ರಾಮಾಚಾರಿ ಸೀರಿಯಲ್ನಿಂದ ಹೊರಬಂದಿದ್ದೇಕೆ ನಟಿ ಸಿರಿಜಾ!
ಥ್ರಿಲ್ಲಿಂಗ್ ಜೊತೆಗೆ ಹೊಸ ಟ್ವಿಸ್ಟ್ನೊಂದಿಗೆ ಬರ್ತಿದೆ ರಾಮಾಚಾರಿ
ರಾಮಾಚಾರಿ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಏನದು?
ಕಿರುತೆರೆಯಲ್ಲಿ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಹೊಂದಿರೋ ಧಾರಾವಾಹಿಗಳಲ್ಲಿ ರಾಮಾಚಾರಿ ಪ್ರಮುಖ ಸ್ಥಾನದಲ್ಲಿದೆ. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿಯಲ್ಲಿ ಒಳ್ಳೆಯ ಟ್ವಿಸ್ಟ್ ಆ್ಯಂಡ್ ಟರ್ನ್ ಟ್ರ್ಯಾಕ್ನಲ್ಲಿ ಹೋಗುತ್ತಿದೆ. ರಾಮಾಚಾರಿ ಚಾರುಳನ್ನ ಮದ್ವೆಯಾಗಿದ್ದಾನೆ ಅನ್ನೋ ಸತ್ಯ ಈಗ ಎರಡು ಕುಟುಂಬದವರಿಗೂ ಗೊತ್ತಾಗಿ ಬಿಟ್ಟಿದೆ. ಆ ಕಾರಣ ರಾಮಾಚಾರಿ ಕುಂಟುಂಬ ರಾಮಾಚಾರಿಯನ್ನ ಮನೆಯಿಂದ ಹೊರ ಹಾಕಿದ್ದಾರೆ.
ಚಾರುಳನ್ನ ಆ ಮನೆ ಸೊಸೆಯಾಗಿ ಒಪ್ಪಿಕೊಳ್ಳೋಕೆ ಯಾರು ತಯಾರಿಲ್ಲ. ಆದರೂ ಸಹ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ ವೈಶಾಖ ಹೆಚ್ಚು ಕಿಡಿ ಹತ್ತಿಸುತ್ತಿದ್ದಾಳೆ. ಇದು ಸದ್ಯದ ಕತೆಯ ತಿರುವು. ಇದೇ ಧಾರಾವಾಹಿಯಿಂದ ಒಂದು ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದದೆ. ಚಾರು ತಂದೆ ಜಯ್ಶಂಕರ್ ಅವರ ಎರಡನೇ ಹೆಂತಿಯಾಗಿ ಶರ್ಮಿಳಾ ಪಾತ್ರ ನಿಭಾಯಿಸ್ತಿದ್ದ ನಟಿ ಸಿರಿಜಾ ಅವ್ರು ತಮ್ಮ ವೈಯಕ್ತಿಕ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೌದು ಇತ್ತೀಚಿನ ಎಪಿಸೋಡ್ಸ್ಗಳಲ್ಲಿ ಶರ್ಮಿಳಾ ಕಂಡು ಬಂದೇ ಇಲ್ಲಾ. ಚಾರುಳ ನಿಶ್ಚಿತಾರ್ಥ ಸಮಾರಂಭದಲ್ಲಿ ಶರ್ಮಿಳಾ ಪಾತ್ರವು ಕಾಣದೇ ಇರೋದು ವಿಪರ್ಯಾಸ. ಈ ಕಾರಣದಿಂದಾಗಿ ಸಿರಿಜಾ ಧಾರಾವಾಹಿಯಿಂದ ಹೊಸ ಬಂದಿರೋ ಗುಟ್ಟು ರಟ್ಟಾಗಿದೆ.
ಹಾಗಾದ್ರೆ ಸಿರಿಜಾ ಅವರು ನಿಭಾಯಿಸಿದ್ದಂತ ಶರ್ಮಿಳಾ ಪಾತ್ರವನ್ನು ಮತ್ಯಾವ ನಟಿ ಆ ಜಾಗವನ್ನ ತುಂಬ ಬಲ್ಲರು ಅನ್ನೋ ಪ್ರೆಶ್ನೆಗೆ ಧಾರಾವಾಹಿ ತಂಡ ಇನ್ನೂ ಉತ್ತರಿಸಿಲ್ಲಾ. ಆದರೆ ಮುಂಬರುವ ಎಪಿಸೋಡ್ಗಳಲ್ಲಿ ಶರ್ಮಿಳಾ ಪಾತ್ರವನ್ನ ಯಾರು ನಿಭಾಯಿಸುತ್ತಾರೆ ಅನ್ನೋದು ಗೊತ್ತಾಗಲಿದೆ. ಒಟ್ಟಿನಲ್ಲಿ ಸಿರಿಜಾ ಅವರು ಸೀರಿಯಲ್ ತಂಡದಿಂದ ಹೊರ ಬಂದಿರೋ ವಿಚಾರ ತಿಳಿದ ರಾಮಾಚಾರಿ ಧಾರಾವಾಹಿಯ ಅಭಿಮಾನಿಗಳು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ರಾಮಾಚಾರಿ ಸೀರಿಯಲ್ನಿಂದ ಹೊರಬಂದಿದ್ದೇಕೆ ನಟಿ ಸಿರಿಜಾ!
ಥ್ರಿಲ್ಲಿಂಗ್ ಜೊತೆಗೆ ಹೊಸ ಟ್ವಿಸ್ಟ್ನೊಂದಿಗೆ ಬರ್ತಿದೆ ರಾಮಾಚಾರಿ
ರಾಮಾಚಾರಿ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಏನದು?
ಕಿರುತೆರೆಯಲ್ಲಿ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಹೊಂದಿರೋ ಧಾರಾವಾಹಿಗಳಲ್ಲಿ ರಾಮಾಚಾರಿ ಪ್ರಮುಖ ಸ್ಥಾನದಲ್ಲಿದೆ. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿಯಲ್ಲಿ ಒಳ್ಳೆಯ ಟ್ವಿಸ್ಟ್ ಆ್ಯಂಡ್ ಟರ್ನ್ ಟ್ರ್ಯಾಕ್ನಲ್ಲಿ ಹೋಗುತ್ತಿದೆ. ರಾಮಾಚಾರಿ ಚಾರುಳನ್ನ ಮದ್ವೆಯಾಗಿದ್ದಾನೆ ಅನ್ನೋ ಸತ್ಯ ಈಗ ಎರಡು ಕುಟುಂಬದವರಿಗೂ ಗೊತ್ತಾಗಿ ಬಿಟ್ಟಿದೆ. ಆ ಕಾರಣ ರಾಮಾಚಾರಿ ಕುಂಟುಂಬ ರಾಮಾಚಾರಿಯನ್ನ ಮನೆಯಿಂದ ಹೊರ ಹಾಕಿದ್ದಾರೆ.
ಚಾರುಳನ್ನ ಆ ಮನೆ ಸೊಸೆಯಾಗಿ ಒಪ್ಪಿಕೊಳ್ಳೋಕೆ ಯಾರು ತಯಾರಿಲ್ಲ. ಆದರೂ ಸಹ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ ವೈಶಾಖ ಹೆಚ್ಚು ಕಿಡಿ ಹತ್ತಿಸುತ್ತಿದ್ದಾಳೆ. ಇದು ಸದ್ಯದ ಕತೆಯ ತಿರುವು. ಇದೇ ಧಾರಾವಾಹಿಯಿಂದ ಒಂದು ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದದೆ. ಚಾರು ತಂದೆ ಜಯ್ಶಂಕರ್ ಅವರ ಎರಡನೇ ಹೆಂತಿಯಾಗಿ ಶರ್ಮಿಳಾ ಪಾತ್ರ ನಿಭಾಯಿಸ್ತಿದ್ದ ನಟಿ ಸಿರಿಜಾ ಅವ್ರು ತಮ್ಮ ವೈಯಕ್ತಿಕ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೌದು ಇತ್ತೀಚಿನ ಎಪಿಸೋಡ್ಸ್ಗಳಲ್ಲಿ ಶರ್ಮಿಳಾ ಕಂಡು ಬಂದೇ ಇಲ್ಲಾ. ಚಾರುಳ ನಿಶ್ಚಿತಾರ್ಥ ಸಮಾರಂಭದಲ್ಲಿ ಶರ್ಮಿಳಾ ಪಾತ್ರವು ಕಾಣದೇ ಇರೋದು ವಿಪರ್ಯಾಸ. ಈ ಕಾರಣದಿಂದಾಗಿ ಸಿರಿಜಾ ಧಾರಾವಾಹಿಯಿಂದ ಹೊಸ ಬಂದಿರೋ ಗುಟ್ಟು ರಟ್ಟಾಗಿದೆ.
ಹಾಗಾದ್ರೆ ಸಿರಿಜಾ ಅವರು ನಿಭಾಯಿಸಿದ್ದಂತ ಶರ್ಮಿಳಾ ಪಾತ್ರವನ್ನು ಮತ್ಯಾವ ನಟಿ ಆ ಜಾಗವನ್ನ ತುಂಬ ಬಲ್ಲರು ಅನ್ನೋ ಪ್ರೆಶ್ನೆಗೆ ಧಾರಾವಾಹಿ ತಂಡ ಇನ್ನೂ ಉತ್ತರಿಸಿಲ್ಲಾ. ಆದರೆ ಮುಂಬರುವ ಎಪಿಸೋಡ್ಗಳಲ್ಲಿ ಶರ್ಮಿಳಾ ಪಾತ್ರವನ್ನ ಯಾರು ನಿಭಾಯಿಸುತ್ತಾರೆ ಅನ್ನೋದು ಗೊತ್ತಾಗಲಿದೆ. ಒಟ್ಟಿನಲ್ಲಿ ಸಿರಿಜಾ ಅವರು ಸೀರಿಯಲ್ ತಂಡದಿಂದ ಹೊರ ಬಂದಿರೋ ವಿಚಾರ ತಿಳಿದ ರಾಮಾಚಾರಿ ಧಾರಾವಾಹಿಯ ಅಭಿಮಾನಿಗಳು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ