ಬೆಂಗಳೂರಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಮಹಾ ಯಡವಟ್ಟು
ಬಾಡಿಗೆದಾರನ ಒಳಗೆ ಬಿಟ್ಟು ಮನೆ ಸೀಜ್ ಮಾಡಿದ ಸಿಬ್ಬಂದಿ
ಕೋ-ಆಪರೇಟಿವ್ ಬ್ಯಾಂಕ್ನ ಸಿಬ್ಬಂದಿಯಿಂದ ಮೊಂಡುತನ
ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಮಹಾ ಯಡವಟ್ಟಾಗಿದ್ದು, ಬಾಡಿಗೆದಾರರನ್ನು ಒಳಗೆ ಬಿಟ್ಟು ಮನೆ ಸೀಜ್ ಮಾಡಿರೋ ಘಟನೆ ಕೆಂಗೇರಿ ಉಪನಗರದಲ್ಲಿ ನಡೆದಿದೆ.
ಮನೆ ಮಾಲೀಕ ತುಮಕೂರಿನ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಪಡೆದಿದ್ದರು. ಲೋನ್ ಬಾಕಿ ಇದ್ದಿದ್ರಿಂದ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಲು ಬಂದಿದ್ದರು. ಈ ವೇಳೆ ಬಾಡಿಗೆದಾರ ಮನೆಯಲ್ಲಿ ಮಲಗಿದ್ದರು. ಇದನ್ನ ಗಮನಿಸದ ಸಿಬ್ಬಂದಿ ಮನೆ ಲಾಕ್ ಮಾಡಿದ್ದಾರೆ. ಸದ್ಯ ಮನೆಯಲ್ಲಿದ್ದ ಮಗನನ್ನ ಪೋಷಕರು ಹೊರ ತಂದಿದ್ದು, ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ..?
ಪುಟ್ಟೇಗೌಡ ಮತ್ತು ಗಾಯತ್ರಿ ಅನ್ನೋರಿಗೆ ಕೆಂಗೇರಿ ಉಪನಗರದಲ್ಲಿ ಮನೆಯೊಂದು ಇರುತ್ತದೆ. ಈ ಮನೆ ಮೇಲೆ ತುಮಕೂರು ವೀರಶೈವ ಕೋ-ಆಪರೇಟೀವ್ ಬ್ಯಾಂಕ್ನಲ್ಲಿ 2 ಕೋಟಿ ರೂಪಾಯಿ ಸಾಲವನ್ನು ದಂಪತಿ ಪಡೆದಿತ್ತು. ಆದರೆ ಇಎಂಐ ಸರಿಯಾಗಿ ಕಟ್ಟದ ಹಿನ್ನೆಲೆಯಲ್ಲಿ 2021ರಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ.
2021 ಕೊರ್ಟ್ ಆದೇಶ ಪ್ರಕಾರ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯು ವಜಾಗೊಂಡಿದೆ ಎಂದು ಮನೆಯ ಮಾಲೀಕರು ವಾದ ಮಾಡುತ್ತಿದ್ದಾರೆ. ಇತ್ತ ಬ್ಯಾಂಕ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡುತ್ತೀವಿ ಎಂದು ವಾದಿಸುತ್ತ ಬಂದಿದ್ದರು. ನಿನ್ನೆ ಮಧ್ಯಾಹ್ನ ಏಕಾಏಕಿಯಾಗಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯನ್ನು ಸೀಜ್ ಮಾಡಿದ್ದಾರೆ. ಮಾತ್ರವಲ್ಲ, ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ನಂತರ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಸೆಕೆಂಡ್ ಫ್ಲೋರ್ನಲ್ಲಿ ಬಾಡಿಗೆ ಮನೆಯಲ್ಲಿ ಸಂತೋಷ್ ಎಂಬ ವ್ಯಕ್ತಿಯಿದ್ದ. ಅವನನ್ನು ಒಳಗೆ ಬಿಟ್ಟು, ಹೊರಗಡೆಯಿಂದ ಲಾಕ್ ಮಾಡಿ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಮಹಾ ಯಡವಟ್ಟು
ಬಾಡಿಗೆದಾರನ ಒಳಗೆ ಬಿಟ್ಟು ಮನೆ ಸೀಜ್ ಮಾಡಿದ ಸಿಬ್ಬಂದಿ
ಕೋ-ಆಪರೇಟಿವ್ ಬ್ಯಾಂಕ್ನ ಸಿಬ್ಬಂದಿಯಿಂದ ಮೊಂಡುತನ
ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಮಹಾ ಯಡವಟ್ಟಾಗಿದ್ದು, ಬಾಡಿಗೆದಾರರನ್ನು ಒಳಗೆ ಬಿಟ್ಟು ಮನೆ ಸೀಜ್ ಮಾಡಿರೋ ಘಟನೆ ಕೆಂಗೇರಿ ಉಪನಗರದಲ್ಲಿ ನಡೆದಿದೆ.
ಮನೆ ಮಾಲೀಕ ತುಮಕೂರಿನ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಪಡೆದಿದ್ದರು. ಲೋನ್ ಬಾಕಿ ಇದ್ದಿದ್ರಿಂದ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಲು ಬಂದಿದ್ದರು. ಈ ವೇಳೆ ಬಾಡಿಗೆದಾರ ಮನೆಯಲ್ಲಿ ಮಲಗಿದ್ದರು. ಇದನ್ನ ಗಮನಿಸದ ಸಿಬ್ಬಂದಿ ಮನೆ ಲಾಕ್ ಮಾಡಿದ್ದಾರೆ. ಸದ್ಯ ಮನೆಯಲ್ಲಿದ್ದ ಮಗನನ್ನ ಪೋಷಕರು ಹೊರ ತಂದಿದ್ದು, ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ..?
ಪುಟ್ಟೇಗೌಡ ಮತ್ತು ಗಾಯತ್ರಿ ಅನ್ನೋರಿಗೆ ಕೆಂಗೇರಿ ಉಪನಗರದಲ್ಲಿ ಮನೆಯೊಂದು ಇರುತ್ತದೆ. ಈ ಮನೆ ಮೇಲೆ ತುಮಕೂರು ವೀರಶೈವ ಕೋ-ಆಪರೇಟೀವ್ ಬ್ಯಾಂಕ್ನಲ್ಲಿ 2 ಕೋಟಿ ರೂಪಾಯಿ ಸಾಲವನ್ನು ದಂಪತಿ ಪಡೆದಿತ್ತು. ಆದರೆ ಇಎಂಐ ಸರಿಯಾಗಿ ಕಟ್ಟದ ಹಿನ್ನೆಲೆಯಲ್ಲಿ 2021ರಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ.
2021 ಕೊರ್ಟ್ ಆದೇಶ ಪ್ರಕಾರ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯು ವಜಾಗೊಂಡಿದೆ ಎಂದು ಮನೆಯ ಮಾಲೀಕರು ವಾದ ಮಾಡುತ್ತಿದ್ದಾರೆ. ಇತ್ತ ಬ್ಯಾಂಕ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡುತ್ತೀವಿ ಎಂದು ವಾದಿಸುತ್ತ ಬಂದಿದ್ದರು. ನಿನ್ನೆ ಮಧ್ಯಾಹ್ನ ಏಕಾಏಕಿಯಾಗಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯನ್ನು ಸೀಜ್ ಮಾಡಿದ್ದಾರೆ. ಮಾತ್ರವಲ್ಲ, ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ನಂತರ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಸೆಕೆಂಡ್ ಫ್ಲೋರ್ನಲ್ಲಿ ಬಾಡಿಗೆ ಮನೆಯಲ್ಲಿ ಸಂತೋಷ್ ಎಂಬ ವ್ಯಕ್ತಿಯಿದ್ದ. ಅವನನ್ನು ಒಳಗೆ ಬಿಟ್ಟು, ಹೊರಗಡೆಯಿಂದ ಲಾಕ್ ಮಾಡಿ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ