ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ
ಮನೆಯಲ್ಲಿರೋದು 3 ಬಲ್ಬ್, 1 ಫ್ಯಾನ್.. ಕರೆಂಟ್ ಬಿಲ್ ಇಷ್ಟೊಂದಾ?
ಬಿಲ್ ಕಟ್ಟುವಂತೆ ಜೆಸ್ಕಾಂ ಸಿಬ್ಬಂದಿ ಒತ್ತಾಯ, ಮುಂದೇನು?
ಜೆಸ್ಕಾಂ ಸಿಬ್ಬಂದಿ ಮಾಡಿರುವ ತಪ್ಪಿಗೆ ಕುಟುಂಬವೊಂದು ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿರೋ ಘಟನೆ ಬೀದರ್ನಲ್ಲಿ ನಡೆದಿದೆ. ತಾಲೂಕಿನ ಕಂಗಟ್ಟಿ ಗ್ರಾಮದ ಯಲ್ಲಪ್ಪ ಸಾಯಪ್ಪ ಎಂಬುವವರು ಗೃಹಜ್ಯೋತಿ ಅರ್ಜಿ ಹಾಕಲು ಹೋದ ಸಂದರ್ಭದಲ್ಲಿ ಬಾಕಿ ವಿದ್ಯುತ್ ಬಿಲ್ 46 ಸಾವಿರದ 40 ರೂಪಾಯಿ ಕಟ್ಟುವಂತೆ ಜೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಆದರೆ ಇದುವರೆಗೆ ವಿದ್ಯುತ್ ಬಿಲ್ ನೀಡಲು ಹಾಗೂ ಕೇಳಲು ಜೆಸ್ಕಾಂ ಸಿಬ್ಬಂದಿ ಯಾರೂ ಬಂದಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
2020 ರ ಆಗಸ್ಟ್ ತಿಂಗಳಲ್ಲಿ ಏಕಾಏಕಿ ವಿದ್ಯುತ್ ಬಿಲ್ 31 ಸಾವಿರ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ, ಅಂದಿನಿಂದ ಇಂದಿನವರೆಗೆ ಒಮ್ಮೆಯ ಕರೆಂಟ್ ಬಿಲ್ ನೀಡಿಲ್ಲ. ಆದರೆ ಗೃಹಜ್ಯೋತಿ ಅರ್ಜಿ ಹಾಕುವ ಸಂದರ್ಭದಲ್ಲಿ ಬಿಲ್ ಕಟ್ಟುವಂತೆ ಒತ್ತಾಯ ಮಾಡ್ತಿದ್ದಾರೆ. ಮನೆಯಲ್ಲಿ ಮೂರು ಬಲ್ಪ್, ಒಂದು ಪ್ಯಾನ್ ಮಾತ್ರ ಇವೆ. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ. ಈಗ ಬಾಕಿ 46 ಸಾವಿರ ಹಣ ಹೇಗೆ ಕಟ್ಟೋದು, ಕೂಲಿ ಮಾಡಿ ಜೀವನ ಸಾಗಿಸ್ತಿದ್ದೇವೆ ಎಂದು ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ
ಮನೆಯಲ್ಲಿರೋದು 3 ಬಲ್ಬ್, 1 ಫ್ಯಾನ್.. ಕರೆಂಟ್ ಬಿಲ್ ಇಷ್ಟೊಂದಾ?
ಬಿಲ್ ಕಟ್ಟುವಂತೆ ಜೆಸ್ಕಾಂ ಸಿಬ್ಬಂದಿ ಒತ್ತಾಯ, ಮುಂದೇನು?
ಜೆಸ್ಕಾಂ ಸಿಬ್ಬಂದಿ ಮಾಡಿರುವ ತಪ್ಪಿಗೆ ಕುಟುಂಬವೊಂದು ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿರೋ ಘಟನೆ ಬೀದರ್ನಲ್ಲಿ ನಡೆದಿದೆ. ತಾಲೂಕಿನ ಕಂಗಟ್ಟಿ ಗ್ರಾಮದ ಯಲ್ಲಪ್ಪ ಸಾಯಪ್ಪ ಎಂಬುವವರು ಗೃಹಜ್ಯೋತಿ ಅರ್ಜಿ ಹಾಕಲು ಹೋದ ಸಂದರ್ಭದಲ್ಲಿ ಬಾಕಿ ವಿದ್ಯುತ್ ಬಿಲ್ 46 ಸಾವಿರದ 40 ರೂಪಾಯಿ ಕಟ್ಟುವಂತೆ ಜೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಆದರೆ ಇದುವರೆಗೆ ವಿದ್ಯುತ್ ಬಿಲ್ ನೀಡಲು ಹಾಗೂ ಕೇಳಲು ಜೆಸ್ಕಾಂ ಸಿಬ್ಬಂದಿ ಯಾರೂ ಬಂದಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
2020 ರ ಆಗಸ್ಟ್ ತಿಂಗಳಲ್ಲಿ ಏಕಾಏಕಿ ವಿದ್ಯುತ್ ಬಿಲ್ 31 ಸಾವಿರ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ, ಅಂದಿನಿಂದ ಇಂದಿನವರೆಗೆ ಒಮ್ಮೆಯ ಕರೆಂಟ್ ಬಿಲ್ ನೀಡಿಲ್ಲ. ಆದರೆ ಗೃಹಜ್ಯೋತಿ ಅರ್ಜಿ ಹಾಕುವ ಸಂದರ್ಭದಲ್ಲಿ ಬಿಲ್ ಕಟ್ಟುವಂತೆ ಒತ್ತಾಯ ಮಾಡ್ತಿದ್ದಾರೆ. ಮನೆಯಲ್ಲಿ ಮೂರು ಬಲ್ಪ್, ಒಂದು ಪ್ಯಾನ್ ಮಾತ್ರ ಇವೆ. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ. ಈಗ ಬಾಕಿ 46 ಸಾವಿರ ಹಣ ಹೇಗೆ ಕಟ್ಟೋದು, ಕೂಲಿ ಮಾಡಿ ಜೀವನ ಸಾಗಿಸ್ತಿದ್ದೇವೆ ಎಂದು ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ