newsfirstkannada.com

ಬಸ್ಸಲ್ಲಿ ಕಂಡಕ್ಟರ್​​ಗೆ ಹಲ್ಲೆ.. ಪೊಲೀಸ್ ಠಾಣೆ ಮುಂದೆ ಬಂದು ನಿಂತ ಬಸ್​.. ಅಲ್ಲಿ ಇನ್​​ಸ್ಪೆಕ್ಟರ್​​ಗೂ ಹಲ್ಲೆ ನಡೆಸಿ ಕಿರಾತಕ ಎಸ್ಕೇಪ್

Share :

15-06-2023

    ಶಕ್ತಿ ಯೋಜನೆಯ ಸೈಡ್ ಎಫೆಕ್ಟ್, ವಿದ್ಯಾರ್ಥಿಯಿಂದ ಹಲ್ಲೆ

    ಕಂಡಕ್ಟರ್​, ​ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ಪೊಲೀಸ್​ ಠಾಣೆಗೆ ದೌಡಾಯಿಸಿದ ಹಿರಿಯ ಅಧಿಕಾರಿಗಳು

ಬೆಂಗಳೂರು: ಶಕ್ತಿ ಯೋಜನೆಯ ಸೈಡ್ ಎಫೆಕ್ಟ್​ನಿಂದಾಗಿ ವಿದ್ಯಾರ್ಥಿಯೋರ್ವ ಸಬ್​ ಇನ್​ಸ್ಪೆಕ್ಟರ್ ಹಾಗೂ​​ ಕಂಡಕ್ಟರ್​ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಘಟನೆಯು ನಗರದ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಆರೋಪಿ ಮೌನೇಶ್​ ಹಲ್ಲೆ ಮಾಡಿ ಪರಾರಿಯಾಗಿರುವ ವಿದ್ಯಾರ್ಥಿ. ಈತ ಕೆಎಲ್​ಇ ಕಾಲೇಜಿನಲ್ಲಿ ಮೊದಲ ವರ್ಷದ (ಡೆಂಟಲ್) ಮೆಡಿಕಲ್ ಸ್ಟೂಡೆಂಟ್. ಪೀಣ್ಯಾದ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಸಿದ್ದು ಹೂಗಾರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಪಂಚ್ ಮಾಡಿ, ಮರ್ಮಾಂಗಕ್ಕೆ ಹಲ್ಲೆ ಮಾಡಿ ಎಸ್ಕೇಪ್​ ಆಗಿರುವ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಡಿರುವ ಇನ್​ಸ್ಪೆಕ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯಾ ಠಾಣೆಗೆ ದೌಡಾಯಿಸಿದ್ದಾರೆ.

ಮೊದಲು ಬಸ್​ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯು​ ಕಂಡಕ್ಟರ್​ಗೆ ಬಸ್ ಪಾಸ್ ಜೆರಾಕ್ಸ್ ತೋರಿಸಿದ್ದ. ಹೀಗಾಗಿ ಕಂಡಕ್ಟರ್​ ಜೆರಾಕ್ಸ್​ ಅಲ್ಲ ಒರಿಜಿನಲ್ ಪಾಸ್​ ತೋರಿಸು ಎಂದಿದ್ದಾರೆ. ಇದಕ್ಕೆ ವಿದ್ಯಾರ್ಥಿ ಲೇಡಿಸ್​ ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದ್ರೆ ಸುಮ್ಮನಿದ್ದೀರಿ. ನಾನು ಜೆರಾಕ್ಸ್​ ತೋರಿಸಿದ್ರೆ ಯಾಕೆ ಗಲಾಟೆ ಮಾಡ್ತೀಯಾ ಎಂದು ವಿದ್ಯಾರ್ಥಿ ಕಂಡಕ್ಟರ್​ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕಂಡಕ್ಟರ್​ ಬಸ್​ ಅನ್ನು ನೇರ ಪೀಣ್ಯಾ ಪೊಲೀಸ್​ ಠಾಣೆ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿ ಸಹೋದರ ಕೂಡ ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್ಸಲ್ಲಿ ಕಂಡಕ್ಟರ್​​ಗೆ ಹಲ್ಲೆ.. ಪೊಲೀಸ್ ಠಾಣೆ ಮುಂದೆ ಬಂದು ನಿಂತ ಬಸ್​.. ಅಲ್ಲಿ ಇನ್​​ಸ್ಪೆಕ್ಟರ್​​ಗೂ ಹಲ್ಲೆ ನಡೆಸಿ ಕಿರಾತಕ ಎಸ್ಕೇಪ್

https://newsfirstlive.com/wp-content/uploads/2023/06/PEENYA_STUDENT.jpg

    ಶಕ್ತಿ ಯೋಜನೆಯ ಸೈಡ್ ಎಫೆಕ್ಟ್, ವಿದ್ಯಾರ್ಥಿಯಿಂದ ಹಲ್ಲೆ

    ಕಂಡಕ್ಟರ್​, ​ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ಪೊಲೀಸ್​ ಠಾಣೆಗೆ ದೌಡಾಯಿಸಿದ ಹಿರಿಯ ಅಧಿಕಾರಿಗಳು

ಬೆಂಗಳೂರು: ಶಕ್ತಿ ಯೋಜನೆಯ ಸೈಡ್ ಎಫೆಕ್ಟ್​ನಿಂದಾಗಿ ವಿದ್ಯಾರ್ಥಿಯೋರ್ವ ಸಬ್​ ಇನ್​ಸ್ಪೆಕ್ಟರ್ ಹಾಗೂ​​ ಕಂಡಕ್ಟರ್​ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಘಟನೆಯು ನಗರದ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಆರೋಪಿ ಮೌನೇಶ್​ ಹಲ್ಲೆ ಮಾಡಿ ಪರಾರಿಯಾಗಿರುವ ವಿದ್ಯಾರ್ಥಿ. ಈತ ಕೆಎಲ್​ಇ ಕಾಲೇಜಿನಲ್ಲಿ ಮೊದಲ ವರ್ಷದ (ಡೆಂಟಲ್) ಮೆಡಿಕಲ್ ಸ್ಟೂಡೆಂಟ್. ಪೀಣ್ಯಾದ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಸಿದ್ದು ಹೂಗಾರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಪಂಚ್ ಮಾಡಿ, ಮರ್ಮಾಂಗಕ್ಕೆ ಹಲ್ಲೆ ಮಾಡಿ ಎಸ್ಕೇಪ್​ ಆಗಿರುವ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಡಿರುವ ಇನ್​ಸ್ಪೆಕ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯಾ ಠಾಣೆಗೆ ದೌಡಾಯಿಸಿದ್ದಾರೆ.

ಮೊದಲು ಬಸ್​ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯು​ ಕಂಡಕ್ಟರ್​ಗೆ ಬಸ್ ಪಾಸ್ ಜೆರಾಕ್ಸ್ ತೋರಿಸಿದ್ದ. ಹೀಗಾಗಿ ಕಂಡಕ್ಟರ್​ ಜೆರಾಕ್ಸ್​ ಅಲ್ಲ ಒರಿಜಿನಲ್ ಪಾಸ್​ ತೋರಿಸು ಎಂದಿದ್ದಾರೆ. ಇದಕ್ಕೆ ವಿದ್ಯಾರ್ಥಿ ಲೇಡಿಸ್​ ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದ್ರೆ ಸುಮ್ಮನಿದ್ದೀರಿ. ನಾನು ಜೆರಾಕ್ಸ್​ ತೋರಿಸಿದ್ರೆ ಯಾಕೆ ಗಲಾಟೆ ಮಾಡ್ತೀಯಾ ಎಂದು ವಿದ್ಯಾರ್ಥಿ ಕಂಡಕ್ಟರ್​ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕಂಡಕ್ಟರ್​ ಬಸ್​ ಅನ್ನು ನೇರ ಪೀಣ್ಯಾ ಪೊಲೀಸ್​ ಠಾಣೆ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿ ಸಹೋದರ ಕೂಡ ಇನ್​ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More