newsfirstkannada.com

2ನೇ ಮಗನ ಮದುವೆಗೆ ಅಡ್ಡಿಯಾಗ್ತಾನೆಂದು ಮೊದಲ ಮಗನನ್ನು ಕೊಂದ ತಂದೆ.. ತಾನೇ ಕೈಯಾರೆ ವಿಷ ಕೊಟ್ಟು ಕಥೆ ಕಟ್ಟಿದ

Share :

19-07-2023

    24 ವರ್ಷದ ಮಗನನ್ನು ಕೈಯಾರೆ ಕೊಂದ ಪಾಪಿ ತಂದೆ

    ಮಗ ಮಾನಸಿಕ ಅಸ್ವಸ್ಥನೆಂದು ವಿಷ ಕೊಟ್ಟು ಕೊಂದೇ ಬಿಟ್ಟ

    ಮೊದಲ ಮಗನಿಗಾಗಿ 2ನೇ ಮಗ ಕಾಣೆಯಾದ ಕಥೆ ಕಟ್ಟಿದ

ಬೆಳಗಾವಿ: ಎರಡನೇ ಮಗನ ಮದುವೆಗೆ ಅಡ್ಡಿಯಾಗ್ತಾನೆಂದು ತಂದೆಯೇ ತನ್ನ ಮೊದಲ ಮಗನನ್ನು ಕೈಯಾರೆ ಕೊಂದ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್​ನಲ್ಲಿ ನಡೆದಿದೆ. ನಿಖಿಲ್ ರಾಜಕುಮಾರ್ ಮಗದುಮ್ (24) ಕೊಲೆಯಾದ ದುರ್ದೈವಿ. ತಂದೆ ರಾಜಕುಮಾರ್ ಮಗದುಮ್ ಕೊಲೆ ಮಾಡಿದ ಕಿರಾತಕ.

ಮಗ ಮಾನಸಿಕ ಅಸ್ವಸ್ಥ

ರಾಜಕುಮಾರ್ ಮಗದುಮ್ ಅವರ ಮೊದಲ ಮಗ ನಿಖಿಲ್ ರಾಜಕುಮಾರ್ ಮಗದುಮ್ ಮಾನಸಿಕ ಅಸ್ವಸ್ಥನಾಗಿದ್ದು, ಈತನಿಂದ 2ನೇ ಮಗನ ವಿವಾಹಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

ವಿಷ ಉಣಿಸಿ ಕೊಂದ ಪಾಪಿ ತಂದೆ

ನಿಖಿಲ್ ರಾಜಕುಮಾರ್ ಮಗದುಮ್​ನನ್ನು ತಂದೆ ರಾಜಕುಮಾರ್ ಮಗದುಮ್​ಗೆ ಮೊದಲಿಗೆ ವಿಷ ಉಣಿಸಿ ಬಳಿಕ ಮರಕ್ಕೆ ಬಲವಾಗಿ ತಲೆ ಹಾಯಿಸಿ ಕೊಂದಿದ್ದಾನೆ. ತಂದೆಯ ಕ್ರೌರ್ಯಕ್ಕೆ 24 ವರ್ಷದ ಮಾನಸಿಕ ಅಸ್ವಸ್ಥ ಮಗ ಸಾವನ್ನಪ್ಪಿದ್ದನು.

ಕೊಂದು ಕಥೆ ಕಟ್ಟಿದ

ಮಾನಸಿಕ ಅಸ್ವಸ್ಥ ಮಗ ಇದ್ದಾಗ ಚೆನ್ನಾಗಿರುವ ಮಗನಿಗೆ ಹೆಣ್ಣು ಸಿಗಲ್ಲ ಎಂದು ಭಾವಿಸಿ ತಂದೆ ರಾಜಕುಮಾರ್ ಮೊದಲ ಮಗನನ್ನು ಕೊಲ್ಲಲು ಪ್ಲಾನ್​ ಮಾಡುತ್ತಾನೆ. ಅದರಂತೆಯೇ ಮನೆಯಿಂದ ಆತನನ್ನು ಕರೆದುಕೊಂಡು ಹೋಗುತ್ತಾನೆ. ಬಳಿಕ ಕೊಲೆ ಮಾಡಿ ಬಂದು ಮನೆಯಲ್ಲಿ ನಿಖಿಲ್ ಬೆಳಗಾವಿ ಬಸ್ ನಿಲ್ದಾಣದಲ್ಲಿ ಕಾಣೆಯಾದ ಎಂದು ಕಥೆ ಕಟ್ಟಿದ್ದಾನೆ.

ಕಳೆದ ಮೇ 31 ರಂದು ಖಾನಾಪುರ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಕುರಿತಾಗಿ ತನಿಖೆ ಶುರು ಮಾಡಿದ ಪೊಲೀಸರಿಗೆ ಅದು ನಿಖಿಲ್ ರಾಜಕುಮಾರ್ ಶವ ಎಂಬುದು ಗೊತ್ತಾಯಿತು. ನಿಖಿಲ್ ಕುರಿತು ಮಾಹಿತಿ ಸಂಗ್ರಹಿಸಿ ಪೊಲೀಸರು ಆತನ ಚಿಕ್ಕಪ್ಪ ಸಂತೋಷ್ ಮಗದುಮ್​ನನ್ನು ವಿಚಾರಣೆ ನಡೆಸಿದರು.

ಅಣ್ಣನೇ ಕೊಂದ

ವಿಚಾರಣೆ ವೇಳೆ ಸಂತೋಷ್ ಮಗದುಮ್ ಅಣ್ಣನೇ ನಿಖಿಲ್​​ನನ್ನು ಕೊಲೆ ಮಾಡಿದ್ದಾಗಿ ಹೇಳುವುದರ ಜೊತೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ರಾಜಕುಮಾರ್ ಮಗದುಮ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಜಕುಮಾರ್ ನಡೆದ ವಿಷಯ ಬಾಯ್ಬಿಟ್ಟಿದ್ದಾನೆ. ಕೊಲೆ‌ ಮಾಡಿದ್ದು ನಾನೆ ಎಂದು ಒಪ್ಪಿಕೊಂಡಿಕೊಂಡಿದ್ದಾನೆ. ಬಳಿಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

2ನೇ ಮಗನ ಮದುವೆಗೆ ಅಡ್ಡಿಯಾಗ್ತಾನೆಂದು ಮೊದಲ ಮಗನನ್ನು ಕೊಂದ ತಂದೆ.. ತಾನೇ ಕೈಯಾರೆ ವಿಷ ಕೊಟ್ಟು ಕಥೆ ಕಟ್ಟಿದ

https://newsfirstlive.com/wp-content/uploads/2023/07/Belagavi-Son-murder.jpg

    24 ವರ್ಷದ ಮಗನನ್ನು ಕೈಯಾರೆ ಕೊಂದ ಪಾಪಿ ತಂದೆ

    ಮಗ ಮಾನಸಿಕ ಅಸ್ವಸ್ಥನೆಂದು ವಿಷ ಕೊಟ್ಟು ಕೊಂದೇ ಬಿಟ್ಟ

    ಮೊದಲ ಮಗನಿಗಾಗಿ 2ನೇ ಮಗ ಕಾಣೆಯಾದ ಕಥೆ ಕಟ್ಟಿದ

ಬೆಳಗಾವಿ: ಎರಡನೇ ಮಗನ ಮದುವೆಗೆ ಅಡ್ಡಿಯಾಗ್ತಾನೆಂದು ತಂದೆಯೇ ತನ್ನ ಮೊದಲ ಮಗನನ್ನು ಕೈಯಾರೆ ಕೊಂದ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್​ನಲ್ಲಿ ನಡೆದಿದೆ. ನಿಖಿಲ್ ರಾಜಕುಮಾರ್ ಮಗದುಮ್ (24) ಕೊಲೆಯಾದ ದುರ್ದೈವಿ. ತಂದೆ ರಾಜಕುಮಾರ್ ಮಗದುಮ್ ಕೊಲೆ ಮಾಡಿದ ಕಿರಾತಕ.

ಮಗ ಮಾನಸಿಕ ಅಸ್ವಸ್ಥ

ರಾಜಕುಮಾರ್ ಮಗದುಮ್ ಅವರ ಮೊದಲ ಮಗ ನಿಖಿಲ್ ರಾಜಕುಮಾರ್ ಮಗದುಮ್ ಮಾನಸಿಕ ಅಸ್ವಸ್ಥನಾಗಿದ್ದು, ಈತನಿಂದ 2ನೇ ಮಗನ ವಿವಾಹಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

ವಿಷ ಉಣಿಸಿ ಕೊಂದ ಪಾಪಿ ತಂದೆ

ನಿಖಿಲ್ ರಾಜಕುಮಾರ್ ಮಗದುಮ್​ನನ್ನು ತಂದೆ ರಾಜಕುಮಾರ್ ಮಗದುಮ್​ಗೆ ಮೊದಲಿಗೆ ವಿಷ ಉಣಿಸಿ ಬಳಿಕ ಮರಕ್ಕೆ ಬಲವಾಗಿ ತಲೆ ಹಾಯಿಸಿ ಕೊಂದಿದ್ದಾನೆ. ತಂದೆಯ ಕ್ರೌರ್ಯಕ್ಕೆ 24 ವರ್ಷದ ಮಾನಸಿಕ ಅಸ್ವಸ್ಥ ಮಗ ಸಾವನ್ನಪ್ಪಿದ್ದನು.

ಕೊಂದು ಕಥೆ ಕಟ್ಟಿದ

ಮಾನಸಿಕ ಅಸ್ವಸ್ಥ ಮಗ ಇದ್ದಾಗ ಚೆನ್ನಾಗಿರುವ ಮಗನಿಗೆ ಹೆಣ್ಣು ಸಿಗಲ್ಲ ಎಂದು ಭಾವಿಸಿ ತಂದೆ ರಾಜಕುಮಾರ್ ಮೊದಲ ಮಗನನ್ನು ಕೊಲ್ಲಲು ಪ್ಲಾನ್​ ಮಾಡುತ್ತಾನೆ. ಅದರಂತೆಯೇ ಮನೆಯಿಂದ ಆತನನ್ನು ಕರೆದುಕೊಂಡು ಹೋಗುತ್ತಾನೆ. ಬಳಿಕ ಕೊಲೆ ಮಾಡಿ ಬಂದು ಮನೆಯಲ್ಲಿ ನಿಖಿಲ್ ಬೆಳಗಾವಿ ಬಸ್ ನಿಲ್ದಾಣದಲ್ಲಿ ಕಾಣೆಯಾದ ಎಂದು ಕಥೆ ಕಟ್ಟಿದ್ದಾನೆ.

ಕಳೆದ ಮೇ 31 ರಂದು ಖಾನಾಪುರ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಕುರಿತಾಗಿ ತನಿಖೆ ಶುರು ಮಾಡಿದ ಪೊಲೀಸರಿಗೆ ಅದು ನಿಖಿಲ್ ರಾಜಕುಮಾರ್ ಶವ ಎಂಬುದು ಗೊತ್ತಾಯಿತು. ನಿಖಿಲ್ ಕುರಿತು ಮಾಹಿತಿ ಸಂಗ್ರಹಿಸಿ ಪೊಲೀಸರು ಆತನ ಚಿಕ್ಕಪ್ಪ ಸಂತೋಷ್ ಮಗದುಮ್​ನನ್ನು ವಿಚಾರಣೆ ನಡೆಸಿದರು.

ಅಣ್ಣನೇ ಕೊಂದ

ವಿಚಾರಣೆ ವೇಳೆ ಸಂತೋಷ್ ಮಗದುಮ್ ಅಣ್ಣನೇ ನಿಖಿಲ್​​ನನ್ನು ಕೊಲೆ ಮಾಡಿದ್ದಾಗಿ ಹೇಳುವುದರ ಜೊತೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ರಾಜಕುಮಾರ್ ಮಗದುಮ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಜಕುಮಾರ್ ನಡೆದ ವಿಷಯ ಬಾಯ್ಬಿಟ್ಟಿದ್ದಾನೆ. ಕೊಲೆ‌ ಮಾಡಿದ್ದು ನಾನೆ ಎಂದು ಒಪ್ಪಿಕೊಂಡಿಕೊಂಡಿದ್ದಾನೆ. ಬಳಿಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More