newsfirstkannada.com

US ಡೈಮಂಡ್, ನವರತ್ನದಿಂದ ರೆಡಿಯಾದ ಗಣೇಶನ ಮೂರ್ತಿ.. ಲಕ್ಷ, ಲಕ್ಷ ಖರ್ಚು ಮಾಡಿದ ಬೆಂಗಳೂರಿನ ಈ ಸಂಘ..!

Share :

17-09-2023

    ಮೌಲ್ಯದ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡೋದೆಲ್ಲಿ?

    ಹುಬ್ಬಳ್ಳಿಯಲ್ಲಿ ರೆಡಿಯಾಗಿ ಬೆಂಗಳೂರಿನ ಈ ಏರಿಯಾಕ್ಕೆ ರವಾನೆ

    ಎಷ್ಟು ಸಾವಿರ ಅಮೆರಿಕನ್ ಡೈಮಂಡ್- ನವರತ್ನದ ಹರಳು ಬಳಸಿದ್ದಾರೆ

ಬೆಳಗಾವಿ: ಬೆಂಗಳೂರು ಮೂಲದ ಸ್ವಸ್ತಿಕ ಯುವಕರ ಸಂಘದ 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕನ್ ಡೈಮಂಡ್​ ಹರಳುಗಳಿಂದ ವಿನಾಯಕ ಮೂರ್ತಿಯನ್ನು ಹುಬ್ಬಳ್ಳಿ ನಗರದಲ್ಲಿ ತಯಾರಿಸಲಾಗಿದೆ. ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನದ ಹರಳುಗಳನ್ನು ಬಳಸಿ ಗಣಪತಿಯನ್ನು ಸುಂದರವಾಗಿ ರೆಡಿ ಮಾಡಲಾಗಿದೆ.

ಬೆಂಗಳೂರಿನ ರಾಜಾಜಿನಗರದ 2ನೇ ಹಂತದ ಮಿಲ್ಕ್​ ಕಾಲೋನಿಯ 5ನೇ ಮುಖ್ಯ ರಸ್ತೆಯಲ್ಲಿ ನಾಳೆ ಸ್ವಸ್ತಿಕ ಯುವಕರ ಸಂಘವು ಈ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಿದೆ. ಈ ಸಂಘವು ಹಲವು ವರ್ಷಗಳಿಂದ ನಗರದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತ ಬರುತ್ತಿದೆ. 60 ಸಾವಿರ ಡೈಮಂಡ್, ನವರತ್ನದ ಹರಳುಗಳಿಂದ ತಯಾರಾಗಿರುವ ಈ ಗಣಪತಿ 5.7 ಅಡಿ ಎತ್ತರ ವಿದ್ದು, ಸುಮಾರು 150 ಕೆ.ಜಿ ತೂಕವಿದೆ. ಮುಖ ಮಾತ್ರ ಬಿಟ್ಟು ಗಣೇಶನ ಉಳಿದ ಭಾಗವನ್ನು ಡೈಮಂಡ್ ಹರಳು, ನವರತ್ನ ಹರಳುಗಳಿಂದ ಸೌಂದರ್ಯಯುತವಾಗಿ ಸಿದ್ಧ ಪಡಿಸಲಾಗಿದೆ.

ಹುಬ್ಬಳ್ಳಿ ನಗರದ ಬಮ್ಮಾಪುರದ ನಿವಾಸಿ ಕಲಾವಿದ ಮಹೇಶ ಮುರಗೋಡ ತಂಡದವರು ಈ ಗಣಪತಿಯನ್ನು ಅತ್ಯದ್ಭುತವಾಗಿ ಸಿದ್ಧ ಪಡಿಸಿದ್ದಾರೆ. ಈಗಾಗಲೇ ರೆಡಿಯಾಗಿರುವ ಗಣಪತಿ ಮೂರ್ತಿಯನ್ನು ಸಂಘದ ಯುವಕರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲ್ವೆ ಮೂಲಕ ತರುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

US ಡೈಮಂಡ್, ನವರತ್ನದಿಂದ ರೆಡಿಯಾದ ಗಣೇಶನ ಮೂರ್ತಿ.. ಲಕ್ಷ, ಲಕ್ಷ ಖರ್ಚು ಮಾಡಿದ ಬೆಂಗಳೂರಿನ ಈ ಸಂಘ..!

https://newsfirstlive.com/wp-content/uploads/2023/09/HBL_GANAPATI.jpg

    ಮೌಲ್ಯದ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡೋದೆಲ್ಲಿ?

    ಹುಬ್ಬಳ್ಳಿಯಲ್ಲಿ ರೆಡಿಯಾಗಿ ಬೆಂಗಳೂರಿನ ಈ ಏರಿಯಾಕ್ಕೆ ರವಾನೆ

    ಎಷ್ಟು ಸಾವಿರ ಅಮೆರಿಕನ್ ಡೈಮಂಡ್- ನವರತ್ನದ ಹರಳು ಬಳಸಿದ್ದಾರೆ

ಬೆಳಗಾವಿ: ಬೆಂಗಳೂರು ಮೂಲದ ಸ್ವಸ್ತಿಕ ಯುವಕರ ಸಂಘದ 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕನ್ ಡೈಮಂಡ್​ ಹರಳುಗಳಿಂದ ವಿನಾಯಕ ಮೂರ್ತಿಯನ್ನು ಹುಬ್ಬಳ್ಳಿ ನಗರದಲ್ಲಿ ತಯಾರಿಸಲಾಗಿದೆ. ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನದ ಹರಳುಗಳನ್ನು ಬಳಸಿ ಗಣಪತಿಯನ್ನು ಸುಂದರವಾಗಿ ರೆಡಿ ಮಾಡಲಾಗಿದೆ.

ಬೆಂಗಳೂರಿನ ರಾಜಾಜಿನಗರದ 2ನೇ ಹಂತದ ಮಿಲ್ಕ್​ ಕಾಲೋನಿಯ 5ನೇ ಮುಖ್ಯ ರಸ್ತೆಯಲ್ಲಿ ನಾಳೆ ಸ್ವಸ್ತಿಕ ಯುವಕರ ಸಂಘವು ಈ ಡೈಮಂಡ್ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಿದೆ. ಈ ಸಂಘವು ಹಲವು ವರ್ಷಗಳಿಂದ ನಗರದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತ ಬರುತ್ತಿದೆ. 60 ಸಾವಿರ ಡೈಮಂಡ್, ನವರತ್ನದ ಹರಳುಗಳಿಂದ ತಯಾರಾಗಿರುವ ಈ ಗಣಪತಿ 5.7 ಅಡಿ ಎತ್ತರ ವಿದ್ದು, ಸುಮಾರು 150 ಕೆ.ಜಿ ತೂಕವಿದೆ. ಮುಖ ಮಾತ್ರ ಬಿಟ್ಟು ಗಣೇಶನ ಉಳಿದ ಭಾಗವನ್ನು ಡೈಮಂಡ್ ಹರಳು, ನವರತ್ನ ಹರಳುಗಳಿಂದ ಸೌಂದರ್ಯಯುತವಾಗಿ ಸಿದ್ಧ ಪಡಿಸಲಾಗಿದೆ.

ಹುಬ್ಬಳ್ಳಿ ನಗರದ ಬಮ್ಮಾಪುರದ ನಿವಾಸಿ ಕಲಾವಿದ ಮಹೇಶ ಮುರಗೋಡ ತಂಡದವರು ಈ ಗಣಪತಿಯನ್ನು ಅತ್ಯದ್ಭುತವಾಗಿ ಸಿದ್ಧ ಪಡಿಸಿದ್ದಾರೆ. ಈಗಾಗಲೇ ರೆಡಿಯಾಗಿರುವ ಗಣಪತಿ ಮೂರ್ತಿಯನ್ನು ಸಂಘದ ಯುವಕರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲ್ವೆ ಮೂಲಕ ತರುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More