newsfirstkannada.com

ವಿಶ್ವಕಪ್​ ತಂಡದಲ್ಲಿ ಯಾಱರಿಗಿಲ್ಲ ಸ್ಥಾನ.. ಇದೇ ಮೊದಲ ಬಾರಿಗೆ ಆಫ್​ ಸ್ಪಿನ್ನರ್​ಗೆ ಚಾನ್ಸ್​ ಕೊಟ್ಟಿಲ್ಲವೇಕೆ?

Share :

06-09-2023

    2011ರ ವಿಶ್ವಕಪ್​ನಲ್ಲಿ ಡ್ರಾಪ್​, ಈಗ ರೋಹಿತ್​ ಶರ್ಮಾ ನಾಯಕ.!

    ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಬಾರಿಗೆ ಆಫ್​ ಸ್ಪಿನ್ನರ್​ಗಳು ಇಲ್ಲ​

    ವಿಕೆಟ್​ ಕೀಪರ್ ಕಮ್​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ಗೆ ಕೊಕ್..!

ವಿಶ್ವಕಪ್​ ಟೂರ್ನಿಗೆ ಪ್ರಕಟಗೊಂಡಿರುವ ಟೀಮ್​ ಇಂಡಿಯಾದಲ್ಲಿ ಯಾವುದೇ ಸರ್​​ಪ್ರೈಸ್​ ಅನ್ನಿಸೋ ಆಯ್ಕೆಗಳಿಲ್ಲ. ಆದ್ರೆ, ಹಲವು ಕುತೂಹಲಕಾರಿ ಸಂಗತಿಗಳಿವೆ. ಕೆಲವು ಮೈನಸ್​​ ಪಾಯಿಂಟ್​​ಗಳೂ ಇವೆ. ವಿಶ್ವಕಪ್​ ಟೀಮ್​ ಸೆಲೆಕ್ಷನ್​​ನ ಟಾಪ್​ 5 ಹೈಲೆಟ್ಸ್​​ಗಳೇನು?

ಏಕದಿನ ವಿಶ್ವಕಪ್​ ತಂಡದ ಆಯ್ಕೆಯ ಬಗೆಗಿನ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸೆಲೆಕ್ಷನ್​ ಕಮಿಟಿ 15 ಆಟಗಾರರ ತಂಡವನ್ನ ಆಯ್ಕೆ ಮಾಡಿದೆ. ಶ್ರೀಲಂಕಾ ನಡೆದ ಪ್ರೆಸ್​​ಮೀಟ್​​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​​ ಟೀಮ್​ ಅನೌನ್ಸ್​ ಮಾಡಿದ್ದಾಗಿದೆ.

ಟೀಮ್ ಇಂಡಿಯಾ ಆಟಗಾರರು

2011ರಲ್ಲಿ ಡ್ರಾಪ್​, 2023ರಲ್ಲಿ ರೋಹಿತ್​ ನಾಯಕ.!

ಈ ಹಿಂದೆ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ತಂಡದಿಂದ ಅಚ್ಚರಿಯ ರೀತಿಯಲ್ಲಿ ರೋಹಿತ್​ ಶರ್ಮಾರನ್ನ ಡ್ರಾಪ್​ ಮಾಡಲಾಗಿತ್ತು. ಆಗ ಬಹಿರಂಗವಾಗಿ ಹಿಟ್​ಮ್ಯಾನ್​ ಅಸಮಾಧಾನ ಹೊರ ಹಾಕಿದ್ರು. ಅದಾಗಿ 12 ವರ್ಷಗಳು ಕಳೆದಿವೆ. ಇದೀಗ ರೋಹಿತ್​ ಶರ್ಮಾನೇ ಟೀಮ್​ ಇಂಡಿಯಾವನ್ನ ಮೆಗಾ ಟೂರ್ನಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ನಾಯಕ ರೋಹಿತ್​ ಮೇಲೆ ನಿರೀಕ್ಷೆಯ ಭಾರವೇ ಇದೆ.

ತವರಿನಲ್ಲಿ ಮೊದಲ ಬಾರಿ ತಂಡದಲ್ಲಿಲ್ಲ ಆಫ್​ ಸ್ಪಿನ್ನರ್​.!

ಇಂಡಿಯನ್​ ಪಿಚ್​ಗಳಲ್ಲಿ ಸ್ಪಿನ್ನರ್​ಗಳೇ ಮ್ಯಾಚ್​ ವಿನ್ನರ್ಸ್​​​. ಅದ್ರಲ್ಲೂ ಆಫ್​ ಸ್ಪಿನ್ನರ್​​ಗಳು ಮೋಸ್ಟ್​ ಇಪಾರ್ಟೆಂಟ್​ ರೋಲ್​ ಪ್ಲೇ ಮಾಡ್ತಾರೆ. ಹೀಗಾಗಿ ಇಷ್ಟು ದಿನಗಳ ಕಾಲ ತವರಿನಲ್ಲಿ ನಡೆಯೋ ಸರಣಿಗಳು, ಟೂರ್ನಮೆಂಟ್​ಗಳಲ್ಲಿ ಆಫ್​ ಸ್ಪಿನ್ನರ್​ಗೆ ಸ್ಥಾನ ಫಿಕ್ಸ್​ ಆಗಿತ್ತು. ಆದ್ರೀಗ ವಿಶ್ವಕಪ್​ ತಂಡದಲ್ಲಿ ಒಬ್ಬೇ ಒಬ್ಬ ಆಫ್​​ ಸ್ಪಿನ್ನರ್​ ಇಲ್ಲ. ಸ್ಥಾನದ ನಿರೀಕ್ಷೆಯಲ್ಲಿದ್ದ ಅನುಭವಿ ಆರ್.ಅಶ್ವಿನ್​ ಹಾಗೂ ಯುವ ವಾಷಿಂಗ್ಟನ್​ ಸುಂದರ್​​ಗೆ ಕೊಕ್​ ಕೊಡಲಾಗಿದೆ.

ಉಪನಾಯಕ ಪಟ್ಟ ಉಳಿಸಿಕೊಂಡ ಹಾರ್ದಿಕ್​ ಪಾಂಡ್ಯ.!

ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯರ ಉಪನಾಯಕತ್ವದ ಸದ್ಯ ಹೆಚ್ಚು ಚರ್ಚೆಯಲ್ಲಿತ್ತು. ವೆಸ್ಟ್​ ಇಂಡೀಸ್​ ಪ್ರವಾಸದ ಹೀನಾಯ ಸೋಲು ಹಾರ್ದಿಕ್​​, ಪಟ್ಟಕ್ಕೆ ಕುತ್ತು ತಂದಿತ್ತು. ಕಮ್​​ಬ್ಯಾಕ್​ ಮಾಡಿದ ವೇಗಿ ಜಸ್​​ಪ್ರಿತ್​ ಬೂಮ್ರಾಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಅಂತಿಮವಾಗಿ ಹಾರ್ದಿಕ್​ಗೆ ವೈಸ್​​ಕ್ಯಾಪ್ಟನ್ಸಿ ಪಟ್ಟವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಾನ ನಿರೀಕ್ಷೆಯಲ್ಲಿದ್ದ ಚಹಲ್​​ಗೆ ಭಾರೀ ನಿರಾಸೆ

ವ್ರಿಸ್ಟ್​​​ ಸ್ಪಿನ್ನರ್​ ಯುಜುವೇಂದ್ರ ಚಹಲ್​ ಕೂಡ ವಿಶ್ವಕಪ್​ ಟಿಕೆಟ್​ ನಿರೀಕ್ಷೆಯಲ್ಲಿದ್ರು. ಆದ್ರೆ, ಚಹಲ್​ಗೂ ನಿರಾಸೆಯಾಗಿದೆ. ವ್ರಿಸ್ಟ್​ ಸ್ಪಿನ್ನರ್​​ ಚಹಲ್​ಗೆ ಕೊಕ್​​ ಕೊಟ್ಟಿರುವ ಸೆಲೆಕ್ಷನ್​ ಕಮಿಟಿ, ಆಲ್​​ರೌಂಡರ್​ ಅಕ್ಷರ್​ ಪಟೇಲ್​ಗೆ ಮಣೆ ಹಾಕಿದೆ. ಬ್ಯಾಟಿಂಗ್​ ಡೆಪ್ತ್​​​ನ ಲೆಕ್ಕಾಚಾರದಲ್ಲಿ ಅಕ್ಷರ್​ಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಸದ್ಯ ವಿಶ್ವಕಪ್​ ತಂಡದಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ಕುಲ್​ದೀಪ್​ ಯಾದವ್​ ಒಬ್ಬರಿಗೆ ಮಾತ್ರ ಮಣೆ ಹಾಕಲಾಗಿದೆ.

ಸ್ಟ್ಯಾಂಡ್​​ ಬೈ ಆಟಗಾರನಾಗಿ ಸಂಜುಗಿಲ್ಲ ಸ್ಥಾನ.!

ವಿಶ್ವಕಪ್​ ತಂಡದಿಂದಲೇ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ಗೆ ಕೊಕ್​ ನೀಡಲಾಗಿದೆ. ಏಷ್ಯಾಕಪ್​ ತಂಡದಲ್ಲಿ ರಿಸರ್ವ್​ ಪ್ಲೇಯರ್​ ಆಗಿ ಕಾಣಿಸಿಕೊಂಡಿದ್ದ ಸಂಜುಗೆ ಗೇಟ್​ಪಾಸ್​ ನೀಡಲಾಗಿದೆ. ಸತತ ವೈಫಲ್ಯ ಅನುಭವಿಸಿರುವ ಸಂಜು ಸ್ಯಾಮ್ಸನ್​ಗೆ ಮತ್ತೆ ಟೀಮ್​ ಇಂಡಿಯಾ ಡೋರ್​ ತೆರೆಯೋದು ಅನುಮಾನವೇ.

ಇದನ್ನು ಓದಿ: ವರ್ಲ್ಡ್​​ಕಪ್​ಗೆ ಆಯ್ಕೆಯಾಗದೆ ಇದ್ದಿದ್ದ ರೋಹಿತ್​ ಶರ್ಮಾ ಈಗ ಕ್ಯಾಪ್ಟನ್​.. ಅಂದು ಹಿಟ್​​ಮ್ಯಾನ್​ಗೆ ಯುವಿ ಹೇಳಿದ್ದೇನು?

ಭಾರತದ ಬ್ಯಾಟ್ಸ್​ಮನ್ ತಿಲಕ್ ವರ್ಮಾ

ಪ್ರಸಿದ್ಧ್ ಕೃಷ್ಣ, ತಿಲಕ್​ ವರ್ಮಾಗೂ ನಿರಾಸೆ.!

ಏಷ್ಯಾಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಯುವ ಆಟಗಾರರಾದ ಪ್ರಸಿದ್ಧ್​ ಕೃಷ್ಣ ಹಾಗೂ ತಿಲಕ್​ ವರ್ಮಾಗೂ ನಿರಾಸೆಯಾಗಿದೆ. ವಿಂಡೀಸ್​ ಪ್ರವಾಸದಲ್ಲಿ ಅಬ್ಬರಿಸಿದ್ದ ತಿಲಕ್​ ವರ್ಮಾ ಹಾಗೂ ಕಮ್​ಬ್ಯಾಕ್​ ಸರಣಿಯಲ್ಲಿ ಮೋಡಿ ಮಾಡಿದ ಪ್ರಸಿದ್ಧ್ ಕೃಷ್ಣ ಪರ ಹಲವರು ಬ್ಯಾಟಿಂಗ್​ ನಡೆಸಿದ್ರು. ಆದ್ರೆ, ಇವರಿಬ್ಬರೂ ಸ್ಥಾನ ವಂಚಿತವಾಗಿದ್ದಾರೆ.

ಇದೆಲ್ಲದರ ಹೊರತಾಗಿ ಆಯ್ಕೆ ಮಾಡಲಾಗಿರುವ 15 ಸದಸ್ಯರ ತಂಡ ಬಲಿಷ್ಠವಾಗಿ ಕಾಣ್ತಿದೆ. ಸ್ಥಾನ ಗಿಟ್ಟಿಸಿಕೊಂಡ ಆಟಗಾರರ ಆನ್​ ಪೇಪರ್​ ರೆಕಾರ್ಡ್ಸ್​ ಕೂಡ ಸಾಲಿಡ್​ ಆಗಿವೆ. ಆದ್ರೆ, ಆನ್​​ಫೀಲ್ಡ್​ನಲ್ಲಿ ಆಟ ನಡೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ತಂಡದಲ್ಲಿ ಯಾಱರಿಗಿಲ್ಲ ಸ್ಥಾನ.. ಇದೇ ಮೊದಲ ಬಾರಿಗೆ ಆಫ್​ ಸ್ಪಿನ್ನರ್​ಗೆ ಚಾನ್ಸ್​ ಕೊಟ್ಟಿಲ್ಲವೇಕೆ?

https://newsfirstlive.com/wp-content/uploads/2023/06/Team-India-7.jpg

    2011ರ ವಿಶ್ವಕಪ್​ನಲ್ಲಿ ಡ್ರಾಪ್​, ಈಗ ರೋಹಿತ್​ ಶರ್ಮಾ ನಾಯಕ.!

    ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಬಾರಿಗೆ ಆಫ್​ ಸ್ಪಿನ್ನರ್​ಗಳು ಇಲ್ಲ​

    ವಿಕೆಟ್​ ಕೀಪರ್ ಕಮ್​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ಗೆ ಕೊಕ್..!

ವಿಶ್ವಕಪ್​ ಟೂರ್ನಿಗೆ ಪ್ರಕಟಗೊಂಡಿರುವ ಟೀಮ್​ ಇಂಡಿಯಾದಲ್ಲಿ ಯಾವುದೇ ಸರ್​​ಪ್ರೈಸ್​ ಅನ್ನಿಸೋ ಆಯ್ಕೆಗಳಿಲ್ಲ. ಆದ್ರೆ, ಹಲವು ಕುತೂಹಲಕಾರಿ ಸಂಗತಿಗಳಿವೆ. ಕೆಲವು ಮೈನಸ್​​ ಪಾಯಿಂಟ್​​ಗಳೂ ಇವೆ. ವಿಶ್ವಕಪ್​ ಟೀಮ್​ ಸೆಲೆಕ್ಷನ್​​ನ ಟಾಪ್​ 5 ಹೈಲೆಟ್ಸ್​​ಗಳೇನು?

ಏಕದಿನ ವಿಶ್ವಕಪ್​ ತಂಡದ ಆಯ್ಕೆಯ ಬಗೆಗಿನ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸೆಲೆಕ್ಷನ್​ ಕಮಿಟಿ 15 ಆಟಗಾರರ ತಂಡವನ್ನ ಆಯ್ಕೆ ಮಾಡಿದೆ. ಶ್ರೀಲಂಕಾ ನಡೆದ ಪ್ರೆಸ್​​ಮೀಟ್​​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​​ ಟೀಮ್​ ಅನೌನ್ಸ್​ ಮಾಡಿದ್ದಾಗಿದೆ.

ಟೀಮ್ ಇಂಡಿಯಾ ಆಟಗಾರರು

2011ರಲ್ಲಿ ಡ್ರಾಪ್​, 2023ರಲ್ಲಿ ರೋಹಿತ್​ ನಾಯಕ.!

ಈ ಹಿಂದೆ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ತಂಡದಿಂದ ಅಚ್ಚರಿಯ ರೀತಿಯಲ್ಲಿ ರೋಹಿತ್​ ಶರ್ಮಾರನ್ನ ಡ್ರಾಪ್​ ಮಾಡಲಾಗಿತ್ತು. ಆಗ ಬಹಿರಂಗವಾಗಿ ಹಿಟ್​ಮ್ಯಾನ್​ ಅಸಮಾಧಾನ ಹೊರ ಹಾಕಿದ್ರು. ಅದಾಗಿ 12 ವರ್ಷಗಳು ಕಳೆದಿವೆ. ಇದೀಗ ರೋಹಿತ್​ ಶರ್ಮಾನೇ ಟೀಮ್​ ಇಂಡಿಯಾವನ್ನ ಮೆಗಾ ಟೂರ್ನಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ನಾಯಕ ರೋಹಿತ್​ ಮೇಲೆ ನಿರೀಕ್ಷೆಯ ಭಾರವೇ ಇದೆ.

ತವರಿನಲ್ಲಿ ಮೊದಲ ಬಾರಿ ತಂಡದಲ್ಲಿಲ್ಲ ಆಫ್​ ಸ್ಪಿನ್ನರ್​.!

ಇಂಡಿಯನ್​ ಪಿಚ್​ಗಳಲ್ಲಿ ಸ್ಪಿನ್ನರ್​ಗಳೇ ಮ್ಯಾಚ್​ ವಿನ್ನರ್ಸ್​​​. ಅದ್ರಲ್ಲೂ ಆಫ್​ ಸ್ಪಿನ್ನರ್​​ಗಳು ಮೋಸ್ಟ್​ ಇಪಾರ್ಟೆಂಟ್​ ರೋಲ್​ ಪ್ಲೇ ಮಾಡ್ತಾರೆ. ಹೀಗಾಗಿ ಇಷ್ಟು ದಿನಗಳ ಕಾಲ ತವರಿನಲ್ಲಿ ನಡೆಯೋ ಸರಣಿಗಳು, ಟೂರ್ನಮೆಂಟ್​ಗಳಲ್ಲಿ ಆಫ್​ ಸ್ಪಿನ್ನರ್​ಗೆ ಸ್ಥಾನ ಫಿಕ್ಸ್​ ಆಗಿತ್ತು. ಆದ್ರೀಗ ವಿಶ್ವಕಪ್​ ತಂಡದಲ್ಲಿ ಒಬ್ಬೇ ಒಬ್ಬ ಆಫ್​​ ಸ್ಪಿನ್ನರ್​ ಇಲ್ಲ. ಸ್ಥಾನದ ನಿರೀಕ್ಷೆಯಲ್ಲಿದ್ದ ಅನುಭವಿ ಆರ್.ಅಶ್ವಿನ್​ ಹಾಗೂ ಯುವ ವಾಷಿಂಗ್ಟನ್​ ಸುಂದರ್​​ಗೆ ಕೊಕ್​ ಕೊಡಲಾಗಿದೆ.

ಉಪನಾಯಕ ಪಟ್ಟ ಉಳಿಸಿಕೊಂಡ ಹಾರ್ದಿಕ್​ ಪಾಂಡ್ಯ.!

ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯರ ಉಪನಾಯಕತ್ವದ ಸದ್ಯ ಹೆಚ್ಚು ಚರ್ಚೆಯಲ್ಲಿತ್ತು. ವೆಸ್ಟ್​ ಇಂಡೀಸ್​ ಪ್ರವಾಸದ ಹೀನಾಯ ಸೋಲು ಹಾರ್ದಿಕ್​​, ಪಟ್ಟಕ್ಕೆ ಕುತ್ತು ತಂದಿತ್ತು. ಕಮ್​​ಬ್ಯಾಕ್​ ಮಾಡಿದ ವೇಗಿ ಜಸ್​​ಪ್ರಿತ್​ ಬೂಮ್ರಾಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಅಂತಿಮವಾಗಿ ಹಾರ್ದಿಕ್​ಗೆ ವೈಸ್​​ಕ್ಯಾಪ್ಟನ್ಸಿ ಪಟ್ಟವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಾನ ನಿರೀಕ್ಷೆಯಲ್ಲಿದ್ದ ಚಹಲ್​​ಗೆ ಭಾರೀ ನಿರಾಸೆ

ವ್ರಿಸ್ಟ್​​​ ಸ್ಪಿನ್ನರ್​ ಯುಜುವೇಂದ್ರ ಚಹಲ್​ ಕೂಡ ವಿಶ್ವಕಪ್​ ಟಿಕೆಟ್​ ನಿರೀಕ್ಷೆಯಲ್ಲಿದ್ರು. ಆದ್ರೆ, ಚಹಲ್​ಗೂ ನಿರಾಸೆಯಾಗಿದೆ. ವ್ರಿಸ್ಟ್​ ಸ್ಪಿನ್ನರ್​​ ಚಹಲ್​ಗೆ ಕೊಕ್​​ ಕೊಟ್ಟಿರುವ ಸೆಲೆಕ್ಷನ್​ ಕಮಿಟಿ, ಆಲ್​​ರೌಂಡರ್​ ಅಕ್ಷರ್​ ಪಟೇಲ್​ಗೆ ಮಣೆ ಹಾಕಿದೆ. ಬ್ಯಾಟಿಂಗ್​ ಡೆಪ್ತ್​​​ನ ಲೆಕ್ಕಾಚಾರದಲ್ಲಿ ಅಕ್ಷರ್​ಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಸದ್ಯ ವಿಶ್ವಕಪ್​ ತಂಡದಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ಕುಲ್​ದೀಪ್​ ಯಾದವ್​ ಒಬ್ಬರಿಗೆ ಮಾತ್ರ ಮಣೆ ಹಾಕಲಾಗಿದೆ.

ಸ್ಟ್ಯಾಂಡ್​​ ಬೈ ಆಟಗಾರನಾಗಿ ಸಂಜುಗಿಲ್ಲ ಸ್ಥಾನ.!

ವಿಶ್ವಕಪ್​ ತಂಡದಿಂದಲೇ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ಗೆ ಕೊಕ್​ ನೀಡಲಾಗಿದೆ. ಏಷ್ಯಾಕಪ್​ ತಂಡದಲ್ಲಿ ರಿಸರ್ವ್​ ಪ್ಲೇಯರ್​ ಆಗಿ ಕಾಣಿಸಿಕೊಂಡಿದ್ದ ಸಂಜುಗೆ ಗೇಟ್​ಪಾಸ್​ ನೀಡಲಾಗಿದೆ. ಸತತ ವೈಫಲ್ಯ ಅನುಭವಿಸಿರುವ ಸಂಜು ಸ್ಯಾಮ್ಸನ್​ಗೆ ಮತ್ತೆ ಟೀಮ್​ ಇಂಡಿಯಾ ಡೋರ್​ ತೆರೆಯೋದು ಅನುಮಾನವೇ.

ಇದನ್ನು ಓದಿ: ವರ್ಲ್ಡ್​​ಕಪ್​ಗೆ ಆಯ್ಕೆಯಾಗದೆ ಇದ್ದಿದ್ದ ರೋಹಿತ್​ ಶರ್ಮಾ ಈಗ ಕ್ಯಾಪ್ಟನ್​.. ಅಂದು ಹಿಟ್​​ಮ್ಯಾನ್​ಗೆ ಯುವಿ ಹೇಳಿದ್ದೇನು?

ಭಾರತದ ಬ್ಯಾಟ್ಸ್​ಮನ್ ತಿಲಕ್ ವರ್ಮಾ

ಪ್ರಸಿದ್ಧ್ ಕೃಷ್ಣ, ತಿಲಕ್​ ವರ್ಮಾಗೂ ನಿರಾಸೆ.!

ಏಷ್ಯಾಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಯುವ ಆಟಗಾರರಾದ ಪ್ರಸಿದ್ಧ್​ ಕೃಷ್ಣ ಹಾಗೂ ತಿಲಕ್​ ವರ್ಮಾಗೂ ನಿರಾಸೆಯಾಗಿದೆ. ವಿಂಡೀಸ್​ ಪ್ರವಾಸದಲ್ಲಿ ಅಬ್ಬರಿಸಿದ್ದ ತಿಲಕ್​ ವರ್ಮಾ ಹಾಗೂ ಕಮ್​ಬ್ಯಾಕ್​ ಸರಣಿಯಲ್ಲಿ ಮೋಡಿ ಮಾಡಿದ ಪ್ರಸಿದ್ಧ್ ಕೃಷ್ಣ ಪರ ಹಲವರು ಬ್ಯಾಟಿಂಗ್​ ನಡೆಸಿದ್ರು. ಆದ್ರೆ, ಇವರಿಬ್ಬರೂ ಸ್ಥಾನ ವಂಚಿತವಾಗಿದ್ದಾರೆ.

ಇದೆಲ್ಲದರ ಹೊರತಾಗಿ ಆಯ್ಕೆ ಮಾಡಲಾಗಿರುವ 15 ಸದಸ್ಯರ ತಂಡ ಬಲಿಷ್ಠವಾಗಿ ಕಾಣ್ತಿದೆ. ಸ್ಥಾನ ಗಿಟ್ಟಿಸಿಕೊಂಡ ಆಟಗಾರರ ಆನ್​ ಪೇಪರ್​ ರೆಕಾರ್ಡ್ಸ್​ ಕೂಡ ಸಾಲಿಡ್​ ಆಗಿವೆ. ಆದ್ರೆ, ಆನ್​​ಫೀಲ್ಡ್​ನಲ್ಲಿ ಆಟ ನಡೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More