ಕೈ ಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?
ಯುವತಿ ಅ್ಯಂಡ್ ಗ್ಯಾಂಗ್ 15 ಲಕ್ಷಕ್ಕೆ ಬೇಡಿಕೆ ಇಟ್ಟಿದೆ ಅಂತ ದೂರು
ಬಳ್ಳಾರಿ ಸಂಸದ ದೇವೇಂದ್ರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸಿದ ಪುತ್ರ
ಬಳ್ಳಾರಿ ಸಂಸದರ ರಾಜಕೀಯ ಬದುಕಿಗೆ ಪುತ್ರನ ಮೇಲಿನ ಆರೋಪವೊಂದು ಕಂಕಟವಾಗಿ ಪರಿಣಮಿಸಿದೆ. ಸಂಸದ ವೈ.ದೇವೇಂದ್ರಪ್ಪ ಪುತ್ರನ ಮೇಲೆ ಯುವತಿಯೊಬ್ಬಳು ನೀಡಿರೋ ದೂರು, ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಇತ್ತ ಯುವತಿ ಸಂಸದರ ಪುತ್ರನಿಂದ ಮೋಸ ಆಗಿದೆ ಅಂತ್ರಿದ್ರೆ, ಅತ್ತ ಸಂಸದರ ಪುತ್ರ ಹನಿಟ್ರಾಪ್ ಆರೋಪ ಮಾಡಿದ್ದಾರೆ.
ಸಂಸದನ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಕೈಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?
ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಲುಕೋದು ಸರ್ವೆ ಸಮಾನ್ಯ. ಹೀಗೆ ಪುತ್ರನ ಮೇಲಿನ ಆರೋಪವೊಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿದೆ. ಪುತ್ರ ರಂಗನಾಥ್ ಮೇಲೆ ಕೇಳಿ ಬಂದಿರೋ ಲೈಗಿಂಕ ದೌರ್ಜನ್ಯ ಆರೋಪ ಸದ್ಯ ಸಂಸದ ದೇವೇಂದ್ರಪ್ಪ ರಾಜಕೀಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ರಂಗನಾಥ್ ದೋಖಾ ಮಾಡಿದ್ದಾರೆ ಅನ್ನೋ ಆರೋಪ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮದುವೆ ಹೆಸರಲ್ಲಿ ಯುವತಿ ಜೊತೆ ರಂಗನಾಥ್ ಲವ್ವಿ-ಡವ್ವಿ?
ಪ್ರೀತಿ-ಪ್ರೇಮ ಅಂತ ಯುವತಿ ಮೇಲೆ ಲೈಗಿಂಕ ದೌರ್ಜನ್ಯ?
ಮೈಸೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿರೋ ಸಂಸದ ವೈ.ದೇವೇಂದ್ರಪ್ಪ ಪುತ್ರ ರಂಗನಾಥ್ ಮೇಲೆ ಯುವತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ರಂಗನಾಥ್ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಅಂತ ಯುವತಿ ಬೆಂಗಳೂರಿನ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ. ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದೀನಿ, ಒಳ್ಳೆಯ ಸಂಬಳ ಬರ್ತಿದೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡ್ಕೋತೀನಿ ಅಂತ ರಂಗನಾಥ್ ನನ್ನ ನಂಬಿಸಿದ್ರು. 2023ರ ಜನವರಿ 24ರಂದು ಬೆಂಗಳೂರಿನಿಂದ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಎಂಬ ಹೋಟೆಲ್ಗೆ ಕರೆದೊಯ್ದು, ಮದ್ಯ ಸೇವಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಮರುದಿನ ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ರಂಗನಾಥ್ ನನ್ನ ಜೊತೆ ಸರಿಯಾಗಿ ಮಾತನಾಡದೇ, ಮದುವೆಯಾಗದೇ ಮೋಸ ಮಾಡಿರುತ್ತಾರೆ. ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಅಂತ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿ ವಿರುದ್ಧ ರಂಗನಾಥ್ರಿಂದ ಪ್ರತಿದೂರು ದಾಖಲು
ಇತ್ತ ಬೆಂಗಳೂರಿನಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಾಗ್ತಾ ಇದ್ದಂತೆಯೇ ಅತ್ತ ರಂಗನಾಥ್ ಸಹ ಮೈಸೂರಿನಲ್ಲಿ ಯುವತಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಮದುವೆಯಾಗು ಅಂತ ಕಿರುಕುಳ ನೀಡಿ ಯುವತಿ ಮತ್ತಾಕೆಯ ಗ್ಯಾಂಗ್ ತನ್ನನ್ನ ಹನಿಟ್ರಾಪ್ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಸ್ನೇಹಿತ ಕಲ್ಲೇಶ್ ಎಂಬುವರಿಂದ ಯುವತಿಯ ಪರಿಚಯ ಆಯ್ತು. 2-3 ಬಾರಿ ಭೇಟಿಯಾಗಿ, ಬಳಿಕ ತನ್ನನ್ನ ಮದುವೆಯಾಗುವಂತೆ ಆಕೆ ಕಿರುಕುಳ ನೀಡಿದ್ರು. 2023ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ನನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಳಿಕ ತನ್ನ ಜೊತೆ ಇರುವ ಫೋಟೋಗಳನ್ನ ನನ್ನ ಮಡದಿಗೆ ಕಳುಹಿಸುವುದಾಗಿ ಬೆದರಿಸಿ 32,500 ರೂಪಾಯಿ ಹಣವನ್ನ ವಸೂಲಿ ಮಾಡಿದ್ದಾರೆ. ಬಳಿಕ ಶ್ರೀನಿವಾಸ್ ಎಂಬ ವ್ಯಕ್ತಿಯನ್ನ ಕಳುಹಿಸಿ 15 ಲಕ್ಷ ಹಣ ನೀಡಲು ಬೆದರಿಕೆ ಹಾಕಿದ್ದಾರೆ. ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟದಲ್ಲಿ ಸಂಸದರ ಪುತ್ರನ ಮೇಲಿನ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಯುವತಿ ಮೋಸ ಅಂತಿದ್ರೆ ಇತ್ತ ರಂಗನಾಥ್ ಹನಿಟ್ರಾಪ್ ಅಂತಿದ್ದಾರೆ. ಯಾವುದು ಸತ್ಯ ಯುವುದು ಸುಳ್ಳೋ ಅನ್ನೋ ಮಾಹಿತಿ ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯ ಹೊರಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೈ ಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?
ಯುವತಿ ಅ್ಯಂಡ್ ಗ್ಯಾಂಗ್ 15 ಲಕ್ಷಕ್ಕೆ ಬೇಡಿಕೆ ಇಟ್ಟಿದೆ ಅಂತ ದೂರು
ಬಳ್ಳಾರಿ ಸಂಸದ ದೇವೇಂದ್ರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸಿದ ಪುತ್ರ
ಬಳ್ಳಾರಿ ಸಂಸದರ ರಾಜಕೀಯ ಬದುಕಿಗೆ ಪುತ್ರನ ಮೇಲಿನ ಆರೋಪವೊಂದು ಕಂಕಟವಾಗಿ ಪರಿಣಮಿಸಿದೆ. ಸಂಸದ ವೈ.ದೇವೇಂದ್ರಪ್ಪ ಪುತ್ರನ ಮೇಲೆ ಯುವತಿಯೊಬ್ಬಳು ನೀಡಿರೋ ದೂರು, ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಇತ್ತ ಯುವತಿ ಸಂಸದರ ಪುತ್ರನಿಂದ ಮೋಸ ಆಗಿದೆ ಅಂತ್ರಿದ್ರೆ, ಅತ್ತ ಸಂಸದರ ಪುತ್ರ ಹನಿಟ್ರಾಪ್ ಆರೋಪ ಮಾಡಿದ್ದಾರೆ.
ಸಂಸದನ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಕೈಹಿಡಿಯುವುದಾಗಿ ನಂಬಿಸಿ ಕೈ ಕೊಟ್ರಾ ಸಂಸದನ ಪುತ್ರ?
ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಲುಕೋದು ಸರ್ವೆ ಸಮಾನ್ಯ. ಹೀಗೆ ಪುತ್ರನ ಮೇಲಿನ ಆರೋಪವೊಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿದೆ. ಪುತ್ರ ರಂಗನಾಥ್ ಮೇಲೆ ಕೇಳಿ ಬಂದಿರೋ ಲೈಗಿಂಕ ದೌರ್ಜನ್ಯ ಆರೋಪ ಸದ್ಯ ಸಂಸದ ದೇವೇಂದ್ರಪ್ಪ ರಾಜಕೀಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ರಂಗನಾಥ್ ದೋಖಾ ಮಾಡಿದ್ದಾರೆ ಅನ್ನೋ ಆರೋಪ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮದುವೆ ಹೆಸರಲ್ಲಿ ಯುವತಿ ಜೊತೆ ರಂಗನಾಥ್ ಲವ್ವಿ-ಡವ್ವಿ?
ಪ್ರೀತಿ-ಪ್ರೇಮ ಅಂತ ಯುವತಿ ಮೇಲೆ ಲೈಗಿಂಕ ದೌರ್ಜನ್ಯ?
ಮೈಸೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿರೋ ಸಂಸದ ವೈ.ದೇವೇಂದ್ರಪ್ಪ ಪುತ್ರ ರಂಗನಾಥ್ ಮೇಲೆ ಯುವತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ರಂಗನಾಥ್ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಅಂತ ಯುವತಿ ಬೆಂಗಳೂರಿನ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ. ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದೀನಿ, ಒಳ್ಳೆಯ ಸಂಬಳ ಬರ್ತಿದೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡ್ಕೋತೀನಿ ಅಂತ ರಂಗನಾಥ್ ನನ್ನ ನಂಬಿಸಿದ್ರು. 2023ರ ಜನವರಿ 24ರಂದು ಬೆಂಗಳೂರಿನಿಂದ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಎಂಬ ಹೋಟೆಲ್ಗೆ ಕರೆದೊಯ್ದು, ಮದ್ಯ ಸೇವಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಮರುದಿನ ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ರಂಗನಾಥ್ ನನ್ನ ಜೊತೆ ಸರಿಯಾಗಿ ಮಾತನಾಡದೇ, ಮದುವೆಯಾಗದೇ ಮೋಸ ಮಾಡಿರುತ್ತಾರೆ. ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಅಂತ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿ ವಿರುದ್ಧ ರಂಗನಾಥ್ರಿಂದ ಪ್ರತಿದೂರು ದಾಖಲು
ಇತ್ತ ಬೆಂಗಳೂರಿನಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಾಗ್ತಾ ಇದ್ದಂತೆಯೇ ಅತ್ತ ರಂಗನಾಥ್ ಸಹ ಮೈಸೂರಿನಲ್ಲಿ ಯುವತಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಮದುವೆಯಾಗು ಅಂತ ಕಿರುಕುಳ ನೀಡಿ ಯುವತಿ ಮತ್ತಾಕೆಯ ಗ್ಯಾಂಗ್ ತನ್ನನ್ನ ಹನಿಟ್ರಾಪ್ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಸ್ನೇಹಿತ ಕಲ್ಲೇಶ್ ಎಂಬುವರಿಂದ ಯುವತಿಯ ಪರಿಚಯ ಆಯ್ತು. 2-3 ಬಾರಿ ಭೇಟಿಯಾಗಿ, ಬಳಿಕ ತನ್ನನ್ನ ಮದುವೆಯಾಗುವಂತೆ ಆಕೆ ಕಿರುಕುಳ ನೀಡಿದ್ರು. 2023ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ನನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಳಿಕ ತನ್ನ ಜೊತೆ ಇರುವ ಫೋಟೋಗಳನ್ನ ನನ್ನ ಮಡದಿಗೆ ಕಳುಹಿಸುವುದಾಗಿ ಬೆದರಿಸಿ 32,500 ರೂಪಾಯಿ ಹಣವನ್ನ ವಸೂಲಿ ಮಾಡಿದ್ದಾರೆ. ಬಳಿಕ ಶ್ರೀನಿವಾಸ್ ಎಂಬ ವ್ಯಕ್ತಿಯನ್ನ ಕಳುಹಿಸಿ 15 ಲಕ್ಷ ಹಣ ನೀಡಲು ಬೆದರಿಕೆ ಹಾಕಿದ್ದಾರೆ. ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟದಲ್ಲಿ ಸಂಸದರ ಪುತ್ರನ ಮೇಲಿನ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಯುವತಿ ಮೋಸ ಅಂತಿದ್ರೆ ಇತ್ತ ರಂಗನಾಥ್ ಹನಿಟ್ರಾಪ್ ಅಂತಿದ್ದಾರೆ. ಯಾವುದು ಸತ್ಯ ಯುವುದು ಸುಳ್ಳೋ ಅನ್ನೋ ಮಾಹಿತಿ ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯ ಹೊರಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ