newsfirstkannada.com

ವೀರೇಂದ್ರ ಸೆಹ್ವಾಗ್​ ಮೇಲೆ BCCI ಕಣ್ಣು.. ಭಾರತ ತಂಡದ ಸೆಲೆಕ್ಟರ್​ ಆಗಿ ಬರ್ತಾರಾ ಸ್ಫೋಟಕ ಬ್ಯಾಟ್ಸ್​ಮ್ಯಾನ್​?

Share :

23-06-2023

    ಖಡಕ್​ ಆಫೀಸರ್​ಗಾಗಿ ಬಿಸಿಸಿಐ ಹುಡುಕಾಟ, ಸೆಹ್ವಾಗ್ ಮೇಲೆ ಕಣ್ಣು

    ಭಾರತ ತಂಡಕ್ಕೆ ಸೆಹ್ವಾಗ್​ರನ್ನು ಕರೆತರಬೇಕೆಂದ್ರೆ ಸಂಬಳದ್ದೇ ಸಮಸ್ಯೆ

    ಕೋಟಿ, ಕೋಟಿ ದುಡಿಮೆ ಬಿಟ್ಟು ಭಾರತ ತಂಡದ ಯಶಸ್ಸಿಗೆ ಬರ್ತಾರಾ?

ಬಿಸಿಸಿಐ ಬಿಗ್​ ಬಾಸ್​​ಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಭವಿಷ್ಯದ ಟೀಮ್​ ಇಂಡಿಯಾ ಕಟ್ಟಲು ಒಬ್ಬ ಖಡಕ್​ ಆಫೀಸರ್​​ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಹೀಗೆ ಹುಡುಕಾಟ ನಡೆಸ್ತಿರುವಾಗ ಮಾಜಿ ಕ್ರಿಕೆಟಿಗ, ನಜಬ್​ಗಢ್​ ಕಾ ನವಾಬ್​ ವೀರೇಂದ್ರ ಸೆಹ್ವಾಗ್​ ಬಿಸಿಸಿಐ ಕಣ್ಣಿಗೆ ಬಿದ್ದಿದ್ದಾರೆ. ಖಡಕ್​ ಆಫೀಸರ್​​ಗಾಗಿ ಬಿಸಿಸಿಐ ಯಾಕೆ ಹುಡುಕಾಡ್ತಿದೆ ಗೊತ್ತಾ?.

ಏಕದಿನ ವಿಶ್ವಕಪ್​ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಎದುರಿಸ್ತಾ ಇರೋ ಟೀಮ್​ ಇಂಡಿಯಾಗೆ ಇದು ಪ್ರತಿಷ್ಟೆಯ ಕಣ. ತವರಿನಂಗಳದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಕಪ್​ ಗೆಲ್ಲಲೇಬೇಕು. ಈಗಾಗಲೇ ಬಿಗ್​ ಇವೆಂಟ್​​ಗಳಲ್ಲಿ ಮುಗ್ಗರಿಸಿರುವುದು ಅಭಿಮಾನಿಗಳ ವಲಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ತವರಿನಲ್ಲು ಮುಖಭಂಗ ಅನುಭವಿಸಿದ್ರೆ, ಮುಂದೆ ಏನಾಗುತ್ತೋ ಗೊತ್ತಿಲ್ಲ.

ಕೊನೆಗೂ ಎಚ್ಚೆತ್ತುಕೊಂಡ ಬಿಸಿಸಿಐ ಬಾಸ್​​ಗಳು.!

ಸೀನಿಯರ್​ ಸೆಲೆಕ್ಷನ್​ ಕಮಿಟಿಯ ಚೇರ್​ಮನ್​ ಆಗಿದ್ದ ಚೇತನ್​ ಶರ್ಮಾ ಸ್ಟಿಂಗ್​ ಆಪರೇಷನ್ ​ಸಿಕ್ಕಿಬಿದ್ದು ರಾಜೀನಾಮೆ ನೀಡಿ 4 ತಿಂಗಳು ಕಳೆದಿವೆ. ಆ ಸ್ಥಾನಕ್ಕೆ ಇನ್ನೊರ್ವ ಸೂಕ್ತ ಅಭ್ಯರ್ಥಿಯನ್ನ ಆಯ್ಕೆ ಮಾಡದೆ ಬಿಸಿಸಿಐ ಬಾಸ್​ಗಳು ಇಷ್ಟು ದಿನ ದಿವ್ಯ ನಿರ್ಲ್ಯಕ್ಷ ವಹಿಸಿದ್ರು. ಆದ್ರೆ ಈಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಸೋಲು ಬಡಿದೆಬ್ಬಿಸಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬಾಸ್​ಗಳು ನೂತನ ಸೆಲೆಕ್ಟರ್​ಗೆ ಹುಡುಕಾಟ ನಡೆಸ್ತಿದ್ದಾರೆ.

ಖಡಕ್​ ಸೆಲೆಕ್ಟರ್​​ಗಾಗಿ ಶುರುವಾಯ್ತು ಹುಡುಕಾಟ.!

ಇಷ್ಟು ದಿನ ಮಾಡಿದ ಪ್ರಮಾದಗಳಿಂದ ಪಾಠ ಕಲಿತಿರುವ ಬಿಸಿಸಿಐ ಬಾಸ್​ಗಳು ಈ ಬಾರಿ ಒಬ್ಬ ಖಡಕ್​ ಸೆಲೆಕ್ಟರ್​​ ಹುಡಕಾಟ ನಡೆಸ್ತಿದ್ದಾರೆ. ಕ್ಯಾಪ್ಟನ್​- ಕೋಚ್​​ ಯಾರ ಲಾಬಿಗೂ ಜಗ್ಗದೆ, ಸ್ಟಾರ್​​ಗಿರಿಗೆ ಮಣೆ ಹಾಕದೆ ಇರೋ ಖಡಕ್​ ಆಫೀಸರ್​ ಬಿಸಿಸಿಐಗೆ ಈಗ ಬೇಕಾಗಿದೆ. ಟ್ಯಾಲೆಂಟ್​ ಇದ್ರೆ ಮಾತ್ರ ಅವಕಾಶ ಅನ್ನೋ ಆಯ್ಕೆಗಾರನ ಹುಡುಕಾಟ ಬಿಸಿಸಿಐ ವಲಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಟೀಮ್​ ಇಂಡಿಯಾವನ್ನ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿದ ಅನುಭವಿ ಆಟಗಾರನನ್ನೇ ಕರೆ ತರಬೇಕು ಎಂದು ಬಿಸಿಸಿಐ ಸಿದ್ಧವಾಗಿದೆ.

ವೀರೇಂದ್ರ ಸೆಹ್ವಾಗ್​ ಮೇಲೆ ಬಾಸ್​ಗಳ ಕಣ್ಣು.!

ಸೆಲೆಕ್ಷನ್​ ಕಮಿಟಿಯಲ್ಲಿ ಸದ್ಯ ಕಾಲಿ ಇರೋದು ಒಂದೇ ಸ್ಥಾನ. ಅದು ನಾರ್ಥ್​​ ಝೋನ್​​ಗೆ ಮೀಸಲು. ಅಂದ್ರೆ, ಬಿಸಿಸಿಐ ಸಂವಿಧಾನದ ಪ್ರಕಾರ ಆ ಸ್ಥಾನಕ್ಕೆ ಉತ್ತರವಲಯದ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕಿದೆ. ಸದ್ಯ ಉತ್ತರ ವಲಯದಲ್ಲಿ ಬಿಸಿಸಿಐ ಹುಡುಕ್ತಾ ಇರೋವಂತ ಖಡಕ್​ ಕ್ವಾಲಿಟಿ ಹೊಂದಿರೋ ಏಕೈಕ ವ್ಯಕ್ತಿ ಅಂದ್ರೆ ಅದು ವೀರೇಂದ್ರ ಸೆಹ್ವಾಗ್​. ಟೀಮ್​ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಹೊಂದಿರೋ ಸೆಹ್ವಾಗ್​, ಯಾರ ಲಾಬಿಗೂ ಮಣಿಯದೇ ನಿರ್ಧಾರ ಕೈಗೊಳ್ಳೋದ್ರಲ್ಲೂ ಎತ್ತಿದ ಕೈ.

ಸೆಹ್ವಾಗ್​ ಆಯ್ಕೆಗೆ ಸಂಬಳದ್ದೇ ದೊಡ್ಡ ಸಮಸ್ಯೆ.!

ಟೀಮ್​ ಇಂಡಿಯಾದ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಹುದ್ದೆಗೆ ಸೆಹ್ವಾಗ್ ಬೆಸ್ಟ್​ ಚಾಯ್ಸ್​. ಆದ್ರೆ, ಇದಕ್ಕೆ ಸೆಹ್ವಾಗ್​ ಒಪ್ಪಿವರೇ ಅನ್ನೋದು ದೊಡ್ಡ ಪ್ರಶ್ನೆ. ಸದ್ಯ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ವಾರ್ಷಿಕ ಸಂಬಳ 1 ಕೋಟಿ. ಈಗಾಗಲೇ ಕಾಂಮೆಂಟರಿ, ಎಂಡ್ರೋಸ್​​ಮೆಂಟ್​ಗಳಿ​ಂದ ಸೆಹ್ವಾಗ್​ ಕೋಟಿ ಕೋಟಿ ಹಣ ದುಡಿಯುತ್ತಿದ್ದಾರೆ. ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಆದ್ರೆ, ಕಾಮೆಂಟರಿ, ಎಂಡ್ರೋಸ್​ಮೆಂಟ್​ಗಳನ್ನ ನಿಲ್ಲಿಸಬೇಕು. ಇದ್ರಿಂದ ಬೇರೆಲ್ಲ ಆದಾಯ ನಿಲ್ಲಲಿದೆ. ಎಲ್ಲವನ್ನೂ ಬಿಟ್ಟು ಕೇವಲ 1 ಕೋಟಿ ಒಪ್ಪಂದಕ್ಕೆ ಸೆಹ್ವಾಗ್​ ಸೈನ್​ ಮಾಡೋದು ಅನುಮಾನ.

ಕೋಚ್​​ ಹುದ್ದೆ ಕೇಳಿದಾಗ ತಿರಸ್ಕಾರ, ಸೆಹ್ವಾಗ್​ ಈಗ ಒಪ್ತಾರಾ?.

ಈ ಹಿಂದೆ ವೀರೂ ಟೀಮ್​ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಆಗ ಸೆಹ್ವಾಗ್​ಗೆ ಮಣೆ ಹಾಕಿರಲಿಲ್ಲ. ಆಗ ತಿರಸ್ಕಾರಕ್ಕೆ ಒಳಗಾಗಿದ್ದ ಸೆಹ್ವಾಗ್​, ಈಗ ತಾವಾಗೇ ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಸುಳ್ಳು. ಒಂದು ವೇಳೆ ಬಿಸಿಸಿಐ ತಾನಾಗೇ ಅಪ್ರೋಚ್​ ಮಾಡಿದ್ರೂ, ಕಡಿಮೆ ಸಂಬಳದ ಕಾರಣ ನೀಡಿ ಸೆಹ್ವಾಗ್​, ಆಫರ್​ ರಿಜೆಕ್ಟ್​ ಮಾಡಬಹುದು.

ದ್ರಾವಿಡ್​ಗೆ ಮಾಡಿದಂತೆ ಮಾಡುತ್ತಾ ಬಿಸಿಸಿಐ?

ಟೀಮ್​ ಇಂಡಿಯಾದ ಹಿಂದಿನ ಕೋಚ್​ ರವಿ ಶಾಸ್ತ್ರಿ ವಾರ್ಷಿಕ ವೇತನ 7 ಕೋಟಿ ರೂಪಾಯಿ ಆಗಿತ್ತು. ಶಾಸ್ತ್ರಿ ಅವಧಿ ಅಂತ್ಯದ ಬಳಿಕ ರಾಹುಲ್​ ದ್ರಾವಿಡ್​ ಕರೆತರಲು ಬಿಸಿಸಿಐ ಸರ್ಕಸ್​​ ನಡೆಸ್ತು. ₹7 ಕೋಟಿ ಇದ್ದ ಹೆಡ್​ ಕೋಚ್​ ಸಂಬಳವನ್ನ ₹10 ಕೋಟಿಗೆ ಹೆಚ್ಚಳ ಮಾಡಿ, ದ್ರಾವಿಡ್​ರನ್ನ ಕೋಚ್​ ಹುದ್ದೆಗೆ ತಂದು ಕೂರಿಸಿತ್ತು. ಇದೀಗ ಸೆಹ್ವಾಗ್​ರನ್ನ ಕರೆತರಲೂ ಸೆಲೆಕ್ಟರ್ಸ್ ಸಂಬಳದಲ್ಲಿ ಏರಿಕೆ ಮಾಡಿದ್ರೆ ಅಚ್ಚರಿಪಡಬೇಕಿಲ್ಲ.

ಟೀಮ್​ ಇಂಡಿಯಾ ಸದ್ಯ ಬದಲಾವಣೆ ಹಾದಿಯಲ್ಲಿದೆ. ಭವಿಷ್ಯದ ತಂಡ ರೂಪಿಸಬೇಕಿದೆ. ಸೀನಿಯರ್​​ಗಳ ಭವಿಷ್ಯದ ಜೊತೆಗೆ ಪ್ಯೂಚರ್​ ಕ್ಯಾಪ್ಟನ್​ ಆಯ್ಕೆಯಂತ ಬಿಗ್​ ಡಿಸಿಷನ್​ ತೆಗೆದುಕೊಳ್ಳಬೇಕಿದೆ. ಈ ಎಲ್ಲ ಖಡಕ್​ ನಿರ್ಧಾರಗಳನ್ನ ತೆಗೆದುಕೊಳ್ಳೋಕೆ ಒಬ್ಬ ಡೆರ್​ ಡೆವಿಲ್​ ಹಾಗೂ ಪ್ರಭಾವಿ ಸೆಲೆಕ್ಟರ್​ ಬೇಕೆ ಬೇಕು. ಸೆಹ್ವಾಗ್​ ಒಪ್ಪದೆ ಇದ್ದರೇ, ಬೇರೋಬ್ಬ ಖಡಕ್​ ಆಯ್ಕೆಗಾರರನ್ನ ಬಿಸಿಸಿಐ ಹುಡುಕಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವೀರೇಂದ್ರ ಸೆಹ್ವಾಗ್​ ಮೇಲೆ BCCI ಕಣ್ಣು.. ಭಾರತ ತಂಡದ ಸೆಲೆಕ್ಟರ್​ ಆಗಿ ಬರ್ತಾರಾ ಸ್ಫೋಟಕ ಬ್ಯಾಟ್ಸ್​ಮ್ಯಾನ್​?

https://newsfirstlive.com/wp-content/uploads/2023/06/Virender_Sehwag_2.jpg

    ಖಡಕ್​ ಆಫೀಸರ್​ಗಾಗಿ ಬಿಸಿಸಿಐ ಹುಡುಕಾಟ, ಸೆಹ್ವಾಗ್ ಮೇಲೆ ಕಣ್ಣು

    ಭಾರತ ತಂಡಕ್ಕೆ ಸೆಹ್ವಾಗ್​ರನ್ನು ಕರೆತರಬೇಕೆಂದ್ರೆ ಸಂಬಳದ್ದೇ ಸಮಸ್ಯೆ

    ಕೋಟಿ, ಕೋಟಿ ದುಡಿಮೆ ಬಿಟ್ಟು ಭಾರತ ತಂಡದ ಯಶಸ್ಸಿಗೆ ಬರ್ತಾರಾ?

ಬಿಸಿಸಿಐ ಬಿಗ್​ ಬಾಸ್​​ಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಭವಿಷ್ಯದ ಟೀಮ್​ ಇಂಡಿಯಾ ಕಟ್ಟಲು ಒಬ್ಬ ಖಡಕ್​ ಆಫೀಸರ್​​ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಹೀಗೆ ಹುಡುಕಾಟ ನಡೆಸ್ತಿರುವಾಗ ಮಾಜಿ ಕ್ರಿಕೆಟಿಗ, ನಜಬ್​ಗಢ್​ ಕಾ ನವಾಬ್​ ವೀರೇಂದ್ರ ಸೆಹ್ವಾಗ್​ ಬಿಸಿಸಿಐ ಕಣ್ಣಿಗೆ ಬಿದ್ದಿದ್ದಾರೆ. ಖಡಕ್​ ಆಫೀಸರ್​​ಗಾಗಿ ಬಿಸಿಸಿಐ ಯಾಕೆ ಹುಡುಕಾಡ್ತಿದೆ ಗೊತ್ತಾ?.

ಏಕದಿನ ವಿಶ್ವಕಪ್​ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಎದುರಿಸ್ತಾ ಇರೋ ಟೀಮ್​ ಇಂಡಿಯಾಗೆ ಇದು ಪ್ರತಿಷ್ಟೆಯ ಕಣ. ತವರಿನಂಗಳದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಕಪ್​ ಗೆಲ್ಲಲೇಬೇಕು. ಈಗಾಗಲೇ ಬಿಗ್​ ಇವೆಂಟ್​​ಗಳಲ್ಲಿ ಮುಗ್ಗರಿಸಿರುವುದು ಅಭಿಮಾನಿಗಳ ವಲಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ತವರಿನಲ್ಲು ಮುಖಭಂಗ ಅನುಭವಿಸಿದ್ರೆ, ಮುಂದೆ ಏನಾಗುತ್ತೋ ಗೊತ್ತಿಲ್ಲ.

ಕೊನೆಗೂ ಎಚ್ಚೆತ್ತುಕೊಂಡ ಬಿಸಿಸಿಐ ಬಾಸ್​​ಗಳು.!

ಸೀನಿಯರ್​ ಸೆಲೆಕ್ಷನ್​ ಕಮಿಟಿಯ ಚೇರ್​ಮನ್​ ಆಗಿದ್ದ ಚೇತನ್​ ಶರ್ಮಾ ಸ್ಟಿಂಗ್​ ಆಪರೇಷನ್ ​ಸಿಕ್ಕಿಬಿದ್ದು ರಾಜೀನಾಮೆ ನೀಡಿ 4 ತಿಂಗಳು ಕಳೆದಿವೆ. ಆ ಸ್ಥಾನಕ್ಕೆ ಇನ್ನೊರ್ವ ಸೂಕ್ತ ಅಭ್ಯರ್ಥಿಯನ್ನ ಆಯ್ಕೆ ಮಾಡದೆ ಬಿಸಿಸಿಐ ಬಾಸ್​ಗಳು ಇಷ್ಟು ದಿನ ದಿವ್ಯ ನಿರ್ಲ್ಯಕ್ಷ ವಹಿಸಿದ್ರು. ಆದ್ರೆ ಈಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಸೋಲು ಬಡಿದೆಬ್ಬಿಸಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬಾಸ್​ಗಳು ನೂತನ ಸೆಲೆಕ್ಟರ್​ಗೆ ಹುಡುಕಾಟ ನಡೆಸ್ತಿದ್ದಾರೆ.

ಖಡಕ್​ ಸೆಲೆಕ್ಟರ್​​ಗಾಗಿ ಶುರುವಾಯ್ತು ಹುಡುಕಾಟ.!

ಇಷ್ಟು ದಿನ ಮಾಡಿದ ಪ್ರಮಾದಗಳಿಂದ ಪಾಠ ಕಲಿತಿರುವ ಬಿಸಿಸಿಐ ಬಾಸ್​ಗಳು ಈ ಬಾರಿ ಒಬ್ಬ ಖಡಕ್​ ಸೆಲೆಕ್ಟರ್​​ ಹುಡಕಾಟ ನಡೆಸ್ತಿದ್ದಾರೆ. ಕ್ಯಾಪ್ಟನ್​- ಕೋಚ್​​ ಯಾರ ಲಾಬಿಗೂ ಜಗ್ಗದೆ, ಸ್ಟಾರ್​​ಗಿರಿಗೆ ಮಣೆ ಹಾಕದೆ ಇರೋ ಖಡಕ್​ ಆಫೀಸರ್​ ಬಿಸಿಸಿಐಗೆ ಈಗ ಬೇಕಾಗಿದೆ. ಟ್ಯಾಲೆಂಟ್​ ಇದ್ರೆ ಮಾತ್ರ ಅವಕಾಶ ಅನ್ನೋ ಆಯ್ಕೆಗಾರನ ಹುಡುಕಾಟ ಬಿಸಿಸಿಐ ವಲಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಟೀಮ್​ ಇಂಡಿಯಾವನ್ನ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿದ ಅನುಭವಿ ಆಟಗಾರನನ್ನೇ ಕರೆ ತರಬೇಕು ಎಂದು ಬಿಸಿಸಿಐ ಸಿದ್ಧವಾಗಿದೆ.

ವೀರೇಂದ್ರ ಸೆಹ್ವಾಗ್​ ಮೇಲೆ ಬಾಸ್​ಗಳ ಕಣ್ಣು.!

ಸೆಲೆಕ್ಷನ್​ ಕಮಿಟಿಯಲ್ಲಿ ಸದ್ಯ ಕಾಲಿ ಇರೋದು ಒಂದೇ ಸ್ಥಾನ. ಅದು ನಾರ್ಥ್​​ ಝೋನ್​​ಗೆ ಮೀಸಲು. ಅಂದ್ರೆ, ಬಿಸಿಸಿಐ ಸಂವಿಧಾನದ ಪ್ರಕಾರ ಆ ಸ್ಥಾನಕ್ಕೆ ಉತ್ತರವಲಯದ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕಿದೆ. ಸದ್ಯ ಉತ್ತರ ವಲಯದಲ್ಲಿ ಬಿಸಿಸಿಐ ಹುಡುಕ್ತಾ ಇರೋವಂತ ಖಡಕ್​ ಕ್ವಾಲಿಟಿ ಹೊಂದಿರೋ ಏಕೈಕ ವ್ಯಕ್ತಿ ಅಂದ್ರೆ ಅದು ವೀರೇಂದ್ರ ಸೆಹ್ವಾಗ್​. ಟೀಮ್​ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಹೊಂದಿರೋ ಸೆಹ್ವಾಗ್​, ಯಾರ ಲಾಬಿಗೂ ಮಣಿಯದೇ ನಿರ್ಧಾರ ಕೈಗೊಳ್ಳೋದ್ರಲ್ಲೂ ಎತ್ತಿದ ಕೈ.

ಸೆಹ್ವಾಗ್​ ಆಯ್ಕೆಗೆ ಸಂಬಳದ್ದೇ ದೊಡ್ಡ ಸಮಸ್ಯೆ.!

ಟೀಮ್​ ಇಂಡಿಯಾದ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಹುದ್ದೆಗೆ ಸೆಹ್ವಾಗ್ ಬೆಸ್ಟ್​ ಚಾಯ್ಸ್​. ಆದ್ರೆ, ಇದಕ್ಕೆ ಸೆಹ್ವಾಗ್​ ಒಪ್ಪಿವರೇ ಅನ್ನೋದು ದೊಡ್ಡ ಪ್ರಶ್ನೆ. ಸದ್ಯ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ವಾರ್ಷಿಕ ಸಂಬಳ 1 ಕೋಟಿ. ಈಗಾಗಲೇ ಕಾಂಮೆಂಟರಿ, ಎಂಡ್ರೋಸ್​​ಮೆಂಟ್​ಗಳಿ​ಂದ ಸೆಹ್ವಾಗ್​ ಕೋಟಿ ಕೋಟಿ ಹಣ ದುಡಿಯುತ್ತಿದ್ದಾರೆ. ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಆದ್ರೆ, ಕಾಮೆಂಟರಿ, ಎಂಡ್ರೋಸ್​ಮೆಂಟ್​ಗಳನ್ನ ನಿಲ್ಲಿಸಬೇಕು. ಇದ್ರಿಂದ ಬೇರೆಲ್ಲ ಆದಾಯ ನಿಲ್ಲಲಿದೆ. ಎಲ್ಲವನ್ನೂ ಬಿಟ್ಟು ಕೇವಲ 1 ಕೋಟಿ ಒಪ್ಪಂದಕ್ಕೆ ಸೆಹ್ವಾಗ್​ ಸೈನ್​ ಮಾಡೋದು ಅನುಮಾನ.

ಕೋಚ್​​ ಹುದ್ದೆ ಕೇಳಿದಾಗ ತಿರಸ್ಕಾರ, ಸೆಹ್ವಾಗ್​ ಈಗ ಒಪ್ತಾರಾ?.

ಈ ಹಿಂದೆ ವೀರೂ ಟೀಮ್​ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಆಗ ಸೆಹ್ವಾಗ್​ಗೆ ಮಣೆ ಹಾಕಿರಲಿಲ್ಲ. ಆಗ ತಿರಸ್ಕಾರಕ್ಕೆ ಒಳಗಾಗಿದ್ದ ಸೆಹ್ವಾಗ್​, ಈಗ ತಾವಾಗೇ ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಸುಳ್ಳು. ಒಂದು ವೇಳೆ ಬಿಸಿಸಿಐ ತಾನಾಗೇ ಅಪ್ರೋಚ್​ ಮಾಡಿದ್ರೂ, ಕಡಿಮೆ ಸಂಬಳದ ಕಾರಣ ನೀಡಿ ಸೆಹ್ವಾಗ್​, ಆಫರ್​ ರಿಜೆಕ್ಟ್​ ಮಾಡಬಹುದು.

ದ್ರಾವಿಡ್​ಗೆ ಮಾಡಿದಂತೆ ಮಾಡುತ್ತಾ ಬಿಸಿಸಿಐ?

ಟೀಮ್​ ಇಂಡಿಯಾದ ಹಿಂದಿನ ಕೋಚ್​ ರವಿ ಶಾಸ್ತ್ರಿ ವಾರ್ಷಿಕ ವೇತನ 7 ಕೋಟಿ ರೂಪಾಯಿ ಆಗಿತ್ತು. ಶಾಸ್ತ್ರಿ ಅವಧಿ ಅಂತ್ಯದ ಬಳಿಕ ರಾಹುಲ್​ ದ್ರಾವಿಡ್​ ಕರೆತರಲು ಬಿಸಿಸಿಐ ಸರ್ಕಸ್​​ ನಡೆಸ್ತು. ₹7 ಕೋಟಿ ಇದ್ದ ಹೆಡ್​ ಕೋಚ್​ ಸಂಬಳವನ್ನ ₹10 ಕೋಟಿಗೆ ಹೆಚ್ಚಳ ಮಾಡಿ, ದ್ರಾವಿಡ್​ರನ್ನ ಕೋಚ್​ ಹುದ್ದೆಗೆ ತಂದು ಕೂರಿಸಿತ್ತು. ಇದೀಗ ಸೆಹ್ವಾಗ್​ರನ್ನ ಕರೆತರಲೂ ಸೆಲೆಕ್ಟರ್ಸ್ ಸಂಬಳದಲ್ಲಿ ಏರಿಕೆ ಮಾಡಿದ್ರೆ ಅಚ್ಚರಿಪಡಬೇಕಿಲ್ಲ.

ಟೀಮ್​ ಇಂಡಿಯಾ ಸದ್ಯ ಬದಲಾವಣೆ ಹಾದಿಯಲ್ಲಿದೆ. ಭವಿಷ್ಯದ ತಂಡ ರೂಪಿಸಬೇಕಿದೆ. ಸೀನಿಯರ್​​ಗಳ ಭವಿಷ್ಯದ ಜೊತೆಗೆ ಪ್ಯೂಚರ್​ ಕ್ಯಾಪ್ಟನ್​ ಆಯ್ಕೆಯಂತ ಬಿಗ್​ ಡಿಸಿಷನ್​ ತೆಗೆದುಕೊಳ್ಳಬೇಕಿದೆ. ಈ ಎಲ್ಲ ಖಡಕ್​ ನಿರ್ಧಾರಗಳನ್ನ ತೆಗೆದುಕೊಳ್ಳೋಕೆ ಒಬ್ಬ ಡೆರ್​ ಡೆವಿಲ್​ ಹಾಗೂ ಪ್ರಭಾವಿ ಸೆಲೆಕ್ಟರ್​ ಬೇಕೆ ಬೇಕು. ಸೆಹ್ವಾಗ್​ ಒಪ್ಪದೆ ಇದ್ದರೇ, ಬೇರೋಬ್ಬ ಖಡಕ್​ ಆಯ್ಕೆಗಾರರನ್ನ ಬಿಸಿಸಿಐ ಹುಡುಕಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More