕಿತ್ತಿದ್ದ ಫುಡ್ ಇನ್ಸ್ಪೆಕ್ಟರ್
ಬೆಂಗಳೂರಿನಲ್ಲಿ ಲಂಚ ಪಡೆಯುವಾಗ ಗಾಳ ಹಾಕಿದ ಲೋಕಾ
ಚೇಸಿಂಗ್ ಮಾಡಿ ಫಿಲಂ ಸ್ಟೈಲ್ನಲ್ಲಿ ಹಿಡಿದ ಲೋಕಾಯುಕ್ತರು
ಬೆಂಗಳೂರು: ಭ್ರಷ್ಟ ಸರ್ಕಾರಿ ಸಿಬ್ಬಂದಿಯನ್ನು ಫಿಲಂ ಸ್ಟೈಲ್ನಲ್ಲಿ 15 ಕಿಲೋ ಮೀಟರ್ ಕಾರಿನ ಮೂಲಕ ಚೇಸಿಂಗ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.
ಭ್ರಷ್ಟ ಮಹಂತೆ ಗೌಡ ಎನ್ನುವರು ಲೋಕಾಯುಕ್ತರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಅಧಿಕಾರಿ. ನಗರದ ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಕಚೇರಿಯಲ್ಲಿ ಮಹಂತೆ ಗೌಡ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಂಗದಾಮಯ್ಯ ಎನ್ನುವರು ಟ್ರೇಡ್ ಲೈಸೆನ್ಸ್ಗಾಗಿ ಮಹಂತೆಗೌಡ ಬಳಿ ತೆರಳಿದ್ದಾಗ 1 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 43 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ತಂಡ ಆ ಸ್ಥಳಕ್ಕೆ ತೆರಳಿದೆ. ಹಣ ಪಡೆದ ಅಧಿಕಾರಿ, ಇದು ಲೋಕಾಯುಕ್ತರ ಟ್ರ್ಯಾಪ್ ಎಂದು ತಿಳಿದುಕೊಂಡು ಕಾರಿನಲ್ಲಿ ಎಷ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಲೋಕಾಯುಕ್ತರ ಕೈಗೆ ಸಿಗದೇ ಕಾರಿನಲ್ಲಿ ಸುಮಾರು 15 ಕಿ.ಮೀ ವರೆಗೆ ತಪ್ಪಿಸಿಕೊಂಡು ಹೋಗಿದ್ದಾನೆ. ಆದರೆ ಲೋಕಾಯುಕ್ತರು ಫಿಲಂ ಸ್ಟೈಲ್ನಲ್ಲಿ ಚೇಸ್ ಮಾಡಿ ನೆಲಮಂಗಲ ಬಳಿಯ ಸೊಂಡೇಕೊಪ್ಪ ಸಮೀಪ ಭ್ರಷ್ಟ ಅಧಿಕಾರಿಯ ಕಾರಿಗೆ ಮುಂದೆ ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಅಲ್ಲಿಗೆ ಸ್ಟಾಪ್ ಆಗಿದ್ದರಿಂದ ಲೋಕಾಯುಕ್ತರು ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕಾಯುಕ್ತರನ್ನು ನೋಡ್ತಿದ್ದಂತೆ ಕಾಲ್ಕಿತ್ತಿದ್ದ ಫುಡ್ ಇನ್ಸ್ಪೆಕ್ಟರ್
ಬೆಂಗಳೂರಿನಲ್ಲಿ ಲಂಚ ಪಡೆಯುವಾಗ ಗಾಳ ಹಾಕಿದ ಲೋಕಾ
ಚೇಸಿಂಗ್ ಮಾಡಿ ಫಿಲಂ ಸ್ಟೈಲ್ನಲ್ಲಿ ಹಿಡಿದ ಲೋಕಾಯುಕ್ತರು
ಬೆಂಗಳೂರು: ಭ್ರಷ್ಟ ಸರ್ಕಾರಿ ಸಿಬ್ಬಂದಿಯನ್ನು ಫಿಲಂ ಸ್ಟೈಲ್ನಲ್ಲಿ 15 ಕಿಲೋ ಮೀಟರ್ ಕಾರಿನ ಮೂಲಕ ಚೇಸಿಂಗ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.
ಭ್ರಷ್ಟ ಮಹಂತೆ ಗೌಡ ಎನ್ನುವರು ಲೋಕಾಯುಕ್ತರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಅಧಿಕಾರಿ. ನಗರದ ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಕಚೇರಿಯಲ್ಲಿ ಮಹಂತೆ ಗೌಡ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಂಗದಾಮಯ್ಯ ಎನ್ನುವರು ಟ್ರೇಡ್ ಲೈಸೆನ್ಸ್ಗಾಗಿ ಮಹಂತೆಗೌಡ ಬಳಿ ತೆರಳಿದ್ದಾಗ 1 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 43 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ತಂಡ ಆ ಸ್ಥಳಕ್ಕೆ ತೆರಳಿದೆ. ಹಣ ಪಡೆದ ಅಧಿಕಾರಿ, ಇದು ಲೋಕಾಯುಕ್ತರ ಟ್ರ್ಯಾಪ್ ಎಂದು ತಿಳಿದುಕೊಂಡು ಕಾರಿನಲ್ಲಿ ಎಷ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಲೋಕಾಯುಕ್ತರ ಕೈಗೆ ಸಿಗದೇ ಕಾರಿನಲ್ಲಿ ಸುಮಾರು 15 ಕಿ.ಮೀ ವರೆಗೆ ತಪ್ಪಿಸಿಕೊಂಡು ಹೋಗಿದ್ದಾನೆ. ಆದರೆ ಲೋಕಾಯುಕ್ತರು ಫಿಲಂ ಸ್ಟೈಲ್ನಲ್ಲಿ ಚೇಸ್ ಮಾಡಿ ನೆಲಮಂಗಲ ಬಳಿಯ ಸೊಂಡೇಕೊಪ್ಪ ಸಮೀಪ ಭ್ರಷ್ಟ ಅಧಿಕಾರಿಯ ಕಾರಿಗೆ ಮುಂದೆ ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಅಲ್ಲಿಗೆ ಸ್ಟಾಪ್ ಆಗಿದ್ದರಿಂದ ಲೋಕಾಯುಕ್ತರು ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ