newsfirstkannada.com

ಭೂ ಹಗರಣವಿಲ್ಲ, ಕೌಟುಂಬಿಕ ಕಲಹವಿಲ್ಲ.. ಸರ್ಕಾರಿ ಅಧಿಕಾರಿಯ ಕೊಲೆಗೆ ಚಾಲಕನೇ ಹಂತಕನಾದ

Share :

06-11-2023

    ಐದು ವರ್ಷಗಳಿಂದ ಪ್ರತಿಮಾ ಕಾರುಚಾಲಕನಾಗಿದ್ದ ಕಿರಣ್​

    ಕೆಲ ದಿನಗಳ ಹಿಂದೆ​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ ಕಿರಣ್​

    ಚಾಮರಾಜನಗರದ ಬಳಿ ಚಾಲಕ ಕಿರಣ್​ನನ್ನು ಅರೆಸ್ಟ್​ ಮಾಡಿದ ಪೊಲೀಸರು

ಮಹಿಳಾ ಅಧಿಕಾರಿ ಪ್ರತಿಮಾ ಕಾರು ಚಾಲಕನಾಗಿ ಕೆಲಸದಿಂದ ವಜಾಗೊಂಡಿದ್ದ ಕಿರಣ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಪ್ರತಿಮಾ ಮಾಹಿತಿ ಲೀಕ್​ ಮಾಡುತ್ತಿದ್ದ ಕಿರಣ್

ಕಿರಣ್​ ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದನು. ಪ್ರತಿಮಾ ರೇಡ್ ಹೋಗುವ ವಿಚಾರವನ್ನು ಕಿರಣ್​ ಲೀಕ್ ಮಾಡ್ತಿದ್ದನು. ಈ ವಿಚಾರ ಪ್ರತಿಮಾರಿಗೆ ತಿಳಿದಂತೆಯೇ ವಾರ್ನ್ ಮಾಡಲಾಗಿತ್ತು. ನಂತರ ಆತನನ್ನು ಕೆಲಸದಿಂದ ತೆಗೆದು ಹಾಕಿದರು.

ಕಾಲಿಗೆ ಬಿದ್ರು ಕೆಲಸಕ್ಕೆ ಸೇರಿಕೊಳ್ಳದ ಪ್ರತಿಮಾ

ಇದಲ್ಲದೆ, ಕೆಲ ದಿನಗಳ ಹಿಂದೆ ಕಿರಣ್​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಅದಕ್ಕೆ ಪ್ರತಿಮಾ ಬೈದಿದ್ದರು. ಇವೆಲ್ಲದರ ಕೋಪದಿಂದ ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಕೆಲಸದಿಂದ ಕಿತ್ತೆಸದ ಬಳಿಕ ಕಿರಣ್​ ಪ್ರತಿಮಾ ಮನೆಗೆ ಬಂದಿದ್ದಾನೆ. ಆಕೆಯ ಕಾಲಿಗೆ ಕೂಡ ಬಿದ್ದಿದ್ದಾನೆ. ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದಾನೆ. ಆದರೆ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕಿರಣ್​ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

5 ವರ್ಷದಿಂದ ಚಾಲಕ ವೃತ್ತಿ

ಚಾಲಕ ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕಾರಿದ್ದರು. ಕಿರಣ್ ಕೂಡ ಪ್ರತಿಮಾ ಡ್ರೈವರ್​ ಆಗಿ 5 ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದಾನೆ. 10 ದಿನಗಳ ಹಿಂದೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಕ್ಕೆ ಕಿರಣ್​ ಚಾಕುವಿನಿಂದ ಪ್ರತಿಮಾ ಕತ್ತು ಕೊಯ್ದಿದ್ದಾನೆ. ​ಬಳಿ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗ್ತಿದ್ದಾನೆ.

ಚಾಮರಾಜನಗರದ ಬಳಿ ಆರೋಪಿ ಅರೆಸ್ಟ್​

ಚಾಮರಾಜನಗರದಲ್ಲಿ ಆರೋಪಿ ಕಿರಣ್​​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಹೆಚ್ಚಿನ ತನಿಖೆಗೆ ನಡೆಯುತ್ತಿದೆ. ಅತ್ತ ಪ್ರತಿಮಾ ಪಾರ್ಥಿವ ಶರೀರ ಹುಟ್ಟೂರಾದ ತೀರ್ಥಹಳ್ಳಿಗೆ ಆಗಮಿಸಿದ್ದು, ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂ ಹಗರಣವಿಲ್ಲ, ಕೌಟುಂಬಿಕ ಕಲಹವಿಲ್ಲ.. ಸರ್ಕಾರಿ ಅಧಿಕಾರಿಯ ಕೊಲೆಗೆ ಚಾಲಕನೇ ಹಂತಕನಾದ

https://newsfirstlive.com/wp-content/uploads/2023/11/KiraN-1.jpg

    ಐದು ವರ್ಷಗಳಿಂದ ಪ್ರತಿಮಾ ಕಾರುಚಾಲಕನಾಗಿದ್ದ ಕಿರಣ್​

    ಕೆಲ ದಿನಗಳ ಹಿಂದೆ​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ ಕಿರಣ್​

    ಚಾಮರಾಜನಗರದ ಬಳಿ ಚಾಲಕ ಕಿರಣ್​ನನ್ನು ಅರೆಸ್ಟ್​ ಮಾಡಿದ ಪೊಲೀಸರು

ಮಹಿಳಾ ಅಧಿಕಾರಿ ಪ್ರತಿಮಾ ಕಾರು ಚಾಲಕನಾಗಿ ಕೆಲಸದಿಂದ ವಜಾಗೊಂಡಿದ್ದ ಕಿರಣ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಪ್ರತಿಮಾ ಮಾಹಿತಿ ಲೀಕ್​ ಮಾಡುತ್ತಿದ್ದ ಕಿರಣ್

ಕಿರಣ್​ ಕಾಂಟ್ರಾಕ್ಟ್ ಬೇಸಿಸ್​​ನಲ್ಲಿ ಕೆಲಸ ಮಾಡ್ತಿದ್ದನು. ಪ್ರತಿಮಾ ರೇಡ್ ಹೋಗುವ ವಿಚಾರವನ್ನು ಕಿರಣ್​ ಲೀಕ್ ಮಾಡ್ತಿದ್ದನು. ಈ ವಿಚಾರ ಪ್ರತಿಮಾರಿಗೆ ತಿಳಿದಂತೆಯೇ ವಾರ್ನ್ ಮಾಡಲಾಗಿತ್ತು. ನಂತರ ಆತನನ್ನು ಕೆಲಸದಿಂದ ತೆಗೆದು ಹಾಕಿದರು.

ಕಾಲಿಗೆ ಬಿದ್ರು ಕೆಲಸಕ್ಕೆ ಸೇರಿಕೊಳ್ಳದ ಪ್ರತಿಮಾ

ಇದಲ್ಲದೆ, ಕೆಲ ದಿನಗಳ ಹಿಂದೆ ಕಿರಣ್​ ಒಂದು ಆ್ಯಕ್ಸಿಡೆಂಟ್ ಮಾಡಿದ್ದ. ಅದಕ್ಕೆ ಪ್ರತಿಮಾ ಬೈದಿದ್ದರು. ಇವೆಲ್ಲದರ ಕೋಪದಿಂದ ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಕೆಲಸದಿಂದ ಕಿತ್ತೆಸದ ಬಳಿಕ ಕಿರಣ್​ ಪ್ರತಿಮಾ ಮನೆಗೆ ಬಂದಿದ್ದಾನೆ. ಆಕೆಯ ಕಾಲಿಗೆ ಕೂಡ ಬಿದ್ದಿದ್ದಾನೆ. ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದಾನೆ. ಆದರೆ ಪ್ರತಿಮಾ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕಿರಣ್​ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

5 ವರ್ಷದಿಂದ ಚಾಲಕ ವೃತ್ತಿ

ಚಾಲಕ ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕಾರಿದ್ದರು. ಕಿರಣ್ ಕೂಡ ಪ್ರತಿಮಾ ಡ್ರೈವರ್​ ಆಗಿ 5 ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದಾನೆ. 10 ದಿನಗಳ ಹಿಂದೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಕ್ಕೆ ಕಿರಣ್​ ಚಾಕುವಿನಿಂದ ಪ್ರತಿಮಾ ಕತ್ತು ಕೊಯ್ದಿದ್ದಾನೆ. ​ಬಳಿ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗ್ತಿದ್ದಾನೆ.

ಚಾಮರಾಜನಗರದ ಬಳಿ ಆರೋಪಿ ಅರೆಸ್ಟ್​

ಚಾಮರಾಜನಗರದಲ್ಲಿ ಆರೋಪಿ ಕಿರಣ್​​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಹೆಚ್ಚಿನ ತನಿಖೆಗೆ ನಡೆಯುತ್ತಿದೆ. ಅತ್ತ ಪ್ರತಿಮಾ ಪಾರ್ಥಿವ ಶರೀರ ಹುಟ್ಟೂರಾದ ತೀರ್ಥಹಳ್ಳಿಗೆ ಆಗಮಿಸಿದ್ದು, ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More