newsfirstkannada.com

ಕ್ಯಾಪ್ಟನ್ ಬೂಮ್ರಾ ಮೇಲೆ ಎಲ್ಲರ ಚಿತ್ತ.. ಮತ್ತೆ ಆತಂಕಕ್ಕೆ ಕಾರಣವಾಗ್ತಾರಾ ಬೂಮ್ ಬೂಮ್ ಬೂಮ್ರಾ..!?

Share :

17-08-2023

    ವರ್ಷದ ಬಳಿಕ ಕಣಕ್ಕಿಳಿಯಲು ಬೂಮ್ರಾ ರೆಡಿ

    ಬೂಮ್ರಾಗೆ ಕಾದಿಗೆ ಸಾಲು ಸಾಲು ಅಗ್ನಿಪರೀಕ್ಷೆ

    ಕನ್ನಡಿಗ ಪ್ರಸಿದ್ದ್​ ಕೃಷ್ಣಗೂ ಇದೆ ಬಿಗ್ ಚಾಲೆಂಜ್!

ಜಸ್​​ಪ್ರೀತ್ ಬೂಮ್ರಾ.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್.. ಯಾರ್ಕರ್​ಗಳ ಮೂಲಕವೇ ಎದುರಾಳಿಗೆ ದಂಗುಬಡಿಸುವ ಜಸ್​​ಪ್ರೀತ್​ ಬೂಮ್ರಾ, ಟೀಮ್ ಇಂಡಿಯಾದ ಮೇನ್ ವೆಪನ್​. ಇದೀಗ ನಾಯಕನಾಗಿ ಕಮ್​ಬ್ಯಾಕ್ ಮಾಡಿರುವ ಜಸ್​ಪ್ರೀತ್​, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೂಮ್ರಾ ಪುನರಾಗಮನ ಗುಡ್​ನ್ಯೂಸ್ ಎನಿಸಿದರೂ, ಇದೇ ಕಮ್​​ಬ್ಯಾಕ್​ ತಂಡದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಬೂಮ್ರಾರ ಇಂಜುರಿ ಕಥೆ.

ಹೌದು! 2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದ ಬೂಮ್ರಾ, ಟೀಮ್ ಇಂಡಿಯಾದಿಂದಲೇ ಹೊರಬಿದ್ದಿದ್ರು. ಈ ಬಳಿಕ ಬೂಮ್ರಾ ವಿಚಾರದಲ್ಲಿ ಅಕ್ಷರಶಃ ನಡೆದಿದ್ದು ಕಣ್ಣಮುಚ್ಚಾಲೆ ಆಟ. ಇದೀಗ ಇದೇ ಎಲ್ಲರ ಆತಂಕಕ್ಕೆ ಕಾರಣ.

ಬೂಮ್ರಾ
ಬೂಮ್ರಾ

ಎಲ್ಲರ ಚಿತ್ತ ಜಸ್​ಪ್ರೀತ್​​ ಬೂಮ್ರಾ ಮೇಲೆ..!

ಸಾಲು ಸಾಲು ಇಂಜುರಿಯಿಂದ ಮಹತ್ವದ ಸರಣಿಗಳನ್ನ ಮಿಸ್ ಆಗಿದ್ದ ಜಸ್​​ಪ್ರೀತ್​, ಬರೋಬ್ಬರಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​​​ಗೆ ಮರಳಿದ್ದಾರೆ. ಇದು ಸಹಜವಾಗೇ ಬೂಮ್ರಾ ಮೇಲಿನ ಎಕ್ಸ್​ಪೆಕ್ಟೇಷನ್ಸ್​ ಹೆಚ್ಚಿಸಿದೆ. ಆದರೆ ಇದೇ ವೇಳೆ ಬೂಮ್ರಾ ಸಂಪೂರ್ಣ ಫಿಟ್​​ ಇದ್ದಾರಾ? ಬೌಲಿಂಗ್​ ರಿದಮ್ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಕಾಡ ತೊಡಗಿದೆ. ಹೀಗಾಗಿ ಎಲ್ಲರ ಚಿತ್ತ ವೇಗಿ ಬೂಮ್ರಾರ ಮ್ಯಾಚ್ ಫಿಟ್ನೆಸ್​ ಮೇಲೆಯೇ ನೆಟ್ಟಿದೆ.

ಬೂಮ್ರಾ ಮುಂದಿದೆ ಸಾಲು ಸಾಲು ಅಗ್ನಿಪರೀಕ್ಷೆ..!

ಒಂದ್ಕಡೆ ಬೂಮ್ರಾ ಮೇಲೆ ಬೆಟ್ಟದಷ್ಟು ಎಕ್ಸ್​ಪೆಕ್ಟೇಷನ್ಸ್​ ಇದ್ರೆ. ಮತ್ತೊಂದ್ಕಡೆ ಸಾಲು ಸಾಲು ಅಗ್ನಿಪರೀಕ್ಷೆಗಳು ಕ್ಯಾಪ್ಟನ್​​​ ಬೂಮ್ರಾಗೆ ಮುಂದಿದೆ. ಅದರಲ್ಲೂ ಮುಂದಿನ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ ದೃಷ್ಟಿಯಿಂದ ಬೂಮ್ರಾ ಟೀಮ್ ಇಂಡಿಯಾಗೆ ಅನಿವಾರ್ಯ. ಯಾಕಂದ್ರೆ ಟೀಮ್ ಇಂಡಿಯಾದ ಮೇನ್ ವೆಪನ್ ಬೂಮ್ರಾ. ಹೀಗಾಗಿ ವೇಗಿ ಜಸ್​ಪ್ರೀತ್ ಬೂಮ್ರಾ ಇಂಜರಿಯಿಂದ ಅಂತರಕಾಯ್ದುಕೊಳ್ಳಬೇಕು. ಇಲ್ದಿದ್ರೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ಬೂಮ್ರಾ
ಬೂಮ್ರಾ

ಬೂಮ್ರಾಗೆ ಮಾತ್ರವಲ್ಲ.. ಪ್ರಸಿದ್ದ್​ ಕೃಷ್ಣಗೂ ಚಾಲೆಂಜ್..!

ಯೆಸ್​.. ಜಸ್​​ಪ್ರೀತ್​ ಬೂಮ್ರಾಗೆ ಮಾತ್ರವಲ್ಲ. ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಈ ಸರಣಿ ಮಹತ್ವದ್ದಾಗಿದೆ. ಯಾಕಂದ್ರೆ, ಬೂಮ್ರಾರಂತೆಯೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಏಕದಿನ ವಿಶ್ವಕಪ್​​ ಟೂರ್ನಿಯ ಸ್ಟ್ರಾಂಗ್ ಕಂಟೇಟರ್. ಇದೇ ಕಾರಣಕ್ಕೆ ಐರ್ಲೆಂಡ್ ಪ್ರವಾಸಕ್ಕೆ ಕಳುಹಿಸಿರುವ ಸೆಲೆಕ್ಷನ್ ಕಮಿಟಿ, ಉತ್ತಮ ಪ್ರದರ್ಶನದ ಆದಾರದ ಮೇಲೆ ವಿಶ್ವಕಪ್​ ಟಿಕೆಟ್ ನೀಡುವ ಲೆಕ್ಕಚಾರದಲ್ಲಿದೆ. ಹೀಗಾಗಿ ಪ್ರಸಿದ್ಧ್​ ಟಿ20ಯ ಡೆಬ್ಯೂ ಸಿರೀಸ್​ನಲ್ಲಿ ಅದ್ಭುತ ಪ್ರದರ್ಶನದ ನೀಡಬೇಕಿದೆ.

ಮತ್ತೆ ಕೋಲು ಕೊಟ್ಟು ಹೊಡೆಸಿಕೊಳ್ಳುವಂತಾಗುತ್ತಾ?

ಈ ಹಿಂದೆ ಟಿ-20 ವಿಶ್ವಕಪ್​ ಆರಂಭಕ್ಕೂ ಮುನ್ನ ಆಸಿಸ್​​ ವಿರುದ್ಧದ ಟಿ20 ಸರಣಿಯಲ್ಲಿ ಚಾನ್ಸ್​ ಪಡೆದಿದ್ದ ಬೂಮ್ರಾ 2 ಪಂದ್ಯಗಳಿಂದ ಜಸ್ಟ್​ 6 ಓವರ್ ಎಸೆಯುವಷ್ಟರಲ್ಲಿ ಇಂಜುರಿಗೆ ತುತ್ತಾಗಿ ಹೊರಬಿದ್ದಿದ್ರು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಬೆಲೆ ತೆತ್ತಿತ್ತು. ಇದೀಗ ಮತ್ತೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​​ಗೂ ಮುನ್ನ ಅದೇ ರೀತಿ ಬೂಮ್ರಾಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬಹು ದಿನಗಳ ಬಳಿಕ ಅಂಗಳಕ್ಕಿಳಿಯುತ್ತಿದ್ದಾರೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣ
ಕನ್ನಡಿಗ ಪ್ರಸಿದ್ಧ್ ಕೃಷ್ಣ

ಬೌಲಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಈ ಹೆಚ್ಚುವರಿ ವರ್ಕ್​ಲೋಡ್​ ಬೂಮ್ರಾ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇದು ಮತ್ತೆ ಟೀಮ್ ಇಂಡಿಯಾ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ಹೀಗಾಗಿ ಇಂಜುರಿ ಬಳಿಕ ತಂಡ ಸೇರಿರುವ ಬೂಮ್ರಾ ಹಾಗೂ ಪ್ರಸಿದ್ಧ್​ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಪ್ಟನ್ ಬೂಮ್ರಾ ಮೇಲೆ ಎಲ್ಲರ ಚಿತ್ತ.. ಮತ್ತೆ ಆತಂಕಕ್ಕೆ ಕಾರಣವಾಗ್ತಾರಾ ಬೂಮ್ ಬೂಮ್ ಬೂಮ್ರಾ..!?

https://newsfirstlive.com/wp-content/uploads/2023/07/Bhumra.jpg

    ವರ್ಷದ ಬಳಿಕ ಕಣಕ್ಕಿಳಿಯಲು ಬೂಮ್ರಾ ರೆಡಿ

    ಬೂಮ್ರಾಗೆ ಕಾದಿಗೆ ಸಾಲು ಸಾಲು ಅಗ್ನಿಪರೀಕ್ಷೆ

    ಕನ್ನಡಿಗ ಪ್ರಸಿದ್ದ್​ ಕೃಷ್ಣಗೂ ಇದೆ ಬಿಗ್ ಚಾಲೆಂಜ್!

ಜಸ್​​ಪ್ರೀತ್ ಬೂಮ್ರಾ.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್.. ಯಾರ್ಕರ್​ಗಳ ಮೂಲಕವೇ ಎದುರಾಳಿಗೆ ದಂಗುಬಡಿಸುವ ಜಸ್​​ಪ್ರೀತ್​ ಬೂಮ್ರಾ, ಟೀಮ್ ಇಂಡಿಯಾದ ಮೇನ್ ವೆಪನ್​. ಇದೀಗ ನಾಯಕನಾಗಿ ಕಮ್​ಬ್ಯಾಕ್ ಮಾಡಿರುವ ಜಸ್​ಪ್ರೀತ್​, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೂಮ್ರಾ ಪುನರಾಗಮನ ಗುಡ್​ನ್ಯೂಸ್ ಎನಿಸಿದರೂ, ಇದೇ ಕಮ್​​ಬ್ಯಾಕ್​ ತಂಡದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಬೂಮ್ರಾರ ಇಂಜುರಿ ಕಥೆ.

ಹೌದು! 2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದ ಬೂಮ್ರಾ, ಟೀಮ್ ಇಂಡಿಯಾದಿಂದಲೇ ಹೊರಬಿದ್ದಿದ್ರು. ಈ ಬಳಿಕ ಬೂಮ್ರಾ ವಿಚಾರದಲ್ಲಿ ಅಕ್ಷರಶಃ ನಡೆದಿದ್ದು ಕಣ್ಣಮುಚ್ಚಾಲೆ ಆಟ. ಇದೀಗ ಇದೇ ಎಲ್ಲರ ಆತಂಕಕ್ಕೆ ಕಾರಣ.

ಬೂಮ್ರಾ
ಬೂಮ್ರಾ

ಎಲ್ಲರ ಚಿತ್ತ ಜಸ್​ಪ್ರೀತ್​​ ಬೂಮ್ರಾ ಮೇಲೆ..!

ಸಾಲು ಸಾಲು ಇಂಜುರಿಯಿಂದ ಮಹತ್ವದ ಸರಣಿಗಳನ್ನ ಮಿಸ್ ಆಗಿದ್ದ ಜಸ್​​ಪ್ರೀತ್​, ಬರೋಬ್ಬರಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​​​ಗೆ ಮರಳಿದ್ದಾರೆ. ಇದು ಸಹಜವಾಗೇ ಬೂಮ್ರಾ ಮೇಲಿನ ಎಕ್ಸ್​ಪೆಕ್ಟೇಷನ್ಸ್​ ಹೆಚ್ಚಿಸಿದೆ. ಆದರೆ ಇದೇ ವೇಳೆ ಬೂಮ್ರಾ ಸಂಪೂರ್ಣ ಫಿಟ್​​ ಇದ್ದಾರಾ? ಬೌಲಿಂಗ್​ ರಿದಮ್ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆ ಕಾಡ ತೊಡಗಿದೆ. ಹೀಗಾಗಿ ಎಲ್ಲರ ಚಿತ್ತ ವೇಗಿ ಬೂಮ್ರಾರ ಮ್ಯಾಚ್ ಫಿಟ್ನೆಸ್​ ಮೇಲೆಯೇ ನೆಟ್ಟಿದೆ.

ಬೂಮ್ರಾ ಮುಂದಿದೆ ಸಾಲು ಸಾಲು ಅಗ್ನಿಪರೀಕ್ಷೆ..!

ಒಂದ್ಕಡೆ ಬೂಮ್ರಾ ಮೇಲೆ ಬೆಟ್ಟದಷ್ಟು ಎಕ್ಸ್​ಪೆಕ್ಟೇಷನ್ಸ್​ ಇದ್ರೆ. ಮತ್ತೊಂದ್ಕಡೆ ಸಾಲು ಸಾಲು ಅಗ್ನಿಪರೀಕ್ಷೆಗಳು ಕ್ಯಾಪ್ಟನ್​​​ ಬೂಮ್ರಾಗೆ ಮುಂದಿದೆ. ಅದರಲ್ಲೂ ಮುಂದಿನ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ ದೃಷ್ಟಿಯಿಂದ ಬೂಮ್ರಾ ಟೀಮ್ ಇಂಡಿಯಾಗೆ ಅನಿವಾರ್ಯ. ಯಾಕಂದ್ರೆ ಟೀಮ್ ಇಂಡಿಯಾದ ಮೇನ್ ವೆಪನ್ ಬೂಮ್ರಾ. ಹೀಗಾಗಿ ವೇಗಿ ಜಸ್​ಪ್ರೀತ್ ಬೂಮ್ರಾ ಇಂಜರಿಯಿಂದ ಅಂತರಕಾಯ್ದುಕೊಳ್ಳಬೇಕು. ಇಲ್ದಿದ್ರೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ಬೂಮ್ರಾ
ಬೂಮ್ರಾ

ಬೂಮ್ರಾಗೆ ಮಾತ್ರವಲ್ಲ.. ಪ್ರಸಿದ್ದ್​ ಕೃಷ್ಣಗೂ ಚಾಲೆಂಜ್..!

ಯೆಸ್​.. ಜಸ್​​ಪ್ರೀತ್​ ಬೂಮ್ರಾಗೆ ಮಾತ್ರವಲ್ಲ. ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಈ ಸರಣಿ ಮಹತ್ವದ್ದಾಗಿದೆ. ಯಾಕಂದ್ರೆ, ಬೂಮ್ರಾರಂತೆಯೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಏಕದಿನ ವಿಶ್ವಕಪ್​​ ಟೂರ್ನಿಯ ಸ್ಟ್ರಾಂಗ್ ಕಂಟೇಟರ್. ಇದೇ ಕಾರಣಕ್ಕೆ ಐರ್ಲೆಂಡ್ ಪ್ರವಾಸಕ್ಕೆ ಕಳುಹಿಸಿರುವ ಸೆಲೆಕ್ಷನ್ ಕಮಿಟಿ, ಉತ್ತಮ ಪ್ರದರ್ಶನದ ಆದಾರದ ಮೇಲೆ ವಿಶ್ವಕಪ್​ ಟಿಕೆಟ್ ನೀಡುವ ಲೆಕ್ಕಚಾರದಲ್ಲಿದೆ. ಹೀಗಾಗಿ ಪ್ರಸಿದ್ಧ್​ ಟಿ20ಯ ಡೆಬ್ಯೂ ಸಿರೀಸ್​ನಲ್ಲಿ ಅದ್ಭುತ ಪ್ರದರ್ಶನದ ನೀಡಬೇಕಿದೆ.

ಮತ್ತೆ ಕೋಲು ಕೊಟ್ಟು ಹೊಡೆಸಿಕೊಳ್ಳುವಂತಾಗುತ್ತಾ?

ಈ ಹಿಂದೆ ಟಿ-20 ವಿಶ್ವಕಪ್​ ಆರಂಭಕ್ಕೂ ಮುನ್ನ ಆಸಿಸ್​​ ವಿರುದ್ಧದ ಟಿ20 ಸರಣಿಯಲ್ಲಿ ಚಾನ್ಸ್​ ಪಡೆದಿದ್ದ ಬೂಮ್ರಾ 2 ಪಂದ್ಯಗಳಿಂದ ಜಸ್ಟ್​ 6 ಓವರ್ ಎಸೆಯುವಷ್ಟರಲ್ಲಿ ಇಂಜುರಿಗೆ ತುತ್ತಾಗಿ ಹೊರಬಿದ್ದಿದ್ರು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಬೆಲೆ ತೆತ್ತಿತ್ತು. ಇದೀಗ ಮತ್ತೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​​ಗೂ ಮುನ್ನ ಅದೇ ರೀತಿ ಬೂಮ್ರಾಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬಹು ದಿನಗಳ ಬಳಿಕ ಅಂಗಳಕ್ಕಿಳಿಯುತ್ತಿದ್ದಾರೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣ
ಕನ್ನಡಿಗ ಪ್ರಸಿದ್ಧ್ ಕೃಷ್ಣ

ಬೌಲಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಈ ಹೆಚ್ಚುವರಿ ವರ್ಕ್​ಲೋಡ್​ ಬೂಮ್ರಾ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇದು ಮತ್ತೆ ಟೀಮ್ ಇಂಡಿಯಾ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ಹೀಗಾಗಿ ಇಂಜುರಿ ಬಳಿಕ ತಂಡ ಸೇರಿರುವ ಬೂಮ್ರಾ ಹಾಗೂ ಪ್ರಸಿದ್ಧ್​ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More